ಟಿಸಿದ ಸಿನಿಮಾಗಳಿಗಿಂತ ಹೆಚ್ಚಾಗಿ, ಬಾಯಿಯ ಬಲದಿಂದಲೇ ಸದಾ ಸುದ್ದಿಯಲ್ಲಿರುವಾಕೆ ಬಾಲಿವುಡ್ ನಟಿ (kangana ranaut) ಕಂಗನಾ ರಾಣಾವತ್. ಸಾಮಾನ್ಯವಾಗಿ, ಆಡಳಿತ ಪಕ್ಷಗಳನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ವಿಮರ್ಶೆ ಮಾಡಬೇಕಾದದು ಜನರ ಜವಾಬ್ದಾರಿ. ಇಂಥಾ ಸೆಲೆಬ್ರಿಟಿಗಳು ಅನ್ನಿಸಿಕೊಂಡವರ ಮೇಲೆ ಅದರ ಭಾರ ಇನ್ನಷ್ಟು ಹೆಚ್ಚಿರುತ್ತೆ. ದುರಂತವೆಂದರೆ, ಆಡಳಿತ ಪಕ್ಷದ ವೈಫಲ್ಯಗಳ ಬಗ್ಗೆ, ಅದರ ನಡೆಗಳ ಬಗ್ಗೆ ಧ್ವನಿಯೆತ್ತುವವರ ಸಂಖ್ಯೆ ಭಾರತೀಯ ಚಿತ್ರರಂಗದಲ್ಲಿ ಕಡಿಮಯಿದೆ. ಸದ್ಯದ ಮಟ್ಟಿಗೆ ಆಳೋ ಮಂದಿಗೆ ಬಕೀಟು ಹಿರಿಯುವ ಕೆಟ್ಟ ಚಾಳಿಯೊಂದು ಅದೇ ರಂಗದಲ್ಲಿ ಶುರುವಾಗಿದೆ. ಆ ವಿಚಾರದಲ್ಲಿ ಕಂಗನಾಗೆ (kangana) ಪೈಪೋಟಿ ಕೊಡುವುದು ಅಷ್ಟು ಸಲೀಸಿನ ಸಂಗತಿಯಲ್ಲ. ಇಂತಿಪ್ಪ ಕಂಗನಾ ಆಗಾಗ ಬೇರೆ ಬೇರೆ ದಿಕ್ಕಿನಲ್ಲಿ ಬಿಡು ಬೀಸಾಗಿ ಮಾತಾಡುತ್ತಾಳೆ. ಇದೀಗ ತನ್ನ ಖಾಸಗೀ ಬುಕಿನ ಒಂದಷ್ಟು ವಿವರಗಳನ್ನು ಬಿಚ್ಚಿಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ!

ಸದಾ ಒಂದಷ್ಟು ಸಾಮಾಜಿಕ ವಿಚಾರ, ವಿತಂಡ ವಾದಗಳ ಮೂಲಕ ಸುದ್ದಿಯಲ್ಲಿರುವ ಕಂಗನಾ, ಇದೀಗ ಪ್ರೀತಿ, ಪ್ರೇಮ ಮತ್ತು ಅವುಗಳ ಬಗೆಗಿಒರುವ ತನ್ನ ಒಳ ಬೇಗುದಿಗಳನ್ನು ತೆರೆದಿಟ್ಟಿದ್ದಾಳೆ. ಅದರನ್ವಯ ಹೇಳೋದಾದರೆ, ಇದುವರೆಗಿನ ಜೀವಿತದಲ್ಲಿ ಪ್ರತೀ ಸಲವೂ ಕಂಗನಾಗೆ ನಿರಾಸೆಯಾಗಿದೆಯಂತೆ. ಪ್ರೀತಿ, ರಿಲೇಶನ್‍ಶಿಪ್ಪಿನಲ್ಲಿ ಅನೇಕರು ಮುಖ ತಿರುಗಿಸಿಕೊಂಡು ಎದ್ದು ಹೋಗಿದ್ದಾರಂತೆ. ಆದರೆ, ಇಷ್ಟೆಲ್ಲ ಯಾತನೆ ಅನುಭವಿಸಿದರೂ ಕೂಡಾ ಇದುವರೆಗೂ ತಾಉ ಮಾತ್ರ ಯಾರನ್ನೂ ಬಿಡುವ ನಿರ್ಧಾರ ಮಾಡಿಲ್ಲ ಎಂಬುದನ್ನೂ ಕೂಡಾ ಕಂಗನಾ ಒತ್ತಿ ಹೇಳಿದ್ದಾಳೆ.

ಹೀಗೆ ಪದೇ ಪದೆ ಮಾನಸಿಕ ಆಘಾತಕ್ಕೀಡಾಗಿರುವ ಕಂಗನಾ, ತನ್ನೊಳಗಿರುವ ವಿಚಿತ್ರ ಆಸೆಯೊಂದರ ಬಗ್ಗೆಯೂ ಹಳಕೊಡಿದ್ದಾಳೆ. ಯಾರನ್ನಾದರೂ ಪ್ರೀತಿಸಿ, ಎದ್ದು ಹೋಗು ಅಂತ ಮುಖಕ್ಕೆ ಹೊಡೆದಂತೆ ಹೇಳಿ ಯಾರಿಗಾದರೂ ಕೈ ಕೊಡಬೇಕನ್ನೋದು ಕಂಗನಗಿರುವ ಮಹದಾಸೆಯಂತೆ. ಈ ವಿಚಾರ ಕೇಳಿ ಕಸುಬಿಲ್ಲದ ಕೆಲ ನೆಟ್ಟಿಗರು ಕಂಗಾಲಾಗಿದ್ದಾರೆ. ಇದೆಂಥಾ ಆಸೆ ತಾಯಿ ಅಂತ ಬಾಯಿ ಬಾಯಿ ಬಡಿದುಕೊಳ್ಳಲಾರಂಭಿಸಿದ್ದಾರೆ. ಕಮೆಂಟ್ ಸೆಕ್ಷನ್ನಿನ ವಿಶ್ಲೇಷಕರು, ಬಹುವಿಚಾರ ಪಂಡಿತರೆಲ್ಲ ಅನ್ನಾಹಾರ ಬಿಟ್ಟು, ಕಂಗನಾಳ ಮನಃಸ್ಥಿತಿಯ ಬಗ್ಗೆ ನಾನಾ ದಿಕ್ಕುಗಳಲ್ಲಿ ವಿಮರ್ಶೆ ಮಾಡುತದ್ದಾರೆ. ಅಂತೂ ಇದೀಗ ಕಂಗನಾ ಕೈ ಕೊಡೋದಕ್ಕಾಗಿಯೇ ಒಂದು ಮಿಕವನ್ನ ಹುಉಕುತ್ತಿರೋದಂತೂ ಸತ್ಯ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!