ಲಗ (salaga) ಚಿತ್ರದ ಮೂಲಕ ನಿರ್ದೇಶಕನಾಗಿ, ನಾಯಕನಾಗಿ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿರುವವರು (dunia vijay) ದುನಿಯಾ ವಿಜಯ್. ಇದೊಂದು ಚಿತ್ರ ವಿಜಯ್ ರ ದುನಿಯಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿಟ್ಟಿದೆ. ಆ ಗೆಲುವನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗುವ ದಿಶೆಯಲ್ಲಿ ವಿಜಯ್ (vijay new movie) ಸಾಕಷ್ಟು ತಯಾರಿಯೊಂದಿಗೆ `ಭೀಮ’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇಮೇಜಿನಾಚೆಗೆ ಹೊರಳಿಕೊಳ್ಳುವ ಸಂಕಲ್ಪ ಮತ್ತು ಈ ಹಿಂದಿನ ಗೆಲುವನು ಮೀರಿಕೊಂಡು ಮುಂದುವರೆಯುವ ಹುಮ್ಮಸ್ಸುಗಳೆಲ್ಲವೂ ಕೂಡಾ ವಿಜಿ ನಡೆಯಲ್ಲಿ ಕಾಣಿಸುತ್ತಿದ್ದಾವೆ. ಅದರ ಫಲವಾಗಿಯೇ ಇದೀಗ ದಿನಕ್ಕೊಂದರಂತೆ ಹೊಸಾ ಸುದ್ದಿಗಳು ಭೀಮನ ಒಡಲಿಂದ ತೂರಿ ಬರುತ್ತಿವೆ. ಇದೀಗ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಗೀತರಚನೆಕಾರರಾದ (kaviraj ಕವಿರಾಜ್ ಭೀಮನ ಟೀಮು ಸೇರಿಕೊಂಡಿದ್ದಾರೆ.

ಬದಲಾದ ಕಾಲಕ್ಕೆ ತಕ್ಕಂತೆ ಅಪ್‍ಡೇಟ್ ಆಗುತ್ತಾ, ಸದಾ ಗುನುಗುನಿಸಿಕೊಳ್ಳುವ ಹಾಡುಗಳನ್ನು ಸೃಷ್ಟಿಸಿರುವವರು ಕವಿರಾಜ್. ಯಾವ ಬಗೆಯ ಹಾಡಿಗಾದರೂ ಸೈ ಎಂಬಂಥಾ ಕವಿರಾಜ್ ಈ ಹಿಂದೆಯೂ ವಿಜಯ್ ಚಿತ್ರಕ್ಕೊಂದು ಹಾಡು ಬರೆದಿದ್ದರು. ಊರಿಗೊಬ್ಳೆ ಪದ್ಮಾವತಿ ಎಂಬ ಆ ಹಾಡಿನಲ್ಲಿ ದುನಿಯಾ ವಿಜಯ್ ಮೋಹಕ ತಾರೆ ರಮ್ಯಾ ಜೊತೆ ಕಾಣಿಸಿಕೊಂಡಿದ್ದರು. ಆ ಹಾಡ ಎಂಥಾ ಕ್ರೇಜ್ ಸೃಷ್ಟಿಸಿತ್ತೆಂದರೆ; ಈವತ್ತಿಗೂ ಅದರ ಖದರ್ ಕೊಂಚವೂ ಮುಕ್ಕಾಗಿಲ್ಲ. ಇದೀಗ ಅಂಥಾದ್ದೇ ಹವಾ ಎಬ್ಬಿಸುವ ಮತ್ತೊಂದು ಹಾಡು ಬರೆಯುವ ಉಮೇದಿನೊಂದಿಗವೆ ಕವಿರಾಜ್ ಭೀಮನ ಸಮ್ಮುಖದಲ್ಲಿ ನಿಂತಿದ್ದಾರೆ. ಅದನ್ನು ಬರೆದೂ ಮುಗಿಸಿದ್ದಾರೆ.

ಹೀಗೆ ಕವಿರಾಜ್ ಭೀಮ ತಂಡ ಸೇರಿಕೊಂಡಿದ್ದನ್ನು ಖುದ್ದು ವಿಜಯ್ ಸಂಭ್ರಮಿಸಿದ್ದಾರೆ. ಅದೇ ಖುಷಿಯಲ್ಲಿ ಕವಿರಾಜ್ ಬೇಡ ಬೇಡ ದೊಡ್ಡ ಪಾರ್ಟಿ ಅಂತೊಂದು ಹಾಡನ್ನು ಬರೆದಿದ್ದಾರೆ. ಈ ಹಾಡಿಗೆ ಚರಣ್ ರಾಜ್ ಸಂಈತ ಸಂಯೋಜನೆ ಮಾಡಿದ್ದಾರೆ. ಒಂದಷ್ಟು ಬಾರಿ ಚರಣ್ ರಾಜ್ ಳೇ ಗುಂಗಿಗೆ ಬಿದ್ದಂತೆ ಕಂಡರೂ ಕೂಡಾ, ಇದ್ದಕ್ಕಿದ್ದಂತೊಂದು ಮ್ಯಾಜಿಕ್ಕು ಸೃಷ್ಟಿಸಿ ಬಡುವ ಛಾತಿಯನ್ನೂ ತಳ್ಳಿ ಹಾಕುವಂತಿಲ್ಲ. ಈ ಹಾಡು ಮೂಡಿ ಬಂದರ ರೀತಿಯ ಬಗ್ಗ ವಿಜಯ್ ಸೇರಿದಂತೆ ಚಿತ್ರತಂಡದಲ್ಲೊಂದು ಭರವಸೆ ಕಾಣಿಸುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ಮೂಡಿ ಬಂದಿದ್ದರೆ, ಅದು ಈ ವರ್ಷದ ಹಿಟ್ ಸಾಂಗಾಗಿ ದಾಖಲಾಗುವ ಸಾಧ್ಯತೆಗಳೂ ಇದ್ದಾವೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!