Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    Facebook Twitter Instagram
    Thursday, May 8
    Facebook Twitter Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Cini ShodhaCini Shodha
    You are at:Home » Blog » Guns And Roses Movie: ಗನ್ಸ್ ಅಂಡ್ ರೋಸಸ್ ಅನ್ನದಾತನ ಇಂಟ್ರೆಸ್ಟಿಂಗ್ ಕಹಾನಿ!
    ಸ್ಪಾಟ್ ಲೈಟ್

    Guns And Roses Movie: ಗನ್ಸ್ ಅಂಡ್ ರೋಸಸ್ ಅನ್ನದಾತನ ಇಂಟ್ರೆಸ್ಟಿಂಗ್ ಕಹಾನಿ!

    By Santhosh Bagilagadde21/12/2024Updated:21/12/2024
    Facebook Twitter Telegram Email WhatsApp
    Share
    Facebook Twitter LinkedIn WhatsApp Email Telegram

    ಸಿನಿಮಾ ಎಂಬುದೀಗ ಕಲೆಯ ಪರಿಧಿಯಾಚೆಗೆ ಬೃಹತ್ ಉದ್ಯಮವಾಗಿ ಹಬ್ಬಿಕೊಂಡಿದೆ. ಅದೀಗ ಬಹುಕೋಟಿ ವ್ಯವಹಾರ. ಇಂಥಾ ವಲಯಕ್ಕೆ ಪಾದಾರ್ಪಣೆ ಮಾಡೋ ನಿರ್ಮಾಪಕರುಗಳಿಗೆ ಸಹಜವಾಗಿಯೇ ಹಣ ಹೂಡಿಕೆ ಮಾಡಿ, ಅದನ್ನು ದುಪ್ಪಟ್ಟಾಗಿ ಹಿಂಪಡೆಯುವ ಆಸೆಯಿರುತ್ತದೆ. ಆದರೆ, ನಿರ್ಮಾಣ ರಂಗಕ್ಕಿಳಿದು ಅದನ್ನೂ ಕೂಡಾ ಒಂದಷ್ಟು ಮಂದಿಗೆ ಅನ್ನದ ಮೂಲವಾಗುತ್ತದೆಂಬ ಆತ್ಮತೃಪ್ತಿಯಲ್ಲಿ ಖುಷಿ ಕಾಣುವ, ಒಂದು ಚೌಕಟ್ಟಿನಲ್ಲಿ ಚೆಂದದ ಸಿನಿಮಾ ರೂಪಿಸಿ, ಹೊಸಬರಿಗೆ ಅವಕಾಶ ಕೊಟ್ಟು ಸಂಭ್ರಮಿಸುವವರು ವಿರಳ. ಅಂಥಾ ಅಪರೂಪದ ಮನಃಸ್ಥಿತಿ ಹೊಂದಿರುವವರ ಸಾಲಿಗೆ (guns and roses movie) ಗನ್ಸ್ ಅಂಡ್ ರೋಸಸ್ ಚಿತ್ರದ ನಿರ್ಮಾಪಕ (producer h.r nataraj) ಹೆಚ್.ಆರ್ ನಟರಾಜ್ ನಿಸ್ಸಂದೇಹವಾಗಿಯೂ ಸೇರಿಕೊಳ್ಳುತ್ತಾರೆ.

    ಜನವರಿ 3ರಂದು ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ (guns and roses movie) ಗನ್ಸ್ ಅಂಡ್ ರೋಸಸ್ ಬಿಡುಗಡೆಗೊಳ್ಳಲಿದೆ. ಇದನ್ನು ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವವರು (h.r nataraj) ಹೆಚ್.ಆರ್ ನಟರಾಜ್. ಮೂಲತಃ ಲ್ಯಾಂಡ್ ಡೆವಲಪರ್ ಆಗಿರುವ ನಟರಾಜ್, ರಾಜಕಾರಣದಲ್ಲಿಯೂ ಸಕ್ರಿಯರಾಗಿದ್ದವರು. ಇಪ್ಪತ್ತೆರಡು ವರ್ಷಗಳಿಂದ ಲ್ಯಾಂಡ್ ಡೆವಲಪರ್ ಆಗಿ ವ್ಯವಹಾರ ನಡೆಸಿದ್ದ ಅವರು 2015ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಹೀಗೆ ವ್ಯವಹಾರ ಮತ್ತು ರಾಜಕಾರಣದ ನಡುವಲ್ಲಿಯೇ ಸಿನಿಮಾ ಸಾಹಚರ್ಯ ಹೊಂದಿದ್ದ ನಟರಾಜ್ ಅವರ ಪಾಲಿಗೆ ಬಣ್ಣದ ಜಗತ್ತಿನ ಬಗ್ಗೆ ಆರಂಭ ಕಾಲದಿಂದಲೂ ಬೆರಗಿತ್ತು. ಈ ಕಾರಣದಿಂದಲೇ ಸಿನಿಮಾ ಜಗತ್ತಿನ ಅನೇಕರೊಂದಿಗೆ ನಿಕಟ ನಂಟು ಹೊಂದಿದ್ದರು. ಕಡೆಗೂ ಅವರೀಗ ಗನ್ಸ್ ಅಂಡ ರೋಸಸ್ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ.

    ಕನಕಪುರ ಮೂಲದ ಹೆಚ್.ಆರ್ ನಟರಾಜ್ ಮತ್ತು ಈ ಚಿತ್ರದ ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಇಪ್ಪತೈದು ವರ್ಷಗಳಿಂದಲೂ ಪರಿಚಿತರು. ಈಗ್ಗೆ ವರ್ಷಗಳ ಹಿಂದೆ ಸಿನಿಮಾ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕನಾಗಿ ಎಂಟ್ರಿ ಕೊಡಲಿರುವ ಚಿತ್ರದ ತಯಾರಿ ನಡೆದಿತ್ತು. ಅದರ ಸಾರಥ್ಯವನ್ನು ಹೆಚ್.ಎಸ್ ಶ್ರೀನಿವಾಸ್ ಕುಮಾರ್ ವಹಿಸಿಕೊಂಡರೆ, ನಿರ್ಮಾಪಕರಾಗಲು ನಟರಾಜ್ ತಯಾರಾಗಿದ್ದರು. ಅಜಯ್ ಕುಮಾರ್ ಬಳಿ ಕಾರ್ಯನಿರ್ವಹಿಸುತ್ತಿದ್ದ ಶರತ್ ಬರೆದ ಕಥೆ ಎಲ್ಲರಿಗೂ ಹಿಡಿಸಿದ್ದೇ ಗನ್ಸ್ ಅಂಡ್ ರೋಸಸ್ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಂತಾಗಿತ್ತು. ನಟರಾಜ್ ರ ಪಾಲಿಗೆ ಸದರಿ ಕಥೆ ಹಿಡಿಸಲು ಕಾರಣವಾಗಿದ್ದದ್ದು ಅದರಲ್ಲಿನ ಸಾಮಾಜಿಕ ಕಳಕಳಿ ಮತ್ತು ನಿರ್ದೇಶಕರು ಅದನ್ನು ಸಮರ್ಥವಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಕಟ್ಟಿ ಕೊಡುತ್ತಾರೆಂಬ ಗಾಢ ನಂಬಿಕೆ.

    ಹೀಗೊಂದು ಹೆಜ್ಜೆಯಿಡುವ ಮುನ್ನ ಹೆಚ್.ಆರ್ ನಟರಾಜ್ ಅವರು ಗುರು ಸಾನಿಧ್ಯಕ್ಕೆ ತೆರಳಿ ಅರಿಕೆ ಮಾಡಿಕೊಂಡಾಗ, ಅತ್ತಲಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತಂತೆ. ಸಿನಿಮಾ ಅಂದರೆ ಹೊರಜಗತ್ತಿನ ಕಲ್ಪನೆ ಸಾವಿರವಿದ್ದೀತು. ಆದರೆ, ಒಂದು ಸಿನಿಮಾ ಶುರುವಾದರೆ ಅದು ನೂರಾರು ಮಂದಿಯ ಅನ್ನದ ಮೂಲವಾಗುತ್ತದೆ. ಆ ದಿಕ್ಕಿನಲ್ಲಿ ಆಲೋಚಿಸಿದರೆ ನಿರ್ಮಾಪಕನ ಪಾಲಿಗೆ ಅದೊಂದು ಭಾಗ್ಯವೇ. ಅಂಥಾ ಅಧ್ಯಾತ್ಮಿಕ ಅನುಭೂತಿಯೊಂದಿಗೇ ಈ ಸಿನಿಮಾವನ್ನು ನಟರಾಜ್ ಅವರು ನಿರ್ಮಾಣ ಮಾಡಿದ್ದಾರೆ. ಇದನ್ನೂ ಕೂಡಾ ಕಲಾ ಸೇವೆಯೆಂದೇ ಪರಿಭಾವಿಸಿದ್ದಾರೆ. ಸಿನಿಮಾವನ್ನು ವ್ಯವಹಾರದಾಚೆಗೂ ಮೋಹಿಸುವ ಗುಣ ಹೊಂದಿರೋ ನಟರಾಜ್ ಪಾಲಿಗೆ ಗನ್ಸ್ ಅಂಡ್ ರೋಸಸ್ ಚಿತ್ರ ಮೂಡಿ ಬಂದಿರುವ ರೀತಿಯ ಬಗ್ಗೆ ತೃಪ್ತಿಯಿದೆ. ಒಂದಷ್ಟು ಹೊಸಾ ಪ್ರತಿಭೆಗಳು ಈ ಮೂಲಕವೇ ಬೆಳಕು ಕಾಣುತ್ತಿರೋದರ ಬಗ್ಗೆ ಖುಷಿಯಿದೆ. ಗನ್ಸ್ ಅಂಡ್ ರೋಸಸ್ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆಂಬ ನಂಬಿಕೆಯೂ ಗಟ್ಟಿಯಾಗಿದೆ.

    ಇಂಥಾ ಅಪ್ಪಟ ಸಿನಿಮಾ ವ್ಯಾಮೋಹದ ನಿರ್ಮಾಪಕರ ನೆರಳಿನಲ್ಲಿ ಮಹತ್ವದ ಸಿನಿಮಾಗಳು ಸೃಷಿಯಾಗೋ ಸಾಧ್ಯತೆಗಳಿವೆ. ಒಂದು ಪ್ರತಿಭಾನ್ವಿತರ ತಂಡ ಸೇರಿಕೊಂಡು ಗನ್ಸ್ ಅಂಡ್ ರೋಸಸ್ ಚಿತ್ರವನ್ನು ಅನ್ನದಾತ ಸಂತೃಪ್ತಗೊಳಿಸುವಂತೆ ರೂಪಿಸಿದ್ದಾರೆ. ಅಂಥಾದ್ದೊಂದು ಛಾಯೆ ನೋಡುಗರಿಗೂ ದಾಟಿಕೊಂಡರೆ, ವರ್ಷಾರಂಭದಲ್ಲಿಯೇ ಕನ್ನಡ ಚಿತ್ರರಂಗ ಮತ್ತೊಂದು ಗೆಲುವಿನ ಹುರುಪು ತುಂಬಿಕೊಂಡಂತಾಗುತ್ತದೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ಬಿಡುಗಡೆಗೊಳ್ಳಲಿದೆ.

    #arjun #gunsandroses #gunsandrosesmovie) #hrnataraj #hsshrinivaskumar #latestupdates cinishodha kfi lifestory sandalwood
    Share. Facebook Twitter LinkedIn WhatsApp Telegram Email
    Previous Articlebilichukki hallihakki movie: ಪೋಸ್ಟರಿನಲ್ಲಿ ಮಿಂಚಿದ ಮಂಗಳೂರು ಹುಡುಗಿ!
    Next Article Guns And Roses Movie: ಕನಸಿನ ಹಾದಿಯ ಬಗ್ಗೆ ಶ್ರೀನಿವಾಸ್ ಕುಮಾರ್ ತೆರೆದಿಟ್ಟ ಅಚ್ಚರಿ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    30/04/2025

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    25/04/2025

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    24/04/2025
    Search
    Category
    • OTT (3)
    • Uncategorized (10)
    • ಕಿರುತೆರೆ ಕಿಟಕಿ (3)
    • ಜಾಪಾಳ್ ಜಂಕ್ಷನ್ (17)
    • ಟೇಕಾಫ್ (7)
    • ಬಣ್ಣದ ಹೆಜ್ಜೆ (19)
    • ಬಾಲಿವುಡ್ (43)
    • ಸೌತ್ ಜೋನ್ (78)
    • ಸ್ಪಾಟ್ ಲೈಟ್ (151)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (9)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    supritha sathyanarayan: ಸುಪ್ರಿತಾಳ ಮುಂದೀಗ ಅವಕಾಶಗಳ ಸುಗ್ಗಿ!

    28/05/20237 Views

    ರಾಕಿ ಬಾಯ್ ಬಗ್ಗೆ ಮಂಗಳೂರು ಹುಡುಗಿ ಹೇಳಿದ್ದೇನು?

    25/05/20236 Views

    sanjay dutt: ಸಂಜಯ್ ದತ್ ವಿಲನ್‍ಗಿರಿ!

    28/05/20234 Views

    rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು?

    28/05/20234 Views
    Don't Miss
    ಸ್ಪಾಟ್ ಲೈಟ್ 30/04/2025

    timepass movie: ಗಾಂಧಿನಗರಕ್ಕೆ ಕನ್ನಡಿ ಹಿಡಿಯಿತೇ ಹೊಸಬರ ತಂಡ?

    ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕನಸಿಟ್ಟುಕೊಂಡವರು, ಅದಕ್ಕಾಗಿ ಶತಾಯಗತಾಯ ಶ್ರಮ ಹಾಕುವವವರ ಸಂಖ್ಯೆ ಈ ಕ್ಷಣಕ್ಕೂ ಅಂದಾಜಿಗೆ ನಿಲುಕದಷ್ಟಿದೆ.…

    Puppy trailer review: ಬೆರಗಿನಿಂದ ಭೇಶ್ ಅಂದು ಸಾಥ್ ಕೊಟ್ಟ ಧ್ರುವ ಸರ್ಜಾ!

    terror movie: ಟೆರರ್ ಲುಕ್ಕಲ್ಲಿ ಅವತರಿಸಿದ ಆದಿತ್ಯ!

    vidyapati movie: ತನ್ನ ಪಾತ್ರದ ಬಗ್ಗೆ ಮಲೈಕಾ ತೆರೆದಿಟ್ಟ ಅಚ್ಚರಿ!

    Stay In Touch
    • Facebook
    • Instagram
    • YouTube
    • WhatsApp

    Subscribe to Updates

    Get the latest creative news from Cini Shodha about Media and Entertainment

    Digicube Solutions
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook Twitter YouTube WhatsApp
    Most Popular

    Duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?

    26/05/20230 Views

    actress romola: ರಿಚ್ಚಿ ಹುಡುಗಿಯ ಮುಂದೆ ಅವಕಾಶಗಳ ಮೆರವಣಿಗೆ!

    26/05/20230 Views

    diganth: ಸತಾಯಿಸಿದನೇ ಪರಮ ಸೋಂಭೇರಿ?

    26/05/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS

    Type above and press Enter to search. Press Esc to cancel.