Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    Facebook Twitter Instagram
    Friday, May 9
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » saptha sgagaradache ello review: ಮುಗಿದ ಮೇಲೂ ಮನಸಿಗಂಟುತ್ತೆ ಗಾಢ ಪ್ರೇಮದ ಪರಾಗ!
    ಹೀಗಿದೆ ಈ ಪಿಚ್ಚರ್

    saptha sgagaradache ello review: ಮುಗಿದ ಮೇಲೂ ಮನಸಿಗಂಟುತ್ತೆ ಗಾಢ ಪ್ರೇಮದ ಪರಾಗ!

    By Santhosh Bagilagadde02/09/2023Updated:02/09/2023
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಸಪ್ತ ಸಾಗರದಾಚೆ ಎಲ್ಲೋ (saptha sagaradache ello) ಎಂಬ ಗೋಪಾಕೃಷ್ಣ ಅಡಿಗರ (poet gopalakrishna adiga) ಕವಿತೆಯ ಸಾಲೊಂದು ಸಿನಿಮಾ ಶೀರ್ಷಿಕೆಯಾದಾಗಲೇ, ಸಿನಿಮಾ ಪ್ರೇಮಿಗಳ ಮನಸಲ್ಲಿ ಪುಳಕದ ಪತಂಗ ಸರಿದಾಡಲಾರಂಭಿಸಿತ್ತು. ಆ ಶೀರ್ಷಿಕೆಯಲ್ಲಿಯೇ ಒಟ್ಟಾರೆ ಕಥನದ ಭಾವ ತೀವ್ರತೆ, ಸೂಕ್ಷ್ಮವಂತಿಕೆ ಅನಾವರಣಗೊಂಡಿತ್ತು. ಹೇಳಿಕೇಳಿ ನೇರವಾಗಿ ಎದೆಗೆ ತಾಕುವ ಕಥೆಗಳನ್ನು ಮುಟ್ಟೋದರಲ್ಲಿ (director hemanth)  ನಿರ್ದೇಶಕ ಹೇಮಂತ್ ನಿಸ್ಸೀಮ. ಹಾಗಿರುವಾಗ, ಸಪ್ತ ಸಾಗರದಾಚೆ ಅಂದಾಜಿಸಲಾಗದ ಬೆರಗುಗಳಿವೆ ಎಂಬುದು ಬಹುತೇಕರಿಗೆ ಸ್ಪಷ್ಟವಾಗಿತ್ತು. ಆ ನಂತರ ಒಂದಷ್ಟು ಹೊಳಹುಗಳನ್ನು ಸಿನಿಮಾ ತಂಡ ಬಿಟ್ಟುಕೊಟ್ಟಿತ್ತಲ್ಲಾ? ತಾನೇ ತಾನಾಗಿ ಈ ಚಿತ್ರದ ಬಗೆಗೆ ಕುತೂಹಲ ಕಾವೇರಿಕೊಳ್ಳಲಾರಂಭಿಸಿತ್ತು. (rkshith shetty) ರಕ್ಷಿತ್ ಮತ್ತು ರುಕ್ಮಿಣಿ ವಸಂತ್ ಕಾಂಬಿನೇಷನ್ನು, ಪ್ರತಿಭಾನ್ವಿತ ತಂಡದ ಸಾಹಚರ್ಯ ಯಾವ ರೀತಿಯಲ್ಲಿ ಮೋಡಿ ಮಾಡಿರಬಹುದೆಂಬ ಪ್ರಶ್ನೆಗಳಿಗೀಗ ಉತ್ತರ ಸಿಕ್ಕಿದೆ; ನೋಡುಗರ ಕಣ್ಣಂಚಿಗಿಳಿದ ಹನಿಗಳು, ಯಾವುದೇ ಬಿಲ್ಡಪ್ಪುಗಳ ಹಂಗಿಲ್ಲದೆ ತಲ್ಲಣಿಸುವಂತೆ ಮಾಡುವ ಮ್ಯಾಜಿಕ್ಕಿನ ಮೂಲಕ!

    ಪ್ರೇಮವೆಂಬುದು ಸಿನಿಮಾ ಚೌಕಟ್ಟಿಗೆ ಯಾವತ್ತಿದ್ದರೂ ತಾಜಾತನದಿಂದಲೇ ಒಗ್ಗಿಕೊಳ್ಳುವ ಮಾಯೆ. ಪ್ರೇಮ ಕಥನದ ಚುಂಗು ಹಿಡಿದು ಹೊರಟವರ ಕ್ರಿಯಾಶೀಲತೆ, ಸ್ವಂತಿಕೆಯ ಮೇಲೆ ಅದರ ಪರಿಣಾಮ ನಿಂತಿರುತ್ತೆ. ಆ ನಿಟ್ಟಿನಲ್ಲಿ ಹೇಳೋದಾದರೆ, ನಿರ್ದೇಶಕ ಹೇಮಂತ್ ಈ ಚಿತ್ರವನ್ನು ಮೆಲುವಾಗಿ ಆವರಿಸಿಕೊಂಡು ಬಿಡುವ ದೃಷ್ಯಕಾವ್ಯವಾಗಿಸುವಲ್ಲಿ ಗೆದ್ದಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಎರಡು ಭಾಗಗಳಲ್ಲಿ ತೆರೆಗಾಣುವ ಸುದ್ದಿ ಹೊರ ಬಿದ್ದಾಕ್ಷಣ ಇದು ಬೇಕಿತ್ತಾ ಎಂಬಂಥಾ ಪ್ರಶ್ನೆ ಹಲವರಲ್ಲಿ ಮೂಡಿಕೊಂಡಿತ್ತು. ಹಾಗೊಂದು ಪ್ರಶ್ನೆ ಮೂಡಿದ ಮನಸುಗಳಲ್ಲೇ, ಬಿ ಸೈಡ್ ಬಗ್ಗೆ ಕುತೂಹಲ ಮಿಸುಕಾಡುವಂತೆ ಮಾಡಿದೆ ಎಂದರೆ, ಸಪ್ತ ಸಾಗರದಾಚೆಯ ಬೆರಗುಗಳ ಬಗ್ಗೆ ಬೇರೇನೂ ವಿವರಿಸುವ ಅವಶ್ಯಕತೆಯಿಲ್ಲ.

    ಇಲ್ಲಿರೋದು ಮಧ್ಯಮ ವರ್ಗದ ಎರಡು ಮನಸುಗಳ ನಡುವೆ ಪ್ರವಹಿಸುವ ಗಾಢ ಪ್ರೇಮ. ವಿನಾ ಕಾರಣ ರೊಮ್ಯಾಂಟಿಕ್ ಅಂಶಗಳನ್ನು ಬೆರೆಸದೆ, ಬಿಲ್ಡಪ್ಪುಗಳಲ್ಲಿ ದೃಷ್ಯಗಳನ್ನು ಮೆರೆಸದೆ ಸಹಾಜಾತಿ ಸಹಜವಾಗಿ ಭಾವನೆಗಳು ಇಲ್ಲಿ ಅನುರಣಿಸುತ್ತವೆ. ಸಿನಿಮಾ ಶುರುವಾಗುತ್ತಲೇ ನಾಯಕ ನಾಯಕಿಯ ಪ್ರೇಮ ಕಥೆ ತೆರೆದುಕೊಳ್ಳುತ್ತದೆ. ಆಕೆ ಕಡಲೂರಿನಿಂದ ಬಂದ ಹುಡುಗಿ. ಗಿಜಿಗುಡುವ ಊರಲ್ಲಿ ನಿಂತಿದ್ರೂ ಕಡನ್ನೇ ಧ್ಯಾನವಾಗಿಸಿಕೊಂಡವಳು. ಆತ ಬದುಕಿಗಾಗಿ ಒಂದು ವೃತ್ತಿ ಮಾಡುತ್ತಾ, ಶ್ರೀಮಂತಿಕೆಯ ವಾತಾವರಣದಲ್ಲಿದ್ದರೂ ಮಧ್ಯಮ ವರ್ಗದ ತಲ್ಲಣಗಳನ್ನು ಹಾಸಿ ಹೊದ್ದಂತಿರುವ ಹುಡುಗ. ಆದರೆ, ಆತನನ್ನು ಆವರಿಸಿಕೊಂಡ ಪ್ರೇಮ ಎಲ್ಲ ಮಿತಿಗಳನ್ನು ಮೀರಿ, ಅಸಾಧ್ಯವೆಂಬುದರತ್ತ ಕೈ ಚಾಚುವಂತೆ ಮಾಡುತ್ತೆ.

    ಅದು ನೈಜ ಪ್ರೇಮಕ್ಕಿರುವ ನಿಜವಾದ ಶಕ್ತಿ. ಪ್ರೀತಿಸಿದ ಜೀವವನ್ನು ದಕ್ಕಿಸಿಕೊಳ್ಳಲು ಅದು ಎಂಥಾ ಸಾಹಸಕ್ಕೂ ಪ್ರೇರೇಪಿಸಿ ಬಿಡುತ್ತೆ. ಅದರ ಸೆಳವಿಗೆ ಸಿಕ್ಕು ಮಹತ್ತರವಾದನ್ನು ಸಾಧಿಸಿದವರಿದ್ದಾರೆ. ಸೋಲಿನ ಹುದುಲಿಂದಲೇ ಪುಟಿದೆದ್ದು ಗೆದ್ದವರೂ ಇದ್ದಾರೆ. ಅದೆಲ್ಲವೂ ಹೆಜ್ಜೆಯೂರುವ ಹಾದಿಯನ್ನ ಅವಲಂಬಿಸಿರುತ್ತೆ. ಇಲ್ಲಿ ನಾಯಕ ತನ್ನ ಜತ್ತಿನಂಥವಳ ಕನಸು ನನಸು ಮಾಡಲು ತುಳಿದ ಹಾದಿ ಯಾವುದು? ಅದು ಆತನನ್ನು ಯಾವ ತೀರಕ್ಕೆ ಕರೆದೊಯ್ದು ಬಿಡುತ್ತೆ? ಇಂಥಾ ಪ್ರಶ್ನೆಗಳಿಗೆ ಸಿಗಬಹುದಾದ ಉತ್ತರವೇ ಒಂದಿಡೀ ಸಿನಿಮಾದ ಸಾರ. ಅದು ಹಪುಗಳಾಚೆಗೂ ಕಳೆಗಟ್ಟಿಕೊಂಡಿದೆ ಎಂಬುದೇ ಸಪ್ತ ಸಾಗರದಾಚೆಯ ನಿಜವಾದ ಸಾರ್ಥಕತೆ.

    ಇಲ್ಲಿ ಮಧ್ಯಮ ವರ್ಗದ ಕನವರಿಕೆಗಳಿಗೆ, ಶ್ರೀಮಂತಿಕೆಯ ಠೇಂಕಾರ, ಹುನ್ನಾರಗಳು ಮುಖಾಮುಖಿಯಾಗುತ್ತವೆ. ಸಂವೇದನೆ ಕಳೆದುಕೊಂಡು, ಯಾರನ್ನ ಪಣಕ್ಕಿಟ್ಟಾದರೂ ಕಂಟಕದಿಂದ ಪಾರಾಗುವ ಕಾಂಚಾಣದ ಮನಸಲತ್ತುಗಳು ಕಂಗಾಲಾಗಿಸುತ್ತವೆ. ಓರ್ವ ನಿರ್ದೇಶಕನಾಗಿ ಪ್ರತೀ ಸೂಕ್ಷ್ಮವನ್ನೂ ಪರಿಗಣಿಸಿ, ಈ ಸಿನಿಮಾವನ್ನು ರೂಪಿಸಿರುವ ನಿರ್ದೇಶಕರು ನಿಜಕ್ಕೂ ಅಚ್ಚರಿ ಮೂಡಿಸುತ್ತಾರೆ. ಮೊದಲಾರ್ಧದ ತುಂಬಾ ನಾಯಕ, ನಾಯಕಿಯ ನಡುವಿನ ಮಧುರ ಪ್ರೇಮದ ಕನವರಿಕೆಯಲ್ಲಿಯೇ ಸಾಗುತ್ತದೆ. ದೃಷ್ಯಗಳು ಸರಿಯುತ್ತ ಕುತೂಹಲ ಹರಳುಗಟ್ಟುತ್ತಾ, ದ್ವಿತೀಯಾರ್ಧ ದಾಟಿಕೊಂಡ ನಂತರ ಅದು ಅಕ್ಷರಶಃ ನಿಗಿನಿಗಿಸುತ್ತೆ. ಇತ್ತೀಚಿನ ದಿನಮಾನದಲ್ಲಿ ನಾಯಕ ನಾಯಕಿಯರ ಕೆಮಿಸ್ಟ್ರಿಯೊಂದಿಗೆ ಗೆದ್ದ ಪ್ರೇಮ ಕಥನಗಳು ವಿರಳ. ಆ ಸಾಲಿಗೆ ನಿಸ್ಸಂದೇಹವಾಗಿಯೂ ಸಪ್ತ ಸಾಗರಾದಾಚೆ ಎಲ್ಲೋ ಸೇರಿಕೊಳ್ಳುತ್ತೆ. ಕ್ಲೈಮ್ಯಾಕ್ಸಿನ ಹೊತ್ತಿಗೆಲ್ಲ ನಿರ್ದೇಶಕ ದುನಿಯಾ ಸೂರಿಯ ಫಾರ್ಮುಲಾಕ್ಕೆ ಪಕ್ಕಾದಂತೆ ಕಾಣಿಸುವ ನಿರ್ದೇಶಕರು, ಸೈಡ್ ಬಿಯ ತುಣುಕುಗಳ ಮೂಲಕ ಕುತೂಹಲವನ್ನು ಕಾಪಿಟ್ಟುಕೊಳ್ಳುತ್ತಾರೆ. ಮೊದಲ ಭಾಗ ನೋಡಿದವರಲ್ಲೆಲ್ಲ ಎರಡನೇ ಭಾಗ ನೋಡುವ ಉತ್ಕಟ ತುಡಿತವೊಂದು ಊಟೆಯೊಡೆಯುತ್ತೆ.

    ಹೀಗೆ ಎರಡು ಭಾಗಗಳಲ್ಲಿ ಸಿನಿಮಾವೊಂದನ್ನು ರೂಪಿಸುವಾಗ ನಾನಾ ರೀತಿಯಲ್ಲಿ ಎಚ್ಚರ ವಹಿಸಬೇಕಾಗುತ್ತದೆ. ಅದೆಲ್ಲವನ್ನೂ ನಿರ್ದೇಶಕರು ಲೀಲಾಜಾಲವಾಗಿಯೇ ನಿಭಾಯಿಸಿದ್ದಾರೆ. ನಟನೆಯ ವಿಚಾರಕ್ಕೆ ಬಂದರೆ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಪಾತ್ರದಲ್ಲಿಯೇ ಲೀನಾವಾದಂತೆ ಕಾಣುತ್ತಾರೆ. ಈ ಹುಡುಗಿ ರುಕ್ಮಿಣಿಯಂಥಾ ಪ್ರತೀ ಫ್ರೇಮಿನಲ್ಲಿಯೂ ಒಳಗಿಳಿಯುತ್ತಾಳೆ. ಹಾಗೆ ಪಾತ್ರಗಳೆಲ್ಲವನ್ನೂ ಪರಿಣಾಮಕಾರಿಯಾಗಿ ರೂಪಿಸಿದ ಫಾಯಿದೆ ನಿರ್ದೇಶಕರಿಗೂ ಸಲ್ಲುತ್ತದೆ. ಸೂಕ್ಷವಂತಿಕೆ ಇರುವ ಪ್ರೇಕ್ಷಕರನ್ನೆಲ್ಲ ಕ್ಷಣಾರ್ಧದಲ್ಲಿ ಆವರಿಸಿಕೊಳ್ಳುವ ಗುಣ ಹೊಂದಿರುವ ಈ ಸಿನಿಮಾ, ಭಿನ್ನ ಆಸಕ್ತಿಯ ನೋಡುಗರಿಗೂ ಸಲೀಸಾಗಿ ರುಚಿಸುತ್ತದೆ ಅನ್ನುವಂತಿಲ್ಲ. ಆದರೆ ಎಲ್ಲ ವರ್ಗದವರನ್ನೂ ಆವರಿಸಿಕೊಳ್ಳುವಂಥಾ ಭಾವತೀವ್ರತೆಯಂತೂ ಖಂಡಿತಾ ಇಲ್ಲಿದೆ. ಸಂಭಾಷಣೆಗೂ ಕೂಡಾ ಅಂಥಾದ್ದೊಂದು ಕಸುವಿದೆ.

    ಹಾಗಾದರೆ, ಎಲ್ಲ ಕೋನಗಳಿಂದಲೂ ಸಪ್ತ ಸಾಗರದಾಚೆ ಎಲ್ಲೋ ಪರಿಪೂರ್ಣ ಚಿತ್ರವಾ? ಕೊರತೆಗಳಿಲ್ಲವಾ ಅಂತ ನೋಡ ಹೋದರೆ, ಒಂದಷ್ಟು ವಿಚಾರಗಳು ಗಮನಕ್ಕೆ ಬರುತ್ತವೆ. ಆ ಯಾದಿಯಲ್ಲಿ ದೊಡ್ಡ ಕೊರತೆಯಾಗಿ ಕಾಣಿಸೋದು ಹಾಡುಗಳು. ಈ ಸಿನಿಮಾದಲ್ಲಿ ಹಿಟ್ ಹಾಡುಗಳಿಲ್ಲ. ಈ ಬಗೆಯ ಸಿನಿಮಾಗಳ ಗೆಲುವಿನಲ್ಲಿ ಅದರ ಪಾಲೂ ಖಂಡಿತಾ ಇರುತ್ತದೆ. ಆದರೇಕೋ ಚರಣ್ ರಾಜ್ ಅದರತ್ತ ಗಮನ ಹರಿಸಿಲ್ಲ. ಆದರೆ ಹಿನ್ನೆಲೆ ಸಂಗೀತದಲ್ಲವರು ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಕಾಸ್ಟ್ಯೂಮು, ಒಟ್ಟಾರೆ ಲುಕ್ಕಿನ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಪಾತ್ರವನ್ನು ಬೊಟ್ಟು ಮಾಡದಂತೆ ರೂಪಿಸುವಲ್ಲಿಯೂ ನಿರ್ದೇಶಕರು ಒಂದಷ್ಟು ಎಚ್ಚರ ತಪ್ಪಿದಂತೆ ಭಾಸವಾಗುತ್ತೆ. ಆದರೆ ಒಟ್ಟಾರೆ ಸಿನಿಮಾದ ಅಂದವೆಂಬುದು ಒಂದಷ್ಟು ತಪ್ಪುಗಳು ಮತ್ತು ಕೊರತೆಯನ್ನು ಮಾಫಿ ಮಾಡಿ, ದೃಷ್ಯಗಳಲ್ಲಿ ಲೀನವಾಗುವಂತೆ ಮಾಡಿ ಬಿಡುತ್ತದೆ. ಒಟ್ಟಾರೆಯಾಗಿ, ಇದು ಈ ಕಾಲಮಾನದ ಒಂದೊಳ್ಳೆ ಪ್ರೇಮ ಕಥಾನಕ. ಸಿನಿಮಾ ನೋಡಿಯಾದ ಮೇಲೂ ಗಾಢ ಪ್ರೇಮದ ಪರಾಗ ಮನಸಿಗಂಟಿಕೊಳ್ಳುತ್ತೆ. ಪ್ರೀತಿಯ ಕಿರುಬೆರಳು ಉಣುಚಿಕೊಂಡ ಕರುಳ ಸಂಕಟ ನಮ್ಮದೇ ಅನ್ನಿಸಿ ಬಿಡುತ್ತೆ. ಬಿ ಸೈಡ್ ನೋಡೋ ಹಂಬಲದೊಂದಿಗೆ, ಬೊಗಸೆಯ ತುಂಬಾ ಭಾವದ ಕಡಲೊಂದು ಭೋರ್ಗರೆದಂತೆ ಭಾಸವಾಗುತ್ತೆ. ಇದಕ್ಕಿಂತ ಸಾರ್ಥಕತೆ ಮತ್ತೇನಿದೆ?

    cinishodhareview hemanthmrao rakshithshetty rukminivasanth sapthasagaradacheello sapthasagaradacheelloreview sse
    Share. Facebook Twitter LinkedIn WhatsApp Telegram Email
    Previous Articlejailer movie actual collection details: ದಾಖಲೆಯತ್ತ ದಾಪುಗಾಲಿಡುತ್ತಿದೆ ತಲೈವಾ ಚಿತ್ರ!
    Next Article bhavapoorna tariler review: ಮೋಡಿ ಮಾಡಿದರು ನೋಡಿ ಚೇತನ್ ಮುಂಡಾಡಿ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    sse side b release date postponed: ಸಪ್ತ ಸಾಗರದಾಚೆ ಸುಪ್ತ ಲೆಕ್ಕಾಚಾರ!

    12/10/2023

    toby movie review: ಶೆಟ್ರು ತೋರಿಸಿದ್ದು ಬಂಗುಡೆ; ಥಿಯೇಟರಿನಲ್ಲಿ ಕಂಡಿದ್ದು ಸಣಕಲು ಬೂತಾಯಿ!

    26/08/2023

    bang movie review: ಶೀರ್ಷಿಕೆ ಬ್ಯಾಂಗು; ಪ್ರಚಾರಕ್ಕಾಗಿ ಬಿಟ್ಟಿದ್ದೆಲ್ಲವೂ ಬರೀ ಭೋಂಗು!

    19/08/2023
    Search
    Category
    • OTT (3)
    • Uncategorized (10)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (17)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (43)
    • ಸೌತ್ ಜೋನ್ (78)
    • ಸ್ಪಾಟ್ ಲೈಟ್ (151)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (9)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ!

    28/05/20237 Views

    ರಾಕಿ ಬಾಯ್ ಬಗ್ಗೆ ಮಂಗಳೂರು ಹುಡುಗಿ ಹೇಳಿದ್ದೇನು?

    25/05/20236 Views

    sanjay dutt: ಸಂಜಯ್ ದತ್ ವಿಲನ್‍ಗಿರಿ!

    28/05/20234 Views

    rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು?

    28/05/20234 Views
    Don't Miss
    ಸ್ಪಾಟ್ ಲೈಟ್ 30/04/2025

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸಿಟ್ಟುಕೊಂಡವರು, ಅದಕ್ಕಾಗಿ ಶತಾಯಗತಾಯ ಶ್ರಮ ಹಾಕುವವವರ ಸಂಖ್ಯೆ ಈ ಕ್ಷಣಕ್ಕೂ ಅಂದಾಜಿಗೆ ನಿಲುಕದಷ್ಟಿದೆ.…

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    vidyapati movie: ತನ್ನ ಪಾತ್ರದ ಬಗ್ಗೆ ಮಲೈಕಾ ತೆರೆದಿಟ್ಟ ಅಚ್ಚರಿ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.