ಮೇಲು ನೋಟಕ್ಕೆ ಅದ್ಯಾವ ಅಲೆಯ ಭ್ರಮೆ ಹಬ್ಬಿಕೊಂಡಿದ್ದರೂ ಕೂಡಾ, ಕನ್ನಡದ ಸಿನಿಮಾ ಪ್ರೇಮಿಗಳಲ್ಲಿ ಪ್ರಯೋಗಾತ್ಮಕ ಚಿತ್ರಗಳೆಡೆಗಿನ ಬೆರಗೊಂದು ಸದಾ ಬೆಚ್ಚಗಿರುತ್ತೆ. ಎಂತೆಂಥಾ ಸವಾಲಿನ ಘಳಿಗೆಯಲ್ಲಿಯೂ ಈ ಬಗೆಯ ಸಿನಿಮಾಗಳನ್ನು ಗೆಲ್ಲಿಸಿದ ಒಂದಷ್ಟು ಉದಾಹರಣೆಗಳಿದ್ದಾವೆ. ಸದ್ಯ ಆ ಸಾಲಿಗೆ ಸೇರ್ಪಡೆಗೊಳ್ಳುವಂಥಾ ಸಕಾರಾತ್ಮಕ ಗುಣಲಕ್ಷಣಗಳನ್ನು ಒಳಗೊಂಡಂತೆ ಕಾಣುತ್ತಿರುವ ಚಿತ್ರ (ravike pfrasanga movie) `ರವಿಕೆ ಪ್ರಸಂಗ’. ಸಂತೋಷ್ ಕೊಡಂಕೇರಿ (santhosh kodankeri) ನಿರ್ದೇಶನದಲ್ಲಿ ಮೂಡಿ ಬಂದಿರುವ ರವಿಕೆ ಪ್ರಸಂಗ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಇಂಥಾ ಕಡೇ ಕ್ಷಣಗಳಲ್ಲಿ ಸಿನಿಮಾ ತಂಡ ಅತ್ಯಂತ ಕ್ರಿಯಾಶೀಲವಾಗಿ ಅಖಾಡಕ್ಕಿಳಿದು ಬಿಟ್ಟಿದೆ. ಅದರ ಭಾಗವಾಗಿಯೇ ಉಡುಪಿಯ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಮೀಟ್ ಆಂಡ್ ಗ್ರೀಟ್ ಪರಿಕಲ್ಪನೆಯಲ್ಲೊಂದು ಯಶಸ್ವೀ ಪ್ರಚಾರಕಾರ್ಯ ಸಂಪನ್ನಗೊಂಡಿದೆ.

ರವಿಕೆ ಪ್ರಸಂಗ ಚಿತ್ರತಂಡ ಈಗಾಗಲೇ ಕರ್ನಾಟಕದ ನಾನಾ ಭಾಗಗಗಳಲ್ಲಿ ವಿನೂತನ ಬಗೆಯಲ್ಲಿ ಪ್ರಚಾರ ನಡೆಸಿದೆ. ಅದರ ಭಾಗವಾಗಿಯೇ ಇತ್ತೀಚೆಗೆ ಉಡುಪಿಯ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಮೀಟ್ ಆಂಡ್ ಗ್ರೀಟ್ ನಡೆದಿದೆ. ಈ ಸಂದರ್ಭದಲ್ಲಿ ಪ್ರಧಾನ ಆಕರ್ಷಣೆಯಾಗಿದ್ದವರು ನಾಯಕಿ ಗೀತಾ ಭಾರತಿ ಭಟ್. ಈ ಮಳಿಗೆಯ ಸರಿಸುಮಾರು ಒಂಬೈನೂರಕ್ಕೂ ಹೆಚ್ಚ ಸಿಬ್ಬಂದಿಗಳು ಅತ್ಯಂತ ಉತ್ಸಾಹದಿಂದ ಇದರಲ್ಲಿ ಭಾಗಿಯಾಗಿದ್ದರು. ಅವರಿಗೆಲ್ಲ ಗೀತಾ ಭಾರತಿ ಭಟ್ ರವಿಕೆ ಪ್ರಸಂಗದ ಬಗ್ಗೆ ಒಂದಷ್ಟು ಚೆಂದದ ವಿಚಾರಗಳನ್ನು ಮನದಟ್ಟು ಮಾಡಿ ಕೊಟ್ಟರು. ಸಿಬ್ಬಂದಿಗಳೆಲ್ಲ ಗೀತಾರ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ವಿಶೇಷವೆಂದರೆ, ರವಿಕೆ ಪ್ರಸಂಗದ ಈ ಮೀಟ್ ಆಂಡ್ ಗ್ರೀಟ್ ನಲ್ಲಿ ಜಯಲಕ್ಷ್ಮಿ ಸಿಲ್ಕ್ಸ್ ಮಾಲೀಕರಾದ ವೀರೇಂದ್ರ ಹೆಗ್ಡೆ ಕೂಡಾ ಭಾಗಿಯಾಗಿದ್ದರು. ಸಾವಧಾನದಿಂದ ಎಲ್ಲ ವಿಚಾರಗಳನ್ನೂ ಕೇಳಿಸಿಕೊಂಡು ರವಿಕೆ ಪ್ರಸಂಗ ಚಿತ್ರಕ್ಕೆ ಪ್ರೀತಿಯಿಂದ ಬೆಂಬಲ ಸೂಚಿಸಿದ್ದಾರೆ. ಇದಲ್ಲದೇ ತಮ್ಮ ಸಿಬ್ಬಂದಿಗಳ ಜೊತೆಗೇ ಈ ಸಿನಿಮಾವನ್ನು ವೀಕ್ಷಿಸೋದಾಗಿಯೂ ಹೇಳಿದ್ದಾರೆ. ಈ ಒಟ್ಟಾರೆ ಪ್ರಚಾರ ಕಾರ್ಯದಲ್ಲಿ ಮನೋರಂಜನೆಗೂ ಕೊರತೆ ಇರಲಿಲ್ಲ. ರವಿಕೆ ಪ್ರಸಂಗದಲ್ಲಿ ವಿಶೇಷವಾದೊಂದು ಪಾತ್ರ ಮಾಡಿರುವ ರಘು ಪಾಂಡೇಶ್ವರ ಈ ಸಿನಿಮಾ ಬಗ್ಗೆ ಮಾತಾಡುತ್ತಲೇ ಎಲ್ಲರನ್ನೂ ನಕ್ಕು ನಲಿಯುವಂತೆ ಮಾಡಿದ್ದಾರೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!