Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಟೇಕಾಫ್»apayavide eccharike movie: ಉದ್ಯಮಿಯೋರ್ವರ ಅಪ್ಪಟ ಸಿನಿಮಾ ಧ್ಯಾನ!
    ಟೇಕಾಫ್

    apayavide eccharike movie: ಉದ್ಯಮಿಯೋರ್ವರ ಅಪ್ಪಟ ಸಿನಿಮಾ ಧ್ಯಾನ!

    By Santhosh Bagilagadde27/02/2025
    Facebook Twitter Telegram Email WhatsApp
    cae9448b 2219 4b87 8984 6f53dc19fba1
    Share
    Facebook Twitter LinkedIn WhatsApp Email Telegram

    ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಚಿತ್ರ ಈ ವಾರ ಅಂದರೆ, ಫೆಬ್ರವರಿ 28ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ನೇರವಾಗಿ ಎದೆಗಿಳಿದು ಕಾಡುವಂಥಾ ಹಾಡು, ಕಾಡಿನ ಗರ್ಭದಲ್ಲಿ ಘಟಿಸುವ ಹಾರರ್ ಥ್ರಿಲ್ಲರ್ ಕಥೆನದ ಸುಳಿವು… ಯಶಸ್ವಿ ಚಿತ್ರವೊಂದರ ಆರಂಭಿಕ ಹೆಜ್ಜೆಗಳು ಹೇಗಿರುತ್ತವೋ, ಈ ಸಿನಿಮಾದ ಕದಲಿಕೆಗಳು ಕೂಡಾ ಅದಕ್ಕೆ ತಕ್ಕುದಾಗಿದೆ. ಹೀಗೆ ಹಬ್ಬಿಕೊಂಡಿರೋ ಸಕಾರಾತ್ಮಕ ವಾತಾವರಣದ ಹಿಂದೆ ಹೊಸಬರ ತಂಡವೊಂದರ ಅವಿರತವಾದ ಶ್ರಮವಿದೆ. ಆದರೆ, ಅದರ ಹಿಂದೆ ವಿ.ಕೆ ಮಂಜುನಾಥ್ ಎಂಬ ಅಪ್ಪಟ ಸಿನಿಮಾ ಪ್ರೇಮಿ ನಿರ್ಮಾಪಕರ ಸಾಥ್ ಕೂಡಾ ಪ್ರಧಾನವಾಗಿದೆ. ಯಶಸ್ವೀ ಉದ್ಯಮಿಯಾಗಿದ್ದುಕೊಂಡು, ವ್ಯವಹಾರದಾಚೆಗಿನ ಸಿನಿಮಾ ವ್ಯಾಮೋಹದಿಂದಲೇ ವಿ.ಕೆ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    Apaayavide Eccharike 105 V.G. Manjunath Producer ಹೊಸಬರು ಸಿನಿಮಾ ರಂಗಕ್ಕೆ ಆಗಮಿಸೋದು ಚಿತ್ರರಂಗದ ಏಳಿಗೆಯ ದೃಷ್ಟಿಯಿಂದ ಅವಶ್ಯಕ ವಿದ್ಯಮಾನ. ಆದರೆ, ಹೊಸಾ ತಂಡವನ್ನು ನೆಚ್ಚಿಕೊಂಡು ಕೋಟಿ ಕೋಟಿ ಪಣಕ್ಕಿಡಲು ಹಿಂಜರಿಕೆ ಹೊಂದಿರುವವರೇ ಹೆಚ್ಚು. ಅಂಥವರ ನಡುವೆ ಕೆಲ ನಿರ್ಮಾಪಕರು ಲಾಭ ನಷ್ಟದ ಗೋಜಿಗೆ ಹೋಗದೆ ಹೊಸಬರನ್ನು ಬೆನ್ತಟ್ಟಿ ಪ್ರೋತ್ಸಾಹಿಸೋದೂ ಇದೆ. ನಿಸ್ಸಂದೇಹವಾಗಿ ಆ ಸಾಲಿಗೆ ಸೇರ್ಪಡೆಗೊಳ್ಳುವವರು ವಿ.ಜಿ ಮಂಜುನಾಥ್. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಗೆ ಸೇರುವ ವಡ್ಡರಹಳ್ಳಿಯವರು ವಿ.ಜಿ ಮಂಜುನಾಥ್. ಅಲ್ಲಿನ ಅಪ್ಪಟ ರೈತಾಪಿ ವರ್ಗದಲ್ಲಿ ಹುಟ್ಟಿ ಬೆಳೆದ ಅವರ ಪಾಲಿಗೆ ಆರಂಭದಿಂದಲೂ ಶಿಕ್ಷಕನಾಗಬೇಕೆಂಬ ಕನಸಿತ್ತು. ಕಷ್ಟಪಟ್ಟು ಓದಿ, ಆ ವೃತ್ತಿಯನ್ನು ದಕ್ಕಿಸಿಕೊಂಡ ಮೇಲೆ ಅವರು ಉದ್ಯಮದತ್ತ ಹೊರಳಿಕೊಂಡು ಯಶ ಕಂಡಿದ್ದೇ ಒಂದು ರೋಚಕ ಕಥನ.

    RRP4324ಹಾಗೆ ಯಶಸ್ವೀ ಉದ್ಯಮಿಯಾಗಿದ್ದ ವಿ.ಜಿ ಮಂಜುನಾಥ್ ಸಿನಿಮಾ ಕನಸಿನತ್ತ ಗಮನ ಹರಿಸಿದ್ದರು. ಅದರ ಫಲವಾಗಿಯೇ ವರ್ಷಾಂತರಗಳ ಹಿಂದೆ ಕದ್ದುಮುಚ್ಚಿ ಅಂತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಹಂತದಲ್ಲಿ ನಿರ್ಮಾಣ ಕ್ರೇತ್ರದ ಬಗ್ಗೆ ಹೆಚ್ಚೇನೂ ತಿಳುವಳಿಕೆ ಹೊಂದಿರದಿದ್ದ ವಿ.ಜಿ ಮಂಜುನಾಥ್ ಪಾಲಿಗೆ ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುಉರಾಗಿದ್ದವು. ನಾನಾ ಸರ್ಕಸ್ಸು ನಡೆಸಿಬ ಬಳಿಕವೂ ಉಳಿದುಕೊಂಡಿದ್ದು ಕೆಟ್ಟ ಅನುಭವದ ಕಹಿ ಮಾತ್ರ. ಸಾಮಾನ್ಯವಾಗಿ ಆರಂಭದಲ್ಲಿ ಶ್ರಮ ಪಟ್ಟರೂ ಹಿನ್ನಡೆಯಾದಾಗ ಯಾರೇ ಆದರೂ ನಿರಾಸೆಗೀಡಾಗೋದು ಸಹಜ. ಓರ್ವ ಉದ್ಯಮಿಯಾಗಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಗೆದ್ದಿರುವ ವಿ.ಜಿ ಮಂಜುನಾಥ್ ಅವರ ಪಾಲಿಗೇನು ಅಡೆತಡೆ ಹೊಸತಲ್ಲ. ಆದರೂ, ನಿರ್ಮಾಪಕನಾಗಿ ಮೊದಲ ಸಿನಿಮಾದಲ್ಲಿಯೇ ಅವರು ಅಕ್ಷರಶಃ ಹೈರಾಣಾಗಿದ್ದರು. 

    RRP3918 2ಇನ್ನು ಮುಂದೆ ಸಿನಿಮಾ ನಿರ್ಮಾಣದ ಸಹವಾಸವೇ ಬೇಡ ಎಂಬ ನಿರ್ಧಾರ ಮಾಡುವಷ್ಟರ ಮಟ್ಟಿಗವರು ಬೇಸತ್ತಿದ್ದರು. ಹಾಗೆ ಭ್ರಮನಿರಸನ ಹೊಂದಿದ್ದ ವಿ.ಜಿ ಮಂಜುನಾಥ್ ಅವರನ್ನು ಮತ್ತೆ ನಿರ್ಮಾಪಕನಾಗಿ ಅಖಾಡಕ್ಕಿಳಿಯುವಂತೆ ಮಾಡಿರೋದು ಅಪಾಯವಿದೆ ಎಚ್ಚರಿಕೆ ಚಿತ್ರದ ಚೆಂದದ ಕಥೆ ಎಂಬುದು ಅಸಲೀ ವಿಶೇಷ. ಯುವ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಕದ್ದುಮುಚ್ಚಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಆ ನಂತರ ಉಂಟಾದ ಅನೇಕ ಪಲ್ಲಟಗಳಿಂದಾಗಿ ಹೆಚ್ಚಿನ ಜವಾಬ್ದಾರಿ ತಾನೇ ತಾನಾಗಿ ಅವರ ಹೆಗಲೇರಿಕೊಂಡಿತ್ತು. ಕಡೆಗೂ ಪ್ರಯಾಸ ಪಟ್ಟು ಆ ಸಿನಿಮಾ ತೆರೆಗಂಡ ನಂತರವೂ ಅಭಿಜಿತ್ ನಿರ್ಮಾಪಕ ವಿ.ಜಿ ಮಂಜುನಾಥ್ ಅವರ ಸಂಪರ್ಕದಲ್ಲಿದ್ದರು.

    RRP9134ಅದಾಗಲೇ ದಶಕಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಅಭಿಜಿತ್ ತೀರ್ಥಹಳ್ಳಿ ಸ್ವತಂತ್ರ ನಿರ್ದೇಶಕರಾಗುವ ಇರಾದೆಯಿಂದ ಒಂದು ಕಥೆ ರೆಡಿ ಮಾಡಿಕೊಂಡಿದ್ದರು. ಹಾರರ್ ಅಂಶ ಸೇರಿದಂತೆ ಅನೇಕ ವಿಚಾರಗಳು ಅಡಕವಾಗಿದ್ದ ಆ ಕಥೆಯನ್ನು ವಿ.ಕೆ ಮಂಜುನಾಥ್ ಅವರ ಮುಂದೆ ಹರವಿದಾಗ ಅವರೊಳಗೊಂದು ಭರವಸೆ ಮೂಡಿಕೊಂಡಿತ್ತು. ಹಾಗಂತ ಏಕಾಏಕಿ ನಿರ್ಮಾಣಕ್ಕೆ ಇಳಿದು ಬಿಡುವಂಥಾ ವಾತಾವರಣವೂ ಇರಲಿಲ್ಲ. ಯಾಕೆಂದರೆ, ಮೊದಲ ಸಿನಿಮಾದ ಮೂಲಕ ಆಗಿದ್ದ ಕಹಿ ಅನುಭವಗಳಿನ್ನೂ ಅವರನ್ನು ಕಾಡುತ್ತಿದ್ದವು. ಹೀಗೆ ಮೊದಲ ಹೆಜ್ಜೆಗಂಟಿಗ ಅನುಭವಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿದ್ದ ವಿ.ಜಿ ಮಂಜುನಾಥ್ ಅವರು ಹಂಣತ ಹಂತವಾಗಿ ಅಭಿಜಿತ್ ಅವರನ್ನು ಪರೀಕ್ಷೆಗೊಡ್ಡಿ, ಎಲ್ಲ ರೀತಿಯಿಂದಲೂ ಸಮಯ ಪಕ್ವವಾದ ನಂತರವಷ್ಟೇ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿಸಿದ್ದರಂತೆ.

    Apaayavide Eccharike 104ಅಂದಹಾಗೆ, ಆರಂಭಿಕವಾಗಿ ಅಪಾಯವಿದೆ ಎಚ್ಚರಿಕೆ ಚಿತ್ರವನ್ನು ಒಂದು ಸೀಮಿತ ಬಜೆಟ್ಟಿನಲ್ಲಿ ನಿರ್ಮಾಣ ಮಾಡಲು ವಿ.ಜಿ ಮಂಜುನಾಥ್ ತೀರ್ಮಾನಿಸಿದ್ದರಂತೆ. ಆದರೆ, ಚಿತ್ರೀಕರಣಕ್ಕಿಳಿದ ನಂತರ ಯಾವುದಕ್ಕೂ ಕಡಿಮೆಯಾಗದಂತೆ ನೋಡಿಕೊಂಡ ಅವರು, ಎಲ್ಲ ಕೋನಗಳಿಂದಲೂ ಈ ಸಿನಿಮಾ ಅಮೋಘವಾಗಿರುವಂತೆ ನೋಡಿಕೊಂಡಿದ್ದಾರೆ. ಕಡೆಗೂ ಆರಂಭಿಕ ಹೆಜ್ಜೆಗಳ ಕಹಿ ಮರೆತು, ಅಪಾಯವಿದೆ ಎಚ್ಚರಿಕೆ ಚಿತ್ರದ ಮೂಲಕ ಹೊಸಾ ಭರವಸೆಯೊಂದು ಅವರನ್ನು ಆವರಿಸಿಕೊಂಡಿದೆ. ದರಿ ಸಿನಿಮಾದೊಂದಿಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಗುವ ನಿರೀಕ್ಷೆಯೂ ಅವರಲ್ಲಿದೆ. ಸದ್ಯದ ವಾತಾವರಣವಂತೂ ಅದಕ್ಕೆ ಪೂರಕವಾಗಿದೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣದೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.

    #abhijiththirthahally #apayavideeccharike #vjmanjunath bannadahejje cinishodha kfi lifestory sandalwood
    Share. Facebook Twitter LinkedIn WhatsApp Telegram Email
    Previous Articleramayan movie updates: ಟಾಕ್ಸಿಕ್ ನಡುವಲ್ಲೊಂದು ರಾಮಾಯಣ!
    Next Article apayavide eccharike movie: ಕಾಡ ಗರ್ಭದ ಕಥೆಗಿದೆಯಾ ಸಿಟಿಯ ಕನೆಕ್ಷನ್ನು?
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026

    Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

    01/01/2026
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.