Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    Facebook Twitter Instagram
    Wednesday, July 2
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » chaithra kundapura: ಪಾಷಾಣ ಬ್ಯ್ರಾಂಡಿನ ಭಾಷಣ ಕಾರ್ತಿಯ ವರಸೆ ನೋಡಿ!
    ಜಾಪಾಳ್ ಜಂಕ್ಷನ್

    chaithra kundapura: ಪಾಷಾಣ ಬ್ಯ್ರಾಂಡಿನ ಭಾಷಣ ಕಾರ್ತಿಯ ವರಸೆ ನೋಡಿ!

    By Santhosh Bagilagadde23/10/2024
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಈ ಬಾರಿಯ (biggboss season11) ಬಿಗ್ ಬಾಸ್ ಶೋ ಆರಂಭದಲ್ಲಿಯೇ ಭಾರೀ ವಿರೋಧ ಎದುರಿಸುವಂತಾಗಿತ್ತು. ಅಂಥಾದ್ದೊಂದು ವಿದ್ಯಮಾನಕ್ಕೆ ಕಾರಣವಾಗಿರೋದು ವಂಚಕಿ ಚೈನ್ ಚೈತ್ರಾಳ (chaithra kundapura) ಆಗಮನ. ಸಮಯ ಸಿಕ್ಕಾಗೆಲ್ಲ ದ್ವೇಷ ಭಾಷಣ ಮಾಡುತ್ತಾ, ಆ ಮೂಲಕ ಸಿಕ್ಕ ರಾಜಕಾರಣಿಗಳ ಸಖ್ಯವನ್ನು ಕಾಸು ಪೀಕುವ ದಂಧೆಗೆ ಬಳಿಸಿಕೊಂಡಿದ್ದಷ್ಟೇ ಈಕೆಯ ಮಹತ್ಸಾಧನೆ. ರಾಗವಾಗಿ ಮಾತಾಡುವುದನ್ನೇ ಭಾಷಣ ಅಂದುಕೊಂಡಂತಿರೋ ಈಕೆಯ ಮಾತುಗಳಲ್ಲಿ ದ್ವೇಷ ಬಿಟ್ಟರೆ ಮತ್ಯಾವ ತೂಕವೂ ಇರಲಿಲ್ಲ. ಹೇಳಿಕೇಳಿ ಇಂಥಾ ಕೂಗುಮಾರಿಗಳಿಗೆ ರಾಜಕೀಯವಾಗಿ ವೇದಿಕೆ ಸಿಗುತ್ತದೆ. ಎಲ್ಲ ಪಕ್ಷಗಳಲ್ಲಿಯೂ ಇಂಥವರಿಗೆ ಮಣೆ ಹಾಕುವ ಹೀನ ಪ್ರವೃತ್ತಿ ಇತ್ತೀಚೆಗೆ ಮೇರೆ ಮೀರಿಕೊಂಡಿದೆ. ಅದರಲ್ಲಿಯೂ ಭಾರತೀಯ ಜನತಾ ಪಾರ್ಟಿಗಂತೂ ಇಂಥಾ ಕೂಗುಮಾರಿಗಳನ್ನು ಕಂಡರೆ ತುಸು ಹೆಚ್ಚೇ ಪ್ರೀತಿ. ಈ ಕಾರಣದಿಂದಲೇ ಪ್ರವರ್ಧಮಾನಕ್ಕೆ ಬಂದಿದ್ದ ಚೈತ್ರಾ ಮಾಡಿಕೊಂಡಿದ್ದ ರಂಖಲುಗಳು ಒಂದೆರಡಲ್ಲ. ಇಂಥಾ ವ್ಯಕ್ತಿತ್ವ ಹೊಂದಿರುವ ಚೈತ್ರಾಳನ್ನು ಬಿಗ್ ಬಾಸ್ ಮನೆಯೊಳಗೆ ಬಿಟ್ಟುಕೊಂಡಿದ್ದೇ ನಿಜಕ್ಕೂ ನಾಚಿಕೆಗೇಡಿನ ಸಂಗತಿ.

    ಧ್ವನಿಪೆಟ್ಟಿಗೆಯಲ್ಲೇ ಇರಿಟೇಟಿಂಗ್ ಅಂಶವಿಟ್ಟುಕೊಂಡಂತಿರೋ ಚೈತ್ರಾಳ ಮಾತು, ವರ್ತನೆಗಳೆಲ್ಲವೂ ರೇಜಿಗೆ ಹುಟ್ಟಿಸುವಂತಿವೆ. ಕಳೆದ ಬಾರಿ (drone prathap) ದ್ರೋಣ್ ಪ್ರತಾಪನನ್ನು ಬಿಗ್ ಬಾಸ್ ಮನೆಯೊಳಗೆ ಬಿಟ್ಟುಕೊಳ್ಳಲಾಗಿತ್ತಲ್ಲಾ? ಆತ ಕೂಡಾ ಒಂದರ್ಥದಲ್ಲಿ ಮೋಸಗಾರನೇ. ಆದರೆ, ಒಂದಷ್ಟು ಘಳಿಗೆಗಳಲ್ಲಿ ಪ್ರತಾಪನ ಮುಖದಲ್ಲಿ ಪಶ್ಚಾತ್ತಾಪ ಹಣಕಿ ಹಾಕುತ್ತಿತ್ತು. ಈ ಹುಡುಗನಿಗೆ ಒಂದು ಅವಕಾಶ ಕೊಟ್ಟರೆ ತಪ್ಪೇನಿಲ್ಲ ಎಂಬ ಭಾವ ವೀಕ್ಷಕರಲ್ಲಿ ಮೂಡಿಕೊಂಡಿತ್ತು. ಆದರೆ, ಈಕೆಯಿದ್ದಾಳಲ್ಲಾ ಚೈನ್ ಚೈತ್ರಾ? ಯಾವ ಘಳಿಗೆಯಲ್ಲಿಯೂ ಮುಖದಲ್ಲೊಂದು ಪಶ್ಚಾತ್ತಾಪದ ಗೆರೆ ಕಾಣಿಸಲು ಸಾಧ್ಯವಿಲ್ಲ. ಅದ್ಯಾರೋ ಬಾಬು ಪೂಜಾರಿಗೆ ಕೋಟಿ ಕೋಟಿ ನಾಮತೀಡಿದ್ದು, ನಾನಾ ಆಸೆ ಹುಟ್ಟಿಸಿ ಸಿಕ್ಕವರನ್ನೆಲ್ಲ ಮುಂಡಾಯಿಸಿದ್ದೆಲ್ಲವೂ ತನ್ನ ಶಕ್ತಿ ಎಂಬಂತೆ ಚೈತ್ರಾ ಮೆರೆಯುತ್ತಿದ್ದಾಳೆ.

    ಸಾಮಾನ್ಯವಾಗಿ, ಕಿಚ್ಚನ ಪಂಚಾಯ್ತಿಯಲ್ಲಿ ನಡೆದ ಚರ್ಚೆಯ ಬಗ್ಗೆಮ, ಆ ಮೂಲಕ ಜಾಹೀರಾದ ಅಭಿಪ್ರಾಯಗಳ ಬಗ್ಗೆ ಸ್ಪರ್ಧಿಗಳು ಚರ್ಚೆ ನಡೆಸೋದಿಲ್ಲ. ಆದರೆ, ಬಾಯಿಬಡುಕಿ ಚೈತ್ರಾ ಸುದೀಪ್ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಾ, ತಕರಾರೆತ್ತುವ ಮೂಲಕ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಜಗದೀಶ್ ಪರ ವಹಿಸುವ ಭರದಲ್ಲಿ ಸುದೀಪ್ ತಮ್ಮನ್ನೆಲ್ಲ ವಿಲನ್ ಮಾಡಿದ್ದಾರೆ ಎಂಬರ್ಥದಲ್ಲಿ ಮಾತಾಡಿದ್ದಾಳೆ. ಮನೆಯೊಳಗೆ ಎಂಥಾದ್ದೇ ಚೆಂದದ ವಾತಾವರಣವಿದ್ದರೂ ಕ್ಷಣಾರ್ಧದಲ್ಲಿ ಅದನ್ನೆಲ್ಲ ಹಾಖುಗೆಡಹುವ ಟ್ಯಾಲೆಂಟೊಂದು ಈಕೆಯಲ್ಲಿದೆ. ಚೈತ್ರಾ ಬಾಯಿ ಬಿಡೋ ಸೂಚನೆ ಸಿಕ್ಕರೆ, ಊರು ಬಿಡಲು ತಯಾರಾಗಿ ನಿಲ್ಲುವ ಸ್ಪರ್ಧಿಗಳೇ ಬಿಗ್ ಬಾಸ್ ಮನೆಯೊಳಗಿದ್ದಾರೆ. ತನಗೆ ಮದುವೆ ಫಿಕ್ಸಾಗಿರೋದಾಗಿ ಹೇಳಿಕೊಂಡಿರುವ ಚೈತ್ರಾ ಯಾರಾದ್ರು ಲವ್ವುಗಿವ್ವು ಅಂತ ಮಾತಾಡಿದ್ರೆ ಮೆಟ್ಟಲ್ಲಿ ಹೊಡಿತೇನೆ ಅಂತೆಲ್ಲ ಕೂಗಾಡಿದ್ದಾಳೆ. ಈ ಬಜಾರಿಯನ್ನು ಲವ್ ಮಾಡುವ ಮಂಡೆಪೆಟ್ಟು ಆಸಾಮಿಗಳು ಅದ್ಯಾರಿದ್ದಾರೋ ಭಗವಂತನೇ ಬಲ್ಲ!

    ಈ ಕೂಗುಮಾರಿ ಬಿಗ್ ಬಾಸ್ ಶೋಗೆ ಬರುತ್ತಾಳೆಂದಾಕ್ಷಣವೇ ಅಪಸ್ವರವೆದ್ದಿತ್ತು. ಈ ಬಗ್ಗೆ ಸುದೀಪ್ ಗೆ ಅನೇಕರು ಪ್ರಶ್ನೆಗಳ ಸುರಿಮಳೆಗರೆದಿದ್ದರು. ಅಂಥಾ ವಾತಾವರಣ ಯಾಕೆ ಸೃಷ್ಟಿಯಾಗಿತ್ತೆಂಬುದೀಗ ಖುದ್ದು ಕಿಚ್ಚನಿಗೇ ಅರ್ಥವಾಗಿರಬಹುದೇನೋ… ಈಕೆ ಈ ಸೀಜನ್ನಿಗೊಂದು ಕಪ್ಪುಚುಕ್ಕೆಯಂತಿದ್ದಾಳೆ. ಅಚಾನಕ್ಕಾಗಿ ತಪ್ಪು ಮಾಡೋರನ್ನು ಕ್ಷಮಿಸಬಹುದು. ಮಾಡಿದ ತಪ್ಪಿಗೆ ಪ್ಶ್ಚಾತ್ತಾಪ ಇರುವವರಿಗೂ ಒಂದು ಅವಕಾಶ ಕೊಟ್ಟು ನೋಡಬಹುದು. ಆದರೆ, ಚೈತ್ರಾಳಂತವರು ಉದ್ದೇಶಪೂರ್ವಕವಾಗಿಯೇ ವಂಚನೆಗಿಳಿಯುವ ಜಾಯಮಾನದವರು. ಎಲ್ಲವನ್ನೂ ಸಬೂಬಿನಿಂದ ಮುಚ್ಚಿ ಹಾಕಿ ಸಭ್ಯಸ್ಥರಂತೆ ಪೋಸು ಕೊಡುವವರು. ಇಂಥವರನ್ನೆಲ್ಲ ಸ್ಪಧಿಗಳಾಗಿ ಆರಿಸಿದ್ದೇ ಬಿಗ್ ಬಾಸ್ ಶೋನ ಅತಿ ದೊಡ್ಡ ದುರಂತ!

    'santhoshbagilagadde #biggbossseason11 #chaithrakundapura #kiccha #sudeep cinishodha
    Share. Facebook Twitter LinkedIn WhatsApp Telegram Email
    Previous Articleallu arjun: ತಾರಕಕ್ಕೇರಿತು ಸಿನಿಮಾ ತಾರೆಯರ ಪೊಲಿಟಿಕಲ್ ವಾರ್!
    Next Article komal kumar: ಜಗ್ಗಣ್ಣನ ತಮ್ಮನ ನಸೀಬು ಸರಿಯಾದ ಲಕ್ಷಣ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    sees kaddi movie review: ಜನಪ್ರಿಯ ಅಲೆಯ ನಡುವಲ್ಲೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ!

    08/06/2025

    kamal haasan thug life: ಸಿಂಬು ಸ್ಟಾರ್‌ಡಮ್ ನೆಚ್ಚಿಕೊಂಡ ಮಣಿರತ್ನಂ ಕೈಲೀಗ ಖಾಲಿ ಚೊಂಬು!

    05/06/2025

    kangana ranaut: ಸೋತು ಸುಣ್ಣವಾದ ಸಂಸೆದೆ ಬಣ್ಣ ಹಚ್ಚೋದೇ ಡೌಟು!

    04/06/2025
    Search
    Category
    • OTT (3)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (21)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (56)
    • ಸೌತ್ ಜೋನ್ (98)
    • ಸ್ಪಾಟ್ ಲೈಟ್ (172)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (10)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202331 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views
    Don't Miss
    ಸ್ಪಾಟ್ ಲೈಟ್ 01/07/2025

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    777 ಚಾರ್ಲಿ ಚಿತ್ರದಲ್ಲಿ (simple star rakshith shetty) ರಕ್ಷಿತ್ ಶೆಟ್ಟಿ ಜೊತೆ ನಾಯಕಿಯಾಗಿ ನಟಿಸಿದ್ದವರು (actress sangeetha sringeri)…

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    kajol devgan: ಬಿಟ್ಟಿ ಪ್ರಚಾರಕ್ಕೆ ದೆವ್ವವೇ ಗತಿ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.