Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    ramayana movie updates: ತನ್ನ ಪಾತ್ರದ ಬಗ್ಗೆ ಶಿಭಾ ಛಡ್ಡಾ ಹೇಳಿದ್ದೇನು?

    singer mangli: ಸೆಲೆಬ್ರಿಟಿಯಾದೇಟಿಗೆ ಶುರುವಾಯ್ತಾ ತಿರ್ಕೆ ಶೋಕಿ?

    dharma keerthiraj: ಏಳು ಬೀಳಿನ ಹಾದಿಯಲ್ಲೀಗ ಗೆಲುವಿನ ಹೂಗೊಂಚಲು!

    Facebook Twitter Instagram
    Monday, June 16
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » ambuja movie: ಮಹಿಳಾ ಪ್ರಧಾನ ಚಿತ್ರ ಮನಸಿಗೆ ಮುತ್ತಿಕ್ಕುವ ಮುನ್ಸೂಚನೆ!
    ಬಣ್ಣದ ಹೆಜ್ಜೆ

    ambuja movie: ಮಹಿಳಾ ಪ್ರಧಾನ ಚಿತ್ರ ಮನಸಿಗೆ ಮುತ್ತಿಕ್ಕುವ ಮುನ್ಸೂಚನೆ!

    By Santhosh Bagilagadde11/07/2023
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಒಂದು ಕಡೆಯಿಂದ ಚಿತ್ರರಂಗದ (filme industry) ಗರ್ಭದೊಳಗೆ ಅನಿಶ್ಚಿತ ವಾತಾವರಣವೊಂದು ಊಟೆಯೊಡೆಯುತ್ತಿದ್ದರೆ, ಮತ್ತೊಂದು ಮಗ್ಗುಲಿಂದ ಆಶಾದಾಯಕ ಬೆಳವಣಿಗೆಗಳು ಹರಳುಗಟ್ಟಿಕೊಳ್ಳುತ್ತಿವೆ. ಭಿನ್ನ ಆಲೋಚನೆ, ಪ್ರಯೋಗಾತ್ಮಕ ಗುಣಗಳ ಯುವ ಸಮೂಹವೊಂದು ಸದ್ದೇ ಇಲ್ಲದೆ ಕಾರ್ಯಪ್ರವೃತ್ತವಾಗಿದೆ. ಒಂದೆಡೆ ಸಿನಿಮಾ ಮಂದಿ ಜನಪ್ರಿಯ ಮಾದರಿಯೆಂಬೋ ಭ್ರಮೆಯ ಚುಂಗು ಹಿಡಿದು ಹೊರಟಿರುವಾಗಲೇ, ಮತ್ತೊಂದಷ್ಟು ಮಂದಿ ಸಣ್ಣ ಸಣ್ಣ ಪ್ರಯತ್ನಗಳ ಮೂಲಕ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲು ಮುಂದಾಗುತ್ತಿದೆ. ಸದ್ಯದ ಮಟ್ಟಿಗೆ ಇಂಥಾ ಆಶಾದಾಯಕ ಬೆಳವಣಿಗೆಯ ಭಾಗವೆಂಬಂತೆ ಗೋಚರಿಸುತ್ತಿರುವ ಚಿತ್ರ (ambuja) `ಅಂಬುಜ’. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಅದಕ್ಕೆ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆ ಕಂಡು ಯುವ ನಿರ್ದೇಶಕ (sreeni hanumatharaju) ಶ್ರೀನಿ ಹನುಮಂತರಾಜು ಖುಷಿಗೊಂಡಿದ್ದಾರೆ. ಅದು ಒಂದಿಡೀ ಚಿತ್ರತಂಡದ ಕಣ್ಣುಗಳಲ್ಲಿಯೂ ಪ್ರತಿಫಲಿಸುತ್ತಿದೆ!

    ಅಷ್ಟಕ್ಕೂ ಅಂಬುಜ ಚಿತ್ರ ಆರಂಭ ಕಾಲದಿಂದಲೂ ನಾನಾ ಥರದಲ್ಲಿ ಸುದ್ದಿಯಾಗುತ್ತಲೇ ಬಂದಿದೆ. ಹಂತ ಹಂತವಾಗಿ ಅಂಬುಜಾ ಸುತ್ತ ಪ್ರೇಕ್ಷಕರ ಕಲ್ಪನೆಗಳು ಹಲವು ನಮೂನೆಗಳಲ್ಲಿ ಗರಿಬಿಚ್ಚಿಕೊಂಡಿವೆ. ಮೊದಮೊದಲು ಇದೊಂದು ಮಹಿಳಾ ಪ್ರಧಾನ ಸಿನಿಮಾವೆಂಬ ವಿಚಾರ ಹೊರಬಿದ್ದಿತ್ತು. ಅದಾದೇಟಿಗೆ ಆ ಜಾನರಿನ ಸುತ್ತ ಸಿದ್ಧ ಸೂತ್ರಗಳ ಕಲ್ಪನೆಗಳು ರಿದಾಡಿದ್ದವು. ಅದೆಲ್ಲದರ ನಡುವೆಯೇ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡ ಚಿತ್ರತಂಡ ಟ್ರೈಲರ್ ಲಾಂಚ್ ಮಾಡಿತು ನೋಡಿ? ಕಲ್ಪನೆಗಳ ಜಗವನ್ನು ಅಕ್ಷರಶಃ ಅಚ್ಚರಿಯೊಂದು ಆವರಿಸಿಕೊಂಡಿದೆ. ಯಾಕೆಂದರೆ, ಈ ಟ್ರೈಲರ್‍ನಲ್ಲಿ ಕಲಾತ್ಮಕ ಚೌಕಟ್ಟಿನಲ್ಲಿ ಬಂಧಿಯಾಗಬಹುದಿದ್ದ ಕಥಾ ವಸ್ತುವನ್ನು, ಪಕ್ಕಾ ಕಮರ್ಶಿಯಲ್ ಪಥದಲ್ಲಿ ನಿರೂಪಿಸಿರುವ ನಿಖರ ಸೂಚನೆಗಳು ಸಿಕ್ಕಿವೆ. ಅಲ್ಲಿಗೆ ಅಂಬುಜಾಗೆ ಆರಂಭಿಕ ಗೆಲುವೊಂದು ದಕ್ಕಿದಂತಾಗಿದೆ.

    ಇಂಥಾದ್ದೊಂದು ಭಿನ್ನ ಬಗೆಯ ಸಿನಿಮಾ ಶುರುವಾತಿನ ಹಿಂದೆ ಒಂದಷ್ಟು ಸಮ್ಮೋಹಕ ಸಂಗತಿಗಳಿರುತ್ತವೆ. ಈ ಚಿತ್ರದ ಮಟ್ಟಿಗೆ ಹೇಳುವುದಾದರೆ, ಪ್ರಧಾನವಾಗಿ ಗಮನ ಸೆಳೆಯುವವರು ನಿರ್ದೇಶಕ ಶ್ರೀನಿ ಹನುಮಂತರಾಜು. ದಶಕಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವವರು ಶ್ರೀನಿ. ಮೊದಲ ಹೆಜ್ಜೆಯಲ್ಲಿಯೇ ಹೊಸತಿಗೆ ತೆರೆದುಕೊಳ್ಳುವ ತುಡಿತ ಹೊಂದಿದ್ದ ಅವರು ಓಂ ಪ್ರಕಾಶ್ ರಾವ್ ನಿರ್ದೇಶನದ ಎಕೆ 56 ಸಿನಿಮಾದಲ್ಲಿ ಒಂದಷ್ಟು ಕಾಲ ಕೆಲಸ ಮಾಡಿ, ಆ ನಂತರ ಅಶೋಕ್ ಕಶ್ಯಪ್ ನಿರ್ದೇಶನದ `ಪ್ರೀತಿಯಿಂದ’ ಎಂಬ ಧಾರಾವಾಹಿ ತಂಡ ಸೇರಿಕೊಂಡಿದ್ದರು. ಬಳಿಕ ಹೊಂ ಸ್ಟೇ ಅಂತೊಂದು ಬಹುಭಾಷಾ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಅನುಭವ ತುಂಬಿಕೊಂಡಿದ್ದರು.

    ಇದೆಲ್ಲ ಆದ ಬಳಿಕ ಶ್ರೀನಿಯನ್ನು ಬರಮಾಡಿಕೊಂಡಿದ್ದು ಸಂಚಾರಿ ವಿಜಯ್ ನಟಿಸಿದ್ದ ಚಿತ್ರ `ರಿಕ್ತ’. ಅದರಲ್ಲಿ ಕೋ ಡೈರೆಕ್ಟರ್ ಕಂ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದ ಶ್ರೀನಿ, ಮಹೇಶ್ ಬಾಬು ಅವರ ಕ್ರೇಜಿ ಬಾಯ್ ಚಿತ್ರದ ಭಾಗವಾಗಿಯೂ ಕೆಲಸ ಮಾಡಿದದರು. ಹೀಗೆ ನಿರ್ದೇಶನ ವಿಭಾಗವನ್ನು ಸರಿಕಟ್ಟಾಗಿ ಅರ್ಥೈಸಿಕೊಂಡಿದ್ದ ಶ್ರೀನಿ, ತಮ್ಮ ಜೀವಿತದ ಪ್ರಧಾನ ಗುರಿಯಂತಿದ್ದ ನಿರ್ದೇಶನದತ್ತ ಗಂಭೀರವಾಗಿ ಚಿತ್ತ ಹರಿಸಿದ್ದರು. ಅದೃ ಫಲವಾಗಿಯೇ 2018ರಲ್ಲಿ `ಕೆಲವು ದಿನಗಳ ನಂತರ’ ಎಂಬ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಶೀರ್ಷಿಕೆಯೇ ಧ್ವನಿಸುವಂತೆ ಸಾಕಷ್ಟು ಹೊಸತನಗಳನ್ನು ಹೊಂದಿದ್ದ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ನಂತರದ ಅವಧಿಯಲ್ಲಿ ಮತ್ತೊಂದು ಭಿನ್ನ ಬಗೆಯ ಸಿನಿಮಾ ನಿರ್ದೇಶನ ಮಾಡುವ ಇರಾದೆಯಿಂದಿದ್ದ ಶ್ರೀನಿಗೆ ವರವಾಗಿ ಸಿಕ್ಕವರು ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್. ಸ್ವತಃ ಬರಹಗಾರರಾಗಿ, ಸಾಹಿತ್ಯಾಸಕ್ತಿಯನ್ನೂ ಹೊಂದಿದ್ದ ಕಾಶಿನಾಥ್ ಅದಾಗಲೇ ಕಥೆಯೊಂದನ್ನು ಬರೆದಿದ್ದರು. ಅದಕ್ಕೆ ಸಿನಿಮಾ ಫ್ರೇಮು ತೊಡಿಸಬೇಕೆಂಬ ಆಳದ ಆಸೆಯನ್ನೂ ಹೊಂದಿದ್ದರು. ಈ ಎರಡು ತುಡಿತಗಳ ಸಂಗಮದಿಂದ ಸೃಷ್ಟಿಯಾದ ಚಿತ್ರ ಅಂಬುಜ!

    ಸಾಮಾನ್ಯವಾಗಿ, ಸತ್ಯಕಥೆ ಆಧಾರಿತ ಚಿತ್ರವನ್ನು ಮೂಲ ಸಂವೇದನೆಗಳು ಮುಕ್ಕಾಗದಂತೆ ದೃಷ್ಯಕ್ಕೆ ಅಳವಡಿಸುವುದೇ ಒಂದು ಸವಾಲು. ಅದನ್ನು ಸಮರ್ಥವಾಗಿ ನಿಭಾಯಿಸಿದ ಖುಷಿ ಶ್ರೀನಿಯವರಲ್ಲಿದೆ. ಲವ್, ಕಾಮಿಡಿ, ಹಾರರ್ ಸೇರಿದಂತೆ ನಾನಾ ಅಂಶಗಳನ್ನೊಳಗೊಂಡಿರೋ ಅಂಬುಜಾ, ಹೊಸಾ ಜಗತ್ತೊಂದನ್ನು ಪ್ರೇಕ್ಷಕರ ಮುಂದೆ ತೆರೆದಿಡಲಿದೆ ಎಂಬ ಗಾಢ ನಂಬುಗೆ ನಿರ್ದೇಶಕರಲ್ಲಿದೆ. ಚಿತ್ರೀಕರಣ ನಡೆದ ಸ್ಥಳ, ತಾಂತ್ರಿಕತೆ, ಕಥಾ ಹಂದರ ಸೇರಿದಂತೆ ಎಲ್ಲದರಲ್ಲಿಯೂ ಹೊಸತನ ತುಂಬಿಕೊಂಡಿರೋ ಚಿತ್ರವಿದು. ಇದು ಖಂಡಿತವಾಗಿಯೂ ಪ್ರೇಕ್ಷಕರನ್ನು ಆವರಿಸಿಕೊಂಡು, ದೊಡ್ಡ ಗೆಲುವಿನ ರೂವಾರಿಯಾಗುತ್ತದೆಂಬ ನಂಬುಗೆ ಶ್ರೀನಿಯದ್ದು. ಅದು ಎಷ್ಟು ನಿಜವಾಗುತ್ತದೆ? ಪ್ರೇಕ್ಷಕರ ಪ್ರತಿಕ್ರಿಯೆ ಏನಿರುತ್ತದೆಂಬುದಕ್ಕೆ ವಾರದೊಪ್ಪತ್ತಿನಲ್ಲಿಯೇ ಉತ್ತರ ಸಿಗಲಿದೆ. ಅಂದಹಾಗೆ, ಈ ಚಿತ್ರ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ…

    ambuja ambujamuvie bannadahejje cinishodha director lifestory rajani shubhapoonja sreeni sreenihanumatharaju
    Share. Facebook Twitter LinkedIn WhatsApp Telegram Email
    Previous Articlekiran raj: ಕನ್ನಡತಿಯ ಸಖನ ಕೈತುಂಬಾ ಸಿನಿಮಾಗಳ ಸರಮಾಲೆ!
    Next Article vaishnavi gowda: ಮತ್ತೆ ಕಿರುತೆರೆಗೆ ಮರಳಿದಳು ಅಗ್ನಿಸಾಕ್ಷಿ ಸನ್ನಿಧಿ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    sees kaddi movie review: ಜನಪ್ರಿಯ ಅಲೆಯ ನಡುವಲ್ಲೊಂದು ಕಂಟೆಂಟ್ ಓರಿಯಂಟೆಡ್ ಚಿತ್ರ!

    08/06/2025

    kangana ranaut: ಸೋತು ಸುಣ್ಣವಾದ ಸಂಸೆದೆ ಬಣ್ಣ ಹಚ್ಚೋದೇ ಡೌಟು!

    04/06/2025

    era peri3 controvercy: ಶಿಸ್ತಿನ ಸಿಪಾಯಿ ಅಕ್ಷಯ್ ಕಡೆಯಿಂದೊಂದು ಎಡವಟ್ಟು!

    26/05/2025
    Search
    Category
    • OTT (3)
    • Uncategorized (11)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (20)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (51)
    • ಸೌತ್ ಜೋನ್ (89)
    • ಸ್ಪಾಟ್ ಲೈಟ್ (159)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (10)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202519 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    30/04/202511 Views
    Don't Miss
    ಬಾಲಿವುಡ್ 15/06/2025

    ramayana movie updates: ತನ್ನ ಪಾತ್ರದ ಬಗ್ಗೆ ಶಿಭಾ ಛಡ್ಡಾ ಹೇಳಿದ್ದೇನು?

    ಪ್ಯಾನಿಂಡಿಯಾ ಮಟ್ಟದಲ್ಲೀಗ ರಾಮಾಯಣ ಚಿತ್ರದ ಸುತ್ತ ಚರ್ಚೆಗಳು ನಡೆಯುತ್ತಿವೆ. ಅತ್ತ ಸದರಿ ಚಿತ್ರದ ಚಿತ್ರೀಕರಣ ಕೂಡಾ ಅತ್ಯಂತ ವೇಗವಾಗಿ ನಡೆಯುತ್ತಿದೆ.…

    singer mangli: ಸೆಲೆಬ್ರಿಟಿಯಾದೇಟಿಗೆ ಶುರುವಾಯ್ತಾ ತಿರ್ಕೆ ಶೋಕಿ?

    dharma keerthiraj: ಏಳು ಬೀಳಿನ ಹಾದಿಯಲ್ಲೀಗ ಗೆಲುವಿನ ಹೂಗೊಂಚಲು!

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.