Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    Facebook Twitter Instagram
    Friday, May 9
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » controvercy: ವಿಕ್ಷಿಪ್ತ ನಿರ್ದೇಶಕನ ಮೇಲೆ ಹೀಗೊಂದು ಆರೋಪ!
    ಸೌತ್ ಜೋನ್

    controvercy: ವಿಕ್ಷಿಪ್ತ ನಿರ್ದೇಶಕನ ಮೇಲೆ ಹೀಗೊಂದು ಆರೋಪ!

    By Santhosh Bagilagadde01/03/2024Updated:01/03/2024
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಹೆಚ್ಚಿನ ಬಾರಿ ಪ್ರತಿಭೆ ಮತ್ತು ವಿಕ್ಷಿಪ್ತತೆ ಒಂದರೊಳಗೊಂದು ಮಿಳಿತವಾಗಿರೋದಿದೆ. ಅಂಥಾದ್ದರ ಉತ್ತುಂಗದಂಥಾ ಸ್ಥಿತಿಗೆ ಉದಾಹರಣೆಯಂಥವರು ಬೇರೆ ಬೇರೆ ಭಾಷೆಗಳ ಸಿನಿಮಾ ರಂಗಗಳಲ್ಲಿ ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಆದರೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ (director bala) ಬಾಲನಂಥಾ ತಾಜಾ ಉದಾಹರಣೆ ಸಿಗುವುದು ತುಸು ಕಷ್ಟ. ಆತ ಪ್ರಖರ ಪ್ರತಿಭಾವಂತ, ಅಂತರ್ಮುಖಿ, ವಿಕ್ಷಿಪ್ತ ಜೀವಿ… ಬಹುಶಃ ಜೊತೆಯಲ್ಲಿ ಕೆಲಸ ಮಾಡಿದವರೂ ಕೂಡಾ ಬಾಲನ ವ್ಯಕ್ತಿತ್ವದ ಬಗ್ಗೆ ಇದಮಿತಂ ಎಂಬಂಥಾ ವಿವರಣೆ ಕೊಡುವುದು ಕಷ್ಟ. ಆತನೋರ್ವ ಸೈಕೋ ಅಂತೆಲ್ಲ ನಾನಾ ತೆರನಾದ ಅಂತೆಕಂತೆ, ಆರೋಪಗಳ ದಂಡೇ ಇವೆ. ಸದ್ಯ ಅದೆಲ್ಲವನ್ನೂ ಮತ್ತೆ ಗರಿಗೆದರುವಂತೆ ಮಾಡಿರುವುದು ಮಲೆಯಾಳಿ (actress mamita baiju) ಚೆಲುವೆ ಮಮಿತಾ ಬೈಜು ಮಾಡಿರುವ ಆರೋಪ!

    ಮಮಿತಾ ಬೈಜು ಮಲೆಯಾಳ ಚಿತ್ರರಂಗದಿಂದ ಬಂದರೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪ್ರಭಾವಳಿ ಹೊಂದಿರುವ ನಟಿ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಲೆಯಾಳದ ಪ್ರೇಮಾಲು ಚಿತ್ರದ ನಾಯಕಿಯಾಗಿ ನಟಿಸಿರುವ ಈಕೆ ದೊಡ್ಡ ಮಟ್ಟದಲ್ಲಿಯೇ ಗೆಲುವು ಕಂಡಿದ್ದಾಳೆ. ಬಹುಶಃ ಆಕೆಯ ವೃತ್ತಿ ಬದುಕಿಗೆ ಬಹುದೊಡ್ಡ ತಿರುವು ಕೊಡುವಂತೆ ಆ ಸಿನಿಮಾ ಗೆದ್ದಿದೆ. ಸಾಮಾನ್ಯವಾಗಿ, ಹೀಗೆ ಗೆದ್ದು ನಿಂತಾಗ ಆ ಹಾದಿಯಲ್ಲಿ ಅನುಭವಿಸಿದ್ದ ಅವಮಾನಗಳಿಗೆ ಸೆಡ್ಡು ಹೊಡೆಯುವ ಮನಃಸ್ಥಿತಿ ಮೂಡಿಕೊಳ್ಳುತ್ತೆ. ಇದೇ ರೀತಿ ಪ್ರೇಮಾಲು ಯಶದ ಪ್ರಭೆಯಲ್ಲಿಯೇ ಬಾಲ ನಿರ್ದೇಶನದ ವನಂಗಾನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತನಗಾದ ಅವಮಾನ, ಆಘಾತಗಳ ಬಗ್ಗೆ ಮಾತಾಡಿದ್ದಾಳೆ!

    ಅಂದಹಾಗೆ, ವರ್ಷಾಂತರಗಳ ನಂತರ ನಿರ್ದೇಶಕ ಬಾಲಾ ಕೈಗೆತ್ತಿಕೊಂಡಿರುವ ಚಿತ್ರ ವನಂಗಾನ್. ಒಂದಷ್ಟು ವರ್ಷಗಳ ಕಾಲ ಶುಷ್ಕ ವಾತಾವರಣದಲ್ಲಿ ಇದ್ದದ್ದರಿಂದಲೋ ಏನೋ; ಈ ಸಿನಿಮಾ ಸಂದರ್ಭದಲ್ಲಿ ಬಾಲನ ವಿಕ್ಷಿಪ್ತ ಮನಃಸ್ಥಿತಿ ಮೇರೆ ಮೀರಿದಂತಿದೆ. ಯಾಕೆಂದರೆ, ಆ ಸಿನಿಮಾ ಆರಂಭವಾದಾಗಿನಿಂದಲೂ ನಾನಾ ವಿವಾದಗಳು ಹಬೆಯಾಡಲಾರಂಭಿಸಿವೆ. ಈ ಚಿತ್ರದಲ್ಲಿ ಸೂರ್ಯ ನಾಯಕ ಎಂಬ ಕಾರಣದಿಂದ ನಿರೀಕ್ಷೆ ಮೂಡಿಕೊಂಡಿತ್ತು. ನಾಯಕಿಯಾಗಿ ಇದೇ ಮಮಿತಾ ಬೈಜು ಆಯ್ಕೆಯಾಗಿದ್ದಳು. ಈ ಸಂದರ್ಭದಲ್ಲಿ ಚಿತ್ರೀಕರಣದ ಪ್ರತೀ ಹಂತದಲ್ಲಿಯೂ ಬಾಲಾ ಮಮಿತಾಗೆ ಬೈದಾಡುತ್ತಿದ್ದನಂತೆ. ಕೆಲ ಸಂದರ್ಭದಲ್ಲಿ ಹಲ್ಲೆಯನ್ನೂ ನಡೆಸಿದ್ದನೆಂದು ಮಮಿತಾ ಹೇಳಿಕೊಂಡಿದ್ದಾಳೆ.

    ಮಮಿತಾಳ ವಿಚಾರ ಹಾಗಿರಲಿ; ಸೂರ್ಯನಂಥಾ ಸೂರ್ಯನೇ ಬಾಲಾನ ವಿಚಿತ್ರ ಮನಃಸ್ಥಿತಿ ಕಂಡು ಕಂಗಾಲ;ಆಗಿ ಬಿಟ್ಟಿದ್ದ. ಈ ಕಾರಣದಿಂದಲೇ ಸೆಟ್ಟಿನಿಂದ ನಾನಾ ಗಾಸಿಪ್ಪುಗಳು ಎಗರಿ ಬೀಳಲಾರಂಭಿಸಿದ್ದವು. ಕಡೆಗೂ ಇತ್ತೀಚೆಗೆ ಸೂರ್ಯ ವನಂಗಾನ್ ಚಿತ್ರದಿಂದ ಎದ್ದು ಹೊರಟಿದ್ದಾನೆ. ಮಮಿತಾ ಕೂಡಾ ಹೊರಬಿದ್ದಿದ್ದಾಳೆ. ಸದ್ಯಕ್ಕೆ ನಾಯಕ ನಾಯಕಿಯರಿಬ್ಬರನ್ನೂ ಬದಲಾಯಿಸಿರುವ ಬಾಲಾ, ಚಿತ್ರೀಕರಣ ಮುಂದುವರೆಸಿದ್ದಾನಂತೆ. ಚಿತ್ರರಂಗದಲ್ಲಿ ಹೆಚ್ಚಿನದಾಗಿ ಕಳವು ವೀರರೇ ತುಂಬಿಕೊಳ್ಳೋದಿದೆ. ಪುಟಗೋಸಿಯೊಂದನ್ನು ಹೊರತುಪಡಿಸಿ ಸ್ವಂತದ್ದೆನ್ನುವಂಥಾದ್ದು ಏನೂ ಇಲ್ಲದ ಖಾಲಿ ತಪಲೆಗಳೇ ಕೆಲ ಸಂದರ್ಭದಲ್ಲಿ ಸದ್ದು ಮಾಡುತ್ತವೆ. ಯಾರದ್ದೋ ಸರಕನ್ನು ತನ್ನದೇ ಎಂಬಂತೆ ಪೋಸು ಕೊಡುತ್ತಾ ನಿರ್ದೇಶಕರು, ಕಥೆಗಾರರ ಅವತಾರವೆತ್ತೋ ಚೋದ್ಯಗಳೂ ಸಂಭವಿಸೋದಿದೆ. ಕನ್ನಡ ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ.

    ಅಂಥಾ ಫಟಿಂಗರಿಗೆ ಹೋಲಿಕೆಯನ್ನೂ ಮಾಡಲಾಗದ ಪ್ರತಿಭೆ ಬಾಲನದ್ದು. ಆದರೆ, ವಿಕ್ಷಿಪ್ತ ನಡವಳಿಕೆಗಳೇ ಆತನನ್ನು ಪದೇ ಪದೆ ವನವಾಸಕ್ಕೆ ತಳ್ಳುತ್ತಿವೆ. ಮೈಕೊಡವಿಕೊಂಡು ನಿಂತರೆ ಈ ಕ್ಷಣಕ್ಕೂ ಒಂದು ದೃಷ್ಯದ ಅಚ್ಚರಿ ಸೃಷ್ಟಿಸಬಲ್ಲ ಛಾತಿ ಬಾಲನಿಗಿದೆ. ಆದರೆ, ಅಂಥಾ ಬಾಲ ಕನಸು ಹೊತ್ತು ಬಂದ ಹೆಣ್ಣುಮಗಳೊಬ್ಬಳ ಮೇಲೆ ಕೈ ಮಾಡುವಷ್ಟು ಸಂವೇದನೆ ಕಳೆದುಕೊಂಡಿದ್ದಾನೆಂಬುದೇ ದುರಂತದ ವಿಚಾರ. ಅಷ್ಟಕ್ಕೂ ಬಾಲನ ಮೇಲಿನ ಆರೋಪಗಳು ತಮಿಳು ಚಿತ್ರರಂಗದಲ್ಲಾಗಲಿ, ಪ್ರೇಕ್ಷಕರ ಪಾಲಿಗಾಗಲಿ ಹೊಸತಲ್ಲ. ಆದರೆ, ಮಲೆಯಾಳಿ ಹುಡುಗಿ ಮಮಿತಾ ಮಾಡಿರೋ ಆರೋಪದ ದೆಸೆಯಿಂದಾಗಿ ಬೇರೆ ಬಾಲನ ಕಿತಾಪತಿಗಳು ತಮಿಳುನಾಡಿನ ಗಡಿದಾಟಿ ಹಬ್ಬಿಕೊಂಡಿವೆ. ಭಾಷೆಯನ್ನು ಮೀರಿದ ಸಿನಿಮಾ ಪ್ರೇಮಿಗಳು ಬಾಲನಂಥಾ ನಿರ್ದೇಶಕರು ಈ ಮಟ್ಟಕ್ಕಿಳಿದಿರೋದು ದುರಂತ ಅಂತೆಲ್ಲ ಅಭಿಪ್ರಾಯ ದಾಖಲಿಸುತ್ತಿದ್ದಾರೆ!

    vanangaan_controversy_director_bala_suriya_mamitabaiju_tollywood_mollywood_premalu_movie_cinishodha
    Share. Facebook Twitter LinkedIn WhatsApp Telegram Email
    Previous Articleradhika apte: ಚಿತ್ರೋದ್ಯಮದಲ್ಲಿ ಮಹಿಳೆಯರದ್ದು ಎರಡನೇ ದರ್ಜೆ!
    Next Article vidyarthi vidyarthiniyare: ಇದು ಅರುಣ್ ಅಮುಕ್ತ ನಿರ್ದೇಶನದ ಚಿತ್ರ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    thandel movie: ಹೈಟೆಕ್ ಕಳ್ಳರ ವಿರುದ್ಧ ನಿರ್ಮಾಪಕರ ಸಮರ!

    11/02/2025

    actor surya: ಅಪಾಯದಂಚಿನಲ್ಲಿದೆ ಸೂರ್ಯನ ವೃತ್ತಿ ಬದುಕು!

    29/11/2024

    Allu arjun: ಸಂಭಾವನೆ ವಿಚಾರದಲ್ಲಿ ಅಲ್ಲು ಮುಂದೆ ಎಲ್ಲರೂ ಥಂಡಾ!

    28/11/2024
    Search
    Category
    • OTT (3)
    • Uncategorized (10)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (17)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (43)
    • ಸೌತ್ ಜೋನ್ (78)
    • ಸ್ಪಾಟ್ ಲೈಟ್ (151)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (9)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ!

    28/05/20237 Views

    ರಾಕಿ ಬಾಯ್ ಬಗ್ಗೆ ಮಂಗಳೂರು ಹುಡುಗಿ ಹೇಳಿದ್ದೇನು?

    25/05/20236 Views

    sanjay dutt: ಸಂಜಯ್ ದತ್ ವಿಲನ್‍ಗಿರಿ!

    28/05/20234 Views

    rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು?

    28/05/20234 Views
    Don't Miss
    ಸ್ಪಾಟ್ ಲೈಟ್ 30/04/2025

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸಿಟ್ಟುಕೊಂಡವರು, ಅದಕ್ಕಾಗಿ ಶತಾಯಗತಾಯ ಶ್ರಮ ಹಾಕುವವವರ ಸಂಖ್ಯೆ ಈ ಕ್ಷಣಕ್ಕೂ ಅಂದಾಜಿಗೆ ನಿಲುಕದಷ್ಟಿದೆ.…

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    vidyapati movie: ತನ್ನ ಪಾತ್ರದ ಬಗ್ಗೆ ಮಲೈಕಾ ತೆರೆದಿಟ್ಟ ಅಚ್ಚರಿ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.