ತಮಿಳುನಾಡಿನ ರಾಜಕೀಯ ಅಖಾಡವೀಗ ಚುನಾವಣಾ ಸಂದರ್ಭಕ್ಕಿಂತಲೂ ತುಸು ಹೆಚ್ಚೇ ರಂಗೇರಿಕೊಂಡಿದೆ. ದಶಕಗಟ್ಟಲೆ ದ್ರಾವಿಡ ವಿಚಾರಧಾರೆಯ ರಾಜಕಾರಣದಿಂದಲೇ ತಮಿಳುನಾಡು ಸಾಗಿ ಬಂದಿತ್ತು. ದಳಪತಿಯ ಟಿವಿಕೆ ಪಕ್ಷದ ಮೂಲಕ ಮೊದಲ ಬಾರಿ ಭಿನ್ನ ರಾಜಕೀಯ ಪರ್ವವೊಂದು ತಮಿಳುನಾಡಿನಲ್ಲಿ ಕಣ್ತೆರೆದಿದೆ. ಇದರ ಹಿಂದಿರೋ ಸಾಮಾಜಿಕ ಒಳನೋಟಗಳು, ಒಳ ಕಿಸುರುಗಳು ಅದೇನೇ ಇದ್ದರೂ ಕೂಡಾ ದಳಪತಿ ವಿಜಯ್ನದ್ದು ನಿಜಕ್ಕೂ ರೋಮಾಂಚಕ ಗೆಲುವು. ಖುದ್ದು ವಿಜಯ್ ಚುನಾವಣಾ ಸಂದರ್ಭದಲ್ಲಿ ಕೊಟ್ಟಿರುವ ಭರವಸೆಗಳೇ ಮುಂದೆ ಮಹಾ ಸವಾಲುಗಳಾಗಿ ಎದುರಾಗೋದು ಗ್ಯಾರಂಟಿಯಾದರೂ ಕೂಡಾ, ಆಡಳಿತಾತ್ಮಕವಾಗಿ ಜನಪರವಾಗಿ ಕ್ರಾಂತಿ ಮಾಡುವ ಅವಕಾಶವಂತೂ ಇದ್ದೇ ಇದೆ. ಇದೇ ಹೊತ್ತಿನಲ್ಲಿ ತಮಿಳುನಾಡಿನ ಸಿನಿಮಾಸಕ್ತರ ನಡುವೆ ಮತ್ತೊಂದು ಬಗೆಯ ಚರ್ಚೆಯೂ ವ್ಯಾಪಕವಾಗಿ ನಡೆಯಲಿದೆ. ಅದಕ್ಕೆ ಕಾರಣವಾಗಿರೋದು ವಿಜಯ್ ಸಖಿ ತ್ರಿಷಾ ಕೃಷ್ಣನ್!
ಈ ಚುನಾವಣೆಯ ಹೊತ್ತಿನಲ್ಲಿಯೇ ತ್ರಿಷಾ ಕೃಷ್ಣನ್ ಮತ್ತು ದಳಪತಿ ವಿಜಯ್ ಅಫೇರಿನ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗಿದ್ದವು. ದಳಪತಿಯ ದಾಂಪತ್ಯ ಜೀವನ ವಿಚ್ಛೇದನದ ಮೂಲಕ ಛಿದ್ರವಾಗುತ್ತಲೇ, ಗಂಡ ಹೆಂಡಿರ ನಡುವೆ ವಿರಸ ಮೂಡಲು ತ್ರೀಷಾಳೇ ಮೂಲ ಕಾರಣವೆಂಬ ಆರೋಪಗಳೂ ವ್ಯಾಪಕವಾಗಿ ಕೇಳಿ ಬಂದಿದ್ದವು. ಅಷ್ಟಕ್ಕೂ ವಿಜಯ್ ಮತ್ತು ತ್ರಿಷಾ ಬಂಧದ ಬಗ್ಗೆ ರೂಮರುಗಳು ಹಬ್ಬಿಕೊಳ್ಳುತ್ತಿರೋದು ಇದೇ ಮೊದಲೇನಲ್ಲ. ಸಿನಿಮಾ ರಂಗದ ಪಡಸಾಲೆಯಲ್ಲಿ ಆ ಬಗ್ಗೆ ಹಬ್ಬಿಕೊಂಡ ರಂಗು ರಂಗಿನ ಕಥನಗಳೇ ಸಿನಿಮಾವೊಂದಕ್ಕೆ ಸರಕಾಗುವಷ್ಟಿವೆ. ಆದರೀಗ ವಿಚ್ಚೇದನದ ನಂತರ ಅವರಿಬ್ಬರ ಅಫೇರು ಹಂತ ಹಂತವಾಗಿ ಖುಲ್ಲಂಖುಲ್ಲ ಘಟ್ಟ ತಲುಪಿಕೊಳ್ಳುತ್ತಿದೆ.
ಇತ್ತೀಚೆಗಷ್ಟೇ ಅದೆಷ್ಟೋ ವರ್ಷಗಳ ಹಿಂದಿನ ತ್ರಿಷಾಳ ವೀಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಆಕೆ ಇನ್ನು ಹತ್ತು ವರ್ಷದ ನಂತರ ನಾನು ಸಿಎಂ ಆಗೇ ಆಗ್ತೀನಿ ಎಂಬರ್ಥದಲ್ಲಿ ಮಾತಾಡಿದ್ದಳು. ಆಗ ತಮಾಶೆಯಾಗಿ ಹೇಳಿದ್ದ ಆ ಮಾತುಗಳೀಗ ವಾಸ್ತವದ ಹೊಸ್ತಿಲಲ್ಲಿಯೇ ನಿಂತಂತೆ ಭಾಸವಾಗುತ್ತಿದೆ. ಇದೀಗ ವಿಜಯ್ ಅಂತಃಪುರದಲ್ಲಿ ತ್ರಿಷಾಳ ಕನಸನ್ನು ಕನಸು ಮಾಡುವ ಪಲ್ಲಟಗಳು ತಣ್ಣಗೆ ನಡೆಯುತ್ತಿವೆ. ಈ ಬಾರಿ ವಿಜಯ್ ಎರಡೆರಡು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಅದರಲ್ಲೊಂದುಇ ಕ್ಷೇತ್ರದಿಂದ ತ್ರಿಷಾಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಇರಾದೆ ವಿಜಯ್ಗೆ ಇದ್ದಂತಿದೆ.
ಇದು ತ್ರಿಷಾಳಿಗೆ ಪಟ್ಟ ಕಟ್ಟುವ ಮೊದಲ ಹೆಜ್ಜೆ. ಸದ್ಯ ಮಟ್ಟಿಗೆ ಬಾಹ್ಯ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸೋದರತ್ತ ಚಿತ್ತ ನೆಟ್ಟಿರುವ ವಿಜಯ್, ಆ ನಂತರದಲ್ಲಿ ತ್ರಿಷಾಳನ್ನು ಶಾಶಕಿಯಾಗಿಸಿ, ಉಪ ಮುಖ್ಯಮಂತ್ರಿ ಹುದ್ದೆ ಕೊಡುವ ಆಲೋಚನೆಯು ಇದ್ದಂತಿದೆ. ಇದರಿಮದ ಸಾಮಾಜಿಕವಾಗಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿದ ಹೆಗ್ಗಳಿಕೆಯೂ ವಿಜಯ್ಗೆ ದಕ್ಕುತ್ತದೆ. ಮನದನ್ನೆಯನ್ನು ಬಾಜಿನಲ್ಲಿ ಕೂರಿಸಿಕೊಂಡು ರಾಜ್ಯ ಆಳುವ ಆತ್ಮತೃಪ್ತಿಯೂ ಸಿಗುತ್ತದೆ. ಒಂದು ಬರಿ ತ್ರಿಷಾ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಡಿಸಿಎಂ ಆದರೆ, ಥೇಟು ಜಯಲಲಿತಾರಂತೆ ಸಿಎಂ ಆಗೋ ಹಾದಿ ಸುಗಮವಾದಂತೆಯೇ. ವಿಜಯ್ ಏನಾದರೂ ಈ ಬಾರಿ ಜನರ ನಿರೀಕ್ಷೆಗೆ ತಕ್ಕುದಾಗಿ ಆಡಳಿತ ನಡೆಸಿದರೆ, ಮುಂದಿನ ಬಾರಿ ಟಿವಿಕೆ ಬಹುಮತ ಪಡೆದುಕೊಂಡರೆ, ಆಗ ತಮಿಳುನಾಡಿಗೆ ಜ್ಯೂನಿಯರ್ ಅಮ್ಮನ ದರ್ಶನವಾಗೋದು ಬಹುತೇಕ ಖಚಿತ!
keywords: trisha krishnan, thalapathy vijay, tamilnadu politics

