Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    kajol devgan: ಬಿಟ್ಟಿ ಪ್ರಚಾರಕ್ಕೆ ದೆವ್ವವೇ ಗತಿ!

    deadly lovers movie: ಥ್ರಿಲ್ಲಿಂಗ್ ನಶೆಯಲ್ಲಿರಬಹುದಾ ಕೌತುಕದ ಪಸೆ?

    Facebook Twitter Instagram
    Tuesday, July 1
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!
    ಟೇಕಾಫ್

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    By Santhosh Bagilagadde01/06/2023Updated:01/06/2023
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆ ಯಾವ್ಯಾವುದೋ ಮೂಲೆಯಲ್ಲಿದ್ದವರನ್ನೂ (gandhinagar) ಗಾಂಧಿನಗರದತ್ತ ಸೆಳೆಯುತ್ತದೆ. ಹೇಗೋ ಮಾಡಿ ಸಿನಿಮಾ ತಂಡಗಳನ್ನು ಸೇರಿಕೊಂಡರೂ, ಇಲ್ಲಿ ಅಂದುಕೊಂಡಿದ್ದನ್ನು ಅವುಡುಗಚ್ಚಿ ಸಾಧಿಸೋದು ಅಷ್ಟು ಸಲೀಸಿನ ಸಂಗತಿಯಲ್ಲ. ಕೆಲ ಮಂದಿ ಒಂದಷ್ಟು ದೂರ ಕ್ರಮಿಸಿ ಹೊರ ನಡೆಯುತ್ತಾರೆ. ಮತ್ತೆ ಕೆಲವರು ಏನೇ ಬಂದರೂ ಕಾಲೂರಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಸಿಕ್ಕ ಕೆಲಸವನ್ನು ಆಸ್ಥೆಯಿಂದ ಮಾಡುತ್ತಾ, ದೊಡ್ಡ ಕನಸಿಗೆ ಅಣಿಗೊಳ್ಳಲಾರಂಭಿಸುತ್ತಾರೆ. ಅಂಥಾದ್ದೇ ಹಾದಿಯಲ್ಲಿ ಸಾಗಿ ಬಂದಿರುವ ಸಂಗಮೇಶ್ ಪಾಟೀಲ್ (sangamesh patil) ಇದೀಗ `ಜೀವಸಖಿ’ (jeevasakhi) ಎಂಬ ಕಿರುಚಿತ್ರವೊಂದರ ಮೂಲಕ ತಮ್ಮನ್ನು ತಾವೇ ಪರೀಕ್ಷೆಗೊಡ್ಡಿಕೊಂಡಿದ್ದಾರೆ!

    ಈಗಾಗಲೇ ಐದು ವರ್ಷಗಳ ಕಾಲ ಹಲವಾರು ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವವರು ಸಂಗಮೇಶ್ ಪಾಟೀಲ್. (sangamesh patil) ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಗದಗ ಜಿಲ್ಲೆಯ ನರಗುಂದದಿಂದ ಬೆಂಗಳೂರಿಗೆ ಬಂದಿದ್ದ ಸಂಗಮೇಶ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ. ಆದರೆ ಆ ಹೊತ್ತಿಗಾಗಲೇ ಸಿನಿಮಾ ಕನಸನ್ನು ಆಳವಾಗಿ ಹಚ್ಚಿಕೊಂಡಿದ್ದ ಆತ, ತನ್ನಿಷ್ಟದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಹಾಗೆ ಒಂದಷ್ಟು ಕಲಿತುಕೊಂಡು ಗಿರ್ಕಿ, ಲೈಫ್ ಜೊತೆ ಒಂದ್ ಸೆಲ್ಫಿ, ಗಾಂಧಿಗಿರಿ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದ ಸಂಗಮೇಶ್, ಆ ನಂತರ ಸ್ವತಂತ್ರ ನಿರ್ದೇಶಕರಾಗ ಬಯಸಿದ್ದರು. ಅಂಥಾ ನಿರ್ಧಾರ ತಳೆದ ಬಳಿಕ ದೊಡ್ಡ ಸಿನಿಮಾ ಮಾಡುವ ಮುನ್ನ ಸಣ್ಣ ಪ್ರಮಾಣದಲ್ಲಿ ತನ್ನನ್ನು ತಾನೇ ಪರೀಕ್ಷೆಗೊಡ್ಡಿಕೊಳ್ಳುವ ಸಲುವಾಗಿ ನಿರ್ದೇಶಿಸಿರುವ ಕಿರುಚಿತ್ರ `ಜೀವಸಖಿ’.

    ಇದು ಮೂವತೈದು ನಿಮಿಷಗಳ ಕಿರುಚಿತ್ರ. ಹೆಣ್ತನದ ಸೂಕ್ಷ್ಮ ಭಾವಗಳ ಕಥಾ ಹಂದರವಿರೋದರಿಂದಾಗಿ ಈ ಕಿರುಚಿತ್ರಕ್ಕೆ ಜೀವಸಖಿ ಎಂಬ ನಾಮಕರಣ ಮಾಡಲಾಗಿದೆಯಂತೆ. ಇದರ ನಾಯಕನ ಪಾತ್ರಕ್ಕೆ ಪಕ್ಕಾ ಹೊಂದುವವರಿಗಾಗಿ ವ್ಯಾಪಕವಾಗಿ ತಲಾಷು ನಡೆಸಿ, ಕಡೆಗೂ ರಂಗಭೂಮಿಯ ಪ್ರತಿಭೆ ಯುವರಾಜ್ ಪಾಟೀಲ್‍ನನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈತ ಮೈಸೂರಿನ ರಂಗಾಯಣದಲ್ಲಿ ಎರಡು ವರ್ಷಗಳ ನಟನಾ ತರಬೇತಿ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಸವಾಲಿನದ್ದಾದ ನಾಯಕಿಯ ಪಾತ್ರವನ್ನು ಸೌಂದರ್ಯ ಗೌಡ ನಿರ್ವಹಿಸಿದ್ದಾರೆ. ಈಗಾಗಲೇ ಹಲವಾರು ವೆಬ್ ಸೀರೀಸ್, ಧಾರಾವಾಹಿ, ಸಿನಿಮಾಗಳಲ್ಲಿ ಪಾತ್ರ ಮಾಡಿ ಅನುಭವ ಹೊಂದಿರುವ ಈ ಹುಡುಗಿಗೆ ಜೀವಸಖಿಯಿಂದ ಲಕ್ಕು ಕುದುರೋ ಲಕ್ಷಣಗಳಿದ್ದಾವೆ.

    ಈಗಾಗಲೇ ಹಲವಾರು ತಂತ್ರಜ್ಞರು ತಮ್ಮ ಕೆಲಸದ ಭಾಗವಾಗಿ ಈ ಕಿರುಚಿತ್ರವನ್ನು ವೀಕ್ಷಿಸಿದ್ದಾರಂತೆ. ಅವರೆಲ್ಲರೂ ಅಚ್ಚರಿಯಿಂದ ನಾಯಕ ನಾಕಿಯ ಬಗ್ಗೆ ವಿಚಾರಿಸುತ್ತಿದ್ದಾರಂತೆ. ಯುವರಾಜ್ ಪಾಟೀಲ್ ಮತ್ತು ಸೌಂದರ್ಯ ಗೌಡ ಅಷ್ಟು ಚೆಂದಗೆ ನಟಿಸಿದ್ದಾರೆಂಬ ಮೆಚ್ಚುಗೆ, ಇಡೀ ಸಿನಿಮಾ ನೋಡುಗರ ಮನಗೆಲ್ಲುತ್ತದೆಂಬ ಭರವಸೆ ನಿರ್ದೇಶಕರಲ್ಲಿದೆ. ಇನ್ನುಳಿದಂತೆ ಈಗಾಗಲೇ ಕಿರುಚಿತ್ರ ನೋಡಿರುವ ತಂತ್ರಜ್ಞರು ನಿರ್ದೇಶಕ ಸಂಗಮೇಶ್ ಪಾಟೀಲ್ ಕಸುಬುದಾರಿಕೆಯನ್ನೂ ಮೆಚ್ಚಿಕೊಂಡಿದ್ದಾರೆ. ಈ ಕಿರುಚಿತ್ರದಿಂದಲೇ ಹೊಸಾ ಹಾದಿ ತೆರೆದುಕೊಳ್ಳುತ್ತದೆಂಬ ಭರವೆಯ ಮಾತುಗಳನ್ನೂ ಆಡಿದ್ದಾರೆ. ಈ ಮೂಲಕ ನಿರ್ದೇಶಕನಾಗಿ ನೆಲೆ ಕಂಡುಕೊಳ್ಳುವ ಹುರುಪಿನಲ್ಲಿರುವ ಸಂಗಮೇಶ್‍ಗೆ ಆರಂಭಿಕ ಗೆಲುವೊಂದು ಕೈ ಹಿಡಿದಂತಾಗಿದೆ.

    ಇದೀಗ ಜೀವಸಖಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಸ್‍ಎಫ್‍ಎಕ್ಸ್, ಮ್ಯೂಸಿಕ್ ಕಾರ್ಯಗಳು ಭರದಿಂದ ಸಾಗುತ್ತಿವೆ. ಎಲ್ಲವೂ ಅಂದುಕೊಂಡಂತ ಆದರೆ ತಿಂಗಳೋಪ್ಪತ್ತಿನಲ್ಲಿಯೇ ಜೀವಸಖಿ ನಿಮ್ಮ ಮುಂದೆ ಬರಲಿದ್ದಾಳೆ. ಈ ಕಿರುಚಿತ್ರದ ಬಿಡುಗಡೆಗೂ ಕೂಡಾ ಈಗಾಗಲೇ ಭೂಮಿಕೆ ಸಿದ್ಧಗೊಂಡಿದೆ. ಒಂದು ಪ್ರಸಿದ್ಧ ಯೂ ಟ್ಯೂಬ್ ಚಾನೆಲ್ಲಿನಲ್ಲಿ ಜೀವಸಖಿ ಬಿಡುಗಡೆಗೊಳ್ಳಲಿದೆ. ಇದಾದ ನಂತರ ಸಂಗಮೇಶ್ ಪಾಟೀಲ್ ಒಂದು ಬಿಗ್ ಬಜೆಟ್ ಚಿತ್ರ ನಿರ್ದೇಶನ ಮಾಡಲಿದ್ದಾರಂತೆ. ಸುನೀಲ್ ಎಲ್ ಎಸ್ ಆರ್ ಸಂಕಲನ, ಜೀವನ್ ಎಸ್ ಛಾಯಾಗ್ರಹಣ ಮತ್ತು ಆತ್ಮಿಕ್ ರೈ ಸಂಗೀತ ನಿರ್ದೇಶನ, ಅಕ್ಷಯ್ ಬಿಂದುಸಾಗರ ಪ್ರಚಾರ ವಿನ್ಯಾಸ ಈ ಕಿರುಚಿತ್ರಕ್ಕಿದೆ.

    cinishodha jeevasakhi kfi latestnews mahantheshpateel sandalwood sangameshpatil shortmovie soundaryagowda yuvarajpateel
    Share. Facebook Twitter LinkedIn WhatsApp Telegram Email
    Previous Articlekannada film industry: ಸಿನಿಮಾ ಮಂದಿ ಮಂಪರಿನಿಂದ ಹೊರಬರೋದು ಯಾವಾಗ?
    Next Article samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    20/06/2025

    deadly lovers movie: ಥ್ರಿಲ್ಲಿಂಗ್ ನಶೆಯಲ್ಲಿರಬಹುದಾ ಕೌತುಕದ ಪಸೆ?

    18/06/2025

    sanju weds geetha2 movie: ಹರುಕು ಚಲ್ಲಣಕ್ಕೆ ತ್ಯಾಪೆ ಹಚ್ಚೋ ಸರ್ಕಸ್ಸು!

    18/06/2025
    Search
    Category
    • OTT (3)
    • Uncategorized (12)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (20)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (54)
    • ಸೌತ್ ಜೋನ್ (95)
    • ಸ್ಪಾಟ್ ಲೈಟ್ (163)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (10)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    30/04/202511 Views
    Don't Miss
    ಸ್ಪಾಟ್ ಲೈಟ್ 20/06/2025

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    ಚಿತ್ರರಂಗದಲ್ಲಿ ಅದೆಂಥಾದ್ದೇ ಅಲೆ ಚಾಲ್ತಿಯಲ್ಲಿದ್ದರೂ ಕೂಡಾ, ನಮ್ಮ ನಡುವಿನ ಕಥನಕ್ಕೆ ಕಣ್ಣಾದ ಸಿನಿಮಾಗಳತ್ತ ಪ್ರೇಕ್ಷಕರು ಬಹು ಬೇಗನೆ ಆಕರ್ಷಿತರಾಗುತ್ತಾರೆ. ನಿಜ,…

    kajol devgan: ಬಿಟ್ಟಿ ಪ್ರಚಾರಕ್ಕೆ ದೆವ್ವವೇ ಗತಿ!

    deadly lovers movie: ಥ್ರಿಲ್ಲಿಂಗ್ ನಶೆಯಲ್ಲಿರಬಹುದಾ ಕೌತುಕದ ಪಸೆ?

    sanju weds geetha2 movie: ಹರುಕು ಚಲ್ಲಣಕ್ಕೆ ತ್ಯಾಪೆ ಹಚ್ಚೋ ಸರ್ಕಸ್ಸು!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.