Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!
    ಸ್ಪಾಟ್ ಲೈಟ್

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    By Santhosh Bagilagadde21/11/2023
    Facebook Twitter Telegram Email WhatsApp
    b6ca9dc9 db83 4c12 af9c 63e1197d00a2
    Share
    Facebook Twitter LinkedIn WhatsApp Email Telegram

    ಬದುಕು ಅದ್ಯಾವ ದಿಕ್ಕಿನತ್ತ ಹೊಯ್ದಾಡಿಸಿದರೂ, ಮತ್ತೆ ಮತ್ತೆ ಜಿದ್ದಿಗೆ ಬಿದ್ದಂತೆ ಗುರಿಯ ನೇರಕ್ಕೆ ಬಂದು ನಿಲ್ಲೋದಿದೆಯಲ್ಲಾ? ಆ ಛಾತಿ ಇರುವವರು ಮಾತ್ರವೇ ಅಂದುಕೊಂಡ ಗಮ್ಯದ ಸಮೀಪಕ್ಕಾದರೂ ಬಂದು ನಿಲ್ಲುತ್ತಾರೆ. ಆ ಕ್ಷಣದ ಅನಿವಾರ್ಯತೆಯನ್ನೇ ಫ್ಯಾಷನ್ ಆಗಿ ಪರಿಭಾವಿಸಿಕೊಂಡು, ಸಿಕ್ಕ ಸಣ್ಣ ಅವಕಾಶವನ್ನೇ ಗುರಿಯೆಡೆಗಿನ ಮೆಟ್ಟಿಲಾಗಿಸಿಕೊಳ್ಳೋ ಕಲೆಯನ್ನ ಪಳಗಿಸಿಕೊಂಡವರ ಪಾಲಿಗೆ ಕೊಂಚ ತಡವಾಗಿಯಾದರೂ ಕನಸೆಂಬುದು ನನಸಾಗಿ ಅಪ್ಪಿಕೊಳ್ಳುತ್ತೆ. ಅಂಥಾದ್ದೇ ಸೂಕ್ಷ್ಮ ಹಾದಿಯಲ್ಲಿ ಸಾಗಿ ಬಂದು, ಏಕಕಾಲದಲ್ಲಿಯೇ ನಟನಾಗಿ, ಸಿನಿಮಾ ವರದಿಗಾರ ನಿರೂಪಕನಾಗಿ ಗುರುತಿಸಿಕೊಂಡಿರುವ ಹುಡುಗ (mavalli karthik) ಮಾವಳ್ಳಿ ಕಾರ್ತಿಕ್. ಅವರೀಗ ದೇವರ ಹೆಸರಿನಲ್ಲಿ ಪ್ರಮಾಣ ಮಾಡುವ ಮೂಲ ಒಂದಷ್ಟು ಅಚ್ಚರಿಗೆ ಕಾರಣರಾಗಿದ್ದಾರೆ.

    6be8ecbc 1b70 424e a74c 2ce06c1406d1ಪ್ರಜಾ ಟಿವಿಯಲ್ಲಿ ಸಿನಿಮಾ ವರದಿಗಾರನಾಗಿ, ನಿರೂಪಕನಾಗಿ ಚಾಲ್ತಿಯಲ್ಲಿರುವವರು (mavalli karthik) ಮಾವಳ್ಳಿ ಕಾರ್ತಿಕ್. ಇದರ ನಡುವಲ್ಲಿಯೇ ನಟನಾಗಿಯೂ ಈಗೊಂದಷ್ಟು ವರ್ಷಗಳಿಂದ ತಾಲೀಮು ನಡೆಸುತ್ತಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ಕಾರ್ತಿಕ್, ನಾಟಕಗಳ ಮೂಲಕವೇ ತಮ್ಮೊಳಗಿನ ಪ್ರತಿಭೆಯನ್ನು ಸಾಣೆ ಹಿಡಿದುಕೊಂಡವರು. ಅದರ ಬಲದಿಂದಲೇ ಒಂದಷ್ಟು ಸೀರಿಯಲ್ಲುಗಳು, ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿರೋ ಅವರಿಗೀಗ ಅಪರೂಪದ ಅವಕಾಶವೊಂದು ಒಪದಗಿ ಬಂದಿದೆ. `ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಎಂ£ಬ ಚಿತ್ರದಲ್ಲಿ ಚೆಂದದ ಪಾತ್ರವೊಂದಕ್ಕೆ ಕಾರ್ತಿಕ್ ಜೀವ ತುಂಬಿದ್ದಾರೆ. ಗುರುಪ್ರಸಾದ್ ಚಂದ್ರಶೇಖರ್ ನಿರ್ದೇಶನದ ಈ ಸಿನಿಮಾವೀಗ ಶೀರ್ಷಿಕೆ ಮತ್ತು ಒಟ್ಟಾರೆ ಕಥೆಯ ಬಗೆಗಿನ ಒಂದಷ್ಟು ಹೊಳಹುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಒಂದೊಳ್ಳೆ ಪಾತ್ರದ ಮೂಲಕ ಈ ಸಿನಿಮಾ ಭಾಗವಾಗಿಕರುವ ಖುಷಿ ಮಾವಳ್ಳಿ ಕಾರ್ತಿಕ್ ರಲ್ಲಿದೆ.

    2ba15c3e 7800 4a96 bc7e 29019057836eಹಾಗಾದರೆ, ಈ ಸಿನಿಮಾ ಕಥೆ ಏನು? ಇದು ಯಾವ ಬಗೆಯ ಚಿತ್ರ? ಮಾವಳ್ಳಿ ಕಾರ್ತಿಕ್ ಇಲ್ಲಿ ಯಾವ ಛಾಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿಕೊಳ್ಳೋದು ಸಹಜ. ಆದರೆ, ಅದರ ಬಗ್ಗೆ ಯಾವುದೆಂದರೆ ಯಾವ ವಿಚಾರವನ್ನೂ ಬಿಟ್ಟುಕೊಡದಂತೆ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿದೆ. ಇದೆಲ್ಲದರಾಚೆಗೆ, ಒಂದಿಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಮೊದಲಾಗಿ ದಾಖಲಾಗುವ ಅಚ್ಚರಿಗಳು ಇದರಲ್ಲಿವೆಯೆಂಬ ಭರವಸೆ ಚಿತ್ರತಂಡದಲ್ಲಿ ಹಣಕಿ ಹಾಕುತ್ತಿದೆ. ಈ ಸಮಾಜಕ್ಕೆ ಕನ್ನಡಿ ಹಿಡಿದಂಥಾ ಕಥೆ, ಹಲವಾರು ಪ್ರಯೋಗಾತ್ಮಕ ಅಂಶಗಳೊಂದಿಗೆ ಕಳೆಗಟ್ಟಿಕೊಂಡಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದೆ. ಬೇಗ ಬೇಗನೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿಕೊಂಡು, ಮುಂದಿನ ವರ್ಷದ ಆರಂಭದಲ್ಲಿಯೇ ತೆರೆಗಾಣಿಸುವ ಸಾಧ್ಯತೆಗಳೂ ಇದ್ದಾವೆ.

    4f790a5b 7992 4076 a543 7f58f9668d80ಹಾಗೆ ನೋಡಿದರೆ, ಇಂಥಾ ಸಿನಿಮಾದ ಭಾಗವಾಗುವ ಅವಕಾಶ ಸಲೀಸಾಗಿ ಸಿಕ್ಕಿ ಬಿಡುವುದಿಲ್ಲ. ಹಾಗೊಂದು ಅವಕಾಶ ಮಾವಳ್ಳಿ ಕಾರ್ತಿಕ್ ಗೆ ದಕ್ಕಿದ್ದರ ಹಿಂದೆ ಮತ್ತದೇ ರಂಗಭೂಮಿಯ ನಂಟಿದೆ. ಕಾರ್ತಿಕ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ದಿನಮಾನದಲ್ಲಿಯೇ ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್ ಪರಿಚಿತರಾಗಿದ್ದರು. ಆ ನಂತರದ ಅವಧಿಯಲ್ಲಿ ಸಿನಿಮಾದ ಪರಿಧಿಯಲ್ಲಿಯೇ ಒಂದಷ್ಟು ಮಾತುಕತೆಗಳೂ ಚಾಲ್ತಿಯಲ್ಲಿರುತ್ತಿದ್ದವಂತೆ. ವಿ. ನಾಗೇಂದ್ರ ಪ್ರಸಾದ್ ಜೊತೆ ಅಸೋಸಿಯೇಟ್ ಆಗಿ ಬಹು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದವರು ಗುರುಪ್ರಸಾದ್ ಚಂದ್ರಶೇಖರ್. ಆ ಅನುಭವದ ಮೂಸೆಯಲ್ಲಿ ಸೂಕ್ಷ್ಮ ಪದರುಗಳಿರುವ ಕಥೆಯೊಂದನ್ನು ಸಿದ್ಧಪಡಿಸಿಕೊಂಡು, ಸಿನಿಮಾಗೆ ತಯಾರಾಗಿದ್ದ ಗುರುಪ್ರಸಾದ್, ಅದರಲ್ಲೊಂದು ಪಾತ್ರಕ್ಕೆ ಜೀವ ತುಂಬುವ ಅವಕಾಶವನ್ನು ಕಾರ್ತಿಕ್ ಗೆ ಕೊಟ್ಟಿದ್ದಾರೆ.

    39d64277 08d6 420c 977d 9fd400843bfcಹೀಗೆ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಚಿತ್ರದ ಭಾಗವಾಗಿರುವ ಮಾವಳ್ಳಿ ಕಾರ್ತಿಕ್, ಸಿನಿಮಾ ಕನಸಿನ ಚುಂಗು ಹಿಡಿದು ಅವುಡುಗಚ್ಚಿ ಒಂದಷ್ಟು ದೂರವನ್ನು ಈಗಾಗಲೇ ಕ್ರಮಿಸಿದ್ದಾರೆ. ತಂದೆ ತಾಯಿಯ ಮೂಲ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಾಗಿದ್ದರೂ, ಕಾರ್ತಿಕ್ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಲಾಲ್ ಭಾಗ್ ಮಗ್ಗುಲಲ್ಲಿರುವ ಮಾವಳ್ಳಿ ಕಾರ್ತಿಕ್ ಪಾಲಿನ ಬೆರಗಿನ ಏರಿಯಾ. ಈ ಕ್ಷಣಕ್ಕೂ ತಾನು ಅಪ್ಪಟ ಬೆಂಗಳೂರಿನ ಹುಡುಗನೆಂಬ ಹೆಮ್ಮೆಯೂ ಆತನಲ್ಲಿದ್ದಂತಿದೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯತ್ತ ಆಕರ್ಷಿತರಾಗಿದ್ದ ಕಾರ್ತಿಕ್, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಆ ಕಾಲದಲ್ಲಿಯೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದರು.

    b96570b3 c00d 47c4 9f9e 7231b01d32a8 ನಂತರದ ದಿನಗಳಲ್ಲಿ ಹವ್ಯಾಸಿ ರಂಗಭೂಮಿಯತ್ತ ಹೊರಳಿಕೊಂಡಿದ್ದ ಕಾರ್ತಿಕ್, ಸಮುದಾಯ, ರಂಗ ನಿರಂತರ, ಪ್ರಸಂಗ, ಕಲಾವೇದಿಕೆ, ಬಿಟಿಇ ಮುಂತಾದ ತಂಡಗಳಲ್ಲಿ ಭಾಗಿಯಾಗಿದ್ದರು. ಒಂದಷ್ಟು ನಾಟಕಗಳಲ್ಲಿ ಅಭಿನ ಯಿಸುವ ಮೂಲಕ ನಟನಾಗಿ ಪಳಗಿಕೊಂಡಿದ್ದರು. ಅದಾದ ನಂತರ ಅವರನ್ನು ಬಹುವಾಗಿ ಸೆಳೆದಿದ್ಚದು ಬಣ್ಣದ ಜಗತ್ತು. ಅಂಬಾರಿ ಅಂತೊಂದು ಧಾರಾವಾಹಿಯಲ್ಲಿ ನಟಿಸಿ, ಮತ್ತೊಂದಷ್ಟು ಅವಕಾಶ ಬಾಚಿಕೊಂಡಿದ್ದ ಕಾರ್ತಿಕ್ ತನ್ನ ಭವಿಷ್ಯವೇನಿದ್ದರೂ ಚಿತ್ರರಂಗದಲ್ಲಿಯೇ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದರ ಭಾಗವಾಗಿಯೇ ಮೂಕವಿಸ್ಮಿತ, ಕಿನಾರೆ, ಧಮಾಕ, ತೂತು ಮಡಿಕೆ, ದಿ. ಮಂಜುನಾಥನ ಗೆಳೆಯರು, ಗಜಾನನ ಗ್ಯಾಂಗ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಪುಟ್ಟ ಪಾತ್ರಗಳಲ್ಲಿಯೂ ತನ್ನ ಇರುವಿಕೆ ಸಾಬೀತುಪಡಿಸುವ ಜಾಣ್ಮೆ ಹೊಂದಿರುವ ಕಾರ್ತಿಕ್ ನಟಿಸಿರೋ ಒಂದಷ್ಟು ಸಿನಿಮಾಗಳು ಬಿಡುಗಡೆಯ ಯಾದಿಯಲ್ಲಿವೆ. ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಚಿತ್ರವಂತೂ ಅವರನ್ನು ಹಲವು ಸೂಕ್ಷ್ಮಗಳಿಂದಾಗಿ ಸೆಳೆದುಕೊಂಡಿದೆ. ಈ ಸಿನಿಮಾ ಗೆಲ್ಲಬೇಕೆಂಬ ಗಾಢ ಹಂಬಲವೂ ಅವರಲ್ಲಿದೆ.

    c53b33ee 6d68 45b4 a54b 014fa559d790ಹೀಗೆ ನಟನಾಗಬೇಕೆಂಬ ಗುರಿಯಿಟ್ಟುಕೊಂಡು ಹೊರಟು, ಆ ಹಾದಿಯ ಹರಿವಿನಲ್ಲೇ ಸಿನಿಮಾ ವರದಿಗಾರ, ನಿರೂಪಕನಾಗುವ ಅವಕಾಶವನ್ನೂ ಕಾರ್ತಿಕ್ ಪಡೆದುಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಅವೆರಡನ್ನೂ ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ. ವೃತ್ತಿಯ ಒತ್ತಡಗಳ ನಡುವ ರಂಗಭೂಮಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲವೆಂಬ ಕೊರಗು, ಎರಡು ದೋಣಿಗಳ ಮೇಲೆ ಕಾಲಿಟ್ಟರೂ ಬದುಕನ್ನು ಬ್ಯಾಲೆನ್ಸು ಮಾಡುತ್ತಿರುವ ತೃಪ್ತಿ ಮತ್ತು ನಟನಾಗಿ ನೆಲೆ ಕಂಡುಕೊಳ್ಳುವ ಗಾಢ ಭರವಸೆ ಕಾರ್ತಿಕ್ ರಲ್ಲಿದೆ. ತೀವ್ರವಾಗಿ ಪ್ರಯತ್ನಿಸಿದರೆ ನಟನಾಗಿ ಬೆಳೆಯಬಲ್ಲ ಕಸುವು ಕಾರ್ತಿಕ್ ಗೆ ಇದ್ದಂತಿದೆ. ಅವರ ಕನಸು ನನಸಾಗಲೆಂಬುದು ಹಾರೈಕೆ!

    devarahesarinallipramanamaduthene kfi mavallikarthik sandalwood younactor
    Share. Facebook Twitter LinkedIn WhatsApp Telegram Email
    Previous Articleranjini raghavan: ರಂಜಿನಿ ರಾಘವನ್ ಗೂ ಅದರದ್ದೇ ಗುಂಗು!
    Next Article tamannah bhatia : ರೊಮ್ಯಾಂಟಿಕ್ ಮೂಡಿಂದ ಕಾಮಿಡಿಗೆ ರೂಪಾಂತರ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026

    Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

    01/01/2026
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.