Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»darshan-sudeep: ಅಂಬಿಗೂ ಬಗ್ಗದ ಮುನಿಸು ರೌಡಿಯ ಮುಂದೆ ಮಂಡಿಯೂರಿತೇ?
    ಸ್ಪಾಟ್ ಲೈಟ್

    darshan-sudeep: ಅಂಬಿಗೂ ಬಗ್ಗದ ಮುನಿಸು ರೌಡಿಯ ಮುಂದೆ ಮಂಡಿಯೂರಿತೇ?

    By Santhosh Bagilagadde28/09/2023Updated:28/09/2023
    Facebook Twitter Telegram Email WhatsApp
    95d66238 d162 44ad ab55 5ce5f69252f7
    Share
    Facebook Twitter LinkedIn WhatsApp Email Telegram

    ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಾಗಿದ್ದಾರೆ… ಹಾಗಂತ ಹಬ್ಬಿಕೊಳ್ಳತ್ತಾ ಬಂದಿರುವ ರೂರುಗಳಿಗೆ ಅವರಿಬ್ಬರ ನಡುವೆ ಹೊತ್ತಿಕೊಂಡ ವೈಮನಸ್ಯದಷ್ಟೇ ವಯಸಾಗಿದೆ. ಒಂದು ಕಾಲದಲ್ಲಿ ಇಂಥಾ ಕಲ್ಪಿತ ಸುದ್ದಿಗಳು ಜಾಹೀರಾದಾಗ ಇಬ್ಬರ ಅಭಿಮಾನಿಗಳೂ ಸಂಭ್ರಮಿಸುತ್ತಿದ್ದದ್ದು ನಿಜ. ಅವರಿಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದರಷ್ಟೇ ಎಲ್ಲವನ್ನೂ ಜೈಸಿಕೊಳ್ಳಬಹುದೆಂಬ ಭಾವ ಬಹುತೇಕ ಅಭಿಮಾನಿ ಪಡೆಯಲ್ಲಿದ್ದದ್ದೂ ಸತ್ಯ. ಆದರೆ, ಬರು ಬರುತ್ತಾ ನಡೆದ ಪಲ್ಲಟಗಳು, ಎರಡೂ ದಿಕ್ಕಿನಿಂದ ಅಗೋಚರವಾಗಿ ಹೊರಳಾಡಿದ್ದ ದಾಳಗಳಿವೆಯಲ್ಲಾ? ಅವು ಒಂದು ಕಾಲದ ಕುಚಿಕ್ಕು ಗೆಳೆಯರನ್ನು ಆಜನ್ಮ ಶತ್ರುಗಳಂತಾಗಿಸಿ ಬಿಟ್ಟಿದ್ದವು. ಅದರ ತೀವ್ರತೆ ಎಷ್ಟಿತ್ತೆಂದರೆ, ಖುದ್ದು ರೆಬೆಲ್ ಸ್ಟಾರ್ ಅಂಬರೀಶ್ ತ್ಯಾಪೆ ಹಚ್ಚಲು ಪ್ರಯತ್ನಿಸಿದರೂ ಫಲ ಕೊಟ್ಟಿರಲಿಲ್ಲ. ಹಾಗೆ ಅಂಬಿಯ ಮುಂದೆಯೂ ಬಗ್ಗದ ಮುನಿಸೀಗ, ಬೆಂಗಳೂರಿನ ನಟೋರಿಯಸ್ ರೌಡಿಯೊಬ್ಬನ ಸಮ್ಮುಖದಲ್ಲಿ ಮಂಡಿಯೂರಿದ ಸುದ್ದಿಯೊಂದು ಹರಿದಾಡಲಾರಂಭಿಸಿದೆ!

    FB IMG 1693117485927 1ಈಗ್ಗೆ ಒಂದಷ್ಟು ದಿನಗಳ ಹಿಂದೆ ಸಂಸದೆ ಸುಮಲತಾ ಹುಟ್ಟುಹಬ್ಬ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು. ರಾಕ್ ಲನ್ ವೆಂಕಣ್ಣ ಸಾರಥ್ಯದಲ್ಲಿ ನಡೆದಿದ್ದ ಆ ಸಮಾರಂಭದ ಆಂತರ್ಯದಲ್ಲಿ ಕಿಚ್ಚ ಮತ್ತು ದಶನ್ ರನ್ನು ಮತ್ತೆ ಒಂದುಗೂಡಿಸುವ ಸುಪ್ತ ಅಜೆಂಡಾ ಇದೆ ಅಂತಲೂ ಗುಮಾನಿಗಳು ಹರಿದಾಡಿದ್ದವು. ಅದಕ್ಕೆ ಸರಿಯಾಗಿ, ಈ ಹಿಂದೆ ದರ್ಶನ್ ಮತ್ತು ಸುದೀಪ್ ಒಟ್ಟೊಟ್ಟಿಗೆ ಯಾವ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ಸುಮಲತಾ ಬರ್ತ್‍ಡೇ ಪಾರ್ಟಿಯಲ್ಲಿ ಮಾತ್ರ ಇಬ್ಬರೂ ಹಾಜರಿದ್ದರು. ಅಲ್ಲಿಯೂ ಪರಸ್ಪರ ಮುಖ ನೋಡಿಕೊಳ್ಳಲೂ ಬಿಗುಮಾನ ಪ್ರದರ್ಶನಗೊಂಡಿತೇ ಹೊರತು, ಕೂಡಿಕೆ ಸಾಧ್ಯವಾಗಿರಲಿಲ್ಲ. ಅಲ್ಲಿಗೆ ರಾಕ್ ಲೈನ್ ವೆಂಕಿಯ ಸುಪ್ತ ಸಂಧಾನವೂ ಗೋತಾ ಹೊಡೆದಂತಾಗಿತ್ತು.

    de5eaa5c 2d24 4b41 85ba 1ac6533e0734ಹಾಗೆ ನೋಡಿದರೆ, ಅಂಥಾದ್ದೊಂದು ಪ್ರಹಸನ ನಡೆದಿದ್ದರ ಬಗ್ಗೆ ಇಬ್ಬರ ಅಭಿಮಾನಿ ಪಡೆಯಲ್ಲಿಯೂ ನಿರಾಸೆ ಮೂಡಿರಲಿಲ್ಲ. ಇದೆಲ್ಲದಿಂದಾಗಿ ಇದು ಸಲೀಸಾಗಿ ಮುಕ್ತಾಯಗೊಳ್ಳುವ ಮುನಿಸಲ್ಲ ಎಂಬಂಥಾ ವಾತಾವರಣ ತಂತಾನೇ ಹಬ್ಬಿಕೊಂಡಿತ್ತು. ವಾತಾವರ ಹೀಗಿರುವಾಗಲೇ ದಾಸನ ಗರಡಿಯಲ್ಲಿ ಒಂದಷ್ಟು ಹವಾಮಾನ ಬದಲಾವೆಗಳಾಗಿವೆ. ಅದು ಆತನ ವೃತ್ತಿ ಬದುಕಿನಲ್ಲಿ ಹವಾಮಾನ ವೈಪರೀತ್ಯದ ಛಾಯೆ ಆವರಿಸಿಕೊಂಡಿರೋದರ ಪರಿಣಾಮವೂ ಇರಬಹುದು. ಒಟ್ಟಾರೆಯಾಗಿ ಇದೆಲ್ಲದರ ಬಾಬತ್ತೆಂಬಂತೆ ದಾಸನ ಕಡೆಯಿಂದಲೇ ಹೊಸಾ ದಾಳವೊಂದು ಉರುಳಿರುವ ಸಾಧ್ಯತೆಗಳಿವೆ. ಅದುವೇ ದರ್ಶನ್ ಮತ್ತು ಸುದೀಪ್ ರನ್ನು ನಟೋಇಯಸ್ ರೌಡಿ ಎಲಿಮೆಂಟೊಂದರ ಅಡ್ಡೆಯಲ್ಲಿ ಸೇರುವಂತೆ ಮಾಡಿದ್ದರೆ ಅಚ್ಚರಿಯೇನೂ ಇಲ್ಲ!

    kichcha sudeep 1680684630ಒಂದು ಮೂಲದ ಪ್ರಕಾರ, ಈಗೊಂದು ಹದಿನೈದು ದಿನಗಳ ಹಿಂದೆ ಆ ಭೂಗತ ಪಾತಕಿಯ ಅಡ್ಡೆಯಲ್ಲಿ ಒಂದು ಕಾಲದ ಕುಚಿಕ್ಕು ಗೆಳೆಯರ ಸಮಾಗಮವಾಗಿದೆ. ಅಲ್ಲಿ ತ್ಯಾಪೆ ಹಚ್ಚೋ ಕೆಲಸವೂ ಸಾಂಘವಾಗಿ ನೆರವೇರಿದೆ. ಕಡೆಗೂ ದಶನ್ ಮತ್ತು ಸುದೀಪ್ ಕೈ ಕುಲುಕಿ ಒಂದಾಗಿದ್ದಾರೆ; ಹಳೇ ಮುನಿಸು ಮರೆತು ಮುದುವರೆಯುವ ಮನಸು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಮೊನ್ನೆ ಏಕಾಏಕಿ ದರ್ಶನ್ ಕಾವೇರಿ ಹೋರಾಟಕ್ಕೆ ಧುಮುಕಿ, ಹೀನಾಮಾನ ಮಾತಾಡಿದ್ದರಲ್ಲಾ? ಆ ಸಂದರ್ಭದಲ್ಲಿ ರಜನೀಕಾಂತ್ ರನ್ನು ಟಾರ್ಗೆಟ್ ಮಾಡಿ ಮಾತಾಡುವಾಗ `ನಿಮಗೇನು ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ಕಾಣಿಸೋದಾ’ ಎಂಬರ್ಥದಲ್ಲಿ ಅಬ್ಬರಿಸಿದ್ದರು. ಮಾಮೂಲಿಯಾಗಿದ್ದರೆ, ಆ ಮಾತಿನ ನಡುವೆ ಕಿಚ್ಚನ ಹೆಸರು ಗೈರಾಗುತ್ತಿತ್ತು. ಬಲು ಪ್ರೀತಿಯಿಂದ ದರ್ಶನ್ ಕಿಚ್ಚನ ಹೆಸರು ಪ್ರಸ್ತಾಪಿಸಿರೋದರ ಹಿಂದೆ, ಭೂಗತ ಜೀವಿಯ ಸಮ್ಮುಖದಲ್ಲಿ ನಡೆದ ಸಂಧಾನದ ಕಿಸುರಿಲ್ಲದಿಲ್ಲ!

    download 4ಹಾಗಾದರೆ, ಲೀಲಾಜಾಲವಾಗಿ ಕಿಚ್ಚ ಮತ್ತು ದರ್ಶನ್ ರನ್ನು ಒಂದುಗೂಡಿಸಿದ ಆ ರೌಡಿ ಎಲಿಮೆಂಟು ಯಾವುದು? ಈ ಸ್ಟಾರ್ ನಟರಿಬ್ಬರನ್ನೂ ಅಷ್ಟು ಸಲೀಸಾಗಿ ಹ್ಯಾಂಡಲ್ ಮಾಡುವಷ್ಟು ಆತ ಪ್ರಭಾವಶಾಲಿಯಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿಕೊಳ್ಳೋದು ಸಹಜ. ಅದಕ್ಕೆ ಉತ್ತರ ಹುಡುಕ ಹೋದರೆ, ಆ ರೌಡಿ ಆಸಾಮಿಯ ನಟೋರಿಟಿ, ಸಿನಿಮಾ ಕನೆಕ್ಷನ್ನುಗಳು ಜಾಹೀರಾಗುತ್ತವೆ. ಸದ್ಯದ ಮಟ್ಟಿಗೆ ಬೆಂಗಳೂರು ಭೂಗತದಲ್ಲಿ ನಾನಾ ಪಲ್ಲಟಗಳಾಗುತ್ತಿವೆ. ಹಳೇ ದಂಧೆಗಳು ಹೊಸ ಸ್ವರೂಪದ ಪಾಲೀಶು ಮಾಡಿಸಿಕೊಂಡಂತೆ ನಳನಳಿಸುತ್ತಿವೆ. ಅದರಲ್ಲಿ ಭೂ ಮಾಫಿಯಾ, ಫೈನಾನ್ಸ್ ಮಾಫಿಯಾ, ಹೈಟೆಕ್ ಇಸ್ಪೀಟ್ ಅಡ್ಡೆಗಳೂ ಸೇರಿಕೊಳ್ಳುತ್ತವೆ. ಅದೆಲ್ಲವನ್ನೂ ಮ್ಯಾನೇಜು ಮಾಡುತ್ತಾ, ಬೆಂಗಳೂರು ಸೌತ್ ಡಾನ್ ಎಂಬಂತೆ ಈ ರೌಡಿ ಮೆರೆಯುತ್ತಿದ್ದಾನೆ.

    download 5ಸದ್ಯಕ್ಕೆ ಬೆಂಗಳೂರು ಭೂಗತದಲ್ಲಿ ಸೈಲೆಂಟ್ ಸುನೀಲ ನೇಪಥ್ಯಕ್ಕೆ ಸರಿದಿದ್ದಾನೆ. ಒಂದು ಕಾಲಕ್ಕೆ ಆತನ ಸಿಂಡಿಕೇಟ್ ಸದಸ್ಯನೇ ಆಗಿದ್ದ ವಿಲ್ಸನ್ ಗಾರ್ಡನ್ ನಾಗನ ಹೆಸರು ಫೀಲ್ಡಿನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಆತನಿಗಿಂತಲೂ ಮೋಸ್ಟ್ ಸೀನಿಯರ್, ನಟೋರಿಯಸ್ ಅನ್ನಿಸಿಕೊಂಡಿರುವವನು ಈ ಆಸಾಮಿ. ಭೂಗತ ವಲಯದಲ್ಲಿ ಪೆಡ್ಲು ಅಂತಲೇ ಉಪನಾಮಧೇಯ ಹೊಂದಿರುವ ಈತ, ಒಂದು ಕಾಲದಲ್ಲಿ ಭಯಾನಕ ಸುಪಾರಿ ಹಂತಕ. ಇಂಥವನು ಆರಂಭ ಕಾಲದಿಂದಲೇ ರೆಬೆಲ್ ಸ್ಟಾರ್ ಅಂಬಿಯ ನಂಬಿಕೆ ಗಿಟ್ಟಿಸಿಕೊಂಡಿದ್ದ. ಅತ್ತ ಒಂದಷ್ಟು ವರ್ಷಗಳ ಹಿಂದೆ ಭೀಕರವಾಗಿ ಹತನಾಗಿದ್ದ ಮಂಡ್ಯ ಸೀಮೆಯ ರೌಡಿ ಜಡೇಜಾ ರವಿ ಕೂಡಾ ಅಂಬಿಯ ಅಭಿಮಾನಿಯಾಗಿ ಗುರುತಿಸಿಕೊಂಡಿದ್ದ. ಹಾಗೆ ಸಿಗರೇಟಿನ ಘಾಟು, ಅಂಬಿಯಣ್ಣನ ಕೈಯಲ್ಲಿರುತ್ತಿದ್ದ ಎಣ್ಣೆಯ ಕಮಟಿನ ನಡುವೆ ಜಡೇಜಾ ಮತ್ತು ಪೆಡ್ಲುವಿನ ನಡುವೆ ಜನ್ಮಾಂತರಗಳ ಸ್ನೇಹವೊಂದು ಸೊಂಪಾಗಿ ಕುದುರಿಕೊಂಡಿತ್ತು.

    images 1 1ಅಷ್ಟಕ್ಕೂ ಈ ಪೆಡ್ಲು ದರ್ಶನ್ ಮತ್ತು ಸುದೀಪ್ ಸರಹದ್ದಿಗೆ ದಾಟಿಕೊಂಡಿದ್ದರ ಮೂಲ ಕೂಡಾ ಮಂಡ್ಯದ ಗಂಡಿನ ಹಜಾರವೇ. ಹಾಗೆ, ಚಿಗುರಿಕೊಂಡ ಸ್ನೇಹ ದರ್ಶನ್ ಜೊತೆಗೇ ಪೆಡ್ಲು ಅಂಟಿಕೊಳ್ಳುವಂತೆ ಮಾಡಿತ್ತು ಅನ್ನುವವರೂ ಇದ್ದಾರೆ. ಅದರ ಪರಿಣಾಮವಾಗಿಯೇ ದಾಸನ ಫಾರ್ಮ್ ಹೌಸಿನಲ್ಲಿ ಆಗಾಗ ಪೆಡ್ಲು ರೌಂಡು ಹೊಡೆಯುತ್ತಿತ್ತು. ಇತ್ತೀಚೆಗೆ ಉಮಾಪತಿ ಕೇಸಿನಲ್ಲಿಯೂ ಪೆಡ್ಲು ಸದ್ದು ಮಾಡಿತ್ತು. ಹೀಗೆ ದರ್ಶನ್ ಜೊತೆ ಸ್ನೇಹವಿಟ್ಟುಕೊಂಡಿದ್ದ ಪೆಡ್ಲು, ಸುದೀಪ್‍ಗೂ ಪರಿಚತನೇ. ಆತನ ಪ್ರಭಾವ ಎಷ್ಟಿದೆಯೆಂದರೆ, ವರ್ಷಾಂತರಗಳ ಹಿಂದೆ ಗೃಹಮಂತ್ರಿಯಾಗಿದ್ದ ಪಾಟೀಲರ ಕಾಲ್ ಲಿಸ್ಟಿನಲ್ಲಿಯೂ ಪೆಡ್ಲಿನ ಹೆಸರಿತ್ತು. ಆ ಕಾಲಕ್ಕದು ಭಾರೀ ಸುದ್ದಿಯೂ ಆಗಿತ್ತು.

    ea752648 127b 499c bc60 93af9311b250ಇಂಥಾ ನಟೋರಿಯಸ್ ರೌಡಿ ಪೆಡ್ಲು ಅಂತೂ ಇಂತೂ ಕಿಚ್ಚ ಮತ್ತು ದರ್ಶನ್ ರನ್ನು ಒಂದಾಗಿಸಿದ್ದಾನೆಂದು ಹೇಳಲಾಗುತ್ತಿದೆ. ಸದ್ಯದ ಮಟ್ಟಿಗೆ ದರ್ಶನ್‍ಗೂ ಕೂಡಾ ಎಲ್ಲ ವಿವಾದಗಳಿದ ಕಳಚಿಕೊಳ್ಳಬೇಕಾಗಿದೆ. ಯಾಕೆಂದರೆ, ಕ್ರಾಂತಿಯ ಸಂದರ್ಭದಲ್ಲಿಯೇ ದರ್ಶನ್ ಗೆ ವಾಸ್ತವ ದರ್ಶನವಾಗಿದೆ. ಅದರಿಂದಾಗಿಯೇ ಅತ್ತ ಯುವ ರಾಜ್‍ಕುಮಾರ್ ಶೂಟಿಂಗ್ ಸೆಟ್ಟಿಗೆ ಹೋಗಿ, ರೊಚ್ಚಿಗೆದ್ದಿದ್ದ ಪುನೀತ್ ಅಭಿಮಾನಿಗಳನ್ನು ತಣ್ಣಗಾಗಿಸುವ ಕೆಲಸ ನಡೆದಿದೆ. ಅದರ ಬೆನ್ನಲ್ಲಿಯೇ ಕಿಚ್ಚನೊಂದಿಗೂ ಮತ್ತೆ ಕೂಡಿಕೆಯಾಗಿದೆ. ಅತ್ತ ಅಂಬರೀಶ್, ಇತ್ತ ವೆಂಕಣ್ಣ ಸೇರಿದಂತೆ ಘಟಾನುಘಟಿಗಳು ಇವರಿಬ್ಬರನ್ನು ಒಂದುಗೂಡಿಸಲು ನಾನಾ ಸರ್ಕಸ್ಸುಗಳನ್ನು ನಡೆಸಿದ್ದರು; ಪದೇ ಪದೆ ಸೋತಿದ್ದರು. ಕಡೆಗೂ ರೌಡಿ ಎಲಿಮೆಂಟೊಬ್ಬ ಭೂಗತ ಅಡ್ಡೆಯಲ್ಲಿ ತಣ್ಣಗೆ ಅದನ್ನು ಸಾಧ್ಯವಾಗಿಸಿದ್ದಾನೆಂದರೆ, ಅದು ಈ ಶತಮಾನದ ಪವಾಡ ಎನ್ನಲಡ್ಡಿಯಿಲ್ಲ. ಈ ಮೂಲಕ ಫ್ಯಾನ್ ವಾರ್, ಹಾದಿರಂಪ ಬೀದಿರಂಪಕ್ಕೆ ಅಲ್ಪ ವಿರಾಮವಿಟ್ಟ ಪೆಡ್ಲಿನ ಕಿಮ್ಮತ್ತನ್ನು ಮೆಚ್ಚಿಕೊಳ್ಳದೆ ವಿಧಿಯಿಲ್ಲ!

    'santhoshbagilagadde amareesh darshan inishoda rocklinevenkatesh sudee sudeepdarshan
    Share. Facebook Twitter LinkedIn WhatsApp Telegram Email
    Previous Articlekembathalli parmi: ಟಿಕ್ ಟಾಕ್ ಸ್ಟಾರ್ ನವೀನನ ಭೀಕರ ಹತ್ಯೆಯ ಸುತ್ತಾ..!
    Next Article urfi javed-sonu gowda: ಕೀಳು ಅಭಿರುಚಿಯ ಬೆಂಕಿಯಲ್ಲಿ ಕ್ರಿಯೇಟಿವಿಟಿಯ ನರಳಾಟ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    09/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.