Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಜಾಪಾಳ್ ಜಂಕ್ಷನ್»darshan gang: ಅದು ಶೆಡ್ಡಲ್ಲ ಅಮಾಯಕರ ಬಲಿಪೀಠ!
    ಜಾಪಾಳ್ ಜಂಕ್ಷನ್

    darshan gang: ಅದು ಶೆಡ್ಡಲ್ಲ ಅಮಾಯಕರ ಬಲಿಪೀಠ!

    By Santhosh Bagilagadde19/06/2024Updated:19/06/2024
    Facebook Twitter Telegram Email WhatsApp
    d3abeffe c5d0 4312 8645 4061fb357fdf
    Share
    Facebook Twitter LinkedIn WhatsApp Email Telegram

    ಕೀರ್ತಿ ಶನಿ ನೆತ್ತಿಯೇರಿ ಕುಳಿತಾಗ ಎಂಥೆಂಥಾ ಘಟಾನುಘಟಿಗಳೆಲ್ಲ ಹಾಳಾಗಿ ಹೋದದ್ದಿದೆ. ಅದರಲ್ಲಿಯೂ ಈ ಸಿನಿಮಾ ಎಂಬ ಭ್ರಾಮಕ ಜಗತ್ತಿನಲ್ಲಿ ಸಿಕ್ಕ ಗೆಲುವನ್ನು ಸಂಭಾಳಿಸೋದೇ ಒಂದು ಸಾಹಸ. (kannada film industry) ಕನ್ನಡದ ಮಟ್ಟಿಗೆ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಥರದ ಕೆಲವೇ ಕೆಲ ನಟರಿಗಷ್ಟೇ ಅಂಥಾದ್ದೊಂದು ಸಮಚಿತ್ತ ದಕ್ಕಿದೆ. ಅದರಾಚೆಗೆ ಗೆಲುವು ಕಾಣುತ್ತಲೇ ಹೀನಾಮಾನ ಮೆರೆದು ಗಟಾರ ಸೇರಿದ ನಟರಿಗೂ ಇಲ್ಲ ಬರವಿಲ್ಲ. ಹಾಗಿರುವಾಗ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರುವ, ಬಾಕ್ಸಾಫೀಸ್ ಸುಲ್ತಾನ ಅನ್ನಿಸಿಕೊಂಡಿರುವ ದರ್ಶನ್ ಹಾಳಾಗದೆ ಇನ್ನೇನಾಗಿಯಾನು? ಸಿನಿಮಾ ರಂಗದಲ್ಲಿ ಒಂದು ಹಂತ ತಲುಪಿದ ಬಳಿಕ ಓರ್ವ ನಟನ ಸುತ್ತಾ ಎಂಥವರಿದ್ದಾರೆಂಬುದರ ಮೇಲೆ ಆತನ ವ್ಯಕ್ತಿತ್ವ, ಭವಿಷ್ಯ ನಿರ್ಧಾರವಾಗುತ್ತೆ. ದುರಂತವೆಂದರೆ, ದುರಹಂಕಾರಿ ದರ್ಶನ್ ವಲಯದಲ್ಲಿ ಗುಡ್ಡೆಬಿದ್ದಿದ್ದದ್ದು ಹಣವಂತ ಪೊರ್ಕಿಗಳು ಮತ್ತು ಅಪ್ಪಟ ಸೈಕೋಗಳ ಪಟಾಲಮ್ಮು!

    1200 675 21728877 thumbnail 16x9 sefedddಹಾಗೆ ನೋಡಿದರೆ, ಆರಂಭದ ದಿನಗಳಲ್ಲಿ ದರ್ಶನ್ ಸುತ್ತ ತಲೆ ನೆಟ್ಟಗಿರುವ ಆಸಾಮಿಗಳಿದ್ದದ್ದು ಸತ್ಯ. ಬರಬರುತ್ತಾ ಎಣ್ಣೆ ಏಟಲ್ಲಿ ಸಿಕ್ಕವರನ್ನೆಲ್ಲ ಸ್ಲಂ ಸಂಸ್ಕøತದಲ್ಲಿ ನಿಂಧಿಸುತ್ತಾ, ಕೈಗೆ ಸಿಕ್ಕವರನ್ನು ಸಾಯುವಂತೆ ಬಡಿಯಲಾರಂಭಿಸಿದನಲ್ಲಾ ದರ್ಶನ್? ಈ ಅಟಾಟೋಪ ನೋಡಿ ಸುಸ್ತಾದ ಒಂದಷ್ಟು ಮಂದಿ ಯಾವತ್ತೋ ಕಳಚಿಕೊಂಡಿದ್ದಾರೆ. ದರ್ಶನ್ ಯಾವ ಹಂತ ತಲುಪಿಕೊಂಡನೆಂದರೆ, ಬುದ್ಧಿ ಹೇಳೋ ಧೈರ್ಯ ಮಾಡುವವರ್ಯಾರೂ ಇರಲಿಲ್ಲ. ಅಕಸ್ಮಾತು ಯಾವನಾದರೂ ತಿಳಿಹೇಳಲು ಮುಂದಾದರೆ ಅದನ್ನು ಕೇಳಿಸಿಕೊಳ್ಳುವ ಸೈರಣೆಯೂ ಆತನಿಗಿರಲಿಲ್ಲ. ಕೊನೆ ಕೊನೆಗೆ ಹಣವಂತ ಪುಂಡರು, ದಗಲ್ಬಾಜಿಗಳು, ವಿಕೃತ ಕ್ರಿಮಿಗಳು ಮತ್ತು ಗಾಂಜಾ ಏಟಿನ ಸೈಕೋಗಳಷ್ಟೇ ದರ್ಶನ್ ಅಂತಃಪುರದಲ್ಲಿ ಉಳಿದುಕೊಂಡಿದ್ದರು.

    65558298ಅಂಥಾದ್ದೊಂದು ಸೈಕೋ ಸಂತಾನವನ್ನೀಗ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಆತ ಧನರಾಜ್ ಅಲಿಯಾಸ್ ನಾಯಿ ರಾಜು. ಮೊನ್ನೆ ದಿನ ದರ್ಶನ್ ಗ್ಯಾಂಗು ಪಟ್ಟಣಗೆರೆ ಶೆಡ್ಡಿನಲ್ಲಿ ರೇಣುಕಾ ಸ್ವಾಮಿಯನ್ನು ಸಾಯಬಡಿದಿದ್ದರಲ್ಲಾ? ಹಾಗೆ ದರ್ಶನ್ ಗ್ಯಾಂಗಿನ ಪ್ರಹಾರದಿಂದ ರೇಣುಕನ ಪೀಚು ದೇಹ ಪ್ರಜ್ಞೆ ತಪ್ಪಿತ್ತು. ಆ ಹಂತದಲ್ಲಿ ದರ್ಶನ್ ಗ್ಯಾಂಗಿನ ಮಂದಿ ಕರೆ ಮಾಡಿದ್ದು ಇದೇ ನಾಯಿ ರಾಜನನ್ನು. ಆತ ಮೆಗ್ಗರ್ ಮೂಲಕ ವಿದ್ಯುತ್ ಶಾಕ್ ಕೊಡೋದ್ರಲ್ಲಿ ಪಂಟರ್. ಈಗ ದರ್ಶನ್ ಜೊತೆ ತಗುಲಿಕೊಂಡಿರೋ ವಿನಯ್ ನ ಅತ್ಯಾಪ್ತ ನಾಯಿ ರಾಜ. ಈತ ಬಂದವನೇ ನೆಲಕ್ಕೊರಗಿದ್ದ ರೇಣುಕಾಸ್ವಾಮಿಗೆ ಶಾಕ್ ಕೊಟ್ಟು ಎಬ್ಬಿಸಿದ್ದನಂತೆ. ಹಾಗೆ ನಿತ್ರಾಣವಾಗಿದ್ದ ರೇಣುಕನ ಮೇಲೆ ದರ್ಶನನ ಸೈಕೋ ಗ್ಯಾಂಗು ಮತ್ತೆ ಬಡಿದು ಕೊಂದು ಕೆಡವಿತೆಂಬುದು ಪೊಲೀಸರು ಕಲೆ ಹಾಕಿರುವ ಮಾಹಿತಿ.

    1718183757 darshan 2 1ಈ ನಾಯಿ ರಾಜ ರಾಜರಾಜೇಶ್ವರಿ ನಗರದಲ್ಲಿಯೇ ವಾಸವಿದ್ದಾನೆ. ಆರೋಪಿ ವಿನಯ್ ಅತ್ಯಾಪ್ತನಾದ ಈತ ಆರಂಭದಲ್ಲಿ ಡಾಗ್ ಬ್ರೀಡಿಂಗ್ ನಡೆಸುತ್ತಿದ್ದ. ಈ ಹಂನವಂತರ ಮಕ್ಕಳಿಗೆ ಸಾವಿರಗಟ್ಟಲೆ ಕೊಟ್ಟು ನಾಯಿ ಮರಿ ಸಾಕೋ ಖಯಾಲಿ ಇರುತ್ತದಲ್ಲಾ? ಅಂಥಾದ್ದೇ ಶೋಕಿ ಹೊಂದಿದ್ದ ವಿನಯನ ಸಂಪರ್ಕಕ್ಕೆ ಬಂದಿದ್ದ. ಅಲ್ಲಿಂದ ದರ್ಶನ್ ಪಾಳೆಯಕ್ಕೂ ದಾಟಿಕೊಂಡಿದ್ದ ನಾಯಿರಾಜನಿಗೆ, ದರ್ಶನ್ ಮನೆಯ ನಾಯಿಗಳ ದೇಖಾರೇಖಿ ನೋಡಿಕೊಳ್ಳೋ ಕೆಲಸ ಸಿಕ್ಕಿತ್ತು. ಹೀಗೆ ಹಗಲು ಹೊತ್ತು ದರ್ಶನ್ ಮನೆ ನಾಯಿಗಳನ್ನ ನೋಡಿಕೊಳ್ಳುತ್ತಿದ್ದ ಧನರಾಜ್, ರಾತ್ರಿಯಾಗುತ್ತಲೇ ವಿನಯ್ ಗ್ಯಾಂಗು ಸೇರಿಕೊಳ್ಳುತ್ತಿದ್ದ. ಅಲ್ಲಿ ವಿನಯ್ ತನ್ನ ವ್ಯವಹಾರ ಸಂಬಂಧಿತವಾದ ದುಶ್ಮನ್ ಗಳನ್ನು ಇದೇ ಶೆಡ್ಡಿಗೆ ಎತ್ತಾಕಿಕೊಂಡು ಬರುತ್ತಿದ್ದ. ಅಲ್ಲಿಯೂ ರೇಣುಕಾ ಸ್ವಾಮಿಗಾದಂಥಾದ್ದೇ ಪ್ರಹಾರ ನಡೆಯುತ್ತಿತ್ತು. ಒದೆ ತಿಂದು ಪ್ರಜ್ಞೆಇದವರನ್ನು ಮೆಗ್ಗರ್ ಮೂಲಕ ಎಬ್ಬಿಸೋ ಕಸುಬನ್ನು ನಾಯಿ ರಾಜ ಮಾಡುತ್ತಿದ್ದ. ಹೀರೋ ಒಬ್ಬನ ಸುತ್ತ ಇಂಥಾ ಕ್ಷುದ್ರ ಜೀವಿಗಳೇ ತುಂಬಿದ್ದರೆ ಅನಾಹುತವಲ್ಲದೇ ಬೇರೇನು ಘಟಿಸಲು ಸಾಧ್ಯ?

    challengingstardarshan darshan darshanarrest dhanraj pattanagereshed
    Share. Facebook Twitter LinkedIn WhatsApp Telegram Email
    Previous Articledarshan manager malli: ತಿರ್ಪೆ ಕಾಸಲ್ಲಿ ತೀರ್ಥ ಯಾತ್ರೆ!
    Next Article darshan case: ನಶೆಯೇರಿಸಿಕೊಂಡರೆ ದರ್ಶನ್ ಪಕ್ಕಾ ನಟೋರಿಯಸ್!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

    02/12/2025

    Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?

    10/11/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.