Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»shabbash movie updates: ಸೆರೆಯಾಯ್ತು ಮಡಿಕೇರಿ ಸೀಮೆಯ ಪ್ರಾಕೃತಿಕ ಸೌಂದರ್ಯ!
    ಸ್ಪಾಟ್ ಲೈಟ್

    shabbash movie updates: ಸೆರೆಯಾಯ್ತು ಮಡಿಕೇರಿ ಸೀಮೆಯ ಪ್ರಾಕೃತಿಕ ಸೌಂದರ್ಯ!

    By Santhosh Bagilagadde28/02/2024
    Facebook Twitter Telegram Email WhatsApp
    c338996d a4a4 4e12 a436 5f6b69ccb7da
    Share
    Facebook Twitter LinkedIn WhatsApp Email Telegram

    ಚಿತ್ರೀಕರಣದ ಆರಂಭಿಕ ಹಂತದಿಂದಲೇ ಸದ್ದು ಮಾಡುತ್ತಾ ಮುಂದುವರೆಯುತ್ತಿರುವ ಚಿತ್ರ (shabbash movie) `ಶಭ್ಬಾಷ್’. ರುದ್ರಶಿವ (director rudrashiva) ನಿರ್ದೇಶನದ ಈ ಸಿನಿಮಾ ಎಲ್ಲರೂ ಅಚ್ಚರಿಗೊಳ್ಳುವ ಮಟ್ಟಿಗೆ ವೇಗವಾಗಿ ಕಾರ್ಯಗತವಾಗಿದೆ. ಸಂಕ್ರಾಂತಿಯ ಹೊತ್ತಿಗೆಲ್ಲ ಮುಹೂರ್ತ ಮುಗಿಸಿಕೊಂಡಿದ್ದ ಚಿತ್ರತಂಡ, ಅದರ ಬೆನ್ನಲ್ಲಿಯೇ ಬೆಂಗಳೂರು ಮತ್ತು ಚನ್ನಗಿರಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿತ್ತು. ಆ ವಿವರಗಳಿನ್ನೂ ಹಸಿಯಾಗಿರುವಾಗಲೇ, ಮಡಿಕೇರಿ ಸೀಮೆಯ ಸುಂದರ ವಾತಾವರಣದಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ಸುದ್ದಿ ಜಾಹೀರಾಗಿದೆ. ಇಂಥಾದ್ದೊಂದು ಸುದ್ದಿಯ ಜೊತೆ ಜೊತೆಗೇ ಚಿತ್ರತಂಡ ಒಂದಷ್ಟು ಚಿತ್ರೀಕರಣದ ಅನುಭವಗಳನ್ನೂ ಹಂಚಿಕೊಂಡಿದೆ!

    37b685b6 d592 4b90 8b83 fa28d29f4702 1ಅತ್ಯಂತ ವ್ಯವಸ್ಥಿತವಾದ ಪ್ಲಾನಿಂಗ್ ಮಾತ್ರವೇ ಒಂದು ಸಿನಿಮಾವನ್ನು ಯಶಸ್ಸಿನ ದಡ ಸೇರಿಸಲು ಸಾಧ್ಯ. ಆ ನಿಟ್ಟಿನಲ್ಲಿ ನೋಡಹೋದರೆ, ನಿಇರ್ದೇಶಕ ರುದ್ರಶಿವ ಅತ್ಯಂತ ಅಚ್ಚುಕಟ್ಟಾಗಿ ನೀಲನಕ್ಷೆ ತಯಾರು ಮಾಡಿಕೊಂಡು ಅದಕ್ಕನುಗುಣವಾಗಿಯೇ ಚಿತ್ರೀಕರಣ ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ಇದೀಗ ಮಡಿಕೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಸಾಂಘವಾಗಿ ನೆರವೇರಿದೆ. ಇಲ್ಲಿನ ಬಿರನಾಣಿ, ಗೋಣಿಕೊಪ್ಪ ಮುಂತಾದ ಪ್ರದೇಶಗಳಲ್ಲಿ ದೃಷ್ಯಗಳನ್ನು ಸೆರೆಹಿಡಿಯಲಾಗಿದೆ. ಚೆಂದದ ಜಲಪಾತಗಳು, ಬೆಟ್ಟಗುಡ್ಡ, ಟಾಟಾ ಟೀ ಎಸ್ಟೇಟ್ ಮುಂತಾದೆಡೆಗಳಲ್ಲಿ ಚಿತ್ರೀಕರಣ ನೆರವೇರಿದೆ.

    667f43f8 d80b 4d2e 8a59 47229edf79f6 1ಮಡಿಕೇರಿ ಅಂದರೇನೇ ಅನೇಕ ವೈಚಿತ್ರ್ಯ, ಸವಾಲುಗಳನ್ನು ಅಡಕವಾಗಿಸಿಕೊಂಡಿರುವ ಭೂ ಭಾಗ. ಅದರ ಭಾಗವಾಗಿರುವ ದುರ್ಗಮ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿರುವ ಖುಷಿ ಚಿತ್ರತಂಡಕ್ಕಿದೆ. ಈ ಹಂತದಲ್ಲಿ ಪ್ರಧಾನವಾಗಿ ಎರಡು ಹಾಡುಗಳನ್ನು ಚಿತ್ರೀಕರಸಲಾಗಿದೆ. ಅದರಲ್ಲೊಂದು ತುಂಬಾನೇ ವಿಶೇಷವಾಗಿದೆ. ಈ ಭಾಗದಲ್ಲಿ ಕಾಡಿನೊಂದಿಗೆ ನಿಕಟ ನಂಟು ಹೊಂದಿರುವ ಜೇನುಕುರುಬರ ಹಾಡಿಗಳಿದ್ದಾವೆ. ಅಲ್ಲಿಗೆ ಭೇಟಿ ಕೊಟ್ಟಿರುವ ಚಿತ್ರತಂಡ, ಆ ಜನಾಂಗದವರಿಂದ ಸ್ಫುರಿಸಿದ ಹಾಡನ್ನು, ಅವರದ್ದೇ ಧಾಟಿಯಲ್ಲಿ ಈ ಸಿನಿಮಾಗೆ ಅಳವಡಿಸಿಕೊಂಡಿದ್ದಾರಂತೆ. ಈ ಚಿತ್ರೀಕರಣವೂ ವಿಶೇಷವಾಗಿತ್ತಂತೆ. ಅಂದಹಾಗೆ, ಈ ಹಾಡು ಒಟ್ಟಾರೆ ಸಿನಿಮಾದ ಹೈಲೈಟುಗಳಲ್ಲಿ ಒಂದಾಗಿ ದಾಖಲಾಗಲಿದೆ ಎಂಬ ಭರವಸೆ ನಿರ್ದೇಶಕರದ್ದು!

    ef9a32a9 24c6 4cec b696 b7bafdf0aa93 1ಒಟ್ಟು ಆರು ದಿನಗಳ ಕಾಲ ಒಂದಿಡೀ ಚಿತ್ರತಂಡ ಮಡಿಕೇರಿಯಲ್ಲಿ ಬೀಡು ಬಿಟ್ಟಿತ್ತು. ಇಡೀ ತಂಡ ಒಂದಿನಿತೂ ವಿರಾಮವಿಲ್ಲದೆ ಅವ್ಯಾಹತವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಅದರಲ್ಲಿಯೂ ಒಂದು ದಿನ ಸಂಜೆ ಆರರಿಂದ ಬೆಳಗ್ಗೆ ಆರರವರೆಗೆ ಸತತವಾಗಿ ನಡೆಸಿರುವ ಚಿತ್ರೀಕರಣ ಎಲ್ಲರ ಪಾಲಿಗೆ ಸವಾಲಿನದ್ದಾಗಿತ್ತು. ಮಡಿಕೇರಿಯ ಹವಾಗುಣ, ಅಲ್ಲಿನ ಮಂಜು ಮತ್ತು ಚಳಿಯ ತೀವ್ರತೆಯ ಅರಿವಿರುವವರಿಗೆ, ಅಲ್ಲಿ ರಾತ್ರಿ ಚಿತ್ರೀಕರಣ ನಡೆಸೋದು ಅದೆಷ್ಟು ಕಷ್ಟವೆಂಬ ಅರಿವಿರುತ್ತದೆ. ಅದನ್ನೆಲ್ಲ ನೀಗಿಕೊಂಡು ಡ್ಯಾನ್ಸರ್ ಗಳು, ಕಲಾವಿದರು, ತಾಂತ್ರಿಕ ವರ್ಗ ಅತ್ಯಂತ ಉತ್ಸಾಹದಿಂದ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

    80bd7410 033b 47b6 a564 0385db02c3bcಓಂ ಸಾಯಿ ಪ್ರಕಾಶ್ ಸೇರಿದಂತೆ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ ನಿರ್ದೇಶನದ ಮೊದಲ ಚಿತ್ರವಿದು. ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ಏಸ್ 22 (ace 22) ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ `ಕ’ ಮತ್ತು `ಮಳೆಬಿಲ್ಲು’ ಸಿನಿಮಾಗಳಲ್ಲಿ ನಟಿಸಿರುವ ಶರತ್ ನಾಯಕನಾಗಿ ನಟಿಸಿದ್ದರೆ, ನಿಸರ್ಗ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದೀಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿರುವ ಚಿತ್ರತಂಡ, ಮೂರನೇ ಹಂತದ ಚಿತ್ರೀಕರಣದತ್ತ ಸಾಗುತ್ತಿದೆ.

    shabbashmovie_rudrashiva_kfi_sandalwood_sharath
    Share. Facebook Twitter LinkedIn WhatsApp Telegram Email
    Previous Articlekailasa kasidre trailer review: ಬಿಡುಗಡೆಯಾಯ್ತು ಕೈಲಾಸ ಕಾಸಿದ್ರೆ ಟ್ರೈಲರ್!
    Next Article radhika apte: ಚಿತ್ರೋದ್ಯಮದಲ್ಲಿ ಮಹಿಳೆಯರದ್ದು ಎರಡನೇ ದರ್ಜೆ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?

    03/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (219)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 03/01/2026

    Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?

    ರೇವ್ ಪಾರ್ಟಿಯ ಕಾರಣದಿಂದ ಬೆಂಗಳೂರು ಮತ್ತೆ ಮತ್ತೆ ಸುದ್ದಿಯಲ್ಲಿರುತ್ತೆ. ಹಣವಂತರ ತೆವಲಿನ ಕಾರಣಕ್ಕೆ ಬೆಂಗಳೂರಿಗೊಂದಷ್ಟು ಕುಖ್ಯಾತಿಯೂ ಅಂಟಿಕೊಂಡಿದೆ. ಈವತ್ತಿಗೆ ಮಹಾರಾಷ್ಟ್ರ…

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (19) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (9) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (199) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.