Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    junior movie review: ಗಣಿಗಳ್ಳನ ಮಗ ಸಿನಿಮಾ ಹೀಗಿದೆ!

    Ekka movie review: ಎರಡನೇ ಪ್ರಯತ್ನದಲ್ಲೂ ತಪ್ಪಿತೇ ಯುವನ ಲೆಕ್ಕ!

    mahavatar narasimha movie: ತಾಂತ್ರಿಕ ಕರಾಮತ್ತಿನ ದೈವೀಕ ಅನುಭೂತಿಯಿನ್ನು ನಿರಂತರ!

    Facebook Twitter Instagram
    Facebook Twitter Instagram
    Cini ShodhaCini Shodha
    Subscribe
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » junior movie review: ಗಣಿಗಳ್ಳನ ಮಗ ಸಿನಿಮಾ ಹೀಗಿದೆ!
    ಹೀಗಿದೆ ಈ ಪಿಚ್ಚರ್

    junior movie review: ಗಣಿಗಳ್ಳನ ಮಗ ಸಿನಿಮಾ ಹೀಗಿದೆ!

    By Santhosh Bagilagadde19/07/2025
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ ಕುಡಿಗಳನ್ನು ಸ್ಟಾರ್‌ಗಳನ್ನಾಗಿಸುವ ಕನಸು ಕಾಣೋದು ಹೊಸತೇನಲ್ಲ. ಸಹನೀಯ ಅಂಶವೆಂದರೆ, ಇಂಥವರ ಸಂತಾನ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಿಲ್ಲ. ಇದು ಗೊತ್ತಿದ್ದರೂ ಕೂಡಾ ಬಳ್ಳಾರಿಯ ಗಣಿಗಳ್ಳ (gaalijanardhanreddy) ಜನಾರ್ಧನ ರೆಡ್ಡಿ ತನ್ನ ಮಗ ಕಿರೀಟಿಯನ್ನು (kireeti) ನಾಯಕ ನಟನನ್ನಾಗಿ ನೆಲೆಗಾಣಿಸುವ ಕಸರತ್ತು ನಡೆಸಿದ್ದ. ಗಣಿಧೂಳಿನ ಬ್ಲಾಕ್ ಮನಿಯನ್ನು ತಂದು ಸುರಿದರೂ ಕೂಡಾ ರೆಡ್ಡಿಮಗನ (junior movie) ಜ್ಯೂನಿಯರ್ ಚಿತ್ರಕ್ಕೆ ಅಡಿಗಡಿಗೆ ಕಂಟಕ ಎದುರಾಗಿತ್ತು. ಕಡೆಗೂ ಇದೀಗ ಆ ಚಿತ್ರ ಬಿಡುಗಡೆಗೊಂಡಿದೆ. ಗಣಿ ಧೂಳಿಂದೆದ್ದು (mining mafia) ಬಂದ ಕೀಟವೀಗ ಸಿನಿಮಾ ಮಂದಿರದ ಹೆಬ್ಬಾಗಿಲಲ್ಲೇ ಲಗಾಟಿ ಹೊಡೆದಿದೆ.

    ಹೇಳಿಕೇಳಿ (janardhan reddy) ಜನಾರ್ಧನ ರೆಡ್ಡಿ ನೆಲ ಬಗೆಯುತ್ತಾ ಏಕಾಏಕಿ ಕೋಟಿ ಕೋಟಿ ಗುಂಜಿಕೊಂಡವನು. ಇಂಥವನಿಗೆ ಓರ್ವ ನಟ ಸಿನಿಮಾ ರಂಗದಲ್ಲಿ ಸರ್ಕಸ್ಸು ನಡೆಸುತ್ತಾ, ಸ್ಟಾರ್ ನಟನಾಗಿ ನೆಲೆ ಕಾಣೋದು ಅದೆಷ್ಟು ಸುದೀರ್ಘವಾದ, ತ್ರಾಸದಾಯಕ ಪ್ರಯಾಣವೆಂಬ ಅರಿವಿರಲು ಸಾಧ್ಯವೇ? ಅಂಥಾದ್ದೊಂದು ಸೈರಣೆಯನ್ನು ಗಾಲಿ ರೆಡ್ಡಿಯಿಂದಾಗಲಿ, ಅವನ ಮಗ (kireeti) ಕಿರೀಟಿಯಿಂದಾಗಲಿ ನಿರೀಕ್ಷೆ ಮಾಡೋದೇ ಮುಠ್ಠಾಳತನ. ಇದನ್ನಿಲ್ಲಿ ಪ್ರಸ್ತಾಪಿಸುತ್ತಿರೋದಕ್ಕೆ ಕಾರಣ ಇಲ್ಲದಿಲ್ಲ. ಜ್ಯೂನಿಯರ್ ಸಿನಿಮಾ ನೋಡಿದ ಯಾರಿಗಾದರೂ ಒಂದೇ ಸಿನಿಮಾದಲ್ಲಿ ಕಿರೀಟಿಯನ್ನು ಸ್ಟಾರ್ ನಟನಾಗಿ ನೆಲೆಗಾಣಿಸುವ ಹಳವಂಡ ಕಣ್ಣಿಗೆ ರಾಚುತ್ತೆ.

    ಹಾಗೆ ನೋಡಿದರೆ, ಇಲ್ಲಿ ಕೈಗೆತ್ತಿಕೊಂಡಿರುವ ಕಥೆ ಚೆನ್ನಾಗಿದೆ ಅಂತನ್ನಿಸಿದರೂ ಅದರಲ್ಲಿ ಹೊಸತನವೇನಿಲ್ಲ. ಯಾವ ಘಟ್ಟದಲ್ಲಿಯೂ ಕಥೆಯ ಭಾಗ ವಾಹ್ ಅನ್ನಿಸೋದಿಲ್ಲ. ಪಾತ್ರ ವರ್ಗ ಮತ್ತು ಕಲಾವಿದರು ಅದಕ್ಕೆ ಜೀವ ತುಂಬಿರುವ ರೀತಿಯನ್ನೂ ಮೆಚ್ಚಿಕೊಳ್ಳಬಹುದು. ಆದರೆ, ಕಿರೀಟಿಗೆ ಹಾಡು ಮಾತ್ರವಲ್ಲದೇ ಪ್ರತಿಯೊಂದಕ್ಕೂ ಬಿಲ್ಡಪ್ಪಿ ಕೊಡುವ ದರ್ದಿಗೆ ಬಿದ್ದಿರುವ ನಿರ್ದೇಶಕರು, ಕಥೆಯ ಮೂಲ ಸತ್ವದ ಕತ್ತು ಹಿಸುಕಿದ್ದಾರೆ. ಹಾಡುಗಳಲ್ಲಿ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿರುವ ಕಿರೀಟಿ, ನಟನೆ ಅಂತ ಬಂದಾಗ ಬಸವಳಿದಂತೆ ಕಾಣಿಸುತ್ತಾನೆ. ಗಣಿಗಳ್ಳ ರೆಡ್ಡಿ ಇದುವರೆಗೆ ಗೋರಿಕೊಂಡಿರುವ ಕಾಸನ್ನೆಲ್ಲ ಗುಡ್ಡೆ ಹಾಕಿದರೂ ಕೂಡಾ, ಕಿರೀಟಿ ನಟನಾಗಿ ಪಳಗೋದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.

    ಅಷ್ಟಕ್ಕೂ ಜನಾ ರೆಡ್ಡಿಯಂಥಾ ಬೇನಾಮಿ ಆಸ್ತಿ ಹೊಂದಿರೋ ಖದೀಮರ ಮಕ್ಕಳು ಹೇಗೆ ಬೇಕಾದರೂ ತಯಾರಿ ನಡೆಸಬಹುದು. ಕಿರೀಟಿ ಕೂಡಾ ನೃತ್ಯ ಸೇರಿದಂತೆ ಒಂದಷ್ಟು ಬಗೆಯಲ್ಲಿ ಶ್ರಮ ಹಾಕಿದ್ದಾನೆ. ಆ ಕಾರಣದಿಂದಲೇಬ ಜ್ಯೂನಿಯರ್ ಇದ್ದುದರಲ್ಲಿಯೇ ಒಂದಷ್ಟು ಸಹ್ಯವೆನಿಸುತ್ತೆ. ಅಷ್ಟರ ಮಟ್ಟಿಗೆ ರೆಡ್ಡಿಮಗ ಕಿರೀಟಿಯನ್ನು ಮೆಚ್ಚಿಕೊಳ್ಳಬಹುದು. ಇದೆಲ್ಲದರಾಚೆಗೆ ಗಣಿಗಳ್ಳನ ಪುತ್ರನ ಸಿನಿಮಾದ ಬಗ್ಗೆ ಬೇರೇನೂ ಹೇಳಲಾಗೋದಿಲ್ಲ. ಒಂದು ಕಾಲದಲ್ಲಿ ಹಡಬೆ ಕಾಸಿಂದ ಒಂದಿಡೀ ರಾಜಕೀಯವನ್ನು ಹಡಾಲೆಬ್ಬಿಸಿದ್ದವನು, ಅಳಿದುಳಿದಿದ್ದ ಮೌಲ್ಯಗಳನ್ನು ಗಣಿಧೂಳಿನಲ್ಲಿ ಉಸಿರುಗಟ್ಟಿಸಿದ್ದವನು ಗಾಲಿ ಜನಾರ್ಧನ ರೆಡ್ಡಿ. ಇಂಥವನ ಮಗ ಹೀರೋ ಆದರೆ ಅದು ಕೆಡುಕಾಗಿಯಷ್ಟೇ ಕಾಣಿಸಲು ಸಾಧ್ಯ!

    #arunareddy #bellaryminingmafia #gaalijanardhanreddy #genelia #geneliadsouza #junior #juniormovie #juniormoviereview #miningmafia #radhakrishnarewwy #raoramesh #ravichandran #sudharani cinishodhareview kfi sandalwood sreeleela
    Share. Facebook Twitter LinkedIn WhatsApp Telegram Email
    Previous ArticleEkka movie review: ಎರಡನೇ ಪ್ರಯತ್ನದಲ್ಲೂ ತಪ್ಪಿತೇ ಯುವನ ಲೆಕ್ಕ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Ekka movie review: ಎರಡನೇ ಪ್ರಯತ್ನದಲ್ಲೂ ತಪ್ಪಿತೇ ಯುವನ ಲೆಕ್ಕ!

    19/07/2025

    mahavatar narasimha movie: ತಾಂತ್ರಿಕ ಕರಾಮತ್ತಿನ ದೈವೀಕ ಅನುಭೂತಿಯಿನ್ನು ನಿರಂತರ!

    16/07/2025

    Ekka movie trailer review: ಎರಡನೇ ಚಿತ್ರದಲ್ಲಿ ದಡ ಸೇರಬಹುದಾ ದೊಡ್ಮನೆ ಹುಡ್ಗ?

    16/07/2025
    Search
    Category
    • OTT (3)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (24)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (60)
    • ಸೌತ್ ಜೋನ್ (104)
    • ಸ್ಪಾಟ್ ಲೈಟ್ (178)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (12)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202335 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    Ekka movie trailer review: ಎರಡನೇ ಚಿತ್ರದಲ್ಲಿ ದಡ ಸೇರಬಹುದಾ ದೊಡ್ಮನೆ ಹುಡ್ಗ?

    16/07/202517 Views
    Don't Miss
    ಹೀಗಿದೆ ಈ ಪಿಚ್ಚರ್ 19/07/2025

    junior movie review: ಗಣಿಗಳ್ಳನ ಮಗ ಸಿನಿಮಾ ಹೀಗಿದೆ!

    ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ…

    Ekka movie review: ಎರಡನೇ ಪ್ರಯತ್ನದಲ್ಲೂ ತಪ್ಪಿತೇ ಯುವನ ಲೆಕ್ಕ!

    mahavatar narasimha movie: ತಾಂತ್ರಿಕ ಕರಾಮತ್ತಿನ ದೈವೀಕ ಅನುಭೂತಿಯಿನ್ನು ನಿರಂತರ!

    Ekka movie trailer review: ಎರಡನೇ ಚಿತ್ರದಲ್ಲಿ ದಡ ಸೇರಬಹುದಾ ದೊಡ್ಮನೆ ಹುಡ್ಗ?

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.