Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ!
    ಸ್ಪಾಟ್ ಲೈಟ್

    Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ!

    By Santhosh Bagilagadde10/10/2025
    Facebook Twitter Telegram Email WhatsApp
    9bc5d488 9969 42aa 81b2 bfa1444af388 1
    Share
    Facebook Twitter LinkedIn WhatsApp Email Telegram

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನದ ದಿನಗಳೀಗ ಪರಪ್ಪನ ಅಗ್ರಹಾರದಲ್ಲಿ ಸರಿಯುತ್ತಿವೆ. ಒಂದು ಕಡೆಯಲ್ಲಿ ಆತನ ಅಭಿಮಾನಿಗಳೆಲ್ಲ ತಮ್ಮಿಷ್ಟದ ನಟ ದರ್ಶನ್ ಆದಷ್ಟು ಬೇಗನೆ ಈ ಕಳಂಕವನ್ನು ಕಳಚಿಕೊಂಡು ಬರಲೆಂಬ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಇಡಾ ಒಡೆಯದ ಹೋರಿಗಳಂತೆ ಕಂಡೋರ ಮೇಲೆರಗಿ ಹೋಗುತ್ತಿದ್ದ ಕೆಲ ವೀರಾಭಿಮಾನಿಗಳ ಆವುಟವೂ ಈಗ ತುಸು ತಗ್ಗಿದೆ. ಮತ್ತೊಂದು ದಿಕ್ಕಿನಿಂದ ಪತ್ನಿ ವಿಜಯಲಕ್ಷ್ಮಿ ಕೂಡಾ ತನ್ನ ಗಂಡನನ್ನು ಈ ಚಕ್ರವ್ಯೂಹದಿಂದ ಪಾರುಗಾಣಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಒಂದು ಹಂತದಲ್ಲಿ ದರ್ಶನ್ ದುರಹಂಕಾರ ಕಂಡು ಕೆಂಡವಾಗಿರುವವರ ಎದೆಯಲ್ಲೂ ಈಗ ಆತ ತಲುಪಿಕೊಂಡಿರುವ ಸ್ಥಿತಿ ಕಂಡು ಮರುಕ ಮೂಡಿದೆ. ಆದರೆ, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟೋ, ತಾನೇನು ಮಾಡಿದರೂ ಜಯಿಸಿಕೊಳ್ಳಬಲ್ಲನೆಂಬ ಅಹಮ್ಮಿಕೆಯಿಂದಲೋ ಮನುಷ್ಯ ಮಾಡೋ ತಪ್ಪಿದೆಯಲ್ಲಾ? ಅದು ನಾನಾವ ರೀತಿಯಲ್ಲಿ ಕಾಡದಿರೋದಿಲ್ಲ!

    Darshan The Devil e1741450624150 1024x578 2 1

    ಸದ್ಯದ ಮಟ್ಟಿಗೆ ದರ್ಶನ್ ಪಾಲಿಗೆ ಅಂಥಾ ಆಘಾತಗಳು ಒಂದರ ಹಿಂದೊಂದರಂತೆ ಬಂದೆರಗುತ್ತಿವೆ. ಮೊದಲ ಹಂತದಲ್ಲಿ ಜೈಲನ್ನೂ ಕೂಡಾ ಮಾವನ ಮನೆಯನ್ನಾಗಿಸಿಕೊಂಡಿದ್ದಾತ ದರ್ಶನ್. ಹೇಳಿಕೇಳಿ ಪರಪ್ಪನ ಅಗ್ರಹಾರದಲ್ಲಿ ಅಧಿಕಾರಿಗಳ ನೆರಳಲ್ಲಿಯೇ ದಂಧೆಗಳ ದುಖಾನು ತೆರೆದುಕೊಂಡಿದೆ. ಅಲ್ಲಿ ನೇರಾನೇರ ವ್ಯವಹಾರ ಕುದುರಿಸಿ ಹಾಯಾಗಿ ಅಡ್ಡಾಡಿಕೊಂಡಿದ್ದಾತ ದರ್ಶನ್. ಅತ್ತ ಪಕ್ಕದ ಸೆಲ್ಲಿನಲ್ಲಿಯೇ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಇದ್ದ. ಇತ್ತ ತನ್ನ ಗೆಣೆಕಾರ ದರ್ಶನ್ನನ ಪರಿಚಾರಿಕೆಗೆಂದೇ ಸೈಕಲ್ ರವಿ ಬೇಕರಿ ರಘು ಎಂಬೋ ರೌಡಿ ಎಲಿಮೆಂಟನ್ನು ಅಂದರ್ ಮಾಡಿದ್ದ. ಇವರೆಲ್ಲದ ದೇಖಾರೇಖಿಯಲ್ಲಿಮ ಒಂದು ಹಂತದ ವರೆಗೂ ದರ್ಶನ್ ಪಾಲಿಗೆ ಜೈಲೆಂಬುದೂ ಸ್ವರ್ಗವಾಗಿತ್ತು.

    Darshan2 1

    ಅದು ದರ್ಶನ್ ಮಾಡಿದ ಬಹು ದೊಡ್ಡ ತಪ್ಪು. ತನ್ನ ಕಡೆಯಿಂದ ಎಡವಟ್ಟಾಗಿದೆ. ಅದಕ್ಕಾಗಿ ಕಾನೂನಿನ ಏಟು ಬಿದ್ದಿದೆ. ಈ ಹಂ ತದಲ್ಲಿ ಶಿಕ್ಷೆಯ ಅವಧಿಯನ್ನು ಪ್ರಾಮಾಣಿಕವಾಗಿ ಎದುರಿಸಬೇಕೆಂಬ ಸಣ್ಣ ಖಬರೂ ಕೂಡಾ ದಾಸನ ಸನಿಹ ಸುಳಿದಿರಲಿಲ್ಲ. ಇಂಥಾ ಸ್ವೇಚ್ಛೆಯೇ ದೇಶವ್ಯಾಪಿ ಸುದ್ದಿಯಾಗಿ, ಬೇರೆ ಜೈಲಿಗೆ ಕಮಾನೆತ್ತಿಸಿಕೊಂಡಿದ್ದ ದರ್ಶನ್, ಬೇಲ್ ಪಡೆದು ಹೊರ ಬಂ ದ ನಂತರವೂ ಕೂಡಾ ಸೂಕ್ಷ್ಮವಾಗಿ ನಡೆದುಕೊಂಡಿರಲಿಲ್ಲ. ಇದೇ ಹೊತ್ತಿನಲ್ಲಿ ಅಭಿಮಾನಿಗಳೆನ್ನಿಸಿಕೊಂಡ ಕೆಲ ಅವಿವೇಕಿಗಳು ಅಕ್ಷರಶಃ ಗೂಂಡಾಗಳಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆರೆಯಲಾರಂಭಿಸಿದ್ದರು. ದರ್ಶನ್ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲಿಗೆ ಗದುಮಿಸಿಕೊಂಡಿದ್ದರ ಹಿಂದಿರೋದು ಇಂಥಾ ಸ್ವಯಂಕೃತಾಪರಾಧಗಳೇ.

    vja25m renukaswamy 625x300 05 September 24 1

    ಈಗಂತೂ ಪರಪ್ಪನ ಅಗ್ರಹಾರದೊಳಗೆ ಎಲ್ಲವೂ ಬಿಗಿಯಾಗಿದೆ. ಅಲ್ಲಿ ಜೈಲಾಧಿಕಾರಿಯಾಗಿರೋ ಸುರೇಶನ ದುಂಡಾವರ್ತನೆಗಳ ಬಗ್ಗೆ `ಸಿನಿಶೋಧ’ ತನಿಖಾ ವರದಿಯೊಂದನ್ನು ಪ್ರಕಟಿಸಿತ್ತು. ಅದಾದ ನಂತರ ದಯಾನಂದ್ ಜೈಲಾಧಿಕಾರಿಗಳ ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ. ಮಾಲಿನಿ ಮೇಡಮ್ಮಿನ ಪರಿಚಾರಕರೆಲ್ಲ ಬಾಲ ಮುದುರಿಕೊಂಡಿದ್ದಾರೆ. ಇದೆಲ್ಲದರ ನಡುವೆಯೇ ರೇಣುಕಾಸ್ವಾಮಿ ಕೊಲೆ ಕೇಸು ಇಡೀ ದೇಶದಲ್ಲೇ ಎರಡನೇ ಭಯಾನಕ ಪ್ರಕರಣವಾಗಿ ದಾಖಲಾಗಿದೆ. ನರ್ಸಿಂಗ್ ವಿದ್ಯಾರ್ಥಿನಿಯ ಭೀಕರ ರೇಪ್ ಮತ್ತು ಹತ್ಯೆ ಕೇಸು ಮೊದಲ ಸ್ಥಾನದಲ್ಲಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳೂ ಕೂಡಾ ಮತ್ತೊಮ್ಮೆ ಫೋಕಸ್ ಮಾಡಿವೆ.

    3f830910 2f86 11ef 8f5e cfd8745d0c76.jpg 1 1

    ಇನ್ನುಳಿದಂತೆ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಕೊಂದ ಪರಿಯ ಬಗ್ಗೆ ನ್ಯಾಯಾಂಗ ವಲಯದಲ್ಲಿ ನಾನಾ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಅದರಲ್ಲಿನ ಬಹುತೇಕ ಅಂಶಗಳು ದರ್ಶನ್ ಕೊರಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿರೋದನ್ನೇ ಬಲವಾಗಿ ಧ್ವನಿಸುತ್ತಿವೆ. ನ್ಯಾಯಾಂಗ ಈ ಪ್ರಕರಣದಲ್ಲಿ ಪ್ರಧಾನವಾಗಿ ಪರಿಗಣಿಸಬಹುದಾದ ಅಂಶಗಳೇ ಭಯಾನಕವಾಗಿವೆ. ಓರ್ವ ಮನುಷ್ಯನನ್ನು ಹೇಗೆಲ್ಲ ಹಿಂಸಿಸಬಾರದೋ, ಹಾಗೆಲ್ಲ ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಗಿದೆ ಎಂಬ ವಿಚಾರವೇ ಇಲ್ಲಿ ಪ್ರಧಾನವಾಗಿ ಪರಿಗಣಿಸಲ್ಪಡುವ ಸಾಧ್ಯತೆಗಳು ದಟ್ಟವಾಗಿವೆ. ಬಹುಶಃ ತನ್ನ ಶಿಷ್ಯನ ಸ್ಟೋನಿಬ್ರೂಕ್ಸ್ ಡ್ರಗ್ಸ್ ನಶೆ ಇಂಥಾ ಅನಾಹುತ ಸೃಷ್ಟಿಸುತ್ತದೆಂಬ ಸಣ್ಣ ಕಲ್ಪನೆಯೂ ದರ್ಶನ್‌ಗಿದ್ದಂತಿಲ್ಲ. ಸದ್ಯದ ಮಟ್ಟಿಗೆ ಮಾಡಿದ ಎಡವಟ್ಟನ್ನು ಕೋಟಿ ಸುರಿದರೂ ನೀಗಿಕೊಳ್ಳಲಾರದ ವಾಸ್ತವವೊಂದು ದರ್ಶನ್ ನಲುಗುವಂತೆ ಮಾಡಿದೆ. ಕಣ್ಣೆದುರೇ ನರಳಿ ಸತ್ತ ರೇಣುಕಾಸ್ವಾಮಿ ಕಂಬಿ ಹಿಂದಿರೋ ದಾಸನನ್ನು ಕ್ಷಣ ಕ್ಷಣವೂ ಕಂಗಾಲಾಗಿಸುತ್ತಿದ್ದಾನೆ. ಅದೆಲ್ಲದರ ಅಂತಿಮ ಫಲಿತಾಂಶ ಶೀಘ್ರದಲ್ಲಿಯೇ ಜಾಹೀರಾಗಲಿದೆ!

    #darshanupdates #pavithragowda #renukaswamymurdercase brutalmurder challengingstardarshan crime darshan darshannewstoday dbossnews parappanaagrahara stunnigdevolapmenstofrenukaswamymurdercase
    Share. Facebook Twitter LinkedIn WhatsApp Telegram Email
    Previous ArticleTimepass Kannada Movie: ಸಿನಿಮಾದೊಳಗೊಂದು ಸಿನಿಮಾ ಸೋಜಿಗ!
    Next Article Timepass Kannada Movie: ರಂಗಭೂಮಿ ಪ್ರತಿಭೆಗೆ ದಕ್ಕಿದ ಚೆಂದದ ಪಾತ್ರ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

    02/12/2025

    Super Hit Movie Teaser : ಬಿಗ್‌ಬಾಸ್ ಗಿಲ್ಲಿ ನಟ ಹೀರೋ ಆಗ್ಬಿಟ್ಟ!

    02/12/2025

    Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?

    10/11/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (79)
    • ಸೌತ್ ಜೋನ್ (134)
    • ಸ್ಪಾಟ್ ಲೈಟ್ (213)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202519 Views
    Don't Miss
    ಸೌತ್ ಜೋನ್ 07/12/2025

    latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?

    ದಳಪತಿ ವಿಜಯ್ ನಟಿಸುತ್ತಿರೋಮ ಕಟ್ಟ ಕಡೆಯ ಚಿತ್ರ ಜನನಾಯಗನ್. ಓರ್ವ ಸ್ಟಾರ್ ನಟನಾಗಿ ಬೇರೆ ಸ್ಟಾರುಗಳೇ ಕರುಬುವ ಮಟ್ಟಕ್ಕೆ ಫ್ಯಾನ್…

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    Darling Prabhas Kalki2: ನಾಯಕಿಯಾಗ್ತಾಳಾ ಪ್ರಿಯಾಂಕಾ ಚೋಪ್ರಾ?

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (7) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (72) challengingstardarshan (9) cinishodha (137) cinishodhareview (16) crime (8) darshan (17) director (5) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (166) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (194) shivarajkumar (9) sreeleela (5) tollywood (59) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.