ಪುಷ್ಪಾ ಸರಣಿ ಗೆಲುವಿಗಳ ನಂತರ ಇದೀಗ ಅಲ್ಲು ಅರ್ಜುನ್ ಮುಂದಿನ ನಡೆಗಳ ಬಗ್ಗೆ ವ್ಯಾಪಕ ಕೌತುಕ ಮೂಡಿಕೊಂಡಿದೆ. ಈ ಕ್ಷಣಕ್ಕೂ ಸರಣಿ ಹಿಟ್ ಕೊಟ್ಟ ಸುಕುಮಾರ್ ಜೊತೆಗಿನ ಸಿನಿಮಾ ಧ್ಯಾನದಲ್ಲಿರೋ ಅಲ್ಲು, ಅನಿವಾರ್ಯವಾಗೆಂಬಂತೆ ಆಟ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೋರ್ವ ತಮಿಳಿನ ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆಗೊಂದು ಚಿತ್ರಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಬಹುಶಃ ಆಟ್ಲಿ ಚಿತ್ರ ಸಮಾಪ್ತಿಯಾಗುತ್ತಲೇ ಲೋಕೇಶ್ ನಿರ್ದೇಶನದ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾವೊಂದು ಶುರುವಾದಾಕ್ಷಣವೇ ನಾಯಕಿ ಯಾರಾಗುತ್ತಾರೆಂಬ ಬಗ್ಗೆ ಚರ್ಚೆ ಹುಟ್ಟಿಕೊಳ್ಳುತ್ತೆ. ಆ ಸಾಲಿನಲ್ಲಿ ಒಂದಷ್ಟು ನಾಯಕಿಯ ಹೆಸರು ತೇಲಿ ಬರುತ್ತೆ. ಇದೇ ರೀತಿ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರೆಂಬ ಸುದ್ದಿ ಅಧಿಕೃತವೆಂಬಂತೆ ಹರಿದಾಡಿತ್ತು!
ಇಂಥಾ ಸುದ್ದಿಗಳು ಸೋಶಿಯಲ್ ಮೀಡಿಯಾ ತುಂಬೆಲ್ಲ ಹಬ್ಬಿಕೊಳ್ಳುತ್ತಲೇ ಸದರಿ ಚಿತ್ರದ ನಿರ್ಮಾಪಕರು ಎಚ್ಚೆತ್ತುಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಈ ಚಿತ್ರಕ್ಕೆ ಇನ್ನೂ ತಾರಾಗಣ ಆಯ್ಕೆ ಕಾರ್ಯ ಶುರುವಾಗಿಲ್ಲ. ಅಲ್ಲು ಅರ್ಜುನ್ ನಾಯಕ ಅನ್ನೋದ್ನ್ನು ಹೊರತುಪಡಿಸಿದರೆ, ಮಿಕ್ಕ ಪಾತ್ರಗಳಿಗೆ ಕಲಾವಿದರು ನಿಕ್ಕಿಯಾಗಿಲ್ಲ. ಅಷ್ಟಕ್ಕೂ ತಾರಾಗಣದ ಆಯ್ಕೆ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ನಾಯಕಿಯ ಆಯ್ಕೆಯಂತೂ ನಡೆದೇ ಇಲ್ಲ. ಬೆಂಕಿಯಿಲ್ಲದೆ ಹೊಗೆಯಾಡೋದಿಲ್ಲ ಎಂಬ ಪುರಾತನ ಫಾರ್ಮುಲಾವನ್ನು ಆಧರಿಸಿ ನೋಡ ಹೋದರೂ, ಶ್ರದ್ಧಾ ಕಪೂರ್ಳನ್ನು ಈ ಸನಿಮಾದ ನಾಯಕಿಯನ್ನಾಗಿಸುವ ಚರ್ಚೆಯೇ ನಡೆದಿಲ್ಲವೆಂಬ ವಿಚಾರವೂ ಜಾಹೀರಾಗುತ್ತೆ.
Seat Edge Movie: ಘೋಸ್ಟ್ ಹಂಟರ್ ದುರಂತ ಅಂತ್ಯ ಮತ್ತು ಸೀಟ್ ಎಡ್ಜ್ ಆರಂಭ!
ಹೀಗಿರೋದರಿಂದ ಶ್ರದ್ಧಾ ಕಪೂರ್ ಈ ಚಿತ್ರದ ನಾಯಕಿ ಎಂಬಂಥಾ ಕಪೋಲಕಲ್ಪಿತ ಸುದ್ದಿಗೆ ಕಿವಿಗೊಡಬೇಡಿ ಅಂತಲೂ ನಿರ್ಮಾಪಕರು ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ, ನಾಯಕಿಯನ್ನು ಹುಡುಕೋ ಕಾರ್ಯವೇ ಚಾಲೂ ಆಗಿಲ್ಲವಾ ಅಂತ ನೋಡಹೋದರೆ, ನಿರ್ದೇಶಕ ಲೋಕೇಶ್ ಕನಗರಾಜ್ ಪುಷ್ಪರಾಜ್ಗೆ ಸರಿಕಟ್ಟಾದ ಜೋಡಿ ಹುಕಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಈ ಪಾತ್ರಕ್ಕೆ ಒಗ್ಗುವಂಥಾ, ಅಲ್ಲು ಸ್ಟಾರ್ಡಮ್ಗೆ ಸರಿ ಹೊಂದುವಂಥಾ ನಾಯಕಿಯನ್ನು ಹುಡುಕುತ್ತಾ ಹೈರಾಣಾಗಿದ್ದಾರೆ. ಅಂತೂ ಬಾಲಿವುಡ್ ದಿಕ್ಕಲ್ಲಿ ಈ ಹುಡುಕಾಟವಿರೋದು ನಿಜ. ಈ ಬಾರಿ ಅಲ್ಲೂ ಅರ್ಜುನ್ಗೆ ಜೋಡಿಯಾಗಿ ಬಾಲಿವುಡ್ ಹುಡುಗಿ ಮಿಂಚೋದು ಪಕ್ಕಾ ಎಂಬ ಸುದ್ದಿ ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.
keywords: alluarjun, tollywood, lokeshkangaraj, pushpa, pushpa2

