ತೀರಾ ಹೊಸತೆನ್ನುವಂಥಾ ಸೂಕ್ಷ್ಮ ಕಥಾನಕವನ್ನು ಒಳಗೊಂಡಿರುವ ಚಿತ್ರ (ravike prasanga movie) `ರವಿಕೆ ಪ್ರಸಂಗ’. ಸಿನಿಮಾ ಒಂದನ್ನು ರೂಪುಗೊಳಿಸೋದು ಎಷ್ಟು ಕಷ್ಟದ ವಿಚಾರವೋ, ಅದನ್ನು ವ್ಯವಸ್ಥಿತವಾಗಿ ಪ್ರೇಕ್ಷಕರಿಗೆ ತಲುಪಿಸೋದೂ ಕೂಡಾ ಅಷ್ಟೇ ತ್ರಾಸದಾಯಕ ಸಂಗತಿ. ಈ ಹಾದಿಯಲ್ಲಿ ಪರಿಣಾಮಕಾರಿಯಾಗಿ ಮುಂದಡಿ ಇಡುವ ಸಿನಿಮಾಗಳು ಮಾತ್ರವೇ ಗೆಲ್ಲುತ್ತವೆಂಬಂಥಾ ವಾತಾವರಣವಿದೆ. ಈ ನಿಟ್ಟಿನಲ್ಲಿ ನೋಡೋದಾದರೆ, (director santhosh kodankeri) ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಚಿತ್ರದ್ದು ಭಿನ್ನ ಯಾನ. ಯಾಕೆಂದರೆ, ಬಿಡುಗಡೆಗೆ ಕೆಲ ದಿನಗಳು ಮಾತ್ರವೇ ಬಾಕಿ ಇರುವ ಈ ಹೊತ್ತಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಚಿತ್ರತಂಡ ಪ್ರೇಕ್ಷಕರನ್ನು ತಾಕುತ್ತಿದೆ.

ಅದರ ಭಾಗವಾಗಿಯೇ ಇತ್ತೀಚೆಗೆ ದಾವಣಗೆರೆಯ ನಮ್ಮ ಸ್ವದೇಶಿ ಸಂಸ್ಥೆಯಲ್ಲಿ ಚಿತ್ರತಂಡ ವಿಭಿನ್ನವಾಗಿ ಪ್ರಚಾರ ಕಾರ್ಯ ನಡೆಸಿದೆ. ಸೋಲಾರ್, ಯುಪಿಎಸ್ ಮುಂತಾದ ನಾನಾ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಈ ಸಂಸ್ಥೆ ಜನರೆಲ್ಲರ ಪ್ರೀತಿ ಪಾತ್ರವಾಗಿದೆ. ಸ್ವದೇಶಿ ನಿರ್ಮಿತ ಉಪಕರಣಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಸ್ವಾವಲಂಬನೆ ಸಾಧಿಸುವ ಧ್ಯೇಯದೊಂದಿಗೆ ಈ ತಂಡ ಕಾರ್ಯ ನಿರ್ವಹಿಸುತ್ತಿದೆ. ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಇಲ್ಲಿನ ಮುಖ್ಯಸ್ಥರು ಮತ್ತು ಸಿಬ್ಬಂದಿ ರವಿಕೆ ಪ್ರಸಂಗ ಚಿತ್ರತಂಡದೊಂದಿಗೆ ಕಲೆತು ಸಂಭ್ರಮಿಸಿದ್ದಾರೆ. ಈ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ್, ಜಗನ್ನಾಥ್ ಈಶ್ವರ್ ಮತ್ತು ಸಿಬ್ಬಂದಿ ರವಿಕೆ ಪ್ರಸಂಗದ ಅಚ್ಚರಿಗಳಿಗೆ ತೆರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಯಕಿ ಗೀತಾ ಭಾರತಿ ಭಟ್ ಪ್ರಧಾನ ಆಕರ್ಷಣೆಯಾಗಿದ್ದರು. ಅವರನ್ನು ಸಂಸ್ಥೆಯ ಕಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಕೊಡಂಕೇರಿ ಮತ್ತು ಗೀತಾ ಭಟ್ ರವಿಕೆ ಪ್ರಸಂಗದ ಆಂತರ್ಯದ ಬಗ್ಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಅದು ಈ ಸಂಸ್ಥೆಯವರೆಲ್ಲ ಸಿನಿಮಾ ನೋಡಲು ಕಾತರರಾಗುವಂತೆ ಮಾಡಿದ್ದು ವಿಶೇಷ. ಹೀಗೆ ಈಗಾಗಾಲೇ ಸಂತೋಷ್ ಕೊಡಂಕೇರಿ ಕರ್ನಾಟಕದಾದ್ಯಂತ ಸುತ್ತಾಡುತ್ತಾ, ರವಿಕೆ ಪ್ರಸಂಗದತ್ತ ಪ್ರೇಕ್ಷಕರು ಕಾತರರಾಗುವಂತೆ ಮಾಡುತ್ತಿದ್ದಾರೆ. ಈ ಮೂಲಕ ಬಿಡುಗಡೆಯ ಕ್ಷಣಗಳು ಹತ್ತಿರಾಗುತ್ತಿರುವ ಈ ಹೊತ್ತಿನಲ್ಲಿ ರವಿಕೆ ಪ್ರಸಂಗ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಂದಹಾಗೆ ಈ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ.

ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನ ವಿರುವ ರವಿಕೆ ಪ್ರಸಂಗಕ್ಕೆ ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ರವಿಕೆ ಪ್ರಸಂಗವನ್ನು ಚೆಂದಗಾಣಿಸಿದ್ದಾರೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!