Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಟೇಕಾಫ್»apayavide eccharike movie: ಅಪಾಯವಿದೆ ಎಚ್ಚರಿಕೆ ಬಗ್ಗೆ ಹರಿಣಿ ಶ್ರೀಕಾಂತ್ ಹೇಳಿದ್ದಿಷ್ಟು!
    ಟೇಕಾಫ್

    apayavide eccharike movie: ಅಪಾಯವಿದೆ ಎಚ್ಚರಿಕೆ ಬಗ್ಗೆ ಹರಿಣಿ ಶ್ರೀಕಾಂತ್ ಹೇಳಿದ್ದಿಷ್ಟು!

    By Santhosh Bagilagadde27/02/2025
    Facebook Twitter Telegram Email WhatsApp
    4d929e1f a9b6 4de7 9473 ef470b88e83f
    Share
    Facebook Twitter LinkedIn WhatsApp Email Telegram

    ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಅಪಾಯವಿದೆ ಎಚ್ಚರಿಕೆ’. ಕನ್ನಡದಲ್ಲಿನ ಹಾರರ್ ಸಿನಿಮಾ ಪ್ರಿಯರಿಗೆ ಮಾತ್ರವಲ್ಲದೇ, ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂಥಾ ಕಥನದೊಂದಿಗೆ ಈ ಸಿನಿಮಾ ಮೈ ಕೈ ತುಂಬಿಕೊಂಡಿದೆ. ಎಲ್ಲೆಡೆ ಹಬ್ಬಿಕೊಂಡಿರುವ ಸಕಾರಾತ್ಮಕ ವಾತಾವರಣದಲ್ಲಿ ಈ ಚಿತ್ರ ನಾಳೆ ಅಂದರೆ, ಫೆಬ್ರವರಿ ೨೮ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗಾಣಲಿದೆ. ಇದರ ಕಥೆಯನ್ನು ವರ್ಷಗಟ್ಟಲೆ ಶ್ರಮ ವಹಿಸಿ ಸಿದ್ಧಪಡಿಸಿರುವ ಅಭಿಜಿತ್ ತೀರ್ಥಹಳ್ಳಿ, ಅಷ್ಟೇ ಆಸ್ಥೆಯಿಂದ ಆಯಾ ಪಾತ್ರಕ್ಕೆ ಹೊಂದುವಂಥಾ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೊಸಬರನ್ನು ರಿಹರ್ಸಲ್ ಮೂಲಕ ಅಣಿಗೊಳಿಸಿ, ಅನುಭವಿ ಕಲಾವಿದರಿಗೆ ಪಾತ್ರದ ಬಗ್ಗೆ ಕಣ್ಣಿಗೆ ಕಟ್ಟುವಂತೆ ತಿಳಿಸುವ ಮೂಲಕ ಒಂದಿಡೀ ಸಿನಿಮಾವನ್ನು ಕಳೆಗಟ್ಟುವಂತೆ ಮಾಡಿದ ತೃಪ್ತಿ ನಿರ್ದೇಶಕರಿಗಿದೆ. 

    202109281857 dt724SpmWi1o4UtCಯಾವುದೇ ಸಿನಿಮಾದ ಕಥೆಯ ಘಟ್ಟದಲ್ಲಿಯೇ ಆಯಾ ಪಾತ್ರಗಳಿಗೆ ಇಂತಿಂಥಾ ಕಲಾವಿದರೇ ಸೂಕ್ತ ಅಂತೊಂದು ನಿರ್ಧಾರ ಗಟ್ಟಿಗೊಂಡಿರುತ್ತದೆ. ಆದರೆ, ಗೆಲ್ಲುವ ಛಲದೊಂದಿಗೆ ಯಾವುದೂ ನಿಖರವಾಗಿರದ ದಿನಗಳಲ್ಲಿ ಈ ಕಥೆ ಸಿದ್ಧಪಡಿಸಿದ್ದ ಅಭಿಜಿತ್ ಪಾಲಿಗೆ ಅಂಥಾ ಅವಕಾಶವೇನೂ ಇರಲಿಲ್ಲ. ಆದರೆ, ಈ ಕಥೆಯ ಬಹುಮುಖ್ಯ ತಿರುವಿನ ಪಾತ್ರವೊಂದಕ್ಕೆ ಮಾತ್ರ ಹರಿಣಿ ಶ್ರೀಕಾಂತ್ ಅವರೇ ಜೀವ ತುಂಬಿದರೆ ಸೂಕ್ತ ಎಂಬ ನಿರ್ಧಾರ ಅವರೊಳಗೆ ಊಟೆಯೊಡೆದಿತ್ತು. ನಂತರ ಕಥೆಯೆಲ್ಲ ರೆಡಿಯಾಗಿ, ನಿರ್ಮಾಪಕರಾದ ವಿ.ಜಿ ಮಂಜುನಾಥ್ ಅವರ ಕಡೆಯಿಂದಲೂ ಗ್ರೀನ್ ಸಿಗ್ನಲ್ ಬಂದ ನಂತರ ಅಭಿಜಿತ್ ಹರಿಣಿಯವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಿ, ವಿವರಿಸಿದ್ದರಂತೆ.

    RRP3918 2ಒಟ್ಟಾರೆ ಕಥೆ ಮತ್ತು ಆ ಪಾತ್ರದ ಚಹರೆ ತಿಳಿಯುತ್ತಲೇ ಹರಿಣಿ ಶ್ರೀಕಾಂತ್ ಕೂಡಾ ಒಪ್ಪಿಗೆ ಸೂಚಿಸಿದ್ದರು. ಆ ನಂತರ ಚಿತರ್ರೀಕರಣದಲ್ಲಿ ಭಾಗಿಯಾದ ಹರಿಣಿ ಪಾಲಿಗೆ ಅಮೋಘವಾದ ಅನುಭವ ದಕ್ಕಿದೆ. ಆ ಪಾತ್ರದ ಬಗ್ಗೆ ಇದುವರೆಗೂ ಚಿತ್ರತಂಡ ಹೆಚ್ಚೇನೂ ಹೇಳಿಕೊಂಡಿಲ್ಲ. ಹರಿಣಿಯವರ ಕಡೆಯಿಂದಲೂ ರಹಸ್ಯ ಬಯಲಾಗಿಲ್ಲ. ಅದರರ್ಥವೇನೆಂದರೆ, ಆ ಪಾತ್ರದಲ್ಲಿ ಈ ಕಥೆಯ ಬಹುಮುಖ್ಯ ತಿರುವುಗಳಿದ್ದಾವೆ. ಅದರ ಕೆಲ ಚಹರೆಗಳನ್ನ ಗಮನಿಸಿದರೆ, ಈ ಕಥೆಗೆ ಮತ್ಯಾವುದೋ ಕಾಲಘಟ್ಟದ ಕೊಂಡಿಯೊಂದು ಬೆಸೆದುಕೊಂಡಿರೋದೂ ಪಕ್ಕಾ ಆಗುತ್ತದೆ. ಹರಿಣಿ ಅವರು ನಿಭಾಯಿಸಿರುವ ಪಾತ್ರ ಯಾವುದು? ಅದರ ಕಿಮ್ಮತ್ತೇನೆಂಬ ಪ್ರಶ್ನೆಗಳಿಗೆ ಈ ರಾತ್ರಿ ಕರಗಿ, ಮುಂಜಾವು ಅರಳುತ್ತಲೇ ನಿಖರ ಉತ್ತರ ಸಿಗಲಿದೆ.

    PVID7756 1ಸೀರಿಯಲ್ಲುಗಳ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿರೋ ಹರಿಣಿ ಶ್ರೀಕಾಂತ್, ಕೆಲ ರಿಯಾಲಿಟಿ ಶೋ ಮೂಲಕವೂಊ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗಂತ ಹಿರಿತೆರೆ ಪ್ರೇಕ್ಷಕರಿಗೆ ಹರಿಣಿ ಶ್ರೀಕಾಂತ್ ಅಪರಿಚಿತರು ಅಂದುಕೊಳ್ಳುವಂತಿಲ್ಲ. ಸಿನಿಮಾಗಳಲ್ಲಿಯೂ ಥರ ಥರದ ಪಾತ್ರ ಮಾಡುವ ಮೂಲಕ ಅವರು ಗೆದ್ದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದುಕೊಂಡಿದ್ದಾರೆ. ಅಪಾಯವಿದೆ ಎಚ್ಚರಿಕೆ ಚಿತ್ರದ ಪಾತ್ರ ಅವರ ವೃತ್ತಿ ಬದುಕಿನಲ್ಲಿ ಮತ್ತೊದು ಮೈಲಿಗಲ್ಲಾಗೋ ಸಾಧ್ಯತೆಗಳಿದ್ದಾವೆ. ವಿ.ಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ. ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣವಿದೆ.

    #abhijiththirthahalli #apayavideeccharike #harinishrikanth #harinisrikanth cinishodha kfi sandalwood
    Share. Facebook Twitter LinkedIn WhatsApp Telegram Email
    Previous Articleapayavide eccharike movie: ಕಾಡ ಗರ್ಭದ ಕಥೆಗಿದೆಯಾ ಸಿಟಿಯ ಕನೆಕ್ಷನ್ನು?
    Next Article apayavide echarike movie: ಅಪಾಯವಿದೆ ಎಚ್ಚರಿಕೆ ಬಗ್ಗೆ ನಿರ್ದೇಶಕ ತೆರೆದಿಟ್ಟ ಅಚ್ಚರಿ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    06/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.