Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಜಾಪಾಳ್ ಜಂಕ್ಷನ್»yash mother controvercy: ರಾಕಿಭಾಯ್ ಅಮ್ಮನ ಮಾತಂದ್ರೆ ಮುತ್ತು!
    ಜಾಪಾಳ್ ಜಂಕ್ಷನ್

    yash mother controvercy: ರಾಕಿಭಾಯ್ ಅಮ್ಮನ ಮಾತಂದ್ರೆ ಮುತ್ತು!

    By Santhosh Bagilagadde10/07/2025
    Facebook Twitter Telegram Email WhatsApp
    5b108cec 9153 422f 93a1 e62e60d2d6fd 1
    Share
    Facebook Twitter LinkedIn WhatsApp Email Telegram

    ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್ ಆಗಿದ್ದಾರೆ. ತೀರಾ ಕಡುಗಷ್ಟದಿಂದ ಈ ಹಂತ ತಲುಪಿರುವ ಯಶ್ ಒಂದೊಂದು ಘಳಿಗೆಯಲ್ಲಿ ಬಿಡುಬೀಸಾಗಿ ಮಾತಾಡಿದರೂ ದುರಹಂಕಾರ ಪ್ರದರ್ಶಿಸಿದವರಲ್ಲ. ಆದರೆ, ಅಂಥಾ ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಅವರ ಇತ್ತಿತ್ತಲಾಗಿನ ಅವತಾರ ಕಂಡು ಖುದ್ದು ಯಶ್ ಅಭಿಮಾನಿಗಳೇ ಕಂಗಾಲಾಗಿದ್ದಾರೆ. ಏಕಾಏಕಿ ನಿರ್ಮಾಪಕಿಯಾಗಿ ಅವತಾರವೆತ್ತಿರುವ ಪುಷ್ಪಾ ಪಿಎ ಪ್ರೊಡಕ್ಷನ್ಸ್ ಅಂತೊಂದು ಬ್ಯಾನರಿನಡಿಯಲ್ಲಿ ಕೊತ್ತಲವಾಡಿಯೆಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರ ಆಗಸ್ಟ್ ಒಂದರಂದು ತೆರೆಗಾಣಲಿದೆ ಎಂಬ ವಿಚಾರವನ್ನು ಚಿತ್ರ ತಂಡವೇ ಅಧಿಕೃತವಾಗಿ ಘೋಶಿಸಿದೆ. ಆದರೆ, ಸಿನಿಮಾ ಬಗ್ಗೆ ಹುಟ್ಟಿಕೊಳ್ಳಬೇಕಿದ್ದ ಚರ್ಚೆಗಳೆಲ್ಲವನ್ನೂ ಹಠಾತ್ ನಿರ್ಮಾಪಕಿ ಪುಷ್ಪಾ ಮೇಡಮ್ಮು ಲಂಗು ಲಗಾಮಿಲ್ಲದ ಮಾತುಗಳ ಮೂಲಕ ಮತ್ತೊಂದು ದಿಕ್ಕಿನತ್ತ ಹೊರಳಿಸಿ ಬಿಟ್ಟಿದ್ದಾರೆ!

    yashmother 1612013899ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಪಕಿಯಾಗಿದ್ದಾರೆಂಬ ವಿಚಾರ ಹೊರ ಬಿದ್ದಾಕ್ಷಣದಿಂದಲೂ ಸಹಜವಾಗಿಯೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆ ನಂತರ ಪುಷ್ಪಾ ಅರುಣ್ ಕುಮಾರ್ ಪತ್ರಿಕಾ ಗೋಷ್ಠಿ ನಡೆಸಿದಾಗ ಆಕೆ ಮಾತಾಡಿದ ರೀತಿ ಕಂಡು ಪಾರ್ವತಮ್ಮ ರಾಜ್ ಕುಮಾರ್ ಥರದ ವಿರಳ ನಿರ್ಮಾಪಕಿಯರ ಸಾಲಿನಲ್ಲಿ ನಿಲ್ಲುತ್ತಾರೆಂಬಂಥಾ ಸಕಾರಾತ್ಮಕ ಮ ಆತುಗಳು ಸಾಮಾಜಿಕ ಜಾಕಲತಾಣದ ಮೂಲಕ ಕೇಳಿ ಬಂದಿದ್ದವು. ಆದರೆ, ಬರ ಬರುತ್ತಾ ಈಕೆ ಮಾಧ್ಯಮದವರನ್ನು ಮಾತಾಡಿಸುವ ರೀತಿ, ಅವರ ಪ್ರಶ್ನೆಗಳಿಗೆ ಉತ್ತರಿಸುವ ಪರಿ ಕಂಡು ಎಲ್ಲೋ ಲಯ ತಪ್ಪಿದೆಯೆಂಬ ಭಾವವೊಂದು ಪ್ರಜ್ಜಾವಂತ ಸಿನಿಮಾ ಪ್ರೇಮಿಗಳನ್ನು ಕಾಡಲಾರಂಭಿಸಿತ್ತು. ಅದಾಗಿ ವಾರದೊಪ್ಪತ್ತಿನಲ್ಲಿಯೇ ಈಕೆ ತ್ತಿದ ಅವತಾರ ಕಂಡವರಿಗೆಲ್ಲ ಇದು ದುರಹಂಕಾರದ ಪರಾಕಾಷ್ಠೆ ಎಂಬಂಥಾ ಭಾವ ಗಾಢವಾಗಿಯೇ ಕಾಡಿದೆ!

    yash mother pushpa new production house startಅದ್ಯಾವುದೋ ಚಾನೆಲ್ಲಿನ ವರದಿಗಾರ್ತಿಯೊಬ್ಬಾಕೆ ಅದೇನೋ ಪ್ರಶ್ನೆ ಕೇಳುತ್ತಾಳೆ. ಅದಕ್ಕೆ ಪುಷ್ಪಾ ಮೇಡಮ್ಮು `ನಾವು ಒಕ್ಕಲಿಗರು ಗೊತ್ತಲ್ವಾ ಡಂಡಂ ದಶಗುಣಂ’ ಎಂಬರ್ಥದಲ್ಲಿ ಮಾತಾಡಿದ್ದಾರೆ. ಅದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಶೈಲಿಯ ಮಾತುಗಳ ಉದಾಹರಣೆ ಕೊಟ್ಟು ಸಮಜಾಯಿಷಿ ಕೊಡುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದಾರೆ. ಇಂಥಾದ್ದೊಂದು ಮಾತಾಡುವ ಮೂಲಕ ಪುಷ್ಪಾ ತಮ್ಮ ಘನತೆಯನ್ನು ಗವಾಳಿಗೆ ತೂರುವ ಮೂಲಕ ಯಶ್ ಹೆಸರಿಗೂ ಮಸಿ ಬಳಿಯೋ ಕೆಲಸ ಮಾಡಿದ್ದಾರೆ. ಸಹಜವಾಗಿಯೇ ಈ ಮಾತಿನ ಕಾರಣದಿಂದ ಒಂದಷ್ಟು ಮೂದಲಿಕೆಗಳಿಗೂ ತುತ್ತಾಗಿದ್ದಾರೆ. ಸಾರ್ವಜನಿಕವಾಗಿ ಹೇಗೆ ಮಾತಾಡಬೇಕು, ಏನನ್ನು ಮಾತಾಡಬೇಕೆಂಬ ಕನಿಷ್ಟ ತಿಳಿವಳಿಕೆ ಇಲ್ಲದ ಈಕೆ ಅದೆಂಥಾ ಸಿನಿಮಾ ನಿರ್ಮಾಣ ಮಾಡುತ್ತಾರೋ ಭಗವಂತನೇ ಬಲ್ಲ. ತಾನು ಯಶ್‌ನಂಥಾ ಸೂಪರ್ ಸ್ಟಾರ್ ತಾಯಿಯಾದ್ದರಿಂದ ಏನು ಮಾತಾಡಿದರೂ ನಡೆಯುತ್ತದೆಂಬಂಥಾ ದಾಷ್ಟ್ಯ ಈಕೆಗಿದ್ದಂತಿದೆ. ಆದರೆ, ಈಗ ಯಶ್ ಏರಿರುವ ಎತ್ತರವಿದೆಯಲ್ಲಾ? ಅದು ಕನ್ನಡದ ಸಿನಿಮಾ ಪ್ರೇಮಿಗಳು ನೀಡಿರುವ ಪ್ರೀತಿಯ ಭಿಕ್ಷೆಯಿಂದ ಸಿಕ್ಕ ಪಟ್ಟವೆಂಬ ವಾಸ್ತವ ಈಕೆಗೆ ಅರಿವಿದ್ದಂತಿಲ್ಲ.

    pushpa arunkumar2552025m1ಅಷ್ಟಕ್ಕೂ ಯಶ್ ಒಕ್ಕಲಿಗನೆಂಬ ಕಾರಣಕ್ಕೆ ಯಾವನೂ ಅಭಿಮಾನಿಯಾಗಿಲ್ಲ. ಆತನೋರ್ವ ನಟನೆಂಬ ಕಾರಣದಿಂದಷ್ಟೇ ಕನ್ನಡಿಗರು ಅಪ್ಪಿಕೊಂಡು ಬೆಳೆದಿದ್ದಾರಷ್ಟೆ. ಹಾಗೇನಾದರೂ ಯಶ್ ಅವಕಾಶಕ್ಕಾಗಿ ಸಷರ್ಕಸ್ಸು ನಡೆಸುತ್ತಿದ್ದಾಗ ಪುಷ್ಪಾ ಮೇಡಮ್ಮು ದಂಡಂ ದಶಗುಣಂ ಎಂಬಂಥಾ ತಿಮಿರು ತೋರಿಸಿದ್ದರೆ ತಿಪ್ಪೆಯೇ ಗತಿಯಾಗುತ್ತಿತ್ತು. ಹೀಗೆ ಜವಾಬ್ಧಾರಿಯುತ ಜಾಗದಲ್ಲಿ ನಿಂತ ಪುಷ್ಪಾ ಬಾಯಿಂದ ಇಂಥಾದ್ದೊಂದು ಮಾತು ಬರಲು ಹೇಗೆ ಸಾಧ್ಯ ಅಂತೊಂದು ಪ್ರಶ್ನೆ ಸಿನಿಮಾ ಪ್ರೇಮಿಗಳನ್ನು ಕಾಡಿದೆ. ಅದಕ್ಕುತ್ತರವ ಆಗಿ ನಿಲ್ಲೋದು ಮಗ ನಟನಾಗುವ ಮುನ್ನ ಪುಷ್ಪಾ ನಡೆಸುತ್ತಿದ್ದ ಚೀಟಿ ವ್ಯವಹಾರ. ಆ ವ್ಯವಹಾರದಲ್ಲಿ ಸಾಕಷ್ಟು ಲಫಡಾ ನಡೆಸಲಾಗಿತ್ತೆಂಬಂಥಾ ಆರೋಪಗಳು ಆರಂಭದಿಂದಲೂ ಕೇಳಿ ಬಂದಿದ್ದವು. ಹಾಗೆ ಚೀಟಿ ಕಟ್ಟಿಸಿಕೊಂಡು ಕೈಯೆತ್ತೋ ಘಳಿಗೆಯಲ್ಲಿ ಈಕೆ ದಂಡಂ ದಶಗುಣಂ ಫಾರ್ಮುಲಾವನ್ನು ಬಳಸಿ ಅಭ್ಯಾಸವಾಗಿರಲಿಕ್ಕೂ ಸಾಕು!

    1200 675 24221449 thumbnail 16x9 newssssಆದರೆ, ಸಿನಿಮಾ ರಂಗದಲ್ಲಿ ಇಂಥಾ ದುರಹಂಕಾರ ವರ್ಕೌಟ್ ಆಗುವುದಿಲ್ಲ.ಹೀಗೆ ಮೆರೆದ ಮಂದಿ ಗಾಂಧಿ ನಗರದ ಡಸ್ಟ್ ಬಿನ್ನಿನಲ್ಲಿ ಮಿಸುಕಲೂ ಸಾಧ್ಯವಾಗದಂತೆ ಜೀರ್ಣವಾಗಿ ಹೋಗಿದ್ದಾರೆ. ಅಂಥಾದ್ದೊಂದು ವಾಸ್ತವವನ್ನು ಯಶ್ ಅಮ್ಮ ತುರ್ತಾಗಿ ಅರಿತುಕೊಳ್ಳಬೇಕಿದೆ. ಅದು ಬಿಟ್ಟು ಜಾತಿ ಮತ್ತು ಪಾಳೇಗಾರಿಕೆಯ ಪಟ್ಟುಗಳನ್ನು ಪ್ರದರ್ಶಿಸಿದರೆ ಗಾಂಧಿನಗರದಲ್ಲಿ ಕಳೆದುಕೊಂಡಿದ್ದನ ನು ಮತ್ತೆ ಚೀಟಿ ವ್ಯವಹಾರಕ್ಕಿಳಿದು ಸಂಪಾದಿಸಬೇಕಾಗಿ ಬಂದರೂ ಅಚ್ಚರಿಯೇನಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಈಕೆ ಮಾಧ್ಯಮದ ಮಂದಿಯನ್ನು ಮುಖಾಮುಖಿಯಾಗೋ ವಿಚಾರದಲ್ಲಿ ಅಂಬಿಯನ್ನು ಅನುಕರಿಸಲು ಹವಣಿಸುತ್ತಿರುವಂತಿದೆ. ಈಗಿನ ದೃಷ್ಯ ಮಾಧ್ಯಮದ ಪ್ರತಿನಿಧಿಗಳಂತೂ ಇಂಥವರ ಮುಂದೆ ದೈನೇಸಿಯಂತೆ ನಿಂತು ಬಿಡುತ್ತಾರೆ. ಈ ಕಾರಣದಿಂದಲೇ ಪುಷ್ಟಾ ಥರದವರು ತಿರ್ಕೆ ದೌಲತ್ತು ಪ್ರದರ್ಶಿಸುತ್ತಾರೆ. ಇನ್ನಾದರೂ ಈಕೆ ಘನತೆವೆತ್ತ ಮಾತು ವ ರ್ತನೆಗಳೊಂದಿಗೆ ಕಾಣಿಸಿಕೊಂಡರೆ ನಿರ್ಮಾಪಕಿಯಾಗಿ ಗೆಲುವು ಸಿಗುತ್ತದೋ ಇಲ್ಲವೋ; ರಾಕಿಂಗ್ ಸ್ಟಾರ್ ಯಶ್ ಸಾರ್ವಜನಿಕ ಮುಜುಗರದಿಂದಾದರೂ ತಪ್ಪಿಸಿಕೊಳ್ಳುವ ಸಾಧ್ಯತೆಗಳಿದ್ದಾವೆ!

    #kothalavadi #pushpaarunkumar #rackingstaryash #yashmother kfi sandalwood yash
    Share. Facebook Twitter LinkedIn WhatsApp Telegram Email
    Previous Articlesapthami gowda: ತೆಲುಗು ಚಿತ್ರರಂಗದಲ್ಲಿ ಭಾರೀ ಹಿನ್ನಡೆ!
    Next Article madenuru manu: ಕನಸಿಗೆ ಕಿಚ್ಚಿಟ್ಟ ಕಾಮದ ಅಮಲು!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026

    Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!

    01/01/2026
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.