Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಜಾಪಾಳ್ ಜಂಕ್ಷನ್»ayogya director mahesh: ಮಹೇಶನ ಮಾತು ನಿಜವಾದ್ರೆ `ಬೂಬ್ಸ್ ಬಂಪ್ಸ್’ ಖಾತರಿ!
    ಜಾಪಾಳ್ ಜಂಕ್ಷನ್

    ayogya director mahesh: ಮಹೇಶನ ಮಾತು ನಿಜವಾದ್ರೆ `ಬೂಬ್ಸ್ ಬಂಪ್ಸ್’ ಖಾತರಿ!

    By Santhosh Bagilagadde28/08/2023
    Facebook Twitter Telegram Email WhatsApp
    5ae884e6 56d0 4773 8ee0 363ef0b58563
    Share
    Facebook Twitter LinkedIn WhatsApp Email Telegram

    ಸಂಸದೆ ಸುಮಲತಾ (sumalatha birthday party) ಬರ್ತ್‍ಡೇ ಪಾರ್ಟಿಯ ಸುತ್ತ ಒಂದಷ್ಟು ವಿದ್ಯಮಾನಗಳು ಘಟಿಸಲಾರಂಭಿಸಿವೆ. ಇತ್ತೀಚಿನ ವರ್ಷಗಳಲ್ಲಿ (sudeep-darshan) ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಸ್ನೇಹ ಹಳಸಿಕೊಂಡಿತ್ತಲ್ಲ? ಆ ನಂತರ ಒಬ್ಬರು ಕಾಣಿಸಿಕೊಂಡ ಸಮಾರಂಭದಲ್ಲಿ ಮತ್ತೊಬ್ಬರು ಕಾಣಿಸುತ್ತಿರಲಿಲ್ಲ. ಅವರಿಬ್ಬರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾಗಳ ತುಂಬೆಲ್ಲ (fans war) ಕದನವೆಂಬುದು ಮಾಮೂಲಾಗಿ ಬಿಟ್ಟಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಆ ಕದನ ಸಭ್ಯತೆಯ ಪರಿಧಿ ದಾಟಿ ಅಸಹ್ಯ ಹುಟ್ಟಿಸಿ ಬಿಟ್ಟಿತ್ತು. ಎರಡೂ ದಿಕ್ಕಿನ ವಿಸರ್ಜನೆಗಳಿಂದಾಗಿ, ಸೋಶಿಯಲ್ ಮೀಡಿಯಾ ಎಂಬುದು ಪಾಯಿಖಾನೆಯಂತಾಗಿದ್ದರೂ ಈ ನಟರಿಬ್ಬರೂ ತಮ್ಮದೇ ಲೋಕದಲ್ಲಿ ಕಳೆದು ಹೋಗಿದ್ದರು. ಇದೀಗ (sumalatha ambareesh) ಸುಮಲತಾ ಬರ್ತ್‍ಡೇ ಪಾರ್ಟಿಯ ನೆಪದಲ್ಲಿ ಈ ಇಬ್ಬರೂ ಮತ್ತೆ ಒಂದಾಗುವ ಲಕ್ಷಣಗಳು ಕಾಣಿಸುತ್ತಿವೆ. ಕೆಲ ಮಂದಿಯಂತೂ ಕಿಚ್ಚ-ದರ್ಶನ್ ಜೊತೆಗೂಡಿದರೆ, ಕನ್ನಡ ಚಿತ್ರರಂಗದಲ್ಲೊಂದು ಕ್ರಾಂತಿಯಾಗುತ್ತದೆ ಎಂಬಂಥಾ ಭ್ರಾಂತಿಯಲ್ಲಿ ನರಳುತ್ತಿದ್ದಾರೆ!

    FB IMG 1693117485927ಮೊನ್ನೆಯಷ್ಟೇ ದರ್ಶನ್ ಮಾಧ್ಯಮದವರೊಂದಿಗೂ ರಾಜಿಯಾಗಿದ್ದರು. ಎಲ್ಲವೂ ಸುಸೂತ್ರವಾಗಿ ನಡೆದರೆ ಕಿಚ್ಚನ ಕೈ ಕುಲುಕಿ, ಮತ್ತೆ ಸ್ನೇಹ ಪರ್ವವನ್ನು ಮುಂದುವರೆಸಿದರೂ ಅಚ್ಚರಿಯೇನಿಲ್ಲ. ಒಂದು ವೇಳೆ ಈ ಸ್ನೇಹ ಮತ್ತೆ ಬೆಸೆದುಕೊಂಡರೆ, ಅಭಿಮಾನಿಗಳ ಹೆಸರಲ್ಲಿ ಕಿತ್ತಾಡುವವರ ಅಬ್ಬರ ಕೊಂಚ ತಗ್ಗಬಹುದು. ಸೋಶಿಯಲ್ ಮೀಡಿಯಾದ ತುಂಬಾ ಒಂದಷ್ಟು ಸಹ್ಯ ವಾತಾವರಣ ಮೂಡಬಹುದು. ಅಲ್ಲಿಂದಿಲ್ಲಿಗೆ, ಇಲ್ಲಿಂದ ಅಲ್ಲಿಗೆ ತಂದಿಡುತ್ತಿದ್ದ ಕೆಲ ಆಲ್ಕಾಟಿ ಆಸಾಮಿಗಳು ನಿರುದ್ಯೋಗಿಗಳಾಗಬಹುದು. ಕಿಚ್ಚ ಮತ್ತು ದರ್ಶನ್ ಇಂಥಾ ಮಾನಸಿಕ ಒತ್ತಡಗಳಿಂದ ಹೊರಬಂದು ತುಸು ನಿಸೂರಾಗಬಹುದು. ಅದರ ಹೊರತಾಗಿ ಈ ಸ್ನೇಹದ ಮರು ಕೂಡಿಕೆಯಿಂದ ಮತ್ಯಾವ ಸೀಮೆಗಿಲ್ಲದ ಕ್ರಾಂತಿಯೂ ಆಗೋದಿಲ್ಲ!

    92f1b790 e197 4ecd b00a 5116c475c0acಹೀಗೆ ಕಿಚ್ಚಾ ಮತ್ತು ದರ್ಶನ್ ಸ್ನೇಹ ಕೂಡಿಕೊಳ್ಳುತ್ತದೆಂಬ ಸೂಚನೆ ಸಿಕ್ಕಾಕ್ಷಣವೇ, ಕೆಂ ಮಂದಿ ಅವರಿಬ್ಬರನ್ನೂ ಸೇರಿಸಿಕೊಂಡು ಮಲ್ಟಿ ಸ್ಟಾರರ್ ಸಿನಿಮಾ ಮಾಡಲು ಸನ್ನದ್ಧರಾಗಿರುವ ಸುದ್ದಿಯಿದೆ. ಹಾಗೊಂದು ವೇಳೆ, ದರ್ಶನ್ ಮತ್ತು ಸುದೀಪ್ ಒಟ್ಟಿಗೆ ನಟಿಸಲು ಒಪ್ಪಿಕೊಂಡರೂ ಅದನ್ನು ಚಾಲಾಕಿ ಚತುರ ರಾಕ್ ಲೈನ್ ವೆಂಕಣ್ಣನೇ ಪ್ರೊಡ್ಯೂಸು ಮಾಡೋದಂತೂ ಪಕ್ಕಾ. ಆದರೆ, ಈ ಇಬ್ಬರು ಸ್ಟಾರ್ ನಟರನ್ನು ಒಂದು ಸಿನಿಮಾದಲ್ಲಿ ಒಟ್ಟುಗೂಡಿಸಬೇಕೆಂದರೆ, ಅದಕ್ಕೆ ಬೇರೆಯದ್ದೇ ತೆರನಾದ ಖದರ್ ಇರುವ ನಿರ್ದೇಶಕ ಬೇಕೇ ಬೇಕು. ಇದೀಗ ಆ ಕಸುವ ಯಾರಿಗಿದೆ ಎಂಬ ದಿಕ್ಕಿನಲ್ಲಿಯೂ ಒಂದಷ್ಟು ಚರ್ಚೆಗಳು ಶುರುವಾಗಿವೆ. ಇಂಥಾ ಬೆಳವಣಿಗೆಗಳ ನಡುವೆ ಅಯೋಗ್ಯ ಖ್ಯಾತಿಯ ಯುವ ನಿರ್ದೇಶಕ ಮಹೇಶ್ ಭಯಂಕರ ಜೋಕೊಂದನ್ನು ಸಿಡಿಸುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದ್ದಾನೆ!

    647 030617105746ನೀನಾಸಂ ಸತೀಶ್ ನಟನೆಯ ಅಯೋಗ್ಯ ಎಂಬ ಸಿನಿಮಾ ಮೂಲಕ ನಿರ್ದೇಶಕನಾಗಿ ಅವತರಿಸಿದ್ದಾತ ಮಹೇಶ್. ಆ ಸಿನಿಮಾ ಗೆಲುವು ಕಂಡಿತ್ತು. ಹಾಗೆ ಮೊದಲ ಹೆಜ್ಜೆಯಲ್ಲಿಯೇ ಒಂದು ಮಟ್ಟದ ಗೆಲುವು ಕಂಡಿದ್ದ ಎಳಸು ಸ್ವಭಾವದ ಮಹೇಶನ ತಲೆ ಭುಜದ ಮೇಲೆ ನಿಲ್ಲಲಾರದಂತೆ ಗಿರಕಿ ಹೊಡೆಯಲಾರಂಭಿಸಿತ್ತು. ಮಹಾನ್ ಚಾಲಾಕಿಯೂ, ಚುರುಕುತನ ಹೊಂದಿರುಇವವನೂ ಆಗಿರುವ ಮಹೇಶ ಆ ನಂತರ ಮೆತ್ತಗೆ ಮೆರೆಯಲಾರಂಭಿಸಿದ್ದ ಅಂತೊಂದು ಆರೋಪ ಗಾಂಧಿನಗರದಲ್ಲಿ ಹಬ್ಬಿಕೊಂಡಿತ್ತು. ಪೋಸು ಕೊಡೋದರಲ್ಲಿ ಜೋಗಿ ಪ್ರೇಮ್ ನನ್ನೇ ಈತ ಮೀರಿಸುತ್ತಾನೆಂಬ ಮಾತುಗಳೂ ಹರಿದಾಡಿದ್ದವು. ನಂತರ ರೋರಿಂಗ್ ಸ್ಟಾರ್ ಶ್ರೀ ಮುರುಳಿಯ ಮದಗಜ ಅಂತೊಂದು ಚಿತ್ರ ಮಾಡಿದ್ದ ಮಹೇಶ, ನಗೆಪಾಟಲಿಗೀಡಾಗಿದ್ದ. ಯಾಕೆಂದರೆ, ಮದಗಜ ಸಿನಿಮಾ ಮಂದಿರದ ಹೊಸ್ತಿಲಲ್ಲೇ ಮಗುಚಿಕೊಂಡಿತ್ತು!

    a7127720 78c6 479b ae36 30401a58dc62ಇಂಥಾ ಮಹೇಶ ಸುದೀಪ್ ಹಾಗೂ ದರ್ಶನ್ ಒಪ್ಪಿಗೆ ಕೊಟ್ಟರೆ ರಾತ್ರಿ ಹಗಲಾಗೋದರೊಳಗೆ ಕಥೆ ಬರೆದು, ಮಾರನೇ ದಿನ ಮುಂಜಾನೆಹೊತ್ತಿಗೆಲ್ಲ ನಿರ್ದೇಶನ ಮಾಡಲು ತಾನು ರೆಡಿ ಎಂಬರ್ಥದಲ್ಲಿ ಮಾತಾಡಿರುವ ಸುದ್ದಿಯೊಂದು ಹೊರ ಬಿದ್ದಿದೆ. ಮಾಧ್ಯಮವೊಂದರಲ್ಲಿ ಕಾಣಿಸಿಕೊಂಡಿರೋ ಈ ಸುದ್ದಿ ನಿಜವೇ ಆಗಿದ್ದರೆ, ಅದನ್ನು ಮಹೇಶ ಹೇಳಿದ್ದೇ ಸತ್ಯವಾಗಿದ್ದರೆ, ಅದು ಈ ಸಂವತ್ಸರದ ಬಹುದೊಡ್ಡ ಕಾಮಿಡಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ನಿಜ, ಮಹೇಶನ ಪ್ರತಿಭೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಈ ಕ್ಷಣಕ್ಕೆ ಎರಡು ಮದಗಜಗಳನ್ನು ಒಟ್ಟೊಟ್ಟಿಗೆ ಸಂಭಾಳಿಸುವ ಯಾವ ಕಸುವೂ ಆತನಿಗಿಲ್ಲ. ಯಾಕೆಂದರೆ, ಶ್ರೀ ಮುರುಳಿ ಎಂಬ ಸಾಧಾರಣ ಗಜವನ್ನೇ ಮ್ಯಾನೇಜು ಮಾಡಲಾಗದೆ ಈ ಮಹೇಶ ಕೈ ಚೆಲ್ಲಿದ್ದ!

    1dc88e69 d093 4f79 8cb6 3211618c9d66ಸದ್ಯಕ್ಕೆ ಇಂಥಾದ್ದೊಂದು ಜೋಕು ಮಾಡಿರುವ ಮಹೇಶ, ಇದೀಗ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸುತ್ತಿರುವ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾನೆ. ಅದಾಗಲೇ ಅಭಿಷೇಕ್ ನನ್ನು ಹಾಡಿ ಹೊಗಳುತ್ತಾ ಮೂದಲಿಕೆಗೂ ಒಳಗಾಗುತ್ತಿದ್ದಾನೆ. ಹೇಳಿಕೇಳಿ ಈ ಅಭಿಷೇಕ್ ನಟನಾಗಿ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ಆತನಿಂದ ನಟನೆ ತೆಗೆಸುವಲ್ಲಿ ನಾಗಣ್ಣನಂಥಾ ನಾಗಣ್ಣನೇ ಅಮರ್ ಚಿತ್ರದ ಸಂದರ್ಭದಲ್ಲಿ ನಿತ್ರಾಣಗೊಂಡಿದ್ದರು. ಲಾಂಗ್ ಶಾಟ್ ಇಡುವ ಮೂಲಕ ಅಭಿಷೇಕನ ಎಕ್ಸ್‍ಪ್ರೆಷನ್ನು ಕಾಣಿಸದಂತೆ ಮ್ಯಾನೇಜು ಮಾಡಿದ್ದರು. ಇದೀಗ ಮಹೇಶ ಚಿತ್ರವಿಚಿತ್ರ ಕವಚಗಳನ್ನು ಮುಕಮುಸುಡಿಗೆಲ್ಲ ಕವುಚುವ ಮೂಲಕ, ನಾಗಣ್ಣನ ಐಡಿಯಾವನ್ನು ಮತ್ತೊಂದು ಲೆವೆಲ್ಲಿಗೇರಿಸಿರೋ ಲಕ್ಷಣಗಳಿದ್ದಾವೆ. ಹಾಗೆ ನೋಡಿದರೆ, ಆ ಚಿತ್ರದ ಬಗ್ಗೆ ಯಾರಿಗೂ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿಲ್ಲ. ಮಹೇಶನ ಎರಡನೇ ಚಿತ್ರ ಮದಗಜ ಖುದ್ದು ಆತನೇ ಹೇಳಿದಂತೆ ಬೂಬ್ಸ್ ಬಂಪ್ಸ್ ಬರಿಸುವಲ್ಲಿ ವಿಫಲವಾಗಿದೆ. ಮೂರನೇ ಚಿತ್ರ ಇನ್ನಷ್ಟೇ ತೆರೆಗಾಣಬೇಕಿದೆ. ಅಷ್ಟರಲ್ಲೇ ದರ್ಶನ್ ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡ್ತೀನಿ ಅನ್ನುತ್ತಿದ್ದಾನೆ ಮಹೇಶ. ಅದೇನಾದರೂ ನಿಜವಾದರೆ ಬಡಪಾಯಿ ಪ್ರೇಕ್ಷಕರು ಮತ್ತೊಂದು ಬೂಬ್ಸ್ ಬಂಪ್ಸ್ ಅನುಭವಕ್ಕೆ ಅಣಿಗೊಳ್ಳಬೇಕಾಗಬಹುದು!

    ayogyamahesh ayogyamoviedirector challengingstardarshan kicchasudeep madagaja smahesh sumalatha
    Share. Facebook Twitter LinkedIn WhatsApp Telegram Email
    Previous Articletoby movie review: ಶೆಟ್ರು ತೋರಿಸಿದ್ದು ಬಂಗುಡೆ; ಥಿಯೇಟರಿನಲ್ಲಿ ಕಂಡಿದ್ದು ಸಣಕಲು ಬೂತಾಯಿ!
    Next Article ustad bhagth sing: ಫಸ್ಟ್ ಲುಕ್ಕಿಗಿಂತ ಮೊದಲೇ ಟೀಸರ್ ಲಾಂಚ್!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

    02/12/2025

    Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?

    10/11/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.