ಚಿನ್ನಾರಿಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ್ ರಾಘವೇಂದ್ರ ಮತ್ತು ಮಕ್ಕಳ ಜೊತೆ ಸ್ಪಂದನಾ ಬ್ಯಾಂಕಾಕ್‍ಗೆ ತೆರಳಿದ್ದರು. ಸಂಸಾರದೊಂದಿಗೆ ಬೆರೆತು, ಆ ಖುಷಿಯಲ್ಲಿ ಮಿಂದೇಳುತ್ತಿದ್ದ ಸ್ಪಂದನಾ ಹೃದಯಾಘಾತದಿಂದ ಇನ್ನಿಲ್ಲವಾಗಿದ್ದಾರೆ. ಹೃದಯಾಘಾಥ ಸಂಭವಿಸಿದ ತಕ್ಷಣವೇ ಚಿಕಿತ್ಸೆ ಕೊಡಿಸಿದರೂ ಕೂಡಾ, ಯಾವ ಪ್ರಯತ್ನವೂ ಫಲಿಸದೆ ಈ ದುರಂತ ಸಂಭವಿಸಿದೆ.

ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರಮಗಳು ಸ್ಪಂದನಾ. ಅತ್ಯಂತ ಮೃದು ಮನಸಿನ, ಸರಳ ಸ್ವಭಾವದ ಸ್ಪಂದನಾರನ್ನು ಮತು ವಿಜಯ್ ರಘವೇಂದ್ರ ನಡುವೆ ಪ್ರೀತಿ ಮೂಡಿಕೊಂಡಿತ್ತು. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ 2007ರಲ್ಲಿ ವಿಜಯ್ ಮತ್ತು ಸ್ಪಂದನಾ ದಾಂಪಿಸಿರಿಸಿದ್ದರು. ಈ ದಂಪತಿಗೆ ಶೌರ್ಯ ಎಂಬ ಗಂಡು ಮಗುವೂ ಜನಿಸಿತ್ತು. ಇವವು ಮದುವೆಯಾದದ್ದು ಆಗಸ್ಟ್ ಇಪ್ಪತ್ತಾರರಂದು. ಇನ್ನೇನು ಮದುವೆ ವಾರ್ಶೀಕೋತ್ಸವಕ್ಕೆ ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿತ್ತು. ಅಷ್ಟರಲ್ಲಿ ವಿಜಯ್ ಪಾಲಿಗೆ ಜೀವಕ್ಕೆ ಜೀವವಾಗಿದ್ದ ಸ್ಪಂದನಾ ನಿಗಮಿಸಿದ್ದಾರೆ.


ಇದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಬಂದೆರಗಿದ ಮತ್ತೊಂದು ಆಘಾತ. ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಮಾದರಿ ಜೋಡಿಯಂತಿದ್ದವರು. ಮಗು ಮನಸಿನ ವಿಜಯ್ ಪಾಲಿಗೆ ಕೇವಲ ಮಡದಿಯಾಗಿರದೆ, ಅಮ್ಮನಾಗಿ, ಗೆಳತಿಯಾಗಿಯೂ ಸ್ಪಂದನಾಆಪ್ತವಾಗಿದ್ದರು. ಸಣ್ಣ ವೈಮನಸ್ಯಕ್ಕೂ ಜಾಗವಿಲ್ಲದಂತೆ ಅನ್ಯೋನ್ಯವಾಗಿದ್ದ ಈ ದಾಂಪತ್ಯದ ಮೇಲೆ ಅದ್ಯಾವ ಕೇಡಿನ ಕಣ್ಣು ಬಿತ್ತೋ ಗೊತ್ತಿಲ್ಲ; ಈ ದುರಂತ ನಡೆದು ಹೋಗಿದೆ. ಮಾವ ಪುನೀತ್ ರಾಜ್ ಕುಮಾರ್ ಮರೆಯಾದ ಆಘಾತ ಬಿಟ್ಟೂ ಬಿಡದಂತೆ ಕಾಡುತ್ತಿತ್ತು. ಅದರ ಬೆನ್ನಿಗೇ ಜೀವದಂಥಾ ಮಡದಿಯೇ ಇನ್ನಿಲ್ಲವೆಂಬ ಮತ್ತೊಂದು ಮಹಾ ಆಘಾತ ಅವರಿಗೆದುರಾಗಿದೆ. ಈ ದುಃಖವನ್ನು ದಾಟಿಕೊಳ್ಳುವ ಶಕ್ತಿ ವಿಜಯ್ ರಾಘವೇಂದ್ರ ಮತ್ತವರ ಕುಟುಂಬಕ್ಕೆ ದಕ್ಕಲೆಂಬುದು ಪ್ರಾರ್ಥನೆ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!