Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    rashmika mandanna: ಕಿರಿಕ್ ಹುಡುಗಿಯ ಮಾದರಿ ನಡೆ!

    shefali jariwala: ಬ್ಯೂಟಿ ಕ್ವೀನುಗಳ ಸುತ್ತಾ ಸಾವಿನ ಬೋನು!

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    Facebook Twitter Instagram
    Facebook Twitter Instagram
    Cini ShodhaCini Shodha
    Subscribe
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » madenur manu controvercy: ಬ್ಯಾನ್ ಅನ್ನೋದೊಂದು ಭಯಾನಕ ಭಾನಗಡಿ!
    ಜಾಪಾಳ್ ಜಂಕ್ಷನ್

    madenur manu controvercy: ಬ್ಯಾನ್ ಅನ್ನೋದೊಂದು ಭಯಾನಕ ಭಾನಗಡಿ!

    By Santhosh Bagilagadde26/05/2025
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ವ್ಯಕ್ತಿತ್ವದಲ್ಲೊಂದು ಪ್ರಾಮಾಣಿಕತೆ, ಮಾತು, ವರ್ತನೆಗಳಲ್ಲಿ ಘನತೆ ಗೌರವಗಳಿಲ್ಲದಿದ್ದರೆ ಅಂಥಾ ವ್ಯಕ್ತಿಯ ಅವಸಾನಕ್ಕೆ ಬೇರೆ ಕಾರಣಗಳೇ ಬೇಕಾಗುವುದಿಲ್ಲ. ಅದರಲ್ಲಿಯೂ ಸಿನಿಮಾದಂಥಾ ಸಾರ್ವಜನಿಕ ಬದುಕಿನಲ್ಲಿರುವವರಂತೂ ಇಂಥಾದ್ದನ್ನೆಲ್ಲ ಬಲು ಎಚ್ಚರಿಕೆಯಿಂದ ಪರಿಪಾಲಿಸಬೇಕಾಗುತ್ತದೆ. ಈಗಂತೂ ತಂತ್ರಜ್ಞಾನ ಮನುಷ್ಯನ ನರನಾಡಿಗಳನ್ನೂ ಆವರಿಸಿಕೊಂಡಿರುವ ದಿನಮಾನ. ಇಂಥಾ ಘಳಿಗೆಯಲ್ಲಿ ಖಾಸಗಿತನವೆಂಬುದೇ ಬಯಲಲ್ಲಿ ನಿಂತಂಥಾ ಪರಿಸ್ಥಿತಿ ಇದೆ. ಈ ಹೊತ್ತಿನಲ್ಲಿ ಹರುಕುಬಾಯಿ ಹರಿಯಬಿಟ್ಟರೆ ಏನಾದೀತೆಂಬುದಕ್ಕೆ ದರ್ಶನ್ ಬಗ್ಗೆ ಮಾತಾಡಿ ತಗುಲಿಕೊಂಡಿದ್ದ ನವರಸನಾಯಕನಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಆದರೆ, ಹಠಾತ್ತನೆ ಸಿಕ್ಕ ಖ್ಯಾತಿ, ಕ್ಷಣಿಕ ಗೆಲುವಿನ ಭ್ರಮೆ ಕಣ್ಣೆದುರ ಎಚ್ಚರಿಕೆಯತ್ತ ಕಡೆಗಣ್ಣಲ್ಲಿಯೂ ನೋಡದಂತೆ ಮಾಡಿ ಬಿಡುತ್ತವೆ. ಅಂಥಾದ್ದೊಂದು ಹಂತ ತಲುಪಿಕೊಂಡಿದ್ದ ಮಡೇನೂರು ಮನುಗೀಗ ಅಷ್ಟ ದಿಕ್ಕುಗಳಿಂದಲೂ ಕಂಟಕಗಳು ಅಮರಿಕೊಳ್ಳುತ್ತಿದ್ದಾವೆ!

    ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆಗಿದ್ದ ಮಡೇನೂರು ಮನು ಕಷ್ಟದಿಂದಲೇ ಮೇಲೆದ್ದು ಬಂದಿದ್ದ. ಒಂದಷ್ಟು ಪ್ರಯತ್ನ ಪಟ್ಟು ಕುಲದಲ್ಲಿ ಕೀಳ್ಯಾವುದೋ ಅಂತೊಂದು ಸಿನಿಮಾದಲ್ಲಿ ನಾಯಕನಾಗಿದ್ದ. ಈ ವಾರ ಬಿಡುಗಡೆಗೊಂಡಿರೋ ಆ ಸಿನಿಮಾ ಪ್ರೇಕ್ಷಕರಿಲ್ಲದೆ ಭಣಗುಡುತ್ತಿದೆ. ಬಹುಶಃ ಮದೇನೂರನ ಕಾಮಪುರಾಣ ಬಯಲಾಗದಿದ್ದಿದ್ದರೂ ಇದಕ್ಕಿಂತ ಭಿನ್ನವಾದ ವಾತಾವರಣ ಇರುತ್ತಿರಲಿಲ್ಲ. ಆದರೆ, ಮುಂದೊಂದಷ್ಟು ಪ್ರಯತ್ನ ಪಟ್ಟಿದ್ದರೆ, ನಾಯಕನಾಗಿಯಲ್ಲದಿದ್ದರೂ ಬೇರೆ ಪಾತ್ರಗಳಲ್ಲಿಯಾದರೂ ಮಿಂಚೋ ಅವಕಾಶ ವಿಪುಲವಾಗಿತ್ತು. ಅದೆಲ್ಲವನ್ನೂ ಮಡೇನೂರು ಮನು ಕೈಯಾರೆ ಹಾಳುಗೆಡವಿಕೊಂಡಿದ್ದಾನೆ. ಇಷ್ಟೂ ವರ್ಷಗಳ ಪ್ರಯತ್ನದ ಫಲವನ್ನು ಹರುಕುಬಾಯಿ ಮತ್ತು ಲೂಸು ಲಂಗೋಟಿಯ ದೆಸೆಯಿಂದ ಕಳೆದುಕೊಂಡಿದ್ದಾನೆ.

    ಮನು ಅದ್ಯಾರೋ ಮಿಂಚು ಎಂಬಾಕೆಯೊಂದಿನ ಅಫೇರಿನ ಮೂಲಕವೇ ಜೈಲುವಾಸ ಅನುಭವಿಸುತ್ತಿದ್ದಾನೆ. ಅಷ್ಟೇ ಆಗಿದ್ದರೆ ಒಂದಷ್ಟು ದಿನದ ಜೈಲುವಾಸದ ನಂತರ ಮರಳಿ ಹೇಗೋ ಬಣ್ಣ ಹಚ್ಚಬಹುದಿತ್ತು. ಆದರೀಗ ಆತನ ವ್ಯಕ್ತಿತ್ವದ ಬಣ್ಣವೇ ಬಯಲಾಗಿ ಬಿಟ್ಟಿದೆ. ಯಾಕೆಂದರೆ, ಆತ ಎಣ್ಣೆ ಏಟಲ್ಲಿ ದರ್ಶನ್, ಶಿವರಾಜ್ ಕುಮಾರ್, ಧ್ರುವ ಸರ್ಜಾ ಮುಂತಾದವರ ಬಗ್ಗೆ ಆಡಿರುವ ಮಾತುಗಳೀಗ ವೈರಲ್ ಆಗಿ ಬಿಟ್ಟಿವೆ. ಅವರೆಲ್ಲರನ್ನು ಸೈಡ್ ಲೈನ್ ಮಾಡಿ ತಾನೇ ಮೆರೆಯೋದಾಗಿ ಹೇಳಿಕೊಂಡಿರುವ ಮನು ಮಾತುಗಳ ವಿರುದ್ಧ ಸಿನಿಮಾಸಕ್ತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ವಿಚಾರದಲ್ಲಿ ಕ್ಯಾಮೆಯಿಲ್ಲದೆ ಕೂತಿದ್ದ ವಾಣಿಜ್ಯ ಮಂಡಳಿಯ ಮಂದಿ ಆಕ್ಟೀವ್ ಆಗಿದ್ದಾರೆ. ಮನುವನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ಕಸರತ್ತೊಂದು ಒಳಗೊಳಗೇ ನಡೆಯುತ್ತಿರುವಂತಿದೆ.

    ಅಷ್ಟಕ್ಕೂ ಈ ಬ್ಯಾನ್ ಅನ್ನೋದೇ ಒಂದು ಭಾನಗಡಿ. ಯಾಕೆಂದರೆ, ಘಟಾನುಘಟಿ ನಟ ನಟಿಯರು ಎಂಥೆಂಥಾದ್ದೋ ರಂಖಲು ಮಾಡಿಕೊಂಡಾಗ ವಾಣಿಜ್ಯ ಮಂಡಳಿ ಬೆನ್ನ ಹುರಿಯೇ ನೆಟ್ಟಗಿಲ್ಲದಂತೆ ನಡೆದುಕೊಳ್ಳುತ್ತದೆ. ಸಿನಿಮಾ ರಂಗದ ಹಲವಾರು ಸಂಕಷ್ಟದ ವಿಚಾರದಲ್ಲಿಯೂ ಅದರದ್ದು ಅಂಥಾದ್ದೇ ಸ್ಥಿತಿ. ಹಾಗಿರುವಾಗಿ ಇವನ್ಯಾರೋ ಮಡೇನೂರು ಮನುವನ್ನು ಬ್ಯಾನ್ ಮಾಡಿ ಮೀಸೆ ತಿರುವಿಕೊಂಡರೆ ಜನರ ಪಾಲಿಗದು ಕಾಮಿಡಿಕಯಾಗಿಯಷ್ಟೇ ಕಾಣಿಸುತ್ತದೆ. ಯಾಕೆಂದರೆ, ಸದ್ಯದ ಮಟ್ಟಿಗೆ ಸಿನಿಮಾ ಮತ್ತು ಕಿರುತೆರೆ ಮಂದಿ ಇಂಣಣಥಾ ವಿವಾದಗಳನ್ನೇ ಸರಕಾಗಿಸಿಕೊಂಡಿದ್ದಾರೆ. ಇಂಥಾ ರಂಖಲುಗಳಿಗೆಲ್ಲ ಬ್ಯಾನ್ ಮಾಡೋದೇ ಆಗಿದ್ದರೆ, ಸಿನಿಮಾ ರಂಗವೀಗ ಅರ್ಧ ಖಾಲಿಯಾಗಿರುತ್ತಿತ್ತೇನೋ…

    ಹಾಗಂತ ಈ ಮಡೇನೂರಿನ ಮನುವನ್ನು ಕ್ಷಮಿಸುವಂತಿಲ್ಲ. ಹಾಗೆ ನೋಡಿದರೆ, ಈತ ಪ್ರಸಿದ್ಧಿ ಪಡೆದಿದ್ದೇ ಹಾಸ್ಯದ ಮೂಲಕ. ಆತನನ್ನು ನಾಯಕ ನಟನನ್ನಾಗಿ ನೋಡುವ ಇರಾದೆ ಯಾರೊಬ್ಬರಿಗೂ ಇಲ್ಲ. ಅಷ್ಟಕ್ಕೂ ನಾಯತಕನಾಗಿ ಮೆರೆಯಬೇಕೆಂದುಕೊಂಡಿದ್ದು ಆತನ ಭ್ರಮೆಯ ಕಾರಣದಿಂದಷ್ಟೆ. ಹಾಗಿರುವಾಗ, ಈ ಆಸಾಮಿ ದರ್ಶನ್, ಶಿವಣ್, ಧ್ರುವನಿಗೆ ತನ್ನನ್ನು ತಾನು ಹೋಲಿಸಿಕೊಂಡು ಮಾತಾಡೋದೇ ಕಾಮಿಡಿಯ ಪರಾಕಾಷ್ಠೆ. ಈಗ ಒಬ್ಬ ಮನುವಿನ ನಿಜ ಬಣ್ಣ ಬಯಲಾಗಿದೆ. ಇಂಥಾ ತಿಮಿರಿನ ಹುಳುಗಳು ಕಿರುತೆರೆ, ಹಿರಿತೆರೆಗಳ ಸಂದಿಗೊಂದಿಗಳಲ್ಲಿ ಮಿಜಿಗುಡುತ್ತಿದ್ದಾವೆ. ಇವುಗಳಿಗೆ ಬಾಯಿಯ ಮೇಲಾಗಲಿ, ಕಚ್ಚೆಯ ಮೇಲಾಗಲಿ ಹಿಡಿತವಿಲ್ಲ. ಸಿಕ್ಕ ಪ್ರಸಿದ್ಧಿಯಯಲ್ಲಿ ಶಕ್ತಿ ಮೀರಿ ಮಜಾ ಉಡಾಯಿಸಿ, ಸಿಕ್ಕಷ್ಟು ಕಾಸು ಗೋರಿಕೊಂಡು ಹೋಗೋದಷ್ಟೇ ಇಂಥವುಗಳ ಇದ್ದೇಶ. ಇದೆಲ್ಲದರಾಚೆಗೆ, ಹಳ್ಳಿಯಿಂದ ಬಂದು ಒಂದಷ್ಟು ಭರವಸೆ ಮೂಡಿಸಿದ್ದ ಮಡೇನೂರು ಮನು ಕಾಮ, ವಿವಾದಗಳ ಕೊಚ್ಚೆಯಲ್ಲಿ ಕಳೆದು ಹೋಗಿರೋದು ನಿಜಕ್ಕೂ ವಿಷಾಧದ ವಿಚಾರ!

    #comedykhiladigalu #controvercy #madenurmanu #minchu kfi sandalwood
    Share. Facebook Twitter LinkedIn WhatsApp Telegram Email
    Previous Articleera peri3 controvercy: ಶಿಸ್ತಿನ ಸಿಪಾಯಿ ಅಕ್ಷಯ್ ಕಡೆಯಿಂದೊಂದು ಎಡವಟ್ಟು!
    Next Article mrinal takur: ತೆಲುಗುನಾಡಲ್ಲೀಗ ಠಾಕೂರ್ ಹುಡುಗಿ ಲಕಲಕ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    kapata nataka sutradhari trailer review: ಚರ್ಚೆಗೆ ಗ್ರಾಸವಾಯ್ತು ಕಪಟ ನಾಟಕ ಸೂತ್ರಧಾರಿ ಟ್ರೈಲರ್!

    20/06/2025

    deadly lovers movie: ಥ್ರಿಲ್ಲಿಂಗ್ ನಶೆಯಲ್ಲಿರಬಹುದಾ ಕೌತುಕದ ಪಸೆ?

    18/06/2025

    sanju weds geetha2 movie: ಹರುಕು ಚಲ್ಲಣಕ್ಕೆ ತ್ಯಾಪೆ ಹಚ್ಚೋ ಸರ್ಕಸ್ಸು!

    18/06/2025
    Search
    Category
    • OTT (3)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (21)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (58)
    • ಸೌತ್ ಜೋನ್ (100)
    • ಸ್ಪಾಟ್ ಲೈಟ್ (172)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (10)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202525 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views

    padmagandhi movie: ಮುಂಗಾರಿಗೆ ಸಾಥ್ ಕೊಡಲಿದೆ ಗೀತ ಗುಚ್ಛ!

    12/06/202513 Views
    Don't Miss
    ಸೌತ್ ಜೋನ್ 04/07/2025

    rashmika mandanna: ಕಿರಿಕ್ ಹುಡುಗಿಯ ಮಾದರಿ ನಡೆ!

    ತೆಲುಗು ಚಿತ್ರರಂಗಕ್ಕೆ ಹಾರಿ, ಅಲ್ಲಿ ಭರಪೂರ ಗೆಲುವು ದಕ್ಕುತ್ತಲೇ ನಿಂತಲ್ಲಿ ಕುಂತಲ್ಲಿ ಕಿರಿಕ್ಕು ಸೃಷ್ಟಿಸಿಕೊಂಡಿದ್ದಾಕೆ ರಶ್ಮಿಕಾ ಮಂದಣ್ಣ. ತನ್ನದೊಂದು ಮಾತು…

    shefali jariwala: ಬ್ಯೂಟಿ ಕ್ವೀನುಗಳ ಸುತ್ತಾ ಸಾವಿನ ಬೋನು!

    sangeetha sringeri: ರಕ್ಷಿತ್ ಶೆಟ್ಟಿ ಹೀರೋಯಿನ್ ಹೀಗೇಕಾದಳು?

    neethu vanajakshi: ಬಿಗ್ ಬಾಸ್ ನ ಅಸಲೀ ಆಕರ್ಷಣೆ ನೀತು ವನಜಾಕ್ಷಿ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.