Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    shefali jariwala: ಬ್ಯೂಟಿ ಕ್ವೀನುಗಳ ಸುತ್ತಾ ಸಾವಿನ ಬೋನು!

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    Facebook Twitter Instagram
    Thursday, July 3
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » naguvija hoogala mele movie: ಗೆಲುವಿನ ಗಮ್ಯವೀಗ ತುಂಬಾ ಸಮೀಪ!
    ಸ್ಪಾಟ್ ಲೈಟ್

    naguvija hoogala mele movie: ಗೆಲುವಿನ ಗಮ್ಯವೀಗ ತುಂಬಾ ಸಮೀಪ!

    By Santhosh Bagilagadde02/02/2024
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಲೆಕ್ಕವಿಡಲಾರದಷ್ಟು ಪ್ರೇಮ ಕಥೆಗಳು (love stories) ಬಂದು ಹೋದರೂ ಕೂಡಾ ಆ ಬಗೆಯ ಚಿತ್ರಗಳ ಮೇಲಿನ ಮೋಹ ಮುಗಿಯುವಂಥಾದ್ದಲ್ಲ. ವಿಶಿಷ್ಟ ಒಳಗಣ್ಣು ಹೊಂದಿರುವ ನಿರ್ದೇಶಕನೋರ್ವ ಪ್ರೇಮ ಕಥೆಯನ್ನು ಕೈಗೆತ್ತಿಕೊಂಡರಂತೂ ನಿರೀಕ್ಷೆ ನೂರ್ಮಡಿಸುತ್ತೆ. ಸದ್ಯದ ಮಟ್ಟಿಗೆ ಆ ದಿಕ್ಕಿನಲ್ಲೊಂದು ನಿರೀಕ್ಷೆ ಮೂಡಿಸಿರುವ ಚಿತ್ರ (naguvina hoogala mele movie) `ನಗುವಿನ ಹೂಗಳ ಮೇಲೆ’. ಇದೇ ಫೆಬ್ರವರಿ 9ರಂದು ತೆರೆಗಾಣಲಿರುವ ಈ ಚಿತ್ರವನ್ನು (director venkat bharadwaj) ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಸದರಿ ಸಿನಿಮಾ ಈ ವರ್ಷದ ಶುರುವಾತನ್ನು ಸಮ್ಮೋಹಕ ಗೆಲುವೊಂದರ ಮೂಲಕ ಕಳೆಗಟ್ಟಿಸುವ ಎಲ್ಲ ಲಕ್ಷಣಗಳೂ ಸದ್ಯದ ಮಟ್ಟಿಗೆ ದಟ್ಟವಾಗಿವೆ!

    ಯಾವುದೇ ಚಿತ್ರರಂಗದಲ್ಲಿ ಒಂದು ಬಗೆಯ ಅಲೆಯೆದ್ದಾಗ, ಅದುವೇ ಸನ್ನಿಯ ಸ್ವರೂಪ ಪಡೆದು ಎಲ್ಲವೂ ಅದರ ಓಘಕ್ಕೆ ತಕ್ಕುದಾಗಿ ಮುಂದುವರೆಯುತ್ತಿರುವಾಗ ಭಿನ್ನ ದಾರಿಯೊಂದರಲ್ಲಿ ಹೆಜ್ಜೆಯೂರೋದು ತ್ರಾಸದಾಯಕ ಸಂಗತಿ. ಗಟ್ಟಿಯಾದ ಪ್ರತಿಭೆಯಿದ್ದರೆ ಮಾತ್ರವೇ ಕಾಲೂರಿ ನಿಲ್ಲಲು ಸಾಧ್ಯವಾಗುತ್ತದೆ. ಅಂಥಾದ್ದೊಂದು ಕಸುವಿನ ಕಾರಣದಿಂದಲೇ ತಮ್ಮನ್ನು ತಾವು ನೆಲೆಗಾಣಿಸಿಕೊಂಡಿರುವವರು (director venkat bharadwaj) ನಿರ್ದೇಶಕ ವೆಂಕಟ್ ಭಾರದ್ವಾಜ್. ಈಗಾಗಲೇ ಒಂದಷ್ಟು ಸಿನಿಮಾಗಳ ಮೂಲಕ ಅವರ ಹಾದಿ ವಿಶಿಷ್ಟವಾದುದೆಂಬುದು ಸಾಬೀತಾಗಿದೆ. ಈ ಬಾರಿ ವೆಂಕಟ್ ನೋಡುಗರ ಮೈ ಮನಗಳಲ್ಲಿ ತಾಜಾ ಅನುಭೂತಿಯೊಂದನ್ನು ಪ್ರವಹಿಸುವಂತೆ ಮಾಡಬಲ್ಲ ಪರಿಶುದ್ಧ ಪ್ರೇಮಕಥಾನಕದೊಂದಿಗೆ ಮತ್ತೆ ಹಾಜರಾಗಿದ್ದಾರೆ.

    ಎಳೇ ಮನಸುಗಳು ಮಾತ್ರವಲ್ಲ; ಮಾಗಿದ ಜೀವಗಳನ್ನೂ ತಾಕಬಲ್ಲ ಕಥೆ ಈ ಚಿತ್ರದಲ್ಲಿದೆಯಂತೆ. ಆ ಪ್ರೇಮ ಕಥಾನಕವೀಗ ಪ್ರಧಾನವಾಗಿ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಈಗಾಗಲೇ ಬಿಡುಗಡೆಗೊಂಡಿರುವ ಅಷ್ಟೂ ಹಾಡುಗಳು ಕೂಡಾ ಕೇಳುಗರನ್ನು ಕಾಡಿವೆ. ಈ ಮೂಲಕ ವೆಂಕಟ್ ಭಾರದ್ವಾಜ್ ನಗುವಿನ ಹೂಗಳ ಮೇಲೆ ಚಿತ್ರದ ಹಾಡುಗಳನ್ನು ಯಾವತ್ತಿಗೂ ಆವರಿಸಿಕೊಳ್ಳುವಂತೆ ರೂಪಿಸಿದ್ದಾರೆ. ಬೇರೆ ವಿಚಾರಗಳಂತೆಯೇ ಹಾಡುಗಳನ್ನು ಸಿದ್ಧಪಡಿಸೋ ನಿಟ್ಟಿನಲ್ಲಿಯೂ ಚಿತ್ರತಂಡ ಅಪಾರವಾಗಿ ಶ್ರಮ ವಹಿಸಿದೆ. ಈ ಹಾಡುಗಳಿಗೆ ಸಮ್ಮೋಹಕ ಸ್ಪರ್ಶ ನೀಡುವ ಸಲುವಾಗಿಯೇ ಸಂಗೀತ ನಿರ್ದೇಶಕ ಲವ್ ಫ್ರಾನ್ ಮೆಹತಾರ ಆಗಮನವಾಗಿದೆ!

    ಲವ್ ಫ್ರಾನ್ ಮೆಹತಾ ಪಂಜಾಬ್ ಸೀಮೆಯ ಪ್ರಸಿದ್ಧ ಸಂಗೀತ ನಿರ್ದೇಶಕ. ಮೆಹತಾರ ಸಾರಥ್ಯದಲ್ಲಿ ಕನ್ನಡದ ಸೂಕ್ಷ್ಮ ಒಳನೋಟದ ಕವಿ ಚಿದಂಬರ ನರೇಂದ್ರ, ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ, ನರೇಂದ್ರ ಬಾಬು ಮುಂತಾದವರ ಸಾಹಿತ್ಯ ಕಳೆಗಟ್ಟಿಕೊಂಡಿದೆ. ಆಯಾ ಹಾಡಿನ ಭಾವಕ್ಕೆ ತಕ್ಕಂಥಾ ಧ್ವನಿ ಹುಡುಕುವಲ್ಲಿಯೂ ಇಲ್ಲಿ ಹೊಸತವಿದೆ. ಇಂಡಿಯನ್ ಐಡಲ್ ರನ್ನರ್ ಅಪ್ ಆಗಿರುವ ತೇಜೇಂದರ್ ಸಿಂಗ್, ನಿಹಾರಿಕಾ, ಮೇಘನಾ ಭಟ್ ಮತ್ತು ಕೇರಳ ಮೂಲದ ವಿಮಲ್ ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇಂಥಾದ್ದೊಂದು ತಪನೆಯಿಂದಲೇ ನಗುವಿನ ಹೂಗಳ ಮೇಲೀಗ ಮೆಲೋಡಿಯಸ್ ಮೆರವಣಿಗೆ ಹೊರಟಿದೆ. ಆ ಪಥದಲ್ಲೀಗ ಈ ಚಿತ್ರದ ಪಾಲಿಗೆ ಗೆಲುವಿನ ಗಮ್ಯ ತುಂಬಾ ಹತ್ತಿರವಾದಂತೆನಿಸುತ್ತಿದೆ!

    ಅಂದಹಾಗೆ, ಈ ಚಿತ್ರದಲ್ಲಿ ಅಭಿದಾಸ್ ಮತ್ತು ಶರಣ್ಯಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಕಿರುತೆರೆಯ ಮೂಲಕ ಒಂದಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವವರು ಅಭಿದಾಸ್. ಇನ್ನು ಸೋಶಿಯಲ್ ಮೀಡಿಯಾ ಮೂಲಕ ಭಾರೀ ಕ್ರೇಜ್ ಸೃಷ್ಟಿಸಿರುವ ಶರಣ್ಯಾ ಶೆಟ್ಟಿ ಈ ಚಿತ್ರದ ಮೂಲಕವೇ ಪೂರ್ಣಪ್ರಮಾಣದ ನಾಯಕಿಯಾಗಿದ್ದಾರೆ. ಈ ಜೋಡಿ ಇದೀಗ ಪ್ರೇಕ್ಷಕರ ಗಮನ ಸೆಳೆದಿದೆ ಎಂದರೆ, ಅದಕ್ಕೆ ಪ್ರಧಾನ ಕಾರಣ ಹಾಡುಗಳು ಅನ್ನೋದರಲ್ಲಿ ಎರಡು ಮಾತಿಲ್ಲ. ಹಾಗಂತ ಇದನ್ನು ಬರೀಯ ಪ್ರೇಮ ಕಥನ ಅಂದುಕೊಳ್ಳುವಂತಿಲ್ಲ. ವೆಂಕಟ್ ಭಾರದ್ವಾಜ್ ಅವರ ಕಸುಬುದಾರಿಕೆಯ ಅರಿವಿರುವವರ್ಯಾರೂ ಹಾಗಂದುಕೊಳ್ಳಲು ಸಾಧ್ಯವೂ ಇಲ್ಲ. ಅದಕ್ಕೆ ತಕ್ಕುದಾಗಿಯೇ ಬದುಕಿಗೆ ಹತ್ತಿರಾದಂಥಾ, ಪ್ರತೀ ನೋಡುಗರ ಪಾಲಿಗೆ ಆಪ್ಯಾಯವಾಗಬಲ್ಲಂಥಾ ಅನೇಕ ಅಂಶಗಳು ಈ ಕಥೆಯಲ್ಲಿ ಅಡಕವಾಗಿವೆಯಂತೆ.

    ಇನ್ನುಳಿದಂತೆ, ರಂಗಭೂಮಿ ಪ್ರತಿಭೆ ಅಭಿಷೇಕ್ ಅಯ್ಯಂಗಾರ್ ಈ ಚಿತ್ರದ ಮೂಲಕ ಸಂಭಾಷಣಾ ಕಾರರಾಗಿದ್ದಾರೆ. ಈ ಮೂಲಕ ಸಂಭಾಷಣೆಯಲ್ಲಿಯೂ ಕೂಡಾ ಹೊಸಾ ಅನ್ವೇಷಣೆ ಮಾಡಲಾಗಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಕೇವಲ ಹಾಡುಗಳ ವಿಚಾರದಲ್ಲಿ ಮಾತ್ರವಲ್ಲ; ಪ್ರತಿಯೊಂದರಲ್ಲಿಯೂ ನಗುವಿನ ಹೂಗಳ ಮೇಲೆ ಹೊಸತನ ತೊನೆದಾಡುವಂತೆ ಮಾಡಲಾಗಿದೆ. ಇದರ ಸೌಂಡ್ ರೇಕಾರ್ಡಿಂಗ್ ಅನ್ನು ಲಂಡನ್ನಿನಲ್ಲಿ ನಡೆಸಲಾಗಿದೆ. ಅದು ತಾಂತ್ರಿಕವಾಗಿಯೂ ಕೂಡಾ ಈ ಚಿತ್ರ ಭಿನ್ನವಾಗಿದೆ ಎಂಬುದರ ಸಂಕೇತ. ಹೀಗೆ ಬಿಡುಗಡೆಯ ಹೊಸ್ತಿಲಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾವನ್ನು ತೆಲುಗಿನ ಪ್ರಸಿದ್ಧ ನಿರ್ಮಾಪಕ ಕೆ.ಕೆ ರಾಧಾ ಮೋಹನ್ ನಿರ್ಮಾಣ ಮಾಡಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    naguvina_hoogala_mele_kannada_movie_abhidas_shranyashetty_venkatbharadwaj_sandalwood_kfi_cinishodha
    Share. Facebook Twitter LinkedIn WhatsApp Telegram Email
    Previous Articlerashmika mandanna: ಕೊಡಗಿನ ಹುಡುಗಿಗೆ ಮತ್ತೆ ಕೋಡು ಮೂಡಿದ ಕಥೆ!
    Next Article saramsha movie trailer review: ಇದು ರಕ್ತ ಕತ್ತಲೆ ಕರ್ಕಶಗಳಾಚೆಯ ಬೆರಗು
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    01/07/2025

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    01/07/2025

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    20/06/2025
    Search
    Category
    • OTT (3)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (21)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (57)
    • ಸೌತ್ ಜೋನ್ (99)
    • ಸ್ಪಾಟ್ ಲೈಟ್ (172)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (10)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202331 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views
    Don't Miss
    ಬಾಲಿವುಡ್ 02/07/2025

    shefali jariwala: ಬ್ಯೂಟಿ ಕ್ವೀನುಗಳ ಸುತ್ತಾ ಸಾವಿನ ಬೋನು!

    ಪ್ರಕೃತಿ ಸೂತ್ರಗಳಿಗೆ ವಿರುದ್ಧವಾಗಿ ಚಲಿಸಿ ಬಚಾವಾಗುವ ಯಾವ ಶಕ್ತಿಯೂ ಕೂಡಾ ಮನುಷ್ಯಮಾತ್ರರಿಗಿಲ್ಲ. ಇದು ಗೊತ್ತಿದ್ದೂ ಕೂಡಾ ಯೌವನವನ್ನು ಕಾಪಿಟ್ಟುಕೊಳ್ಳುವ, ಸಾವನ್ನು…

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.