ಸಿನಿಮಾ ರಂಗದಲ್ಲಿ ನಾಯಕಿಯಾಗಿ ಮಿಂಚಬೇಕೆಂಬ ಬಯಕೆ ಬಹುತೇಕ ಸಾಮಾನ್ಯ ಹುಡುಗಿಯರೊಳಗೂ ಇದ್ದೇ ಇರುತ್ತದೆ. ಆದರೆ, ಹಾಗೆ ಸಿನಿಮಾರಂಗಕ್ಕೆ ಅಡಿಯಿರಿಸಿ, ಕಾಲೂರಿ ನಿಲ್ಲಬೇಕೆಂದರೆ ಸಾಕಷ್ಟು ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಅಲ್ಲೆದುರಾಗುವ ಮಾನಸಿಕ ಕಿರಿಕಿರಿಗಳ್ನು ಮೀರಿ ಮುಂದುವರೆಯುವ ಇಚ್ಛಾಶಕ್ತಿಯೂ ಇರಬೇಕಾಗುತ್ತದೆ. ಯಾಕೆಂದರೆ, ಮೋಹಕವಾಗಿ ಕಾಣಿಸೋ ಝಗಮಗದಾಚೆಗೊಂದು ವಿಚಿತ್ರ, ವಿಕ್ಷಿಪ್ತ ಲೋಕವಿದೆ. ಬಹುಶಃ ನಟಿಯರಾಗಿ ಹೆಸರು ಮಾಡೋ ಬಯಕೆ ಇರುವ ಹೆಣ್ಣುಮಕ್ಕಳೆಲ್ಲ ಒಂದಲ್ಲ ಒಂದು ಸಲ ಆ ವಿಕೃತ ಲೋಕವನ್ನು ಎದುರಿಸಿ ನಿಲ್ಲಬೇಕಾಗುತ್ತೆ. ಇಂಥಾ ದುಷ್ಟ ವ್ಯವಸ್ಥೆಯ ಬಗ್ಗೆ ಈಗಾಗಲೇ ಅನೇಕ ನಟಿಯರು ಹೇಳಿಕೊಂಡಿದ್ದಾರೆ. ಇದೀಗ ಸಣ್ಣ ಬಜೆಟ್ಟಿನಲ್ಲಿ ತಯಾರಾಗಿ, ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿರುವ (bagalam) `ಬಗಲಂ’ ಚಿತ್ರದ ನಾಯಕಿ ಕಾವ್ಯ ಕಲ್ಯಾಣ್ ರಾಮ್ (kavya kalyan ram) ಸರದಿ ಬಂದಿದೆಯಷ್ಟೆ!

ಈ ಹಿಂದೆ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರೂ ಬಗಲಂ ಎಂಬ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿಯ ಹೆಸರು ಮಾಡಿರುವಾಕೆ ಕಾವ್ಯ ಕಲ್ಯಾಣ್ ರಾಮ್. ಆ ಸಿನಿಮಾ ಸೂಪರ್ ಹಿಟ್ ಆಗುತ್ತಲೇ ಆಕೆಯ ಅಭಿನಯಕ್ಕೂ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಇದೇ ಹೊತ್ತಿನಲ್ಲಿ ಖಾಸಗಿ ವಾಹಿನಿಯೊಂದು ಕಾಯಾಳನು ಸಂದರ್ಶನ ಮಾಡಿದೆ. ಅಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕಾವ್ಯಾ ತಾನು ಅನುಭವಿಸಿದ್ದ ಯಾತನೆಗಳನ್ನು ಬಿಚ್ಚಿಟ್ಟಿದ್ದಾಳೆ. ಅದರನ್ವಯ ಹೇಳುವುದಾದರೆ, ಅವಕಾಶಕ್ಕಾಗಿ ಹುಡುಕಾಡುತ್ತಿದ್ದ ಅವಧಿಯಲ್ಲಿ ಕೆಲ ಬನಿರ್ದೇಶಕರುಗಳು ಹೀನಾಯವಾಗಿ ನಡೆಸಿಕೊಂಡಿದ್ದರು. ಅಂಗಾಂಗುಗಳ ಬಗ್ಗೆ ಕೊಳಕು ಮಾತಾಡುವ ಮೂಲಕ ಮಾನಸಿಕ ಹಿಂಸೆ ಕೊಟ್ಟಿದ್ದರಂತೆ.

ಈ ಬಾಡಿ ಶೇಮಿಂಗ್ ಎಂಬುದಿದೆಯಲ್ಲಾ? ಅದೂ ಕೂಡಾ ಮಂಚ ಹತ್ತಿಸಿಕೊಳ್ಳುವ ಪ್ರೋಗ್ರಾಮಿನದ್ದೊಂದು ಎಪಿಸೋಡ್. ಕಾಸ್ಟಿಂಗ್ ಕೌಚ್‍ನಂಥಾದ್ದೇ ಕ್ರೌರ್ಯ, ವಿಕೃತಿಗಳು ಅದರಲ್ಲಡಗಿರುತ್ತವೆ. ಒಂದಷ್ಟು ನಟಿಯರು ಅದನ್ನು ದಾಟಿಕೊಂಡೇ ಮುನ್ನಡೆದಿರುತ್ತಾರೆ. ಮತ್ತೆ ಕೆಲವರು ಅದನ್ನು ಎದುರಿಸಲಾರದೆ ಅಜ್ಞಾತವಾಸ ಅನುಭವಿಸುತ್ತಿದ್ದಾರೆ. ತೆಲುಗಿನಲ್ಲಿ ಇಂಥಾ ಆಡಿ ಶೇಮಿಂಗ್, ಕಾಸ್ಟಿಂಗ್ ಕೌಚ್ ಕಾಯಿಲೆ ಅತಿಯಾಗಿದೆ ಅನ್ನುವವರೂ ಇದ್ದಾರೆ. ಅದೆಲ್ಲ ಏನೇ ಇದ್ದರೂ ಈ ಪ್ರತಿಭಾನ್ವಿತ ನಟಿಗೆ ಕೊಟ್ಟಿರೋ ಕಿರುಕುಳ ಅಕ್ಷಮ್ಯ. ಈಕೆ ಹೇಳಿಕೊಂಡಿರುವ ಮಾತುಗಳು ಟಾಲಿವುಡ್ಡಿನ ಮರ್ಯಾದೆಯನ್ನು ಮತ್ತೊಮ್ಮ ಬೀದಿಗೆ ತಂದಿರೋದಂತೂ ಸತ್ಯ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!