ನ್ನಡದಿಂದ ಸೀದಾ ತೆಲುಗಿಗೆ ಜಿಗಿದಿದ್ದ (rashmika mandanna) ರಶ್ಮಿಕಾ ಮಂದಣ್ಣಳ ಯಶಸ್ಸಿನ ನಾಗಾಲೋಟಕ್ಕೆ ಸದ್ಯದ ಮಟ್ಟಿಗೆ ಯಾವ ಅಡೆತಡೆಗಳೂ ಇದ್ದಂತೆ ಕಾಣಿಸುತ್ತಿಲ್ಲ. ಒಂದಷ್ಟು ವಿವಾದ, ಮೂದಲಿಕೆ, ವಿನಾ ಕಾರಣ ಹಬ್ಬಿಕೊಳ್ಳುವ ಥರ ಥರದ ಸುದ್ದಿಗಳಿಂದಾಗಿ ಈ ಹುಡುಗಿ ಕೊಂಚವೂ ವಿಚಲಿತಗೊಂಡಂತೆ ಕಾಣಿಸುತ್ತಿಲ್ಲ. ಒಂದು ಹಂತದಲ್ಲಿ ಬೇರೆ ಬೇರೆ ನಟಿಯರ ಹವಾ ಏಕಾಏಕಿ ಹಬ್ಬಿಕೊಂಡಿದ್ದರಿಂದಾಗಿ ಇನ್ನು ರಶ್ಮಿಕಾ ಗೆಲುವಿನ ಓಟಕ್ಕೆ ಬ್ರೇಕು ಬಿತ್ತು ಎಂಬಂಥಾ ವಿಶ್ಲೇಷಣೆಗಳು ಕೇಳಿ ಬಂದಿದ್ದವು. ಆದರೆ, ಅದ್ಯಾವುದರತ್ತಲೂ ಲಕ್ಷ್ಯ ಕೊಡದ ರಶ್ಮಿಕಾ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದ ಮೂಲಕ ಮತ್ತೊಂದು ಹಂತದ ಗೆಲುವನ್ನು ತನ್ನದಾಗಿಸಿಕೊಂಡಿದ್ದಾಳೆ!

ಹೊಸಾ ಸುದ್ದಿಯೆಂದರೆ, ಇದೀಗ ಆರಂಭಿಕ ಹಂತವನ್ನೇ ಥಂಡಾ ಹೊಡೆಸುವಂತೆ ದೊಡ್ಡ ದೊಡ್ಡ ಸಿನಿಮಾಗಳ ಅವಕಾಶ ರಶ್ಮಿಕಾಳನ್ನು ಅರಸಿ ಬರಲಾರಭಿಸಿದೆ. ಈ ಮೂಲಕ ಸೈಲೆಂಟಾಗಿಯೇ ರಶ್ಮಿಕಾ ವಿರೋಧಿಗಳಿಗೆಲ್ಲ ಟಾಂಗ್ ಕೊಟ್ಟಿದ್ದಾಳೆ. ಆರಂಭ ಕಾಲದಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಲಾರಂಭಿಸಿದ್ದ ರಶ್ಮಿಕಾಳನ್ನು ಕಂಡು ಅನೇಕರು ಕರುಬಿದ್ದರು. ಇದೀಗ ಅದೇ ಹಾದಿಯಲ್ಲಿ ಮುಂದುವರೆದು ಬಂದಿರುವ ಆಕೆ ಬಾಹುಬಲಿ ಪ್ರಭಾಸ್‍ಗೂ ನಾಯಕಿಯಾಗಿ ನಿಕ್ಕಿಯಾಗಿದ್ದಾಳೆ. ಅಂದಹಾಗೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವೀಗ ವಿರೋಧಾಭಾಸಗಳ ನಡುವೆಯೂ ದೊಡ್ಡ ಮಟ್ಟದಲ್ಲಿ ಕಮರ್ಶಿಯಲ್ ಹಿಟ್ ಆಗಿ ದಾಖಲಾಗಿದೆ.

ಹಾಗೆ ನೋಡಿದರೆ, ರಶ್ಮಿಕಾ ಮಂದಣ್ಣ ಕಿರಿಕ್ ಹುಡುಗಿ, ತಿಮಿರು ತೋರಿಸುತ್ತಾಳೆ ಅಂತೆಲ್ಲ ಹಬ್ಬಿಕೊಳ್ಳುವ ಸುದ್ದಿಗಳಲ್ಲಿ ಹುರುಳಿಲ್ಲ. ಇದುವೆರೆಗೂ ಆಕೆ ಸಿನಿಮಾ ಒಂದನ್ನು ಒಪ್ಪಿಕೊಂಡಳೆಂದರೆ, ತನ್ನ ಪಾಲಿನ ಕೆಲಸವನ್ನು ಯಾವ ಕಿರಿಕ್ಕೂ ಇಲ್ಲದಂತೆ ಮುಗಿಸಿಕೊಡುತ್ತಾ ಬಂದಿದ್ದಾಳೆ. ಇಂಥಾದ್ದೊಂದು ಸದಭಿಪ್ರಾಯ ಮೂಡಿಸದೇ ಇದ್ದಿದ್ದರೆ ಖಂಡಿತವಾಗಿಯೂ ವರ್ಷಾಂತರಗಾಳಿಂದ ಒಂದರ ಹಿಂದೊಂದರಂತೆ ಅವಕಾಶಗಳು ಆಕೆಯನ್ನು ಅರಸಿ ಬರುತ್ತಿರಲಿಲ್ಲ. ಅನಿಮಲ್ ಚಿತ್ರದ ಸಂದರ್ಭದಲ್ಲಿಯೂ ಕೂಡಾ ಹಾಗೆಯೇ ನಡೆದುಕೊಂಡಿದ್ದಾಳೆ. ಈ ಕಾರಣದಿಂದಲೇ ನಿರ್ದೇಶಕ ವಂಗ ಖುಷಿಗೊಂಡಿದ್ದಾನೆ. ಅದರ ಫಲವಾಗಿಯೇ ಸ್ಪರಿಟ್ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಬೇಕೆಂದು ನಿರ್ಧರಿಸಿದ್ದಾನೆ. ಈ ಮೂಲಕ ರಶ್ಮಿಕಾ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳು ಅವಕಾಶ ಕೂಡಿ ಬಂದಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!