Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    sreeleela: ಪುಷ್ಪ2 ನಂತರ ಬದಲಾಯ್ತೇ ಶ್ರೀಲೀಲಾ ವರಸೆ?

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    Facebook Twitter Instagram
    Saturday, May 10
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » inamdar trailer review: ಪ್ರೇಕ್ಷಕರಿಗೆ ಸಂದೇಶ್ ಶೆಟ್ಟಿ ಆಜ್ರಿ ಕೊಟ್ಟ ಸರ್ ಪ್ರೈಸ್ ಏನು?
    ಸ್ಪಾಟ್ ಲೈಟ್

    inamdar trailer review: ಪ್ರೇಕ್ಷಕರಿಗೆ ಸಂದೇಶ್ ಶೆಟ್ಟಿ ಆಜ್ರಿ ಕೊಟ್ಟ ಸರ್ ಪ್ರೈಸ್ ಏನು?

    By Santhosh Bagilagadde10/10/2023
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಎಲ್ಲ ಪ್ರಚಾರ, ಹೈಪುಗಳಾಚೆಗೆ ಗಟ್ಟಿ ಕಂಟೆಂಟಿನ ಚೆಂದದ ಸಿನಿಮಾಗಳ ಧ್ಯಾನ ಪ್ರೇಕ್ಷಕರ ವಲಯದಲ್ಲಿ ಸದಾ ಚಾಲ್ತಿಯಲ್ಲಿರುತ್ತೆ. ಯಾವುದೋ ಸಿನಿಮಾದ ಒಂದು ಸಣ್ಣ ತುಣುಕು, ಹಾಡು, ಟ್ರೈಲರ್ ಮೂಲಕ ಅಂಥಾ ಧ್ಯಾನವೊಂದು ಪುಳಕಗೊಳ್ಳೋದಿದೆ. ಹಾಗೆ ಒಂದು ಸಿನಿಮಾ ತಾನೇ ತಾನಾಗಿ ಸೆಳೆದುಕೊಳ್ಳೋದಿದೆಯಲ್ಲಾ? ಅದು ಅಪರೂಪದ ಪಲ್ಲಟ. ಇದೀಗ ಬಿಡುಗಡೆಗೊಂಡಿರುವ (inamdar movie tariler)  ಇನಾಮ್ದಾರ್ ಚಿತ್ರದ ಟ್ರೈಲರ್ ಕೂಡಾ ಅದೇ ಧಾಟಿಯ ಥ್ರಿಲ್ ಮೂಡಿಸಿದೆ. ಸಾಮಾನ್ಯವಾಗಿ, ನೆಲದ ನಂಟಿನ ಕಥನಗಳು ಪ್ರೇಕ್ಷಕರನ್ನು ಸದಾ ಕಾಡುತ್ತವೆ. ಅದರಲ್ಲಿಯೂ ದಟ್ಟ ಕಾಡಿನ ಗರ್ಭದಿಂದ ಮಿಸುಕಾಡುವ ಕಥೆಗಳೆಂದರೆ ಒಂದು ಮುಟಿಗೆ ಹೆಚ್ಚೇ ಕುತೂಹಲವಿರುತ್ತೆ. ಸದ್ಯದ ಮಟ್ಟಿದೆ (inamdar trailer) ಇನಾಮ್ದಾರ್ ಚಿತ್ರದ ಟ್ರೈಲರ್ ಎಲ್ಲ ವರ್ಗದ ಪ್ರೇಕ್ಷಕರೊಳಗೂ ಭರವಸೆಯೊಂದನ್ನು ಪ್ರತಿಷ್ಟಾಪಿಸುವಲ್ಲಿ ಗೆಲುವು ಕಂಡಿದೆ!

    ಹಾಗೆ ನೋಡಿದರೆ, ಈಗೊಂದಷ್ಟು ಕಾಲದಿಂದಲೂ ಇನಾಮ್ದಾರ್ ಚಿತ್ರ ಹಂತ ಹಂತವಾಗಿ ಪ್ರೇಕ್ಷಕರನ್ನು ತಾಕುತ್ತಾ ಬಂದಿದೆ. ಅದಕ್ಕೆ ಕಾರಣ ಬೇರೇನಲ್ಲ; ಭಿನ್ನ ಕಥಾನಕದ ಸುಳಿವಷ್ಟೇ. ಸಿನಿಮಾ ಮನೋರಂಜನೆಯಾಚೆಗೆ ಸಂಚಲನ ಸೃಷ್ಟಿಸೋದು, ಸಿನಿಮಾ ಪರಿಧಿಯಾಚೆಗೂ ಸದ್ದು ಮಾಡೋದು ಅಪರೂಪ. ಇನಾಮ್ದಾರ್ ಟ್ರೈಲರ್ ಬಿಡುಗಡೆಗೊಂಡ ನಂತರ ಅಂಥಾದ್ದೊಂದು ವಿರಳ ವಿದ್ಯಮಾನವೂ ಚಾಲೂ ಆದಂತಿದೆ. ಯಾಕೆಂದರೆ, ಸದರಿ ಚಿತ್ರದ ಆಂತರ್ಯ, ಟ್ರೈಲರ್ ಬಿಡುಗಡೆಯ ವೇದಿಕೆಯಲ್ಲಿ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಮುಂತಾದವರು ಮಾತಾಡಿರುವ ರೀತಿಗಳೆಲ್ಲ ರಾಜಕೀಯ ವ್ಯಾಪ್ತಿಯಲ್ಲಿಯೂ ಚರ್ಚೆ ಹುಟ್ಟು ಹಾಕಿದೆ. ಆ ಭೂಮಿಕೆಯಲ್ಲೀಗ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಒಂದಷ್ಟು ವಾಗ್ವಾದಗಳೂ ನಡೆಯುತ್ತಿವೆ. ಅಷ್ಟರ ಮಟ್ಟಿಗೆ ಇನಾಮ್ದಾರ್ ಟ್ರೈಲರ್ ಸಾಮಾಜಿಕ ಪರಿಧಿಯಲ್ಲಿಯೂ ಗಿರಕಿ ಹೊಡೆಯಲಾರಂಭಿಸಿದೆ.

    ಈ ಟ್ರೈಲರ್ ಮೂಲಕ ಒಂದಿಡೀ ಕಥಾನಕದ ಬಗ್ಗೆ ಒಂದಷ್ಟು ಸುಳಿವುಗಳು ಸಿಕ್ಕಿವೆ. ಉತ್ತರ ಕರ್ನಾಟಕದಲ್ಲಿ ಛತ್ರಪತಿ ಶಿವಾಜಿಯನ್ನು ಆರಾಧಿಸುವ ಇನಾಮ್ದಾರ್ ಕುಟುಂಬ ಹಾಗೂ ಶಿವನನ್ನೇ ಉಸಿರಾಗಿಸಿಕೊಂಡಿರುವ ಕಡಲ ತೀರದ ಜನಾಂಗದ ಕಥನ ಇಲ್ಲಿದೆ. ಈ ಎರಡು ಪಂಥಗಳ ಬುಡಕಟ್ಟು ಜನಾಂಗದ ನಡುವೆ ನಡೆಯೋ ಸಂಘರ್ಷದ ಕಥೆಯೇ ಇನಾಮ್ದಾರ್ ಜೀವಾಳವಾಗಿರುವಂಥಾ ಕುರುಹುಗಳಿದ್ದಾವೆ. ಇಂಥಾ ಕಥೆಗಳನ್ನು ಕೇವಲ ಕಲ್ಪನೆಯ ಬೊಗಸೆಯಲ್ಲಿಟ್ಟು ರೂಪಿಸಲಾಗೋದಿಲ್ಲ. ಹಾಗಂತ ಕೇವಲ ವಾಸ್ತವಿಕ ನೆಲೆಗಟ್ಟಿನಲ್ಲಷ್ಟೇ ದಿಟ್ಟಿಸಲೂ ಸಾಧ್ಯವಿಲ್ಲ. ಅದೆರಡನ್ನೂ ಸಿನಿಮಾ ಚೌಕಟ್ಟಿಗೆ ಒಗ್ಗಿಸಿಕೊಂಡು, ಬೇಕಾದಂತೆ ಪಳಗಿಸಿಕೊಳ್ಳೋದೇ ನಿರ್ದೇಶನದ ಸವಾಲು. ಟ್ರೈಲರ್ ಅನ್ನು ಆಧರಿಸಿ ಹೇಳೋದಾದರೆ, ಸಂದೇಶ್ ಶೆಟ್ಟಿ ಅದನ್ನು ಸೂಕ್ತವಾಗಿ ಸಂಭಾಳಿಸಿದಂತೆ ಕಾಣಿಸುತ್ತೆ. ಅವರೇ ಹೇಳಿಕೊಂಡಿರುವ ಪ್ರಕಾರ, ಈ ಚಿತ್ರದ ಕಥೆಗಾಗಿ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಸಾಹಿತಿ ಸರಜೂ ಕಾಟ್ಕರ್ ಬರೆದಿರುವ ಶಿವಾಜಿ ಬಗೆಗಿನ ಪುಸ್ತಕ ಕೂಡಾ ನಿರ್ದೇಶಕರ ಪಾಲಿಗೆ ಆಕರ ಗ್ರಂಥವಾಗಿದೆ. ಒಂದು ವೇಳೆ ಟ್ರೈಲರ್ ನಲ್ಲಿರುವಂಥಾ ಬಿಸುಪು, ಆವೇಗ ಒಂದಿಡೀ ಚಿತ್ರದಲ್ಲಿ ಮಿಳಿತಗೊಂಡಿದ್ದರೆ, ಇನಾಮ್ದಾರ್ ಜನಮಾನಸವನ್ನು ಸಲೀಸಾಗಿ ಮುಟ್ಟಬಹುದೇನೋ…

    ವಿಶೇಷವೆಂದರೆ, ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಜೊತೆಗೆ, ಪ್ರಧಾನ ಪಾತ್ರವೊಂದರಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಚಹರೆಯೂ ಟ್ರೈಲರ್ ನಲ್ಲಿ ಮಿಂಚಿದೆ. ಒಟ್ಟಾರೆಯಾಗಿ, ಇನಾಮ್ದಾರ್ ಟ್ರೈಲರ್ ಇದೀಗ ನಾನಾ ಬಗೆಯಲ್ಲಿ ಚರ್ಚೆ ಹುಟ್ಟು ಹಾಕಿದೆ. ಕುತೂಹಲವನ್ನೂ ಮೂಡಿಸಿದೆ. ಅದು ಸದರಿ ಚಿತ್ರದ ಪಾಲಿಗೆ ಧನಾತ್ಮಕ ವಾತಾವರಣ ಸೃಷ್ಟಿಸುತ್ತೆ ಎನ್ನಲಡ್ಡಿಯಿಲ್ಲ. ಪ್ರಧಾನವಾಗಿ, ಕೇವಲ ಕಥೆ, ಪಾತ್ರವರ್ಗ ಮಾತ್ರವಲ್ಲದೇ ಮೇಕಿಂಗ್ ವಿಚಾರದಲ್ಲಿಯೂ ಈ ಟ್ರೈಲರ್ ಒಂದಷ್ಟು ಗಮನ ಸೆಳೆಯುತ್ತೆ. ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು ಮನಸಾರೆ ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಕುರುಹುಗಳೂ ನಿಖರವಾಗಿ ಕಾಣಿಸುತ್ತವೆ.

    ಸದ್ಯದ ಮಟ್ಟಿಗೆ ಚಿತ್ರತಂಡ ಒಂದಷ್ಟು ವಿಚಾರಗಳನ್ನು ಮಾತ್ರವೇ ಜಾಹೀರು ಮಾಡಿದೆ. ಟ್ರೈಲರ್ ವಿಚಾರಕ್ಕೆ ಬಂದರೆ, ಅಲ್ಲಿಯೂ ಕೂಡಾ ಬಹು ಜಾಣ್ಮೆಯಿಂದಲೇ ಕುತೂಹಲವನ್ನು ಕಾಪಿಟ್ಟುಕೊಳ್ಳಲಾಗಿದೆ. ಇನ್ನೊಂದಷ್ಟು ಬೆರಗುಗಳು ಬಹುಶಃ ಚಿತ್ರಮಂದಿರದಲ್ಲಷ್ಟೇ ತೆರೆದುಕೊಳ್ಳಬೇಕಿದೆ. ಅಂದಹಾಗೆ, ಇದೊಂದು ಸಂಕೀರ್ಣವಾದ ಕಥೆಯೆಂಬುದರ ಮುನ್ಸೂಚನೆ ಈ ಟ್ರೈಲರ್ ನಲ್ಲಿದೆ. ಅದಕ್ಕೆ ತಕ್ಕುದಾದ ದೊಡ್ಡ ಕ್ಯಾನ್ವಾಸಿನ ತುಂಬೆಲ್ಲ ಥರ ಥರದ ಪಾತ್ರಗಳು ತುಂಬಿಕೊಂಡಿವೆ. ಅವುಗಳನ್ನು ಪ್ರತಿಭಾನ್ವಿತ ಕಲಾವಿದರೇ ನಿಭಾಯಿಸಿದ್ದಾರೆ. ಅವಿನಾಶ್, ಥ್ರಿಲ್ಲರ್ ಮಂಜು, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಎಂ.ಕೆ ಮಠ, ಚಿರಶ್ರೀ ಅಂಚನ್, ಎಸ್ತರ್ ನರೋನ್ಹಾ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಟ್ರೈಲರ್ ಮೂಲಕ ಕೌತುಕದ ಕಂದೀಲು ಹಚ್ಚಿರುವ ಇನಾಮ್ದಾರಿದೇ ತಿಂಗಳ ೨೭ರಂದು ತೆರೆಗಾಣಲಿದೆ…

    #inamdarmovie #inamdartrailerreview #sandeshshettyajri #viraltrailer cinishodha kfi sandalwood
    Share. Facebook Twitter LinkedIn WhatsApp Telegram Email
    Previous Articleurfi javed-sonu gowda: ಕೀಳು ಅಭಿರುಚಿಯ ಬೆಂಕಿಯಲ್ಲಿ ಕ್ರಿಯೇಟಿವಿಟಿಯ ನರಳಾಟ!
    Next Article martin movie: ದುಃಖದ ಮಡುವಿನಲ್ಲಿರೋ ಧ್ರುವನಿಗೆ ದಕ್ಕಬಹುದೇ ವಿಕ್ಟರಿ?
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    sreeleela: ಪುಷ್ಪ2 ನಂತರ ಬದಲಾಯ್ತೇ ಶ್ರೀಲೀಲಾ ವರಸೆ?

    10/05/2025

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    30/04/2025

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    25/04/2025
    Search
    Category
    • OTT (3)
    • Uncategorized (10)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (17)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (44)
    • ಸೌತ್ ಜೋನ್ (79)
    • ಸ್ಪಾಟ್ ಲೈಟ್ (151)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (9)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ!

    28/05/20237 Views

    ರಾಕಿ ಬಾಯ್ ಬಗ್ಗೆ ಮಂಗಳೂರು ಹುಡುಗಿ ಹೇಳಿದ್ದೇನು?

    25/05/20236 Views

    sanjay dutt: ಸಂಜಯ್ ದತ್ ವಿಲನ್‍ಗಿರಿ!

    28/05/20234 Views

    rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು?

    28/05/20234 Views
    Don't Miss
    ಸೌತ್ ಜೋನ್ 10/05/2025

    sreeleela: ಪುಷ್ಪ2 ನಂತರ ಬದಲಾಯ್ತೇ ಶ್ರೀಲೀಲಾ ವರಸೆ?

    ಕನ್ನಡದಲ್ಲಿ ಕಿಸ್ ಅಂತೊಂದು ಸಿನಿಮಾದಲ್ಲಿ ನಟಿಸಿ, ಆ ನಂತರ ಸೀದಾ ತೆಲುಗು ಚಿತ್ರರಂಗಕ್ಕೆ ಹಾರಿದ್ದ ಶ್ರೀಲೀಲಾ ಈಗ ಅಲ್ಲಿಯೇ ನೆಲೆ…

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.