ಕಾಮಿಡಿ (comedy) ಕಲಾವಿದನಾಗಿ ನಟನೆಯೆಂಬುದು ಏಕತಾನತೆಯತ್ತ ಹೊರಳಿಕೊಳ್ಳುತ್ತಲೇ, ಏಕಾಏಕಿ ಹೀರೋಗಿರಿಯ ಚುಂಗು ಹಿಡಿದು ಹೊರಟಾತ (chikkanna) ಚಿಕ್ಕಣ್ಣ. ಒಂದು ಕಾಲದಲ್ಲಿ ಸಣ್ಣಪುಟ್ಟ ಅವಕಾಶಗಳಿಗೂಹಲುಬಾಡುತ್ತಿದ್ದ ಈತ ಇದೀಗ ಹೀರೋ ಆಗಿಯೂ ಅದೃಷ್ಟ ಪರೀಕೆಗಿಳಿದಿದ್ದಾನೆ. ಹೀರೋ ಆದ ಮೇಲೆ ಬೇರೆ ಹೀರೋಗಳ ಸಿನಿಮಾದಲ್ಲಿ ನಟಿಸೋದಿಲ್ಲ ಎಂಬಂಥಾ ತಿಮಿರಿನಾಚೆಗೆ ಸದ್ಯ ಚಿಕ್ಕಣ್ಣ (chikkanna) ಓಡುವ ಕುದುರೆಯಾಗಿ ಚಾಲ್ತಿಯಲ್ಲಿದ್ದಾನೆ. ಹೀಗೆ ಕಮೇಡಿಯನ್ ಆಗಿ ಬೇಡಿಕೆ ಉಳಿಸಿಕೊಂಡು, ಹೀರೋ ಆಗಿ ಬ್ಯುಸಿಯಾಗಿರುವಾಗಲೇ ಚಿಕ್ಕಣ್ಣ ಸಿಂಗರ್ ಆಗಿಯೂ ಗಮನ ಸೆಳೆಯುತ್ತಿದ್ದಾನೆ!


ಬೆಂಗಳೂರು ಬಾಯ್ಸ್ ಅಂತೊಂದು ಚಿತ್ರ ಈಗೊಂದಷ್ಟು ದಿನಗಳಿಂದ ಆಗಾಗ ಸದ್ದು ಮಾಡುತ್ತಿದೆ. ಆ ಸಿನಿಮಾದಲ್ಲೊಂದು ಖಡಕ್ಕು ಲುಕ್ಕಿನಲ್ಲಿ ಕಾಣಿಸಿಕೊಂಡಿರುವ ಚಿಕ್ಕಣ್ಣ ಇದೀಗ ಅದೇ ಚಿತ್ರಕ್ಕಾಗಿ ಹಾಡೊಂದನ್ನು ಹಾಡಿದ್ದಾನೆ. ಧರ್ಮವಿಶ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ, ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ.

Read This: rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು?

ವಿಶಿಷ್ಟ ಶೈಲಿಯಲ್ಲಿ, ಪದೇ ಪದೆ ಕೇಳುವಂಥಾ ಗಟ್ಟಿತನವುಳ್ಳ ಹಾಡು ಬರೆಯೋದರಲ್ಲಿ ಅರಸು ನಿಸ್ಸೀಮರು. ಅವರ ಹಿಟ್ ಲಿಸ್ಟಿಗೆ ಈ ಹಾಡು ಕೂಡಾ ಸೇರಿಕೊಳ್ಳುವ ಲಕ್ಷಣಗಳಿದ್ದಾವೆ.


ಸಚಿನ್ ಚೆಲುವರಾಯಸ್ವಾಮಿ, ಅಭಿಷೇಕ್ ದಾಸ್ ಮತ್ತು ರೋಹಿತ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲೇಜು ಜೀನದ ಆಸುಪಾಸಿನ ಕಾಡುವ ಕಥಾನಕವನ್ನೊಳಗೊಂಡಿರುವ ಚಿತ್ರ ಬೆಂಗಳೂರು ಬಾಯ್ಸ್. ಸದ್ಯದ ಮಟ್ಟಿಗೆ ಹೊಸಾ ಬಗೆಯ ಕಥಾ ಹಂದರ, ಪ್ರಯೋಗಾತ್ಮಕ ಉಣಗಳನ್ನು ಹೊಂದಿರುವ ಈ ಸಿನಿಮಾ, ಈಗಾಗಲೇ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿವೆ. ಇದೀಗ ಚಿಕ್ಕಣ್ಣ ಹಾಡಿರುವ ಹಾಡು ಬೆಂಗಳೂರು ಬಾಯ್ಸ್‍ಗೆ ಮತ್ತಷ್ಟು ಖದರ್ ತಂದುಕೊಟ್ಟಿದೆ. ಅದು ಕೂಡಾ ಈ ಚಿತ್ರದ ಪ್ರಧಾನ ಅಂಶಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವ ನಿರೀಕ್ಷೆಗಳಿದ್ದಾವೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!