Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ!
    ಸ್ಪಾಟ್ ಲೈಟ್

    Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ!

    By Santhosh Bagilagadde24/10/2025
    Facebook Twitter Telegram Email WhatsApp
    1a176b5c 68a8 41b4 a397 ff0119c1c237 1 1
    Share
    Facebook Twitter LinkedIn WhatsApp Email Telegram

    ಸಿಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ, ಆತನ ಮುಂದೆ ಸಿಎಮ್ಮು, ಪಿಎಮ್ಮುಗಳೂ ಲೆಕ್ಕಕ್ಕಿಲ್ಲ ಅನ್ನೋದೆಲ್ಲ ದಾಸನ ಅಭಿಮಾನಿಗಳ ಪಾಲಿಗೆ ಚಿಲ್ಲರೆ ವಿಚಾರಗಳಾಗಿದ್ದವು. ಅವರ ಕಲ್ಪಾನವಿಲಾಸದಲ್ಲಿ ತಮ್ಮ ಮೆಚ್ಚಿನ ಡಿಬಾಸನ್ನು ಬಂಧಿಸಿಡುವ ಜೈಲುಗಳೇ ಕರ್ನಾಟಕದಲ್ಲಿಲ್ಲ ಎಂಬಂಥಾ ಭಯಾನಕ ನಂಬಿಕೆ ನೆಲೆಗೊಂಡಿತ್ತು. ಅಂಥಾ ಕಲ್ಪನೆಯ ಕೋಟೆಯೆಲ್ಲ ಈಗ ಚದುರಿ ಚೆಲ್ಲಾಪಿಲ್ಲಿಯಾಗಿದೆ. ಸಾಕ್ಷಾತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸರಿಕಟ್ಟಾದೊಂದು ತಲೆದಿಂಬು ಮತ್ತು ಮೂಲಭೂತ ಅಗತ್ಯಗಳಿಗಾಗಿ ಕೋರ್ಟಿನ ಮುಂದೆ ಅಂಗಲಾಚುವ ಸ್ಥಿತಿ ಬಂದೊದಗಿದೆ.

    Darshan The Devil e1741450624150 1024x578 3 1
    ದರ್ಶನ್ ತಲುಪಿಕೊಂಡಿರುವ ಈ ಸ್ಥಿತಿ ಕಂಡರೆ ಒಂದು ಕಾಲದಲ್ಲಿ ಆತನ ಆವುಟಗಳನ್ನು ಕಂಡು ರೋಸತ್ತಿದ್ದವರಲ್ಲೂ ಮರುಕ ಹುಟ್ಟೋದು ಸುಳ್ಳಲ್ಲ. ಆದರೆ, ಅದರ ಹಿಂದೆ ಆತನ ಸ್ವಯಂಕೃತಾಪರಾಧಗಳಿದ್ದಾವೆ. ಅಭಿಮಾನಿಗಳೆನ್ನಿಸಿಕೊಂಡವರ ಸ್ವೇಚ್ಛೆಯ ವರ್ತನೆಗಳ ಪಾಲೂ ಯಥೇಚ್ಚವಾಗಿದೆ. ಜೈಲುವಾಸದ ಮೊದಲ ಅವಧಿಯನ್ನು ಒಂದಷ್ಟು ನಿರಾಳವಾಗಿ ಕಳೆದಿದ್ದ ದರ್ಶನ್‌ಗೆ ಎರಡನೇ ಅವಧಿಯಲ್ಲಿ ಅಕ್ಷರಶಃ ನರಕದರ್ಶನವಾಗುತ್ತಿದೆ. ಕೋಟಿ ಕಮಾಯಿಸಿದ ಅಧಿಕಾರಿಗಳು ತಮ್ಮದೇ ಜಗತ್ತಿನಲ್ಲಿ ಬೆಚ್ಚಗಿದ್ದಾರೆ. ಜೈಲಾಧಿಕಾರಿ ಸುರೇಶ ದರ್ಶನ್ ವಿಚಾರದಲ್ಲಿ ಆಟ ಕಟ್ಟಲು ಹಿಂದೇಟು ಹಾಕುತ್ತಿದ್ದಾನೆ. ತಲೆಮಾಸಿದ ರೌಡಿಗಳು ಜೈಲೊಳಗೇ ಬರ್ತ್‌ಡೇ ಪಾರ್ಟಿ ಆಚರಿಸುತ್ತಿದ್ದರೂ ದರ್ಶನ್‌ಗೆ ಹೆಚ್ಚುವರಿ ಸೌಕರ್ಯ ಒದಗಿಸಲು ಜೈಲೊಳಗಿನ ಖೂಳುಬಾಕರು ಹೆದರುತ್ತಿದ್ದಾರೆ.

    df388620 2f99 11ef 9552 ddad3d31dcba.jpg 1 1
    ಎಲ್ಲರ ಫೋಕಸ್ಸು ದರ್ಶನ್ ಮೇಲಿರೋದರಿಂದ ಕೊಂಚ ಯಾಮಾರಿದರೆ ಯಡವಟ್ಟಾದೀತೆಂಬ ಭಯವೇ ಅದಕ್ಕೆ ಕಾರಣ. ಈ ಸಂಬಂಧವಾಗಿ ದರ್ಶನ್ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದಾರೆ. ಇದೀಗ ಆ ವಿಚಾರಣೆಯೂ ಮುಂದೂಡಲ್ಪಟ್ಟಿದೆ. ಅಲ್ಲಿಗೆ ಒಂದು ತಲೆದಿಂಬೂ ಕೂಡಾ ದರ್ಶನ್‌ಗೆ ಸದ್ಯದ ಮಟ್ಟಿಗೆ ಮರೀಚಿಕೆಯಾಗಿದೆ. ಅಲ್ಲೇ ಮತ್ತೊಂದು ಮಗ್ಗುಲಿನ ಸೆಲ್ಲಿನಲ್ಲಿರುವ ಮಾಯಾಂಗನೆ ಪವಿತ್ರಾ ದರ್ಶನ್ ಕಥೆ ಹೇಗಾದರೂ ತಾನು ಬಚಾವ ಆದರೆ ಸಾಕೆಂಬಂತೆ ಲಾಯರ್‌ಗಳ ಮೂಲಕ ಶತ ಪ್ರಯತ್ನ ನಡೆಸುತ್ತಿದ್ದಾಳೆ. ಈ ನಡುವೆ ದಿನೇ ದಿನೆ ದಾಸನಿಗೆ ಕಾನೂನಿನ ಉರುಳು ಬಿಗಿಯಾಗುತ್ತಿರುವ ಭಯವೂ ಕಾಡುತ್ತಿದೆ. ಈ ಕ್ಷಣದಲ್ಲಿ ಆತನ ಪರವಾಗಿ ಅಚಲವಾಗಿ ಹೋರಾಟ ನಡೆಸುತ್ತಿರೋದು ವಿಜಯಲಕ್ಷ್ಮಿ ಮಾತ್ರ. ಇದ್ರೆ ನೆಮ್ದಿಯಾಗಿರ್ಬೇಕ್ ಅಂತಗ ಅಬ್ಬರಿಸಿದ್ದ ದಾಸನ ಸ್ಥಿತಿ ನಿಜಕ್ಕೂ ಮರುಕ ಮೂಡಿಸುವಂತಾಗಿದೆ… ಆದರೆ ಆತನಿರೋದು ತಪ್ಪಿನ ಅರಿವು ಮೂಡಿಸುವ ಜೈಲಿನಲ್ಲಿ; ಬೇಕೆಂದ ಸೌಕರ್ಯಗಳು ಸಲೀಸಾಗಿ ದಕ್ಕಲು ಅದೇನು ಕ್ಯಾರವಾನ್ ಅಲ್ಲ ಅನ್ನೋದು ಅರಗಿಸಿಕೊಳ್ಳಲೇಬೇಕಾದ ವಾಸ್ತವ!

    #dboss #renukaswamymurdercase challengingstardarshan crime darshan darshancaseexclisive darshantodaynews
    Share. Facebook Twitter LinkedIn WhatsApp Telegram Email
    Previous ArticleMegha Star Chiranjeevi: ಮತ್ತೆ ಒಂದಾದ ವಾಲ್ಟರ್ ವೀರಯ್ಯ ಜೋಡಿ!
    Next Article Chaithra Achar: ಫೌಜಿ ಪೋಸ್ಟರ್‌ನಲ್ಲಿ ಪೌರ್ಣಮಿಯ ಫೋಟೋ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

    02/12/2025

    Super Hit Movie Teaser : ಬಿಗ್‌ಬಾಸ್ ಗಿಲ್ಲಿ ನಟ ಹೀರೋ ಆಗ್ಬಿಟ್ಟ!

    02/12/2025

    Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?

    10/11/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (79)
    • ಸೌತ್ ಜೋನ್ (134)
    • ಸ್ಪಾಟ್ ಲೈಟ್ (213)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202519 Views
    Don't Miss
    ಸೌತ್ ಜೋನ್ 07/12/2025

    latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?

    ದಳಪತಿ ವಿಜಯ್ ನಟಿಸುತ್ತಿರೋಮ ಕಟ್ಟ ಕಡೆಯ ಚಿತ್ರ ಜನನಾಯಗನ್. ಓರ್ವ ಸ್ಟಾರ್ ನಟನಾಗಿ ಬೇರೆ ಸ್ಟಾರುಗಳೇ ಕರುಬುವ ಮಟ್ಟಕ್ಕೆ ಫ್ಯಾನ್…

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (7) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (72) challengingstardarshan (9) cinishodha (137) cinishodhareview (16) crime (8) darshan (17) director (5) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (166) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (194) shivarajkumar (9) sreeleela (5) tollywood (59) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.