Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»kaage bangara movie: ಇದು ರಾಯಲ್ ಸೋಲಿನ ಪರಿಣಾಮವಾ?
    ಸ್ಪಾಟ್ ಲೈಟ್

    kaage bangara movie: ಇದು ರಾಯಲ್ ಸೋಲಿನ ಪರಿಣಾಮವಾ?

    By Santhosh Bagilagadde01/07/2025Updated:01/07/2025
    Facebook Twitter Telegram Email WhatsApp
    966d5703 9deb 4bca bd1b 00207baed33b 1
    Share
    Facebook Twitter LinkedIn WhatsApp Email Telegram

    ಕನ್ನಡದ ಮಟ್ಟಿಗೆ ಹೊಸಾ ಹೊಳಹು ಹೊಂದಿರುವ, ತನ್ನದೇ ಆದ ಶೈಲಿಯೊಂದನ್ನು ಸಿದ್ಧಿಸಿಕೊಂಡಿರುವ ಅಪರೂಪದ ನಿರ್ದೇಶಕ ಸೂರಿ. ರಾ ದೃಷ್ಯಾವಳಿಗಳ ಮೂಲಕವೇ ಭರಪೂರ ಭಾವನೆಗಳನ್ನು ನೋಡುಗರ ಎದೆ ತುಂಬಿಸಬಲ್ಲ ದೊಡ್ಡ ಶಕ್ತಿ ಸೂರಿಯ ಪಾಲಿಗೆ ಸ್ವಂತ. ಇಂಥಾ ಸೂರಿ ಇತ್ತೀಚಿನ ವರ್ಷಗಳಲ್ಲಿ ಖಾಸಗೀ ಬದುಕಿನ ಹಳವಂಡಗಳಲ್ಲಿ ಕಳೆದು ಹೋದರಾ? ಹೊಸಾ ಅಲೆ, ಪ್ಯಾನಿಂಡಿಯಾ ಭರಾಟೆಗಳ ನಡುವೆ ಕಾಲೂರಿ ನಿಂತು ಕದನಕ್ಕಿಳಿಯಲು ಸಾಧ್ಯವಾಗದೆ ಮೌನಕ್ಕೆ ಜಾರಿದರಾ? ಹೀಗೆ ಅವರನ್ನು ಬೇಷರತ್ತಾಗಿ ಮೆಚ್ಚಿಕೊಳ್ಳುವವರನ್ನೆಲ್ಲ ನಾನಾ ಪ್ರಶ್ನೆಗಳು ಕಾಡುತ್ತಿವೆ. ಅಷ್ಟಕ್ಕೂ ಸೂರಿ ಪುಷ್ಕಳವಾದೊಂದು ಗೆಲುವು ಕಾಣದೆ ಹಲವಾರು ವರ್ಷಗಳೇ ಕಳೆದಿವೆ. ಟಗರು ಚಿತ್ರವೇ ಕೊನೆ; ಆ ನಂತರ ಮತ್ತೊಂದು ಗೆಲುವು ಸುಕ್ಕಾ ಸೂರಿಯ ಪಾಲಿಗೆ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ವಾತಾವರಣದ ನಡುವಲ್ಲಿಯೂ ಅವರ ಹೊಸಾ ಹೆಜ್ಜೆಗಾಗಿ ಕಾದು ಕೂತವರಿಗೆಲ್ಲ ಮತ್ತೊಂದು ನಿರಾಸೆ ಎದುರಾಗಿದೆ!

    406545 kaaage bangaraಕಳೆದ ವರ್ಷದ ಮೇ ತಿಂಗಳ ಹೊತ್ತಿಗೆಲ್ಲ ಸೂರಿ ಜಯಣ್ಣ ಕಂಬೈನ್ಸ್ ನಿರ್ಮಾಣದಲ್ಲೊಂದು ಸಿನಿಮಾ ಮಾಡುತ್ತಿರೋದರ ಬಗ್ಗೆ ಸುದ್ದಿಯಾಗಿತ್ತು. ಆ ಸಿನಿಮಾಗೆ ಕಾಗೆ ಬಂಗಾರ ಎಂಬ ಶೀರ್ಷಿಕೆ ನಿಗಧಿಯಾಗಿತ್ತು. ಕೆಂಡಸಂಪಿಗೆಯ ಪ್ರಭೆಯಲ್ಲಿಯೇ ಕಾಗೆ ಬಂಗಾರ ಅಂತೊಂದು ಗುಂಗು ಹಿಡಿಸಿದ್ದವರು ಸೂರಿ. ಕೆಂಡಸಂಪಿಗೆ ಚಿತ್ರದ ಮೂಲಕ ಮತ್ತೊಂದು ಆಯಾಮದ ಪ್ರತಿಭೆ ಪ್ರದರ್ಶಿಸಿದ್ದ ಸೂರಿ, ಆ ಕಥೆಯ ಟಿಸಿಲುಗಳನ್ನು ನೋಡುಗರ ಕಲ್ಪನೆಗೆ ಹಬ್ಬಿಸಿ ಬಿಟ್ಟಿದ್ದರು. ಆ ಮೂಲಕವೇ ಕುತೂಹಲ ಮೂಡಿಸಿದ್ದ ಕಾಗೆ ಬಂಗಾರ ಚಿತ್ರಕ್ಕೆ ಕಳೆದ ವರ್ಷ ಕಡೆಗೂ ಜೀವ ಬಂದಿತ್ತು. ವಿಶೇಷವೆಂದರೆ, ಈ ಚಿತ್ರಕ್ಕೆ ವಿರಾಟ್ ನಾಯಕನಾಗಿ ನಿಕ್ಕಿಯಾಗಿದ್ದ. ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಳು. ಇನ್ನೇನು ಈ ವರ್ಷದ ಮಧ್ಯ ಭಾಗದೊಳಗಾಗಿ ಕಾಗೆ ಬಂಗಾರದ ಚಿತ್ರೀಕರಣ ಚಾಲೂ ಆಗುತ್ತದೆಂಬ ವಾತಾವರಣವಿತ್ತು. ಇದೀಗ ಈ ಸಿನಿಮಾ ದಿಕ್ಕಿನಿಂದ ಮತ್ತೊಂದು ನಿರಾಶಾದಾಯಕ ಸುದ್ದಿ ಜಾಹೀರಾಗಿದೆ.

    yuva rajkumar pairs up with ritanya vijay kumar for duniya suri directorial kaage bangara part 3 118202587ಕಳೆದ ಫೆಬ್ರವರಿ ತಿಂಗಳಲ್ಲಿಯೇ ಕಾಗೆ ಬಂಗಾರದಿಂದ ವಿರಾಟ್ ಔಟ್ ಆಗಿದ್ದಾನೆಂಬ ಗುಸು ಗುಸು ಕೇಳಿ ಬರಲಾರಂಭಿಸಿತ್ತು. ಇದೀಗ ಬಹುತೇಕ ಆ ಸುದ್ದಿ ಖಚಿತವಾಗಿದೆ. ಕಿಸ್ ಅಂತೊಂದು ಚಿತ್ರದ ಮೂಲಕ ಕನ್ನಡ ಸಿನಿಮಾಸಕ್ತರ ಗಮನ ಸೆಳೆದಿದ್ದ ಹುಡುಗ ವಿರಾಟ್. ಆ ಸಿನಿಮಾ ಕಾಲದಲ್ಲಿ ಈ ಹುಡುಗ ಇದ್ದ ರೀತಿಗೂ, ಈಗಿನ ಸ್ಥಿತಿಗತಿಗಳಿಗೂ ಅಜಗಜಾಂತರ ವ್ಯತ್ಯಾಸಗಳಿದ್ದಾವೆ. ಇಂಥಾ ವಿರಾಟ್ ದರ್ಶನ್ ಸಹೋದರ ನಿರ್ದೇಶನ ಮಾಡಿದ್ದ ರಾಯಲ್ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ. ಆದರೆ, ಆ ಚಿತ್ರವನ್ನು ದಾಸನ ಭಕ್ತರಿಂದಲೂ ಬಚಾವು ಮಾಡಲಾಗಿಲ್ಲ. ಯಾವಾಗ ರಾಯಲ್ ದಯನೀಯವಾಗಿ ಸೋಲು ಕಂಡಿತೋ, ಆ ಕ್ಷಣದಿಂದಲೇ ನಿರ್ಮಾಪಕ ಜಯಣ್ಣ ನಿರ್ಧಾರ ಬದಲಿಸಿದಂತಿದೆ. ಅದರ ಫಲವಾಗಿಯೇ ವಿರಾಟ್ ಔಟ್ ಆಗಿದ್ದಾನೆ. ಆ ಜಾಗಕ್ಕೆ ಯುವ ರಾಜ್ ಕುಮಾರ್ ಬರುತ್ತಾನೆಂಬಂಥಾ ಸುದ್ದಿಕಯಿದೆ. ಸದ್ಯದ ಮಟ್ಟಿಗೆ ರಾಯಲ್ ಸೋಲಿನಿಂದ ಕಂಗೆಟ್ಟಿರುವ ವಿರಾಟ್, ಮತ್ತೊಂದು ಚಿತ್ರ ಕೈ ತಪ್ಪಿದ್ದರಿಂದಾಗಿ ಕಳವಳಗೊಂಡಿದ್ದಾನೆ. ಈ ಸಂಬಂಧವಾಗಿ ಜಯಣ್ಣನ ಮೇಲೆ ವಿರಾಟ್ ಮುನಿಸಿಕೊಂಡಿದ್ದಾನೆಂಬ ಮಾತುಗಳೂ ಹರಿದಾಡುತ್ತಿವೆ.

    director duniya suri next film kage bangara will be in comedy genre 74300579ಹಾಗಾದರೆ, ಯುವ ರಾಜ್ ಕುಮಾರ್ ನಾಯಕನಾಗಿಯಾದರೂ ಕಾಗೆ ಬಂಗಾರ ಬರಖತ್ತಾಗುತ್ತಾ ಅಂತ ನೋಡ ಹೋದರೆ, ಆ ದಿಕ್ಕಿನಲ್ಲಿಯೂ ಸಕಾರಾತ್ಮಕ ವಾತಾವರಣ ಕಾಣಿಸುತ್ತಿಲ್ಲ. ಅಲ್ಲಿಗೆ ಪ್ರತಿಭಾನ್ವಿತ ನಿರ್ದೇಶಕ ಸೂರಿ ಪಾಲಿನ ವನವಾಸ ಈ ವರ್ಷವೂ ಮುಂದುವರೆದಂತಿದೆ. ಟಗರು ಚಿತ್ರದ ದೊಡ್ಡ ಗೆಲುವಿನ ನಂತರ, ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನಿರ್ದೇಶಿಸಿದ್ದರು. ಆದರದು ಹೇಳಿಕೊಳ್ಳುವಂಥಾ ಗೆಲುವು ಕಾಣಲಿಲ್ಲ. ಅದರ ಬೆನ್ನಲ್ಲಿಯೇ ಸೂರಿ ಮಾಡಿಕೊಂಡ ಮಹಾ ಯಡವಟ್ಟಿನ ಹೆಸರು `ಬ್ಯಾಡ್ ಮ್ಯಾನರ್ಸ್’. ಬಹುಶಃ ಅಭರೀಶ್ ಪುತ್ರ ಅಭಿಶೇಕನ ಅಸಲೀ ಸಾಮರ್ಥ್ಯವನ್ನು ಸಲೀಸಾಗಿ ಅಂದಾಜಿಸಿದ್ದ ಸೂರಿ ಸುಮಾರಾದ ದೃಷ್ಯ ಕಟ್ಟಿದ್ದರೇನೋ… ಆ ಕಥೆಗೂ ಅಭಿಶೇಕನ ನಟನೆಯ ಪಾಂಡಿತ್ಯಕ್ಕೂ ಹೋಲಿಕೆಯಾಗಲೆ ಬ್ಯಾಡ್ ಮ್ಯಾನರ್ಸ್ ಕೂಡಾ ಕವುಚಿಕೊಂಡಿತ್ತು.

    465446888 9046052635445185 7913864947537076994 nಅದಾದ ನಂತರ ಮತ್ತೆ ಸಾವರಿಸಿಕೊಂಡು ಎದ್ದು ನಿಲ್ಲಲು ಅದೇಕೋ ಸೂರಿಗೆ ಸಾಧ್ಯವಾಗುತ್ತಿಲ್ಲ. ಈ ಕ್ಷಣಕ್ಕೂ ಎಲ್ಲ ವ್ಯಾಕುಲಗಳನ್ನು ಕೊಡವಿಕೊಂಡು ಎದ್ದು ನಿಂತರೆ ಸೂರಿ ಖಂಡಿತವಾಗಿಯೂ ಬೆರಗು ಮೂಡಿಸಬಲ್ಲ ಸಿನಿಮಾ ಮಾಡ ಬಲ್ಲರು. ಒಂದು ಧಾಟಿಯ ಹ್ಯಾಂಗೋವರ್ ಅನ್ನು ದಾಟಿಕೊಂಡರೆ, ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಬಲ್ಲ ಕಸುವು ಖಂಡಿತವಾಗಿಯೂ ಸೂರಿಗಿದೆ. ಆದರೆ, ಒಂದು ಸಿನಿಮಾದ ನಂಟು ಕಡಿದುಕೊಂಡು, ಹೊಸಾ ಸೃಷ್ಟಿಗೆ ಅಣಿಗೊಳ್ಳುವ ಅವಕಾಶ ಸೂರಿ ಪಾಲಿಗೆ ಒದಗುತ್ತಲೇ ಇಲ್ಲ. ಒಂದು ಕೆಂಡಸಂಪಿಗೆ ಗೆಲ್ಲುತ್ತಲೇ ಸೂರಿ ಗಿಣಿಮರಿ ಕೇಸಿನ ಗುಂಗಿಗೆ ಜಾರುತ್ತಾರೆ. ಕಾಗೆ ಬಂಗಾರದತ್ತ ಆಕರ್ಷಿತರಾಗುತ್ತಾರೆ. ಹೀಗೆ ಕಥೆಯೊಂದರ ಕೊಂಬೆ ಕೋವೆಗಳಲ್ಲಿ ಅವರ ಪ್ರತಿಭೆ ಎಂಬುದು ನಿತ್ರಾಣವಾಗಿ ನೇತುಬಿದ್ದಂತೆ ಭಾಸವಾಗುತ್ತದೆ. ವಿರಾಟ್ ಔಟ್ ಆದರೂ ಕೂಡಾ ಯುವನ ಜೊತೆಗಾದರೂ ಕಾಗೆ ಬಂಗಾರ ಕಳೆಗಟ್ಟಿಕೊಳ್ಳುವಂತಾದರೆ, ಅಷ್ಟರ ಮಟ್ಟಿಗೆ ಸೂರಿ ಬಚಾವಾದಂತಾಗುತ್ತದೆ!

    #duniyasuri #kaagebangara #kendasanpige #ritanyavijaykumar #sukkasoori #tagaru cinishodha kfi sandalwood virat
    Share. Facebook Twitter LinkedIn WhatsApp Telegram Email
    Previous Articlesumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ!
    Next Article interval movie: ಇದು ಅಚ್ಚರಿ ಮೂಡಿಸೋ ಸಿನಿಮಾ ಧ್ಯಾನ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    09/12/2025

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.