Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸೌತ್ ಜೋನ್»thala ajith: ಪದೇ ಪದೇ ಆಸ್ಪತ್ರೆ ಭೇಟಿಯ ಹಿಂದಿದೆ ಅದೊಂದು ಭಯ!
    ಸೌತ್ ಜೋನ್

    thala ajith: ಪದೇ ಪದೇ ಆಸ್ಪತ್ರೆ ಭೇಟಿಯ ಹಿಂದಿದೆ ಅದೊಂದು ಭಯ!

    By Santhosh Bagilagadde09/03/2024Updated:09/03/2024
    Facebook Twitter Telegram Email WhatsApp
    77fdf9e5 af6b 4ae4 a089 22dd0f721657
    Share
    Facebook Twitter LinkedIn WhatsApp Email Telegram

    ಸಿನಿಮಾ ನಟನಟಿಯರ ಬಗ್ಗೆ ರೂಮರ್ ಗಳು ಹರಿದಾಡಲು ಬಲವಾದ ಕಾರಣಗಳೇನೂ ಬೇಕಿಲ್ಲ. ಅದರಲ್ಲಿಯೂ ಸ್ಟಾರ್ ನಟರ ಸುತ್ತಲಂತೂ ಅಕ್ಷರಶಃ ಗಾಸಿಪ್ಪುಗಳ ಗುಡಾಣವೇ ತುಂಬಿಕೊಂಡಿರುತ್ತೆ. ಹಾಗಿರುವಾಗ ತಮಿಳುನಾಡಿನ ತುಂಬಾ ತೀವ್ರವಾದ ಕ್ರೇಜ್ ಮೂಡಿಸಿರುವ (thala ajith) ತಲಾ ಅಜಿತ್ ಇಂಥಾ ರೂಮರುಗಳಿಂದ ಹೊರತಾಗಿರಲು ಸಾಧ್ಯವೇ? ಇತ್ತೀಚೆಗಂತೂ ಅಜಿತ್ ಬಗ್ಗೆ ನಾನಾ ದಿಕ್ಕುಗಳಲ್ಲಿ ಅಂತೆಕಂತೆಗಳು ಹಬ್ಬಿಕೊಳ್ಳುತ್ತಿವೆ. ಅದರಲ್ಲಿಯೂ ಯಾವಾಗ ಅಜಿತ್ ಆಸ್ಪತ್ರೆಯ ಕಾರಿಡಾರುಗಳಲ್ಲಿ ಕಾಣಿಸಿಕೊಂಡರೋ, ಆ ಕ್ಷಣದಿಂದಲೇ ಅವರ ಅನಾರೋಗ್ಯದ ಬಗ್ಗೆ ಆಘಾತಕರ ಸುದ್ದಿಗಳು ಹರಿದಾಡುತ್ತಿವೆ. ಅದನ್ನು ಕೇಳಿದ ಅಜಿತ್ ಅಭಿಮಾನಿಗಳೆಲ್ಲ ಕಂಗಾಲಾಗಿ ಹೋಗಿದ್ದಾರೆ!

    download 2ಅಜಿತ್‍ಗೆ ಬ್ರೈನ್ ಟ್ಯೂಮರ್ ಇದೆ ಅನ್ನೋದು ಇತ್ತೀಚೆಗೆ ಹರಡಿಕೊಂಡಿದ್ದ ಸುದ್ದಿ. ಅದಕ್ಕೆ ಸರಿಯಾಗಿ ಅಜಿತ್ ಕೂಡಾ ಆಗಾಗ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಾ, ವಾರದ ಹಿಂದೆ ಸರ್ಜರಿ ಮಾಡಿಸಿಕೊಳ್ಳುತ್ತಿರುವ ಸುದ್ದಿ ಜಾಹೀರಾಗಿತ್ತು. ಹಾಗಾದರೆ, ಅಜಿತ್ ಗೆ ನಿಜಕ್ಕೂ ಆಗಿರೋದೇನು? ಹಬ್ಬಿಕೊಂಡಿರುವ ಗಾಸಿಪ್ಪುಗಳೆಲ್ಲ ನಿಜವೇ ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತವೆ. ಅದಕ್ಕುತ್ತರವಾಗಿ ಒಂದಷ್ಟು ಸೂಕ್ಷ್ಮ ಸಂಗತಿಗಳೂ ಹೊರಬೀಳುತ್ತವೆ. ಈ ಬಗ್ಗೆ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಒಂದಷ್ಟು ವಿವರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಪ್ರಾಣ ಸ್ನೇಹಿತ ವೆಟ್ರಿ ಮರಣದ ನಂತರ ಅಜಿತ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅಗೋಚರ ಭಯವೊಂದು ಈ ಸೂಪರ್ ಸ್ಟಾರ್ ನಟನನ್ನು ಹೈರಾಣು ಮಾಡಿ ಹಾಕಿದೆ.

    download 3ಕೊರೋನಾ ನಂತರದಲ್ಲಿ ಜನ ನಾನಾ ಬಗೆಯಲ್ಲಿ ಮರಣ ಹೊಂದುತ್ತಿದ್ದಾರೆ. ಅದರಂತೆಯೇ ಅಜಿತ್ ಜೀವದ ಗೆಳೆಯ ವೆಟ್ರಿ ಕೂಡಾ ಇಲ್ಲವಾಗಿದ್ದರು. ವಿಕ್ಷಿಪ್ತ ಸ್ವಭಾವದ, ಅಂತರ್ಮುಖಿ ಆಸಾಮಿ ಅಜಿತ್ ಗೆಳೆಯನ ಮರಣದ ನಂತರ ಮತ್ತಷ್ಟು ಮಂಕಾಗಿದ್ದರಂತೆ. ಹೀಗೆ ಆಪ್ತ ಜೀವಗಳು ಎದ್ದು ನಡೆದಾಗ ಅದೊಂದು ತೆರನಾದ ಶುಷ್ಕ ಭಾವ ಆವರಿಸಿಕೊಳ್ಳೋದು ಸಹಜ. ಹಾಗಂತ ಎಲ್ಲರಿಗೂ ಹಾಗಾಗುತ್ತದೆ ಅಂದುಕೊಳ್ಳುವಂತಿಲ್ಲ. ಕೆಲ ಲಫಂಗರಿಗೆ ಗೆಳೆತನ ಅನ್ನೋದೂ ಕೂಡಾ ಫಾಯಿದೆ ಗಿಟ್ಟಿಸಿಕೊಳ್ಳುವ ಮೂಲವಾಗಿರುತ್ತೆ. ಬದುಕಿರುವಾಗಲೇ ಸ್ನೇಹದ ಕತ್ತು ಹಿಸುಕುವ ಇಂಥಾ ಹಲಾಲುಕೋರರು ಸ್ನೇಹಕ್ಕಿರಲಿ, ಸಣ್ಣದೊಂದು ನಂಬಿಕೆಗೂ ಅರ್ಹರಲ್ಲ. ಅಂಥವರಿಗೆ ಮರುಗಲೂ ಗತಿಯಿಲ್ಲದಂಥಾ ಘೋರ ಸಾವು ಗ್ಯಾರೆಂಟಿ. ಆದರೆ, ನಿಜವಾದ ಸ್ನೇಹ ಮಾತ್ರ ವಿದಾಯದ ಕ್ಷಣಗಳ ಮೂಲಕವೇ ಕೊಂದು ಬಿಡುತ್ತೆ.

    0 Wg8T26G trVQe4RPಹಾಗೆ ಸ್ನೇಹಿತ ಎದ್ದು ಹೋದ ನಂತರದಲ್ಲಿ ಅಜಿತ್ ಅದೆಷ್ಟು ಕಂಗಾಲಾಗಿದ್ದರೆಂದರೆ, ಪದೇ ಪದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಶುರುವಿಟ್ಟಿದ್ದರು. ಇದೇ ಸಂದರ್ಭದಲ್ಲಿ ಸಣ್ಣದೊಂದು ಸಮಸ್ಯೆ ಕಾಣಿಸಿಕೊಂಡಿತ್ತು. ಕಿವಿಯ ಹಿಂಭಾಗದಲ್ಲೊಂದು ಇನ್ಫೆಕ್ಷನ್ ಕಾಣಿಸಿಕೊಂಡಿದ್ದೇ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಅದರನ್ವಯ ಅಜಿತ್ ಗೆ ಶಸ್ತ್ರ ಚಿಕಿತ್ಸೆ ನಡೆದಿದೆ. ಅವರೀಗ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇದೇ ಮಾರ್ಚ್ ತಿಂಗಳಿನಲ್ಲಿಯೇ ಮತ್ತೆ ಚಿತ್ರೀಕರಣಕ್ಕೆ ಮರಳಲು ಅಜಿತ್ ಯೋಜನೆ ಹಾಕಿಕೊಂಡಿದ್ದಾರೆ. ಖುದ್ದು ಮ್ಯಾನೇಜರ್ ನೀಡಿರುವ ಇಷ್ಟೆಲ್ಲ ಮಾಹಿತಿಗಳು ಸದ್ಯ ಅಜಿತ್ ಅಭಿಮಾನಿ ಪಡೆಯನ್ನು ನಿರಾಳವಾಗಿಸಿದೆ!

    thalaajith_tollywood_bollywood_breakingnews_cinishodha
    Share. Facebook Twitter LinkedIn WhatsApp Telegram Email
    Previous Articlekenda movie: ಹಾಡುಗಳ ಹೊಸತನಕ್ಕೆ ಮರುಳಾದ ಹರಿ!
    Next Article kerebete song: ಅವರ ಕಡೆಯಿಂದ ಬಿಡುಗಡೆಗೊಂಡಿದ್ದು ಎದೆಗಿಳಿಯೋ ಹಾಡು!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    12/12/2025

    latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?

    08/12/2025

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    06/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.