<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	 xmlns:media="http://search.yahoo.com/mrss/" >

<channel>
	<title>crime &#8211; Cini Shodha</title>
	<atom:link href="https://www.cinishodha.com/tag/crime/feed/" rel="self" type="application/rss+xml" />
	<link>https://www.cinishodha.com</link>
	<description>Filmi News Online - Kannada</description>
	<lastBuildDate>Tue, 17 Mar 2026 17:01:15 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://www.cinishodha.com/wp-content/uploads/2025/11/cropped-cinishodha-icon-32x32.png</url>
	<title>crime &#8211; Cini Shodha</title>
	<link>https://www.cinishodha.com</link>
	<width>32</width>
	<height>32</height>
</image> 
	<item>
		<title>Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ!</title>
		<link>https://www.cinishodha.com/big-relief-for-darshan-17-03-2026/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 17 Mar 2026 14:50:31 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[#darshanthoogudeepa]]></category>
		<category><![CDATA[#renukaswamymurdercase]]></category>
		<category><![CDATA[cinishodha]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[kfi]]></category>
		<category><![CDATA[parappanaagrahara]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=11959</guid>

					<description><![CDATA[<p>ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬೇಲ್ ಸಿಕ್ಕು ಹೊರ ಬರುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ವರ್ಷದ ಬರ್ತ್‌ಡೇ ಸಂದರ್ಭದಲ್ಲಿ ಬಾಸು ಹೊರಬರುತ್ತಾರೆಂಬ ಭರವಸೆಯೊಂದು ಸೆಲೆಬ್ರಿಟಿಗಳಲ್ಲಿತ್ತು. ಆದರೀಗ ಮುಂದಿನ ವರ್ಷದ ಹುಟ್ಟುಹಬ್ಬಕ್ಕಾದರೂ ಬರಬಹುದಾ ಎಂಬಂಥಾ ಪ್ರಶ್ನೆ ಎಲ್ಲರಲ್ಲೂ ಉಳಿದುಕೊಂಡಿದೆ. ಯಾಕೆಂದರೆ, ಕಾನೂನು ಕಣಿಕೆ ಎಂಬುದು ಅಷ್ಟೊಂದು ಬಿಗುವಾಗಿ ಬಿಟ್ಟಿದೆ. ಯಾವ ದಿಕ್ಕಿನತ್ತ ಕಣ ಣು ಹಾಯಿಸಿದರೂ ಸಕಾರಾತ್ಮಕ ವಾತಾವರಣ ಕಾಣದೆ ಅಭಿಮಾನಿ ಬಳಗ ಕಂಗಾಲೆದ್ದಿದೆ. ಇದುವರೆಗೂ ಜೈಲೊಳಗೆ ಅನುಭವಿಸುತ್ತಿರೋ ನರಕದಿಂದ ಪಾರಾಗಲು ದರ್ಶನ್ ಕಡೆಯಿಂದ ಕೋರ್ಟಿಗೆ ಅರ್ಜಿಗಳು [...]</p>
<p>The post <a rel="nofollow" href="https://www.cinishodha.com/big-relief-for-darshan-17-03-2026/">Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 20px;"><span style="color: #00ccff;"><strong><span style="font-size: 24px;">ಚಾ</span></strong></span>ಲೆಂಜಿಂಗ್ ಸ್ಟಾರ್ <a href="https://www.cinishodha.com/darshan-controversy-20-08-2025/">ದರ್ಶನ್‌</a>ಗೆ ಬೇಲ್ ಸಿಕ್ಕು ಹೊರ ಬರುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ವರ್ಷದ ಬರ್ತ್‌ಡೇ ಸಂದರ್ಭದಲ್ಲಿ ಬಾಸು ಹೊರಬರುತ್ತಾರೆಂಬ ಭರವಸೆಯೊಂದು ಸೆಲೆಬ್ರಿಟಿಗಳಲ್ಲಿತ್ತು. ಆದರೀಗ ಮುಂದಿನ ವರ್ಷದ ಹುಟ್ಟುಹಬ್ಬಕ್ಕಾದರೂ ಬರಬಹುದಾ ಎಂಬಂಥಾ ಪ್ರಶ್ನೆ ಎಲ್ಲರಲ್ಲೂ ಉಳಿದುಕೊಂಡಿದೆ. ಯಾಕೆಂದರೆ, ಕಾನೂನು ಕಣಿಕೆ ಎಂಬುದು ಅಷ್ಟೊಂದು ಬಿಗುವಾಗಿ ಬಿಟ್ಟಿದೆ. ಯಾವ ದಿಕ್ಕಿನತ್ತ ಕಣ ಣು ಹಾಯಿಸಿದರೂ ಸಕಾರಾತ್ಮಕ ವಾತಾವರಣ ಕಾಣದೆ ಅಭಿಮಾನಿ ಬಳಗ ಕಂಗಾಲೆದ್ದಿದೆ. ಇದುವರೆಗೂ ಜೈಲೊಳಗೆ ಅನುಭವಿಸುತ್ತಿರೋ ನರಕದಿಂದ ಪಾರಾಗಲು ದರ್ಶನ್ ಕಡೆಯಿಂದ ಕೋರ್ಟಿಗೆ ಅರ್ಜಿಗಳು ರವಾನೆಯಾಗಿವೆ. ಆದರೆ, ತೀರ್ಪಿನ ರೂಪದಲ್ಲಿ ಬಂದೆರಗಿದ್ದು ಆಘಾತ ಮಾತ್ರ!</span></p>
<blockquote class="wp-embedded-content" data-secret="yS8aD3CbaD"><p><a href="https://www.cinishodha.com/darshan-photo-leak-case-17-08-2025/">darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?</a></p></blockquote>
<p><iframe class="wp-embedded-content" sandbox="allow-scripts" security="restricted"  title="&#8220;darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?&#8221; &#8212; Cini Shodha" src="https://www.cinishodha.com/darshan-photo-leak-case-17-08-2025/embed/#?secret=IMfR8mqPlW#?secret=yS8aD3CbaD" data-secret="yS8aD3CbaD" width="600" height="338" frameborder="0" marginwidth="0" marginheight="0" scrolling="no"></iframe></p>
<p style="text-align: justify;"><img fetchpriority="high" decoding="async" class="alignnone wp-image-11960 size-full" src="https://www.cinishodha.com/wp-content/uploads/2026/03/FotoJet-57-3.webp?_t=1773763856" alt="FotoJet 57 3" width="800" height="450" title="Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ! 3 » cinishodha.com" srcset="https://www.cinishodha.com/wp-content/uploads/2026/03/FotoJet-57-3.webp 800w, https://www.cinishodha.com/wp-content/uploads/2026/03/FotoJet-57-3-512x288.webp 512w, https://www.cinishodha.com/wp-content/uploads/2026/03/FotoJet-57-3-768x432.webp 768w, https://www.cinishodha.com/wp-content/uploads/2026/03/FotoJet-57-3-150x84.webp 150w, https://www.cinishodha.com/wp-content/uploads/2026/03/FotoJet-57-3-450x253.webp 450w" sizes="(max-width: 800px) 100vw, 800px" /><span style="font-size: 20px;">ಆದರೆ, ಈ ಬಾರಿ ಮಾತ್ರ ಕೋರ್ಟ್ ಕಡೆಯಿಂದ ದರ್ಶನ್‌ಗೆ ತುಸು ನಿರಾಳವಾಗುವಂಥಾ ತೀರ್ಪು ಸಿಕ್ಕಿದೆ. <a href="https://www.cinishodha.com/darshan-bail-cancelled-14-08-2025/">ರೇಣುಕಾಸ್ವಾಮಿ</a> ಕೊಲೆ ಕೇಸಿನಲ್ಲಿ ಮೊದಲ ಬಾರಿ ಜೈಲು ಪಾಲಾಗಿದ್ದ ದರ್ಶನ್‌ಗೆ ಆ ಅನುಭವ ಚೇತೋಹಾರಿಯಾಗಿತ್ತು. ಪಕ್ಕದ ಸೆಲ್ಲಿನಲ್ಲಿಯೇ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಇದ್ದ. ಮತ್ತೋರ್ವ ರೌಡಿ ಸೈಕಲ್ಲು ತನ್ನ ಶಿಷ್ಯ ಬೇಕರಿ ರಘುವನ್ನು ದಾಸನ ಪರಿಚಾರಿಕೆಗೆಂದೇ ಪರಪ್ಪನ ಅಗ್ರಹಾರಕ್ಕೆ ಅಂದರ್ ಆಗಿಸಿದ್ದ. ಸಿಗರೇಟು, ಎಣ್ಣೆ, ಪವಡಿಸಲು ಹಾಯೆನಿಸೋ ಪಲ್ಲಂಗವೂ ಸೇರಿದಂತೆ ಎಲ್ಲವೂ ಚೆನ್ನಾಗಿತ್ತು. ಆದರೆ, ಎರಡನೇ ಬಾರಿ ಬೇಲ್ ಕ್ಯಾನ್ಸಲ್ ಆಗಿ ಜೈಲು ಪಾಲಾದ ನಂತರ ದರ್ಶನ್‌ಗೆ ಪ್ರತೀ ದಿನವೂ ನರಕ ದರ್ಶನ ಮಾಡಿಸಲಾರಂಭಿಸಿದೆ.</span></p>
<p style="text-align: justify;"><img decoding="async" class="alignnone wp-image-11961 size-full" src="https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg.webp?_t=1773763893" alt="df388620 2f99 11ef 9552 ddad3d31dcba.jpg" width="1024" height="576" title="Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ! 4 » cinishodha.com" srcset="https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg.webp 1024w, https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg-512x288.webp 512w, https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg-768x432.webp 768w, https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg-150x84.webp 150w, https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg-450x253.webp 450w" sizes="(max-width: 1024px) 100vw, 1024px" /><span style="font-size: 20px;">ದರ್ಶನ್ ಸದಾ ತನ್ನ ಬಳಗದೊಂದಿಗೆ ಬೆರೆತು ಬದುಕುತ್ತಿದ್ದಾತ. ಅದೇನೇ ಮೆರೆದಾಟಗಳಿದ್ದರೂ ಕುಟುಂಬ ಮತ್ತು ಸ್ನೇಹ ವಲಯವನ್ನು ಬಿಟ್ಟಿರುತ್ತಿರಲಿಲ್ಲ. ಈ ವಲಯವನ್ನು ಎಣ್ಣೆಯಷ್ಟೇ ಉತ್ಕಟವಾಗಿ ಹಚ್ಚಿಕೊಂಡಿದ್ದ ದಾಸನಿಗೆ ಕುಟುಂಬಸ್ಥರನ್ನು, ಸ್ನೇಹಿತರನ್ನು ಭೇಟಿಯಾಗಬೇಕೆನ್ನಿಸುತ್ತಿದ್ದದ್ದು ಸಹಜ. ಆದರೆ, ಕಟ್ಟುನಿಟ್ಟಾದ ಪಹರೆ ಅದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ಈ ಸಂಬಂಧವಾಗಿ ದರ್ಶನ್ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೊಡುವಂತೆ ಕೋರಿ ಅರ್ಜಿ ಸಿಲ್ಲಿಸಿದ್ದರು. ಇದರ ಬಗ್ಗೆ ವಿಚಾರಣೆ ನಡೆಸಿದ ಐವತ್ತೇಳನೇ ಸೆಷನ್ಸ್ ಕೋರ್ಟ್ ದರ್ಶನ್ ಮನವಿಯನ್ನು ಪುರಸ್ಕರಿಸಿ, ಕೆಲ ನಿಯಮಗಳ ಪ್ರಕಾರವಾಗಿ ಕುಟುಂಬಸ್ಥರು ಮತ್ತು ಸ್ನೇಹಿತರ ಭೇಟಿಗೆ ಅವಕಾಶ ಮಾಡಿ ಕೊಟ್ಟಿದೆ. ಇದು ದರ್ಶನ್ ಪಾಲಿಗೆ ನಿಜಕ್ಕೂ ನಿರಾಳವಾಗುವಂಥಾ ತೀರ್ಪೆಂಬುದರಲ್ಲಿ ಯಾವ ಸಂದೇಹವೂ ಇಲ್ಲ!</span></p>
<p>keywords: darshan thoogudeepa, renukaswamy murder case, brutal murder, sandalwood</p>
<p>&nbsp;</p>
<p>The post <a rel="nofollow" href="https://www.cinishodha.com/big-relief-for-darshan-17-03-2026/">Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>kavala movie: ನಟೋರಿಯಸ್ ರೌಡಿ ಕವಳನದ್ದು ಖರಾಬು ಹಿಸ್ಟರಿ!</title>
		<link>https://www.cinishodha.com/kavala-movie-11-03-2026/</link>
		
		<dc:creator><![CDATA[Santhosh Bagilagadde]]></dc:creator>
		<pubDate>Wed, 11 Mar 2026 13:38:14 +0000</pubDate>
				<category><![CDATA[Uncategorized]]></category>
		<category><![CDATA[cinishodha]]></category>
		<category><![CDATA[crime]]></category>
		<category><![CDATA[kavala]]></category>
		<category><![CDATA[kavalamovie\]]></category>
		<category><![CDATA[kfi]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=11894</guid>

					<description><![CDATA[<p>ಈ ಸಿನಿಮಾ ಮಂದಿಗೆ ಭೂಗತ ಜಗತ್ತಿನ ಮೇಲಿರುವ ಕುತೂಹಲ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಭೂಗತದ ಹುದುಲಲ್ಲಿ ಸಿಕ್ಕಿಕೊಂಡಿರುವ ಸಣ್ಣ ಸಣ್ಣ ಎಳೆಗಳನ್ನೂ ಕೂಡಾ ದೃಷ್ಯವಾಗಿಸಿ ಆಗಿದೆ. ಅದರಲ್ಲಿ ಕೆಲ ಚಿತ್ರಗಳು ಗೆದ್ದರೆ, ಮತ್ತೆ ಕೆಲ ಸಿನಿಮಾಗಳು ಬರೀ ರಕ್ತ ಮೆತ್ತಿಕೊಂಡು ಹೇಳ ಹೆಸರಿಲ್ಲದಂತೆ ಮೂಲೆ ಸೇರಿಕೊಂಡಿದ್ದಿದೆ. ಇದೆಲ್ಲದರ ನಡುವೆ ಚಿತ್ರರಂಗಕ್ಕೆ ಮತ್ತೆಮತ್ತೆ ನೆತ್ತರ ಮೋಹ ಕಾಡುತ್ತಲೇ ಇರುತ್ತೆ. ಅದರ ಭಾಗವಾಗಿಯೇ ಕವಳ ಅಂತೊಂದು ಚಿತ್ರ ಆರಂಭಗೊಂಡಿದೆ. ಶ್ರೀ ಜೈ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರದ ಬಗ್ಗೆ ಸಣ್ಣಗೆ [...]</p>
<p>The post <a rel="nofollow" href="https://www.cinishodha.com/kavala-movie-11-03-2026/">kavala movie: ನಟೋರಿಯಸ್ ರೌಡಿ ಕವಳನದ್ದು ಖರಾಬು ಹಿಸ್ಟರಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 20px;"><span style="color: #00ccff;"><strong><span style="font-size: 24px;">ಈ</span></strong></span> ಸಿನಿಮಾ ಮಂದಿಗೆ ಭೂಗತ ಜಗತ್ತಿನ ಮೇಲಿರುವ ಕುತೂಹಲ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಭೂಗತದ ಹುದುಲಲ್ಲಿ ಸಿಕ್ಕಿಕೊಂಡಿರುವ ಸಣ್ಣ ಸಣ್ಣ ಎಳೆಗಳನ್ನೂ ಕೂಡಾ ದೃಷ್ಯವಾಗಿಸಿ ಆಗಿದೆ. ಅದರಲ್ಲಿ ಕೆಲ ಚಿತ್ರಗಳು ಗೆದ್ದರೆ, ಮತ್ತೆ ಕೆಲ ಸಿನಿಮಾಗಳು ಬರೀ ರಕ್ತ ಮೆತ್ತಿಕೊಂಡು ಹೇಳ ಹೆಸರಿಲ್ಲದಂತೆ ಮೂಲೆ ಸೇರಿಕೊಂಡಿದ್ದಿದೆ. ಇದೆಲ್ಲದರ ನಡುವೆ ಚಿತ್ರರಂಗಕ್ಕೆ ಮತ್ತೆಮತ್ತೆ ನೆತ್ತರ ಮೋಹ ಕಾಡುತ್ತಲೇ ಇರುತ್ತೆ. ಅದರ ಭಾಗವಾಗಿಯೇ ಕವಳ ಅಂತೊಂದು ಚಿತ್ರ ಆರಂಭಗೊಂಡಿದೆ. ಶ್ರೀ ಜೈ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರದ ಬಗ್ಗೆ ಸಣ್ಣಗೆ ಚರ್ಚೆಗಳು ಶುರುವಾಗಿವೆ!</span></p>
<p style="text-align: justify;"><img decoding="async" class="alignnone wp-image-11895" src="https://www.cinishodha.com/wp-content/uploads/2026/03/All-the-best-team.😲💥-kavala-new-kannada-movie-viral-512x400.webp" alt="All the best team.😲💥 kavala new kannada movie viral" width="1024" height="799" title="kavala movie: ನಟೋರಿಯಸ್ ರೌಡಿ ಕವಳನದ್ದು ಖರಾಬು ಹಿಸ್ಟರಿ! 9 » cinishodha.com" srcset="https://www.cinishodha.com/wp-content/uploads/2026/03/All-the-best-team.😲💥-kavala-new-kannada-movie-viral-512x400.webp 512w, https://www.cinishodha.com/wp-content/uploads/2026/03/All-the-best-team.😲💥-kavala-new-kannada-movie-viral-1024x799.webp 1024w, https://www.cinishodha.com/wp-content/uploads/2026/03/All-the-best-team.😲💥-kavala-new-kannada-movie-viral-768x599.webp 768w, https://www.cinishodha.com/wp-content/uploads/2026/03/All-the-best-team.😲💥-kavala-new-kannada-movie-viral-150x117.webp 150w, https://www.cinishodha.com/wp-content/uploads/2026/03/All-the-best-team.😲💥-kavala-new-kannada-movie-viral-450x351.webp 450w, https://www.cinishodha.com/wp-content/uploads/2026/03/All-the-best-team.😲💥-kavala-new-kannada-movie-viral.webp 1080w" sizes="(max-width: 1024px) 100vw, 1024px" /><span style="font-size: 20px;">ಕವಳ ಅಂದಾಕ್ಷಣವೇ ಉತ್ತರಕನ್ನಡ ಸೀಮೆಯ ಮಂದಿಗೆ ಎಲಡಿಕೆಯ ಘಮ ಮನಸಿಗೆ ರಾಚಿಕೊಳ್ಳುತ್ತೆ. ಆದರೆ, ಬೆಂಗಳೂರು ಭೂಗತದ ಅರಿವಿರುವವರಿಗೆ ನೆತ್ತರ ಕಮಟು ತಂತಾನೆ ಅಡರಿಕೊಳ್ಳುತ್ತೆ. ಯಾಕೆಂದರೆ, ಕವಳ ಎಂಬುದು ಬೆಂಗಳೂರನ್ನು ಅದುರಿಸಿ ಹಾಕಿದ್ದ ನಟೋರಿಯಸ್ ರೌಡಿಯೋರ್ವನ ಬಿರುದು. ವಿಜಯ ಕುಮಾರ್ ಅಲಿಯಾಸ್ ಕವಳ ತೊಂಬತ್ತರ ದಶಕದಲ್ಲಿ ಬೆಂಗಳೂರು ಡಾನ್ ಅನ್ನಿಸಿಕೊಂಡಿದ್ದ ಡೆಡ್ಲಿ ಸೋಮನ ಸಿಂಡಿಕೇಟಿನಲ್ಲಿ ಗುರುತಿಸಿಕೊಂಡಿದ್ದ ನಟೋರಿಯಸ್ ರೌಡಿ. ಡೆಡ್ಲಿ ಸೋಮ ಎನ್‌ಕೌಂಟರಿನಲ್ಲಿ ಹತನಾಗಿದ್ದ ನಂತರದಲ್ಲಿ ಆತನ ಪಟಾಲಮ್ಮು ಚದುರಿ ಹೋಗಿತ್ತು. ಕೆಲವರು ವಿರೋಧಿ ಪಾಳೆಯಕ್ಕೆ ಅಂಜಿ ಸೈಲೆಂಟಾದರೆ, ಮತ್ತೆ ಕೆಲವರು ತಮ್ಮದೇ ತಂಡ ಕಟ್ಟಿಕೊಂಡು ಸೆಣೆಸಾಟಕ್ಕಿಳಿದಿದ್ದರು. ಅಂಥವರ ಸಾಲಿನಲ್ಲಿ ಮೊದಲಿಗನಾಗಿದ್ದವನು ವಿಜಯ ಕುಮಾರ್ ಅಲಿಯಾಸ್ ಕವಳ!</span></p>
<p style="text-align: justify;"><img loading="lazy" decoding="async" class="alignnone wp-image-11896" src="https://www.cinishodha.com/wp-content/uploads/2026/03/HBQzyWhaMAEWGXD.jpg?_t=1773235745" alt="HBQzyWhaMAEWGXD" width="1024" height="768" title="kavala movie: ನಟೋರಿಯಸ್ ರೌಡಿ ಕವಳನದ್ದು ಖರಾಬು ಹಿಸ್ಟರಿ! 10 » cinishodha.com" srcset="https://www.cinishodha.com/wp-content/uploads/2026/03/HBQzyWhaMAEWGXD.jpg 600w, https://www.cinishodha.com/wp-content/uploads/2026/03/HBQzyWhaMAEWGXD-512x384.jpg 512w, https://www.cinishodha.com/wp-content/uploads/2026/03/HBQzyWhaMAEWGXD-150x113.jpg 150w, https://www.cinishodha.com/wp-content/uploads/2026/03/HBQzyWhaMAEWGXD-450x338.jpg 450w" sizes="(max-width: 1024px) 100vw, 1024px" /><span style="font-size: 20px;">ಇಂಥಾ ಕವಳ ಬೆಂಗಳೂರು ಭೂಗತ ಲೋಕವನ್ನು ಒಂದು ಹಂತದಲ್ಲಿ ಆಳಿ ಬಿಟ್ಟಿದ್ದ. ಡಾನ್ ಆಗಿಯೂ ಮೆರೆದಿದ್ದ. ಇಂಥವನ ಬದುಕನ್ನು ಯಾವ ಕೋನದಿಂದ ದಿಟ್ಟಿಸಿದರೂ ಕೊಲೆ, ರಕ್ತಪಾತದ ಹೊರತಾಗಿ ಮತ್ತೇನೂ ಕಾಣಿಸೋದಿಲ್ಲ. ಕಡೆಗೆ ಈತನ ಸಾವು ಕೂಡಾ ಅತ್ಯಂತ ಬರ್ಭರವಾಗಿತ್ತು. ಇಂಥವನ ಕಥೆಯನ್ನು ಶ್ರೀಜೈ ಹೇಗೆ ಕಟ್ಟಿ ಕೊಡುತ್ತಾರೋ ಗೊತ್ತಿಲ್ಲ. ಆದರೆ, ಈ ಮುಹೂರ್ತ ಸಮಾರಂಭದಲ್ಲಿ ಸದರಿ ಸಿನಿಮಾಶದಲ್ಲಿ ನೆತ್ತರು ಹರಿಯುತ್ತದೆ ಎಂಬರ್ಥದಲ್ಲಿ ಶ್ರೀಜೈ ಮಾತಾಡಿದ್ದಾರೆ. ಅಲ್ಲಿಗೆ ಮತ್ತೊಂದು ಮಚ್ಚು ಲಾಂಗುಗಳ ತಥಾಕಥಿತ ಸಿನಿಮಾವೊಂದು ಅಣಿಗೊಳ್ಳೋ ಸೂಚನೆಗಳು ಢಾಳಾಗಿವೆ. ಶ್ರೀ ಸಿದ್ಧಸೂತ್ರಕ್ಕೆ ಕಟ್ಟುಬಿದ್ದು ಈ ಚಿತ್ರವನ್ನು ರೂಪಿಸುತ್ತಾರಾ ಅಥವಾ ಹೊಸಾ ಹಾದಿಯಲ್ಲಿ ಹೆಜ್ಜೆಯಿಡುತ್ತಾರಾ ಎಂಬ ಕುತೂಹಲವಷ್ಟೇ ಉಳಿದುಕೊಂಡಿದೆ.</span></p>
<p style="text-align: justify;"><img loading="lazy" decoding="async" class="alignnone wp-image-11897" src="https://www.cinishodha.com/wp-content/uploads/2026/03/nakara_101314-2.jpg" alt="nakara 101314 2" width="1024" height="1492" title="kavala movie: ನಟೋರಿಯಸ್ ರೌಡಿ ಕವಳನದ್ದು ಖರಾಬು ಹಿಸ್ಟರಿ! 11 » cinishodha.com"><span style="font-size: 20px;">ಅಷ್ಟಕ್ಕೂ ಕವಳನದ್ದು ಯಾವ ರೀತಿಯಿಂದಲೂ ಮಾದರಿಯಾದ ಬದುಕಲ್ಲ. ಡೆಡ್ಲಿ ಸೋಮನ ಖಾಸಾ ಪಡೆಯಲ್ಲಿದ್ದ ಕವಳ ಆ ಕಾಲದಲ್ಲಿಯೇ ನೆತ್ತರ ರುಚಿ ಕಂಡಿದ್ದ. ಹರಿದ ನೆತ್ತರಿಗಂಟಿಕೊಂಡಂತೆ ಕುದುರಿಕೊಳ್ಳುವ ಹಡಬೆ ಕಾಸಿನ ಹಬೆಗೆ ಮರುಳಾಗಿದ್ದ. ಯಾವಾಗ ವಿರೋಧಿ ಪಾಳೆಯ ತಲೆತರಿದು ಹಾಕುತ್ತದೆಂಬ ಪುಕ್ಕು ಮೂಡಿಕೊಳ್ಳುತ್ತೋ, ಆಗೆಲ್ಲ ಕ್ರಿಮಿನಲ್ ಕವಳ ರೌಡಿಸಂ ಬಿಡುವ ಮಾತಾಡುತ್ತಿದ್ದ. ಆ ನಂತರ ಯಥಾಪ್ರಕಾರ ದಂಧೆಯಲ್ಲಿ ನಿರತನಾಗುತ್ತಿದ್ದ. ವ್ಯವಹಾರಕ್ಕಿಳಿದರೆ ಯಾರನ್ನೂ ಕೇರು ಮಾಡದ ಕವಳನ ವಿರುದ್ಧ ಕುದಿಯುವ ದೊಡ್ಡದೊಂದು ಪಡೆಯೇ ಇತ್ತು. ಅಂಥವರೆಲ್ಲ ಒಟ್ಟು ಸೇರಿ ೨೦೧೪ರ ಕೊನೇ ಭಾಗದಲ್ಲೊಮ್ಮೆ ಕವಳನ ಕಥೆ ಮುಗಿಸುವ ನಿರ್ಧಾರಕ್ಕೆ ಬಂದಿದ್ದರು. ಅದರ ಸಾರಥ್ಯ ವಹಿಸಿಕೊಂಡಿದ್ದದ್ದು ತಮಿಳು ಮೂಲದ ಕುಖ್ಯಾತ ರೌಡಿ ತಿರುಕುಮಾರನ್ ಅಲಿಯಾಸ್ ಕುಟ್ಟಿ!</span></p>
<p style="text-align: justify;"><img loading="lazy" decoding="async" class="alignnone wp-image-11898 size-full" src="https://www.cinishodha.com/wp-content/uploads/2026/03/Kavala-Launch-2.jpg?_t=1773235989" alt="Kavala Launch 2" width="1280" height="720" title="kavala movie: ನಟೋರಿಯಸ್ ರೌಡಿ ಕವಳನದ್ದು ಖರಾಬು ಹಿಸ್ಟರಿ! 12 » cinishodha.com" srcset="https://www.cinishodha.com/wp-content/uploads/2026/03/Kavala-Launch-2.jpg 1280w, https://www.cinishodha.com/wp-content/uploads/2026/03/Kavala-Launch-2-512x288.jpg 512w, https://www.cinishodha.com/wp-content/uploads/2026/03/Kavala-Launch-2-1024x576.jpg 1024w, https://www.cinishodha.com/wp-content/uploads/2026/03/Kavala-Launch-2-768x432.jpg 768w, https://www.cinishodha.com/wp-content/uploads/2026/03/Kavala-Launch-2-150x84.jpg 150w, https://www.cinishodha.com/wp-content/uploads/2026/03/Kavala-Launch-2-450x253.jpg 450w, https://www.cinishodha.com/wp-content/uploads/2026/03/Kavala-Launch-2-1200x675.jpg 1200w" sizes="(max-width: 1280px) 100vw, 1280px" /><span style="font-size: 20px;">ಈ ಕೊಲೆ ಯತ್ನ ವಿಫಲಗೊಂಡ ನಂತರ ಕುಟ್ಟಿ ತನ್ನ ಪಟಾಲಮ್ಮಿನ ಸಮೇತ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದ. ಅದೇ ವರ್ಷ ಕವಳನನ್ನು ಮುಗಿಸಬೇಕೆಂಬ ಸಂಕಲ್ಪದೊಂದಿಗೆ ಅಖಾಡಕ್ಕಿಳಿದವನು ನಖರಾ ಬಾಬು. ಕಡೆಗೂ ನಖರಾ ಬಾಬು ಕವಳನನ್ನು ಭೀಕರವಾಗಿ ಕೊಚ್ಚಿ ಕೊಂದು ಜೈಲು ಪಾಲಾಗಿದ್ದ. ಹೊರಜಗತ್ತಲ್ಲ ಕವಳನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಶಿಷ್ಯ ಪಡೆ ಕಾದು ಕುಂತಿತ್ತು. ಈ ಕೇಸಲ್ಲಿ ಜೈಲುಪಾಲಾಗಿದ್ದ ಕವಳ ಜಾಮೀನು ಪಡೆದು ಹೊರ ಬಂದರೂ ಜೀವ ಭಯದಿಂದ ತತ್ತರಿಸಿದ್ದ. ಕವಳನ ಶಿಷ್ಯರೊಂದಿಗೆ ಕಾಂಪ್ರೋಮೈಸ್ ಮಾಡಿಕೊಳ್ಳುವ ಸನ್ನಾಹದಲ್ಲಿರುವಾಗಲೇ ನಖ್ರಾ ಬಾಬುಗೆ ಕವಳನ ಶಿಷ್ಯಂದಿರು ಭಯಾನಕ ಅಂತ್ಯ ಕಾಣಿಸಿದ್ದರು. ಇಂಥಾ ಕವಳನ ಕಥೆ, ಅದರ ಕೊಂಬೆ ಕೋವೆಗಳಿಗೆಲ್ಲ ರಕ್ತ ಮೆತ್ತಿಕೊಂಡಿದೆ. ಅದನ್ನು ಸದರಿ ಸಿನಿಮಾ ಹೇಗೆ ಹಿಡಿದಿಡುತ್ತದೆಂಬ ಕುತೂಹಲ ಒಂದಷ್ಟು ಮಂದಿಯಲ್ಲಿದ್ದರೂ ಇದ್ದೀತು!</span></p>
<p>keywords: kavala, rowdy kavala, kavala movie. shrijay, crime</p>
<p>The post <a rel="nofollow" href="https://www.cinishodha.com/kavala-movie-11-03-2026/">kavala movie: ನಟೋರಿಯಸ್ ರೌಡಿ ಕವಳನದ್ದು ಖರಾಬು ಹಿಸ್ಟರಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?</title>
		<link>https://www.cinishodha.com/dangerous-drugs-mafia-03-01-2026/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 03 Jan 2026 06:15:36 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[#actress]]></category>
		<category><![CDATA[#drugsparty]]></category>
		<category><![CDATA[actors]]></category>
		<category><![CDATA[crime]]></category>
		<category><![CDATA[drugsmafia]]></category>
		<category><![CDATA[raveparty]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=11428</guid>

					<description><![CDATA[<p>ರೇವ್ ಪಾರ್ಟಿಯ ಕಾರಣದಿಂದ ಬೆಂಗಳೂರು ಮತ್ತೆ ಮತ್ತೆ ಸುದ್ದಿಯಲ್ಲಿರುತ್ತೆ. ಹಣವಂತರ ತೆವಲಿನ ಕಾರಣಕ್ಕೆ ಬೆಂಗಳೂರಿಗೊಂದಷ್ಟು ಕುಖ್ಯಾತಿಯೂ ಅಂಟಿಕೊಂಡಿದೆ. ಈವತ್ತಿಗೆ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಕಡೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿಂದ ಐವತೈದು ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಅನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಎಂಡಿಎಂಎ ಅನ್ನೋ ಡ್ರಗ್ಸ್ ಇದೆಯಲ್ಲಾ? ಅದು ಪಾರ್ಟಿ ಡ್ರಗ್ಸ್ ಅಂತಲೇ ಪ್ರಸಿದ್ಧಿ ಪಡೆದುಕೊಂಡಿದೆ. ಹಾಗಾದರೆ, ಇಂಥಾ ಡ್ರಗ್ಸ್ ಹೊಸಾ ವರ್ಷದಂಥಾ ಆಚರಣೆಗಳನ್ನು ಗುರಿಯಾಗಿಸಿಕೊಂಡು ತಯಾರಾಗುತ್ತವಾ ಅಂತ [...]</p>
<p>The post <a rel="nofollow" href="https://www.cinishodha.com/dangerous-drugs-mafia-03-01-2026/">Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ರೇ</span></strong></span>ವ್ ಪಾರ್ಟಿಯ ಕಾರಣದಿಂದ ಬೆಂಗಳೂರು ಮತ್ತೆ ಮತ್ತೆ ಸುದ್ದಿಯಲ್ಲಿರುತ್ತೆ. ಹಣವಂತರ ತೆವಲಿನ ಕಾರಣಕ್ಕೆ ಬೆಂಗಳೂರಿಗೊಂದಷ್ಟು ಕುಖ್ಯಾತಿಯೂ ಅಂಟಿಕೊಂಡಿದೆ. ಈವತ್ತಿಗೆ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಕಡೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ <a href="https://www.cinishodha.com/rave-party-%e0%b2%b5%e0%b2%bf%e0%b2%b7%e0%b2%95%e0%b3%8d%e0%b2%95%e0%b3%82-%e0%b2%a4%e0%b2%a3%e0%b2%bf%e0%b2%af%e0%b2%a6-%e0%b2%b5%e0%b2%bf%e0%b2%95%e0%b3%83%e0%b2%a4%e0%b2%bf%e0%b2%af-%e0%b2%95/">ಡ್ರಗ್ಸ್</a> ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿಂದ ಐವತೈದು ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಅನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಎಂಡಿಎಂಎ ಅನ್ನೋ ಡ್ರಗ್ಸ್ ಇದೆಯಲ್ಲಾ? ಅದು ಪಾರ್ಟಿ ಡ್ರಗ್ಸ್ ಅಂತಲೇ ಪ್ರಸಿದ್ಧಿ ಪಡೆದುಕೊಂಡಿದೆ. ಹಾಗಾದರೆ, ಇಂಥಾ ಡ್ರಗ್ಸ್ ಹೊಸಾ ವರ್ಷದಂಥಾ ಆಚರಣೆಗಳನ್ನು ಗುರಿಯಾಗಿಸಿಕೊಂಡು ತಯಾರಾಗುತ್ತವಾ ಅಂತ ನೋಡ ಹೋದರೆ, ಅವುಗಳ ಪ್ರಧಾನ ಮಾರುಕಟ್ಟೆ ಇರೋದು ಹಣವಂತರ ಪಾರ್ಟಿಗಳಲ್ಲಿ. <a href="https://www.cinishodha.com/darling-prabhas-fauzi-movie-27-10-2025/">ರೇವ್ ಪಾರ್ಟಿ</a>ಗಳೆಂಬ ಹೈ ಫೈ ದಂಧೆಯ ಮೂಲಕವೇ ಎಂಡಿಎಂಎ ಗುಳಿಗೆಗಳ ವ್ಯಾಪಕವಾಗಿ ಬಿಕರಿಯಾಗುತ್ತವೆ.</span></p>
<p style="text-align: justify;"><img loading="lazy" decoding="async" class="alignnone wp-image-11429 size-full" src="https://www.cinishodha.com/wp-content/uploads/2026/01/5-Dangers-of-Party-Drugs.jpg?_t=1767420432" alt="5 Dangers of Party Drugs" width="1200" height="800" title="Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ? 16 » cinishodha.com" srcset="https://www.cinishodha.com/wp-content/uploads/2026/01/5-Dangers-of-Party-Drugs.jpg 1200w, https://www.cinishodha.com/wp-content/uploads/2026/01/5-Dangers-of-Party-Drugs-512x341.jpg 512w, https://www.cinishodha.com/wp-content/uploads/2026/01/5-Dangers-of-Party-Drugs-1024x683.jpg 1024w, https://www.cinishodha.com/wp-content/uploads/2026/01/5-Dangers-of-Party-Drugs-768x512.jpg 768w, https://www.cinishodha.com/wp-content/uploads/2026/01/5-Dangers-of-Party-Drugs-150x100.jpg 150w, https://www.cinishodha.com/wp-content/uploads/2026/01/5-Dangers-of-Party-Drugs-450x300.jpg 450w" sizes="(max-width: 1200px) 100vw, 1200px" /><span style="font-size: 14pt;">ಈ ಕಾರಣದಿಂದಲೇ ಬೆಂಗಳೂರೂ ಸೇರಿದಂತೆ ನಾನಾ ಭಾಗಗಳಲ್ಲಿ ಬಲಾಢ್ಯರು ಕಾನೂನಿನ ಕಣ್ಣಿಗೆ ಮಣ್ಣೆರಚಿ ರೇವ್ ಪಾರ್ಟಿಗಳನ್ನು ನಡೆಸುತ್ತಾರೆ. ಅದೊಂಥರಾ ಹಾದರದ ಜಾತ್ರೆಯಿದ್ದಂತೆ. ಇಂಥಾ <a href="https://www.cinishodha.com/darshan-case-%e0%b2%a8%e0%b2%b6%e0%b3%86%e0%b2%af%e0%b3%87%e0%b2%b0%e0%b2%bf%e0%b2%b8%e0%b2%bf%e0%b2%95%e0%b3%8a%e0%b2%82%e0%b2%a1%e0%b2%b0%e0%b3%86-%e0%b2%a6%e0%b2%b0%e0%b3%8d%e0%b2%b6%e0%b2%a8/">ರೇವ್ ಪಾರ್ಟಿ</a>ಗಳ ಎಂಟ್ರಿ ಫೀಸು ಒಬ್ಬೊಬ್ಬರಿಗೆ ಲಕ್ಷದ ಮೇಲಿರುತ್ತೆ. ಒಂದು ಲಕ್ಷದ ಲೆಕ್ಕ ಹಿಡಿದರೂ ನೂರು ಮಂದಿಗೆ ಭರ್ತಿ ಒಂದು ಕೋಟಿಯಾಗುತ್ತೆ. ಹಾಗಂತ ಒಟ್ಟಾರೆ ಕಮಾಯಿಯ ಬಾಬತ್ತು ಇಷ್ಟು ಮಾತ್ರವಲ್ಲ. ರೊಕ್ಕಸ್ತರು ಆಯೋಜಿಸೋ ವ್ಯವಸ್ಥಿತ ರೇವ್ ಪಾರ್ಟಿಗಳ ಎಂಟ್ರಿ ಫೀಸು ಒಬ್ಬರಿಗೆ ಐವತ್ತು ಲಕ್ಷ ಇರೋದೂ ಇದೆ. ಹಾಗಾದ್ರೆ, ಈ ಸಿನಿಮಾ ಮಂದಿ, ರಾಜಕಾರಣಿಗಳ ಮಕ್ಕಳು ರೇವ್ ಪಾರ್ಟಿ ಅಂದ್ರೆ ಯಾಕೆ ಥ್ರಿಲ್ ಆಗ್ತಾರೆ? ಅದು ಕೇವಲ ನಶೆಯ ಮೋಹವಾ ಅಂತೆಲ್ಲ ಹುಡುಕಹೋದರೆ, ರೇವ್ ಪಾರ್ಟಿಗಳ ಮಂದ ಬೆಳಕಿನಲ್ಲೊಂದು ಭಯಾನಕ ಲೋಕವೇ ತೆರೆದುಕೊಳ್ಳುತ್ತೆ.</span></p>
<p style="text-align: justify;"><span style="font-size: 14pt;"><img loading="lazy" decoding="async" class="alignnone wp-image-11430" src="https://www.cinishodha.com/wp-content/uploads/2026/01/PartyDrugs703-703x437-1-703x300-1-600x300-1.jpg?_t=1767420473" alt="PartyDrugs703 703x437 1 703x300 1 600x300 1" width="1024" height="512" title="Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ? 17 » cinishodha.com" srcset="https://www.cinishodha.com/wp-content/uploads/2026/01/PartyDrugs703-703x437-1-703x300-1-600x300-1.jpg 600w, https://www.cinishodha.com/wp-content/uploads/2026/01/PartyDrugs703-703x437-1-703x300-1-600x300-1-512x256.jpg 512w, https://www.cinishodha.com/wp-content/uploads/2026/01/PartyDrugs703-703x437-1-703x300-1-600x300-1-150x75.jpg 150w, https://www.cinishodha.com/wp-content/uploads/2026/01/PartyDrugs703-703x437-1-703x300-1-600x300-1-450x225.jpg 450w" sizes="(max-width: 1024px) 100vw, 1024px" /> </span><span style="font-size: 14pt;">ರೇವ್ ಪಾರ್ಟಿಯ ಮೂಲ ಆಕರ್ಷಣೆ ಸ್ವೇಚ್ಛಾಚಾರ. ಅಲ್ಲಿ ಬೇರೆಲ್ಲೂ ಸಲೀಸಾಗಿ ಸಿಗದ ಅನಾಹುತಕಾರಿ ಡ್ರಗ್ಸ್ ಸಲೀಸಾಗಿ ಸಿಕ್ಕಿ ಬಿಡುತ್ತೆ. ಅದಕ್ಕೂ ಮೃಗೀಯ ಕಾಮಕ್ಕೂ ನೇರಾನೇರ ಕನೆಕ್ಷನ್ನುಗಳಿವೆ. ಅದು ಎಂಡಿಎಂಎ ಡ್ರಗ್ಸ್ ಕಂಟೆಂಟ್. ಸುದೀರ್ಘ ಕಾಲ ಅಕ್ಷರಶಃ ಮೃಗಳಿಗಿಂತಲೂ ಕಡೆಯಾಗಿ ಮೈಥುನದಲ್ಲಿ ಪಾಲ್ಗೊಳ್ಳೋ ಶಕ್ತಿಯನ್ನು ಆ ಡ್ರಗ್ಸ್ ಕರುಣಿಸುತ್ತೆ. ಅದ್ಯಾವ ಪರಿಯ ಉತ್ತೇಜಕ ಅಂದ್ರೆ, ಅದನ್ನ ಸೇವಿಸಿದವರು ದೇಹದ ಉಷ್ಣಾಂಶ ಹೆಚ್ಚಾಗಿ, ಹೃದಯಬಡಿತ ದುಪ್ಪಟ್ಟಾಗಿ ಸತ್ತುಹೋಗಬಹುದು. ಕಾಮಕೇಳಿಯಲ್ಲಿ ಪಾಲ್ಗೊಳ್ಳುವ ಇಬ್ಬರೂ ಅದನ್ನು ಸೇವಿಸಿದ್ದರೆ ಅಡ್ಡಿಯಿಲ್ಲ. ಒಂದು ವೇಳೆ ಇದನ್ನ ಸೇವಿಸಿದಾತ, ಎಂಡಿಎಂಎ ತೆಗೆದುಕೊಳ್ಳದೆ ಹೆಣ್ಣಿನ ಮೇಲೆರಗಿದರೆ ಆಕೆ ಬದುಕುಳಿಯೋದೇ ಡೌಟು!</span></p>
<blockquote class="wp-embedded-content" data-secret="0TkW8ONIe8"><p><a href="https://www.cinishodha.com/nishvika-naidu-02-01-2026/">Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?</a></p></blockquote>
<p><iframe class="wp-embedded-content" sandbox="allow-scripts" security="restricted"  title="&#8220;Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?&#8221; &#8212; Cini Shodha" src="https://www.cinishodha.com/nishvika-naidu-02-01-2026/embed/#?secret=tV2UQVVJx4#?secret=0TkW8ONIe8" data-secret="0TkW8ONIe8" width="600" height="338" frameborder="0" marginwidth="0" marginheight="0" scrolling="no"></iframe></p>
<p><img loading="lazy" decoding="async" class="alignnone wp-image-11431" src="https://www.cinishodha.com/wp-content/uploads/2026/01/post-party-drugs-hero-1366-512x274.jpg" alt="post party drugs hero 1366" width="1024" height="548" title="Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ? 18 » cinishodha.com" srcset="https://www.cinishodha.com/wp-content/uploads/2026/01/post-party-drugs-hero-1366-512x274.jpg 512w, https://www.cinishodha.com/wp-content/uploads/2026/01/post-party-drugs-hero-1366-1024x548.jpg 1024w, https://www.cinishodha.com/wp-content/uploads/2026/01/post-party-drugs-hero-1366-768x411.jpg 768w, https://www.cinishodha.com/wp-content/uploads/2026/01/post-party-drugs-hero-1366-150x80.jpg 150w, https://www.cinishodha.com/wp-content/uploads/2026/01/post-party-drugs-hero-1366-450x241.jpg 450w, https://www.cinishodha.com/wp-content/uploads/2026/01/post-party-drugs-hero-1366-1200x642.jpg 1200w, https://www.cinishodha.com/wp-content/uploads/2026/01/post-party-drugs-hero-1366.jpg 1366w" sizes="(max-width: 1024px) 100vw, 1024px" /></p>
<p style="text-align: justify;"><span style="font-size: 14pt;">ಈ ಮಾತ್ರೆ ಸೇವಿಸಿ ಕೆನೆಯುವವರಿಗೆಂದೇ ರೇವ್ ಪಾರ್ಟಿಯಲ್ಲಿ ಚಿಲ್ ರೂಂಗಳನ್ನು ಸೃಷ್ಟಿಸಲಾಗಿರುತ್ತೆ. ಅದರೊಳಗೆ ಅಹೋರಾತ್ರಿ ಮತ್ತೇರಿಸಿಕೊಂಡು ಕೆನೆಯುವವರಿದ್ದಾರೆ. ಈ ರೂಮಿನಲ್ಲೇ ದುರಂತ ಸಾವಿಗೀಡಾದವರೂ ಇದ್ದಾರೆ. ಡ್ರಗ್ಸ್, ಸೆಕ್ಸ್ ಯಾವುದೇ ಇದ್ದರೂ ಅದರ ಮೋಹ ಅತಿಯಾದ್ರೆ ನೆಕ್ಸ್ಟ್ ಲೆವೆಲ್ಲಿನ ಮಜಾ ಬೇಡುತ್ತವೆ. ರೇವಣ್ಣನ ಮಗ ಪ್ರಜ್ವಲ್ ಕೂಡಾ ಅಂಥಾ ಸ್ಥಿತಿ ತಲುಪಿಕೊಂಡಿದ್ದನೆಂಬ ಮಾತಿದೆ. ಅಂಥಾ ಸ್ಥಿತಿ ತಲುಪಿರುವ ಕೆಲ ಸಿನಿಮಾ, ಕಿರುತೆರೆ ನಟಿಯರು ರೇವ್ ಪಾರ್ಟಿಗಳ ಮೋಹ ಮೆತ್ತಿಕೊಂಡಿರ್ತಾರೆ. ಅದೊಂದು ರೀತಿಯ ಹೈಟೆಕ್ ವ್ಯಭಿಚಾರ. ಅದರೊಳಗೆ ನಡೆಯೋದು ಪಕ್ಕಾ ದಂಧೆ. ಅದೆಷ್ಟೋ ನಟಿಯರು ರೇವ್ ಪಾರ್ಟಿಗಳನ್ನೇ ಫುಲ್ ಟೈಂ ಕಸುಬಾಗಿಸಿಕೊಂಡಿದ್ದಾರೆ. ಅಂಥವರ ಮೇಲಿನ ಮೋಹದಿಂದಲೇ ಹಣವಂತರು, ರಾಜಕಾರಣಿಗಳ ಬೀಡಾಡಿ ಮಕ್ಕಳು ಅಲ್ಲಿ ಗುಡ್ಡೆಬಿದ್ದಿರ್ತಾರೆ. ಸದ್ಯಕ್ಕೆ ಸಿಸಿಬಿ ಪೊಲೀಸರು ಆ ದುಷ್ಟ ದಂಧೆಯ ಎದೆಗೆ ಬೂಟುಗಾಲಿಟ್ಟಿದ್ದಾರೆ. ಅದನ್ನು ಸಂಪೂರ್ಣವಾಗಿ ಕಿತ್ತೆಸೆದರೆ ಐಟಿ ಸಿಟಿಯ ಮರ್ಯಾದೆ ಉಳಿಯಬಹುದೇನೋ&#8230;</span></p>
<p>keywords: drugs, party, bangalore, rave party, sandalwood, sandalwood, drugs case</p>
<p>The post <a rel="nofollow" href="https://www.cinishodha.com/dangerous-drugs-mafia-03-01-2026/">Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ!</title>
		<link>https://www.cinishodha.com/challenging-star-darshan-24-10-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 24 Oct 2025 18:06:31 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[#dboss]]></category>
		<category><![CDATA[#renukaswamymurdercase]]></category>
		<category><![CDATA[challengingstardarshan]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[darshancaseexclisive]]></category>
		<category><![CDATA[darshantodaynews]]></category>
		<guid isPermaLink="false">https://www.cinishodha.com/?p=11043</guid>

					<description><![CDATA[<p>ಸಿಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ, ಆತನ ಮುಂದೆ ಸಿಎಮ್ಮು, ಪಿಎಮ್ಮುಗಳೂ ಲೆಕ್ಕಕ್ಕಿಲ್ಲ ಅನ್ನೋದೆಲ್ಲ ದಾಸನ ಅಭಿಮಾನಿಗಳ ಪಾಲಿಗೆ ಚಿಲ್ಲರೆ ವಿಚಾರಗಳಾಗಿದ್ದವು. ಅವರ ಕಲ್ಪಾನವಿಲಾಸದಲ್ಲಿ ತಮ್ಮ ಮೆಚ್ಚಿನ ಡಿಬಾಸನ್ನು ಬಂಧಿಸಿಡುವ ಜೈಲುಗಳೇ ಕರ್ನಾಟಕದಲ್ಲಿಲ್ಲ ಎಂಬಂಥಾ ಭಯಾನಕ ನಂಬಿಕೆ ನೆಲೆಗೊಂಡಿತ್ತು. ಅಂಥಾ ಕಲ್ಪನೆಯ ಕೋಟೆಯೆಲ್ಲ ಈಗ ಚದುರಿ ಚೆಲ್ಲಾಪಿಲ್ಲಿಯಾಗಿದೆ. [...]</p>
<p>The post <a rel="nofollow" href="https://www.cinishodha.com/challenging-star-darshan-24-10-2025/">Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ಸಿ</span></strong></span>ಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ, ಆತನ ಮುಂದೆ ಸಿಎಮ್ಮು, ಪಿಎಮ್ಮುಗಳೂ ಲೆಕ್ಕಕ್ಕಿಲ್ಲ ಅನ್ನೋದೆಲ್ಲ ದಾಸನ ಅಭಿಮಾನಿಗಳ ಪಾಲಿಗೆ ಚಿಲ್ಲರೆ ವಿಚಾರಗಳಾಗಿದ್ದವು. ಅವರ ಕಲ್ಪಾನವಿಲಾಸದಲ್ಲಿ ತಮ್ಮ ಮೆಚ್ಚಿನ ಡಿಬಾಸನ್ನು ಬಂಧಿಸಿಡುವ ಜೈಲುಗಳೇ ಕರ್ನಾಟಕದಲ್ಲಿಲ್ಲ ಎಂಬಂಥಾ ಭಯಾನಕ ನಂಬಿಕೆ ನೆಲೆಗೊಂಡಿತ್ತು. ಅಂಥಾ ಕಲ್ಪನೆಯ ಕೋಟೆಯೆಲ್ಲ ಈಗ ಚದುರಿ ಚೆಲ್ಲಾಪಿಲ್ಲಿಯಾಗಿದೆ. ಸಾಕ್ಷಾತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸರಿಕಟ್ಟಾದೊಂದು ತಲೆದಿಂಬು ಮತ್ತು ಮೂಲಭೂತ ಅಗತ್ಯಗಳಿಗಾಗಿ ಕೋರ್ಟಿನ ಮುಂದೆ ಅಂಗಲಾಚುವ ಸ್ಥಿತಿ ಬಂದೊದಗಿದೆ.</span></p>
<p style="text-align: justify;"><img loading="lazy" decoding="async" class="alignnone wp-image-11044 size-full" src="https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1.jpeg?_t=1761329036" alt="Darshan The Devil e1741450624150 1024x578 3 1" width="1024" height="578" title="Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ! 21 » cinishodha.com" srcset="https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1.jpeg 1024w, https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1-300x169.jpeg 300w, https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1-768x434.jpeg 768w, https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1-150x85.jpeg 150w, https://www.cinishodha.com/wp-content/uploads/2025/10/Darshan-The-Devil-e1741450624150-1024x578-3-1-450x254.jpeg 450w" sizes="(max-width: 1024px) 100vw, 1024px" /><br />
<span style="font-size: 14pt;">ದರ್ಶನ್ ತಲುಪಿಕೊಂಡಿರುವ ಈ ಸ್ಥಿತಿ ಕಂಡರೆ ಒಂದು ಕಾಲದಲ್ಲಿ ಆತನ ಆವುಟಗಳನ್ನು ಕಂಡು ರೋಸತ್ತಿದ್ದವರಲ್ಲೂ ಮರುಕ ಹುಟ್ಟೋದು ಸುಳ್ಳಲ್ಲ. ಆದರೆ, ಅದರ ಹಿಂದೆ ಆತನ ಸ್ವಯಂಕೃತಾಪರಾಧಗಳಿದ್ದಾವೆ. ಅಭಿಮಾನಿಗಳೆನ್ನಿಸಿಕೊಂಡವರ ಸ್ವೇಚ್ಛೆಯ ವರ್ತನೆಗಳ ಪಾಲೂ ಯಥೇಚ್ಚವಾಗಿದೆ. ಜೈಲುವಾಸದ ಮೊದಲ ಅವಧಿಯನ್ನು ಒಂದಷ್ಟು ನಿರಾಳವಾಗಿ ಕಳೆದಿದ್ದ ದರ್ಶನ್‌ಗೆ ಎರಡನೇ ಅವಧಿಯಲ್ಲಿ ಅಕ್ಷರಶಃ ನರಕದರ್ಶನವಾಗುತ್ತಿದೆ. ಕೋಟಿ ಕಮಾಯಿಸಿದ ಅಧಿಕಾರಿಗಳು ತಮ್ಮದೇ ಜಗತ್ತಿನಲ್ಲಿ ಬೆಚ್ಚಗಿದ್ದಾರೆ. ಜೈಲಾಧಿಕಾರಿ ಸುರೇಶ ದರ್ಶನ್ ವಿಚಾರದಲ್ಲಿ ಆಟ ಕಟ್ಟಲು ಹಿಂದೇಟು ಹಾಕುತ್ತಿದ್ದಾನೆ. ತಲೆಮಾಸಿದ ರೌಡಿಗಳು ಜೈಲೊಳಗೇ ಬರ್ತ್‌ಡೇ ಪಾರ್ಟಿ ಆಚರಿಸುತ್ತಿದ್ದರೂ ದರ್ಶನ್‌ಗೆ ಹೆಚ್ಚುವರಿ ಸೌಕರ್ಯ ಒದಗಿಸಲು ಜೈಲೊಳಗಿನ ಖೂಳುಬಾಕರು ಹೆದರುತ್ತಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-11045 size-full" src="https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1.webp?_t=1761329067" alt="df388620 2f99 11ef 9552 ddad3d31dcba.jpg 1 1" width="1024" height="576" title="Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ! 22 » cinishodha.com" srcset="https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1.webp 1024w, https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1-300x169.webp 300w, https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1-768x432.webp 768w, https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1-150x84.webp 150w, https://www.cinishodha.com/wp-content/uploads/2025/10/df388620-2f99-11ef-9552-ddad3d31dcba.jpg-1-1-450x253.webp 450w" sizes="(max-width: 1024px) 100vw, 1024px" /><br />
<span style="font-size: 14pt;">ಎಲ್ಲರ ಫೋಕಸ್ಸು ದರ್ಶನ್ ಮೇಲಿರೋದರಿಂದ ಕೊಂಚ ಯಾಮಾರಿದರೆ ಯಡವಟ್ಟಾದೀತೆಂಬ ಭಯವೇ ಅದಕ್ಕೆ ಕಾರಣ. ಈ ಸಂಬಂಧವಾಗಿ ದರ್ಶನ್ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದಾರೆ. ಇದೀಗ ಆ ವಿಚಾರಣೆಯೂ ಮುಂದೂಡಲ್ಪಟ್ಟಿದೆ. ಅಲ್ಲಿಗೆ ಒಂದು ತಲೆದಿಂಬೂ ಕೂಡಾ ದರ್ಶನ್‌ಗೆ ಸದ್ಯದ ಮಟ್ಟಿಗೆ ಮರೀಚಿಕೆಯಾಗಿದೆ. ಅಲ್ಲೇ ಮತ್ತೊಂದು ಮಗ್ಗುಲಿನ ಸೆಲ್ಲಿನಲ್ಲಿರುವ ಮಾಯಾಂಗನೆ ಪವಿತ್ರಾ ದರ್ಶನ್ ಕಥೆ ಹೇಗಾದರೂ ತಾನು ಬಚಾವ ಆದರೆ ಸಾಕೆಂಬಂತೆ ಲಾಯರ್‌ಗಳ ಮೂಲಕ ಶತ ಪ್ರಯತ್ನ ನಡೆಸುತ್ತಿದ್ದಾಳೆ. ಈ ನಡುವೆ ದಿನೇ ದಿನೆ ದಾಸನಿಗೆ ಕಾನೂನಿನ ಉರುಳು ಬಿಗಿಯಾಗುತ್ತಿರುವ ಭಯವೂ ಕಾಡುತ್ತಿದೆ. ಈ ಕ್ಷಣದಲ್ಲಿ ಆತನ ಪರವಾಗಿ ಅಚಲವಾಗಿ ಹೋರಾಟ ನಡೆಸುತ್ತಿರೋದು ವಿಜಯಲಕ್ಷ್ಮಿ ಮಾತ್ರ. ಇದ್ರೆ ನೆಮ್ದಿಯಾಗಿರ್ಬೇಕ್ ಅಂತಗ ಅಬ್ಬರಿಸಿದ್ದ ದಾಸನ ಸ್ಥಿತಿ ನಿಜಕ್ಕೂ ಮರುಕ ಮೂಡಿಸುವಂತಾಗಿದೆ&#8230; ಆದರೆ ಆತನಿರೋದು ತಪ್ಪಿನ ಅರಿವು ಮೂಡಿಸುವ ಜೈಲಿನಲ್ಲಿ; ಬೇಕೆಂದ ಸೌಕರ್ಯಗಳು ಸಲೀಸಾಗಿ ದಕ್ಕಲು ಅದೇನು ಕ್ಯಾರವಾನ್ ಅಲ್ಲ ಅನ್ನೋದು ಅರಗಿಸಿಕೊಳ್ಳಲೇಬೇಕಾದ ವಾಸ್ತವ!</span></p>
<p>The post <a rel="nofollow" href="https://www.cinishodha.com/challenging-star-darshan-24-10-2025/">Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ!</title>
		<link>https://www.cinishodha.com/challenjing-star-darshan-%e0%b2%95%e0%b2%82%e0%b2%ac%e0%b2%bf-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%95%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 10 Oct 2025 17:26:21 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[#darshanupdates]]></category>
		<category><![CDATA[#pavithragowda]]></category>
		<category><![CDATA[#renukaswamymurdercase]]></category>
		<category><![CDATA[brutalmurder]]></category>
		<category><![CDATA[challengingstardarshan]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[darshannewstoday]]></category>
		<category><![CDATA[dbossnews]]></category>
		<category><![CDATA[parappanaagrahara]]></category>
		<category><![CDATA[stunnigdevolapmenstofrenukaswamymurdercase]]></category>
		<guid isPermaLink="false">https://www.cinishodha.com/?p=10870</guid>

					<description><![CDATA[<p>ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನದ ದಿನಗಳೀಗ ಪರಪ್ಪನ ಅಗ್ರಹಾರದಲ್ಲಿ ಸರಿಯುತ್ತಿವೆ. ಒಂದು ಕಡೆಯಲ್ಲಿ ಆತನ ಅಭಿಮಾನಿಗಳೆಲ್ಲ ತಮ್ಮಿಷ್ಟದ ನಟ ದರ್ಶನ್ ಆದಷ್ಟು ಬೇಗನೆ ಈ ಕಳಂಕವನ್ನು ಕಳಚಿಕೊಂಡು ಬರಲೆಂಬ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಇಡಾ ಒಡೆಯದ ಹೋರಿಗಳಂತೆ ಕಂಡೋರ ಮೇಲೆರಗಿ ಹೋಗುತ್ತಿದ್ದ ಕೆಲ ವೀರಾಭಿಮಾನಿಗಳ ಆವುಟವೂ ಈಗ ತುಸು ತಗ್ಗಿದೆ. ಮತ್ತೊಂದು ದಿಕ್ಕಿನಿಂದ ಪತ್ನಿ ವಿಜಯಲಕ್ಷ್ಮಿ ಕೂಡಾ ತನ್ನ ಗಂಡನನ್ನು ಈ ಚಕ್ರವ್ಯೂಹದಿಂದ ಪಾರುಗಾಣಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಒಂದು ಹಂತದಲ್ಲಿ ದರ್ಶನ್ ದುರಹಂಕಾರ ಕಂಡು ಕೆಂಡವಾಗಿರುವವರ ಎದೆಯಲ್ಲೂ ಈಗ [...]</p>
<p>The post <a rel="nofollow" href="https://www.cinishodha.com/challenjing-star-darshan-%e0%b2%95%e0%b2%82%e0%b2%ac%e0%b2%bf-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%95%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d/">Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;">ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನದ ದಿನಗಳೀಗ ಪರಪ್ಪನ ಅಗ್ರಹಾರದಲ್ಲಿ ಸರಿಯುತ್ತಿವೆ. ಒಂದು ಕಡೆಯಲ್ಲಿ ಆತನ ಅಭಿಮಾನಿಗಳೆಲ್ಲ ತಮ್ಮಿಷ್ಟದ ನಟ ದರ್ಶನ್ ಆದಷ್ಟು ಬೇಗನೆ ಈ ಕಳಂಕವನ್ನು ಕಳಚಿಕೊಂಡು ಬರಲೆಂಬ ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಇಡಾ ಒಡೆಯದ ಹೋರಿಗಳಂತೆ ಕಂಡೋರ ಮೇಲೆರಗಿ ಹೋಗುತ್ತಿದ್ದ ಕೆಲ ವೀರಾಭಿಮಾನಿಗಳ ಆವುಟವೂ ಈಗ ತುಸು ತಗ್ಗಿದೆ. ಮತ್ತೊಂದು ದಿಕ್ಕಿನಿಂದ ಪತ್ನಿ ವಿಜಯಲಕ್ಷ್ಮಿ ಕೂಡಾ ತನ್ನ ಗಂಡನನ್ನು ಈ ಚಕ್ರವ್ಯೂಹದಿಂದ ಪಾರುಗಾಣಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಒಂದು ಹಂತದಲ್ಲಿ ದರ್ಶನ್ ದುರಹಂಕಾರ ಕಂಡು ಕೆಂಡವಾಗಿರುವವರ ಎದೆಯಲ್ಲೂ ಈಗ ಆತ ತಲುಪಿಕೊಂಡಿರುವ ಸ್ಥಿತಿ ಕಂಡು ಮರುಕ ಮೂಡಿದೆ. ಆದರೆ, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟೋ, ತಾನೇನು ಮಾಡಿದರೂ ಜಯಿಸಿಕೊಳ್ಳಬಲ್ಲನೆಂಬ ಅಹಮ್ಮಿಕೆಯಿಂದಲೋ ಮನುಷ್ಯ ಮಾಡೋ ತಪ್ಪಿದೆಯಲ್ಲಾ? ಅದು ನಾನಾವ ರೀತಿಯಲ್ಲಿ ಕಾಡದಿರೋದಿಲ್ಲ!</span></p>
<p><img loading="lazy" decoding="async" class="alignnone wp-image-10871 size-full" src="https://www.cinishodha.com/wp-content/uploads/2025/10/Darshan-The-Devil-e1741450624150-1024x578-2-1.jpeg?_t=1760338109" alt="Darshan The Devil e1741450624150 1024x578 2 1" width="1024" height="578" title="Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ! 27 » cinishodha.com" srcset="https://www.cinishodha.com/wp-content/uploads/2025/10/Darshan-The-Devil-e1741450624150-1024x578-2-1.jpeg 1024w, https://www.cinishodha.com/wp-content/uploads/2025/10/Darshan-The-Devil-e1741450624150-1024x578-2-1-300x169.jpeg 300w, https://www.cinishodha.com/wp-content/uploads/2025/10/Darshan-The-Devil-e1741450624150-1024x578-2-1-768x434.jpeg 768w, https://www.cinishodha.com/wp-content/uploads/2025/10/Darshan-The-Devil-e1741450624150-1024x578-2-1-150x85.jpeg 150w, https://www.cinishodha.com/wp-content/uploads/2025/10/Darshan-The-Devil-e1741450624150-1024x578-2-1-450x254.jpeg 450w" sizes="(max-width: 1024px) 100vw, 1024px" /></p>
<p style="text-align: justify;"><span style="font-size: 14pt;">ಸದ್ಯದ ಮಟ್ಟಿಗೆ ದರ್ಶನ್ ಪಾಲಿಗೆ ಅಂಥಾ ಆಘಾತಗಳು ಒಂದರ ಹಿಂದೊಂದರಂತೆ ಬಂದೆರಗುತ್ತಿವೆ. ಮೊದಲ ಹಂತದಲ್ಲಿ ಜೈಲನ್ನೂ ಕೂಡಾ ಮಾವನ ಮನೆಯನ್ನಾಗಿಸಿಕೊಂಡಿದ್ದಾತ ದರ್ಶನ್. ಹೇಳಿಕೇಳಿ ಪರಪ್ಪನ ಅಗ್ರಹಾರದಲ್ಲಿ ಅಧಿಕಾರಿಗಳ ನೆರಳಲ್ಲಿಯೇ ದಂಧೆಗಳ ದುಖಾನು ತೆರೆದುಕೊಂಡಿದೆ. ಅಲ್ಲಿ ನೇರಾನೇರ ವ್ಯವಹಾರ ಕುದುರಿಸಿ ಹಾಯಾಗಿ ಅಡ್ಡಾಡಿಕೊಂಡಿದ್ದಾತ ದರ್ಶನ್. ಅತ್ತ ಪಕ್ಕದ ಸೆಲ್ಲಿನಲ್ಲಿಯೇ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಇದ್ದ. ಇತ್ತ ತನ್ನ ಗೆಣೆಕಾರ ದರ್ಶನ್ನನ ಪರಿಚಾರಿಕೆಗೆಂದೇ ಸೈಕಲ್ ರವಿ ಬೇಕರಿ ರಘು ಎಂಬೋ ರೌಡಿ ಎಲಿಮೆಂಟನ್ನು ಅಂದರ್ ಮಾಡಿದ್ದ. ಇವರೆಲ್ಲದ ದೇಖಾರೇಖಿಯಲ್ಲಿಮ ಒಂದು ಹಂತದ ವರೆಗೂ ದರ್ಶನ್ ಪಾಲಿಗೆ ಜೈಲೆಂಬುದೂ ಸ್ವರ್ಗವಾಗಿತ್ತು.</span></p>
<p><img loading="lazy" decoding="async" class="wp-image-10872 size-full alignnone" src="https://www.cinishodha.com/wp-content/uploads/2025/10/Darshan2-1.jpg?_t=1760338230" alt="Darshan2 1" width="1200" height="675" title="Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ! 28 » cinishodha.com" srcset="https://www.cinishodha.com/wp-content/uploads/2025/10/Darshan2-1.jpg 1200w, https://www.cinishodha.com/wp-content/uploads/2025/10/Darshan2-1-300x169.jpg 300w, https://www.cinishodha.com/wp-content/uploads/2025/10/Darshan2-1-768x432.jpg 768w, https://www.cinishodha.com/wp-content/uploads/2025/10/Darshan2-1-1024x576.jpg 1024w, https://www.cinishodha.com/wp-content/uploads/2025/10/Darshan2-1-150x84.jpg 150w, https://www.cinishodha.com/wp-content/uploads/2025/10/Darshan2-1-450x253.jpg 450w" sizes="(max-width: 1200px) 100vw, 1200px" /></p>
<p style="text-align: justify;"><span style="font-size: 14pt;">ಅದು ದರ್ಶನ್ ಮಾಡಿದ ಬಹು ದೊಡ್ಡ ತಪ್ಪು. ತನ್ನ ಕಡೆಯಿಂದ ಎಡವಟ್ಟಾಗಿದೆ. ಅದಕ್ಕಾಗಿ ಕಾನೂನಿನ ಏಟು ಬಿದ್ದಿದೆ. ಈ ಹಂ ತದಲ್ಲಿ ಶಿಕ್ಷೆಯ ಅವಧಿಯನ್ನು ಪ್ರಾಮಾಣಿಕವಾಗಿ ಎದುರಿಸಬೇಕೆಂಬ ಸಣ್ಣ ಖಬರೂ ಕೂಡಾ ದಾಸನ ಸನಿಹ ಸುಳಿದಿರಲಿಲ್ಲ. ಇಂಥಾ ಸ್ವೇಚ್ಛೆಯೇ ದೇಶವ್ಯಾಪಿ ಸುದ್ದಿಯಾಗಿ, ಬೇರೆ ಜೈಲಿಗೆ ಕಮಾನೆತ್ತಿಸಿಕೊಂಡಿದ್ದ ದರ್ಶನ್, ಬೇಲ್ ಪಡೆದು ಹೊರ ಬಂ ದ ನಂತರವೂ ಕೂಡಾ ಸೂಕ್ಷ್ಮವಾಗಿ ನಡೆದುಕೊಂಡಿರಲಿಲ್ಲ. ಇದೇ ಹೊತ್ತಿನಲ್ಲಿ ಅಭಿಮಾನಿಗಳೆನ್ನಿಸಿಕೊಂಡ ಕೆಲ ಅವಿವೇಕಿಗಳು ಅಕ್ಷರಶಃ ಗೂಂಡಾಗಳಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆರೆಯಲಾರಂಭಿಸಿದ್ದರು. ದರ್ಶನ್ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲಿಗೆ ಗದುಮಿಸಿಕೊಂಡಿದ್ದರ ಹಿಂದಿರೋದು ಇಂಥಾ ಸ್ವಯಂಕೃತಾಪರಾಧಗಳೇ.</span></p>
<p><img loading="lazy" decoding="async" class="alignnone size-full wp-image-10873" src="https://www.cinishodha.com/wp-content/uploads/2025/10/vja25m_renukaswamy-_625x300_05_September_24-1.avif" alt="vja25m renukaswamy 625x300 05 September 24 1" width="773" height="435" title="Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ! 29 » cinishodha.com"></p>
<p style="text-align: justify;"><span style="font-size: 14pt;">ಈಗಂತೂ ಪರಪ್ಪನ ಅಗ್ರಹಾರದೊಳಗೆ ಎಲ್ಲವೂ ಬಿಗಿಯಾಗಿದೆ. ಅಲ್ಲಿ ಜೈಲಾಧಿಕಾರಿಯಾಗಿರೋ ಸುರೇಶನ ದುಂಡಾವರ್ತನೆಗಳ ಬಗ್ಗೆ `ಸಿನಿಶೋಧ&#8217; ತನಿಖಾ ವರದಿಯೊಂದನ್ನು ಪ್ರಕಟಿಸಿತ್ತು. ಅದಾದ ನಂತರ ದಯಾನಂದ್ ಜೈಲಾಧಿಕಾರಿಗಳ ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ. ಮಾಲಿನಿ ಮೇಡಮ್ಮಿನ ಪರಿಚಾರಕರೆಲ್ಲ ಬಾಲ ಮುದುರಿಕೊಂಡಿದ್ದಾರೆ. ಇದೆಲ್ಲದರ ನಡುವೆಯೇ ರೇಣುಕಾಸ್ವಾಮಿ ಕೊಲೆ ಕೇಸು ಇಡೀ ದೇಶದಲ್ಲೇ ಎರಡನೇ ಭಯಾನಕ ಪ್ರಕರಣವಾಗಿ ದಾಖಲಾಗಿದೆ. ನರ್ಸಿಂಗ್ ವಿದ್ಯಾರ್ಥಿನಿಯ ಭೀಕರ ರೇಪ್ ಮತ್ತು ಹತ್ಯೆ ಕೇಸು ಮೊದಲ ಸ್ಥಾನದಲ್ಲಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳೂ ಕೂಡಾ ಮತ್ತೊಮ್ಮೆ ಫೋಕಸ್ ಮಾಡಿವೆ.</span></p>
<p><img loading="lazy" decoding="async" class="alignnone wp-image-10874 size-full" src="https://www.cinishodha.com/wp-content/uploads/2025/10/3f830910-2f86-11ef-8f5e-cfd8745d0c76.jpg-1-1.webp?_t=1760337928" alt="3f830910 2f86 11ef 8f5e cfd8745d0c76.jpg 1 1" width="1024" height="682" title="Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ! 30 » cinishodha.com" srcset="https://www.cinishodha.com/wp-content/uploads/2025/10/3f830910-2f86-11ef-8f5e-cfd8745d0c76.jpg-1-1.webp 1024w, https://www.cinishodha.com/wp-content/uploads/2025/10/3f830910-2f86-11ef-8f5e-cfd8745d0c76.jpg-1-1-300x200.webp 300w, https://www.cinishodha.com/wp-content/uploads/2025/10/3f830910-2f86-11ef-8f5e-cfd8745d0c76.jpg-1-1-768x512.webp 768w, https://www.cinishodha.com/wp-content/uploads/2025/10/3f830910-2f86-11ef-8f5e-cfd8745d0c76.jpg-1-1-150x100.webp 150w, https://www.cinishodha.com/wp-content/uploads/2025/10/3f830910-2f86-11ef-8f5e-cfd8745d0c76.jpg-1-1-450x300.webp 450w" sizes="(max-width: 1024px) 100vw, 1024px" /></p>
<p style="text-align: justify;"><span style="font-size: 14pt;">ಇನ್ನುಳಿದಂತೆ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಕೊಂದ ಪರಿಯ ಬಗ್ಗೆ ನ್ಯಾಯಾಂಗ ವಲಯದಲ್ಲಿ ನಾನಾ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಅದರಲ್ಲಿನ ಬಹುತೇಕ ಅಂಶಗಳು ದರ್ಶನ್ ಕೊರಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿರೋದನ್ನೇ ಬಲವಾಗಿ ಧ್ವನಿಸುತ್ತಿವೆ. ನ್ಯಾಯಾಂಗ ಈ ಪ್ರಕರಣದಲ್ಲಿ ಪ್ರಧಾನವಾಗಿ ಪರಿಗಣಿಸಬಹುದಾದ ಅಂಶಗಳೇ ಭಯಾನಕವಾಗಿವೆ. ಓರ್ವ ಮನುಷ್ಯನನ್ನು ಹೇಗೆಲ್ಲ ಹಿಂಸಿಸಬಾರದೋ, ಹಾಗೆಲ್ಲ ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಗಿದೆ ಎಂಬ ವಿಚಾರವೇ ಇಲ್ಲಿ ಪ್ರಧಾನವಾಗಿ ಪರಿಗಣಿಸಲ್ಪಡುವ ಸಾಧ್ಯತೆಗಳು ದಟ್ಟವಾಗಿವೆ. ಬಹುಶಃ ತನ್ನ ಶಿಷ್ಯನ ಸ್ಟೋನಿಬ್ರೂಕ್ಸ್ ಡ್ರಗ್ಸ್ ನಶೆ ಇಂಥಾ ಅನಾಹುತ ಸೃಷ್ಟಿಸುತ್ತದೆಂಬ ಸಣ್ಣ ಕಲ್ಪನೆಯೂ ದರ್ಶನ್‌ಗಿದ್ದಂತಿಲ್ಲ. ಸದ್ಯದ ಮಟ್ಟಿಗೆ ಮಾಡಿದ ಎಡವಟ್ಟನ್ನು ಕೋಟಿ ಸುರಿದರೂ ನೀಗಿಕೊಳ್ಳಲಾರದ ವಾಸ್ತವವೊಂದು ದರ್ಶನ್ ನಲುಗುವಂತೆ ಮಾಡಿದೆ. ಕಣ್ಣೆದುರೇ ನರಳಿ ಸತ್ತ ರೇಣುಕಾಸ್ವಾಮಿ ಕಂಬಿ ಹಿಂದಿರೋ ದಾಸನನ್ನು ಕ್ಷಣ ಕ್ಷಣವೂ ಕಂಗಾಲಾಗಿಸುತ್ತಿದ್ದಾನೆ. ಅದೆಲ್ಲದರ ಅಂತಿಮ ಫಲಿತಾಂಶ ಶೀಘ್ರದಲ್ಲಿಯೇ ಜಾಹೀರಾಗಲಿದೆ!</span></p>
<p>The post <a rel="nofollow" href="https://www.cinishodha.com/challenjing-star-darshan-%e0%b2%95%e0%b2%82%e0%b2%ac%e0%b2%bf-%e0%b2%b9%e0%b2%bf%e0%b2%82%e0%b2%a6%e0%b3%86-%e0%b2%95%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d/">Challenjing Star Darshan: ಕಂಬಿ ಹಿಂದೆ ಕಾಡುತ್ತಿದ್ದಾನೆ ರೇಣುಕಾಸ್ವಾಮಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>jhunda movie actor murder case: ಅಮಿತಾಭ್ ಜೊತೆ ನಟಿಸಿದ್ದವನ ಘೋರ ಅಂತ್ಯ!</title>
		<link>https://www.cinishodha.com/jhunda-movie-actor-murder-case-10-10-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 10 Oct 2025 08:45:50 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[amithabhbacchan]]></category>
		<category><![CDATA[brtalmurder]]></category>
		<category><![CDATA[crime]]></category>
		<category><![CDATA[drugs]]></category>
		<category><![CDATA[ganza]]></category>
		<category><![CDATA[jhundactormurder]]></category>
		<category><![CDATA[jhundmovie]]></category>
		<category><![CDATA[nagpurmurdercae]]></category>
		<category><![CDATA[olywood]]></category>
		<category><![CDATA[priyanshu]]></category>
		<category><![CDATA[sadtory]]></category>
		<guid isPermaLink="false">https://www.cinishodha.com/?p=10857</guid>

					<description><![CDATA[<p>ಒಂದು ಯಶಸ್ವೀ ಸಿನಿಮಾದಲ್ಲಿ ಅಚಾನಕ್ಕಾಗಿ ಸಿಕ್ಕ ಅವಕಾಶದಿಂದ ಅದೆಷ್ಟೋ ಮಂದಿ ಉದ್ಧಾರವಾಗಿದ್ದಾರೆ. ನಟನ ನಟಿಯರಾಗಿ, ತಂತ್ರಜ್ಞರಾಗಿ ನೆಲೆ ಕಂಡುಕೊಂಡ ಅದೆಷ್ಟೋ ಉದಾಹರಣೆಗಳಿದ್ದಾವೆ. ಆದರೆ, ಮತ್ತೆ ಕೆಲವೊಂದಿಷ್ಟು ಮಂದಿ ಮಾತ್ರ ಹಠಾತ್ತನೆ ಸ್ವೇಚ್ಚಾಚಾರದತ್ತ ಹೊರಳಿಕೊಂಡು ಮಹಾ ದುರಂತಗಳನ್ನು ಮೈಮೇಲೆಳೆದುಕೊಳ್ಳೋದೂ ಇದೆ. ಅಮಿತಾಭ್ ಬಚ್ಚನ್ ನಟನೆಯ ಜುಂಡ್ ಚಿತ್ರದಲ್ಲಿ ನಟಿಸುವ ಮೂಲಕ ಪ್ರಖ್ಯಾತಿ ಗಳಿಸಿದ್ದ ಪ್ರಿಯಾಂಶು ಎಂಬ ಹುಡುಗನ ಬದುಕೂ ಕೂಡಾ ಅಂಥಾದ್ದೇ ದುರಂತ ಅಂತ್ಯ ಕಂಡಿದೆ. ಸಿಕ್ಕ ಖ್ಯಾತಿಯ ಪ್ರಭೆಯಲ್ಲಿ ಅಮಲೇರಿಸಿಕೊಂಡಿದ್ದ ಈ ಹುಡುಗ ಜೀವದ ಗೆಳೆಯನಿಂದಲೇ ಉಸಿರು [...]</p>
<p>The post <a rel="nofollow" href="https://www.cinishodha.com/jhunda-movie-actor-murder-case-10-10-2025/">jhunda movie actor murder case: ಅಮಿತಾಭ್ ಜೊತೆ ನಟಿಸಿದ್ದವನ ಘೋರ ಅಂತ್ಯ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ಒಂ</span></strong></span>ದು ಯಶಸ್ವೀ ಸಿನಿಮಾದಲ್ಲಿ ಅಚಾನಕ್ಕಾಗಿ ಸಿಕ್ಕ ಅವಕಾಶದಿಂದ ಅದೆಷ್ಟೋ ಮಂದಿ ಉದ್ಧಾರವಾಗಿದ್ದಾರೆ. ನಟನ ನಟಿಯರಾಗಿ, ತಂತ್ರಜ್ಞರಾಗಿ ನೆಲೆ ಕಂಡುಕೊಂಡ ಅದೆಷ್ಟೋ ಉದಾಹರಣೆಗಳಿದ್ದಾವೆ. ಆದರೆ, ಮತ್ತೆ ಕೆಲವೊಂದಿಷ್ಟು ಮಂದಿ ಮಾತ್ರ ಹಠಾತ್ತನೆ ಸ್ವೇಚ್ಚಾಚಾರದತ್ತ ಹೊರಳಿಕೊಂಡು ಮಹಾ ದುರಂತಗಳನ್ನು ಮೈಮೇಲೆಳೆದುಕೊಳ್ಳೋದೂ ಇದೆ. ಅಮಿತಾಭ್ ಬಚ್ಚನ್ ನಟನೆಯ ಜುಂಡ್ ಚಿತ್ರದಲ್ಲಿ ನಟಿಸುವ ಮೂಲಕ ಪ್ರಖ್ಯಾತಿ ಗಳಿಸಿದ್ದ ಪ್ರಿಯಾಂಶು ಎಂಬ ಹುಡುಗನ ಬದುಕೂ ಕೂಡಾ ಅಂಥಾದ್ದೇ ದುರಂತ ಅಂತ್ಯ ಕಂಡಿದೆ. ಸಿಕ್ಕ ಖ್ಯಾತಿಯ ಪ್ರಭೆಯಲ್ಲಿ ಅಮಲೇರಿಸಿಕೊಂಡಿದ್ದ ಈ ಹುಡುಗ ಜೀವದ ಗೆಳೆಯನಿಂದಲೇ ಉಸಿರು ನಿಲ್ಲಿಸಿದ್ದಾನೆ!</span></p>
<p style="text-align: justify;"><img loading="lazy" decoding="async" class="alignnone size-full wp-image-10860" src="https://www.cinishodha.com/wp-content/uploads/2025/10/babu-chhetri-instagram-1.avif" alt="babu chhetri instagram 1" width="640" height="360" title="jhunda movie actor murder case: ಅಮಿತಾಭ್ ಜೊತೆ ನಟಿಸಿದ್ದವನ ಘೋರ ಅಂತ್ಯ! 33 » cinishodha.com"><br />
<span style="font-size: 14pt;">ಪ್ರಿಯಾಂಶು ಬಾಬು ಸಿಂಗ್ ಛೇಟ್ರಿ ಅಂತಲೂ ಕರೆಸಿಕೊಳ್ಳುತ್ತಿದ್ದ. ಇತ್ತೀಚಿನ ದಿನಗಳಲ್ಲಿ ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ ಪ್ರಿಯಾಂಶು ತನ್ನ ಗೆಳೆಯ ಧ್ರುವ ಲಾಲ್ ಬಹದ್ದೂರ್ ಸಾಹು ಎಂಬಾತನೊಂದಿಗೆ ಗೆಳೆತನ ಹೊಂದಿದ್ದ. ಇವರಿಬ್ಬರೂ ಕೂಡಾ ನಾಗಪುರದ ಗಲ್ಲಿಗಳಲ್ಲಿ ಅಹೋರಾತ್ರಿ ನಶೆಯೇರಿಸಿಕೊಂಡು ತೂರಾಡುವ ತಲುಬು ಹತ್ತಿಸಿಕೊಂಡಿದ್ದರು. ತೀರಾ ಹಾದಿ ಬಿಟ್ಟಂತಿದ್ದ ಇವರಿಬ್ಬರೂ ಮನೆಗೆ ಹೋಗೋದೇ ಅಪರೂಪವೆಂಬಂತಾಗಿತ್ತು. ಇಂಥಾ ಪ್ರಿಯಾಂಶು ಮೊನ್ನೆ ದಿನ ಕೂಡಾ ಸಾಹು ಜೊತೆ ಪಾರ್ಟಿ ನಡೆಸಿದ್ದಾನೆ. ಮುಂಜಾನೆ ಹೊತ್ತಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ನಶೆಯಲ್ಲಿ ರೊಚ್ಚಿಗೆದ್ದ ಸಾಹು ಪ್ರಿಯಾಂಶುವನ್ನು ಹೊಡೆದು ಕೊಂದು ಹಾಕಿದ್ದಾನೆ!</span></p>
<p style="text-align: justify;"><img loading="lazy" decoding="async" class="alignnone wp-image-10861 size-full" src="https://www.cinishodha.com/wp-content/uploads/2025/10/1646449046_film-1.jpg?_t=1760085753" alt="1646449046 film 1" width="900" height="506" title="jhunda movie actor murder case: ಅಮಿತಾಭ್ ಜೊತೆ ನಟಿಸಿದ್ದವನ ಘೋರ ಅಂತ್ಯ! 34 » cinishodha.com" srcset="https://www.cinishodha.com/wp-content/uploads/2025/10/1646449046_film-1.jpg 900w, https://www.cinishodha.com/wp-content/uploads/2025/10/1646449046_film-1-300x169.jpg 300w, https://www.cinishodha.com/wp-content/uploads/2025/10/1646449046_film-1-768x432.jpg 768w, https://www.cinishodha.com/wp-content/uploads/2025/10/1646449046_film-1-150x84.jpg 150w, https://www.cinishodha.com/wp-content/uploads/2025/10/1646449046_film-1-450x253.jpg 450w" sizes="(max-width: 900px) 100vw, 900px" /><br />
<span style="font-size: 14pt;">ಈ ದುರಂತ ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ೨೦೨೨ರಲ್ಲಿ ನಾಗರಾಜ್ ಮಂಜುಳೆ ನಿರ್ದೇಶನ ಮಾಡಿದ್ದ ಜುಂಡ್ ಚಿತ್ರದಲ್ಲಿ ನಟಿಸುವ ಮೂಲಕ ಈ ಹುಡುಗ ಪ್ರಿಯಾಂಶು ಹೆಸರು ಮಾಡಿದ್ದ. ಈತನ ನಟನೆ ಮ ಎಚ್ಚುಗೆಗೆ ಪಾತ್ರವಾಗಿತ್ತು. ಆ ನಂತರ ಓದಿನತ್ತ ಪೋಶಕರ ಒತ್ತಾಸೆಯ ಮೇರೆಗೆ ವಾಲಿಕೊಂಡರೂ ಪ್ರಿಯಾಂಶು ಹಾದಿ ತಪ್ಪಿದ್ದ. ಬಹುಶಃ ಚೆಂದಗೆ ಓದು ಮುಗಿಸಿಕೊಂಡು ಮತ್ತೆ ನಟನೆಗಿಳಿದಿದ್ದರೂ ಅದ್ಭುತ ನಟನಾಗಿ ಕಂಗೊಳಿಸುವ ಅವಕಾಶ ಈತನ ಮುಂದಿತ್ತು. ಆದರೆ, ಎಳವೆಯಲ್ಲಿಯೇ ಕುಡಿತದ ಚಟ ಅಂಟಿಸಿಕೊಂಡು ದುರಂತ ಅಂತ್ಯ ಕಂಡಿದ್ದಾನೆ. ಸದ್ಯ ನಶೆಯಲ್ಲಿ ಎಳೆಯನ ನ್ನೇ ಭೀಕರವಾಗಿ ಕೊಂದ ಸಾಹು ಪೊಲೀಸರ ಅತಿಥಿಯಾಗಿದ್ದಾನೆ.</span></p>
<p>The post <a rel="nofollow" href="https://www.cinishodha.com/jhunda-movie-actor-murder-case-10-10-2025/">jhunda movie actor murder case: ಅಮಿತಾಭ್ ಜೊತೆ ನಟಿಸಿದ್ದವನ ಘೋರ ಅಂತ್ಯ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?</title>
		<link>https://www.cinishodha.com/darshan-photo-leak-case-17-08-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sun, 17 Aug 2025 05:36:33 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#challengingstar]]></category>
		<category><![CDATA[#darshanthoogudeepa]]></category>
		<category><![CDATA[#renukaswamymurder]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[darshanphoto]]></category>
		<category><![CDATA[govtofkarnataka]]></category>
		<category><![CDATA[gparameshwar]]></category>
		<category><![CDATA[hafthamafia]]></category>
		<category><![CDATA[ipsbdayanand]]></category>
		<category><![CDATA[ipsmalinikrishnamurthy]]></category>
		<category><![CDATA[ksuresh]]></category>
		<category><![CDATA[malinikrishnamurthy]]></category>
		<category><![CDATA[mudrdercase]]></category>
		<category><![CDATA[parappanaagrahara]]></category>
		<category><![CDATA[pavithragowa]]></category>
		<category><![CDATA[photoleak]]></category>
		<category><![CDATA[underworldmafiya]]></category>
		<category><![CDATA[wilsongardennaga]]></category>
		<guid isPermaLink="false">https://www.cinishodha.com/?p=10254</guid>

					<description><![CDATA[<p>ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ `ಶೋಧ ನ್ಯೂಸ್&#8217; ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದ. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದ. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಇದೆಲ್ಲದರ ಮೇಲೆ [...]</p>
<p>The post <a rel="nofollow" href="https://www.cinishodha.com/darshan-photo-leak-case-17-08-2025/">darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<blockquote class="modern-quote full">
<p style="text-align: justify;"><span style="color: #000000;"><cite><strong><span style="font-size: 14pt;">ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ `ಶೋಧ ನ್ಯೂಸ್&#8217; ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದ. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದ. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಇದೆಲ್ಲದರ ಮೇಲೆ ಈ ಹಿಂದೆ ಬಂಧೀಖಾನೆ ಮುಖ್ಯಸ್ಥೆಯಾಗಿದ್ದ ಮಾಲಿನಿ ಕೃಷ್ಣಮೂರ್ತಿಯ ನೆರಳಿದೆ ಎಂಬ ಆರೋಪವೂ ಇದೆ. ಈಗ ಲೀಕಾಗಿರುವ ದರ್ಶನ್ ಫೋಟೋದ ಹಿಂದೆಯೂ ಪರಪ್ಪನ ಅಗ್ರಹಾರದೊಳಗಿನ ಕಡುಭ್ರಷ್ಟ ವಾತಾವರಣದ ಕೈವಾಡ ಇದ್ದೇ ಇದೆ. ಪರಿವರ್ತನೆಯ ತಾಣವಾದ ಜೈಲು ಫಟಿಂಗ ಅಧಿಕಾರಿಗಳ ಕೈಗೆ ಸಿಕ್ಕರೆ ಏನಾಗಬಹುದೋ ಅದೆಲ್ಲವಕ್ಕೂ ಪರಪ್ಪನ ಅಗ್ರಹಾರ ತಾಜಾ ಉದಾಹರಣೆಯಂತಾಗಿದೆ!</span></strong></cite></span></p>
<p style="text-align: justify;"><span style="color: #000000;"><cite><strong><span style="font-size: 14pt;">-ಸಂತೋಷ್ ಬಾಗಿಲಗದ್ದೆ</span></strong></cite></span></p>
</blockquote>
<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ರೇ</span></strong></span>ಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸಿಕ್ಕಿದ್ದ ಬೇಲ್ ರದ್ದಾಗಿದ್ದರಿಂದಾಗಿ ದರ್ಶನ್ ಪಟಾಲಮ್ಮು ಮತ್ತೆ ಜೈಲುಪಾಲಾಗಿದೆ. ಹಾಗೆ ದರ್ಶನ್ ಪರಪ್ಪನ ಅಗ್ರಹಾರ ಸೇರುತ್ತಲೇ ಮೀಡಿಯಾ ಮಂದಿ ಜೈಲಿನ ಹೊರ ಭಾಗದಲ್ಲಿ ಹದ್ದಿನಕಣ್ಣಿಟ್ಟು ಪಹರೆ ಕಾಯಲಾರಂಭಿಸಿದ್ದಾರೆ. ದರ್ಶನ್ ಕೆಮ್ಮಿದ್ದು, ಕ್ಯಾಕರಿಸಿದ್ದು, ಬೆಳಗ್ಗೆ ಉಪ್ಪಿಟ್ಟು ತಿಂದ ಸುದ್ದಿಗಳೆಲ್ಲ ಬಗ್ಗಡದಂತೆ ಜನಸಾಮಾನ್ಯರ ಮುಂದೆ ಗುಡ್ಡೆ ಬೀಳುತ್ತಿವೆ. ಇದೇ ಹೊತ್ತಿನಲ್ಲಿ ಏಕಾಏಕಿ ದರ್ಶನ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿದೆ. ಅದು ಯಾವೊಬ್ಬ ಸ್ಟಾರ್ ನಟನೂ ಕಾಣಿಸಿಕೊಳ್ಳಲು ಇಷ್ಟಪಡದ ರೀತಿಯಲ್ಲಿರೋ ದರ್ಶನ್ ಫೋಟೋ. ಅದನ್ನಿಟ್ಟುಕೊಂಡು ವಿರೋಧಿ ಪಾಳೆಯ ಕುಹಕವಾಡಲಾರಂಭಿಸಿದರೆ, ಅಭಿಮಾನಿ ಪಡೆ ದುಃಖದ ಮಡುವಿಗೆ ಬಿದ್ದಿದೆ. ಕೆಲ ಮಾಧ್ಯಮಗಳಲ್ಲಿ ಅದು ದರ್ಶನ್ ಜೈಲುಪಾಲಾದ ಘಳಿಗೆಯ ಫೋಟೋ ಅಂತೆಲ್ಲ ಸುದ್ದಿ ಬಿತ್ತರಿಸಲಾಗುತ್ತಿದೆ. ಆ ಫೋಟೋದ ಮೂಲ ಹುಡುಕುತ್ತಾ ಹೋದರೆ, ಪರಪ್ಪನ ಅಗ್ರಹಾರ ಜೈಲೊಳಗಿನ ಅರಾಜಕ ಸ್ಥಿತಿಯನ್ನು ಮತ್ತೊಮ್ಮೆ ಬಯಲಾಗುತ್ತದೆ!</span></p>
<p style="text-align: justify;"><span style="font-size: 14pt;"><strong>ಅದು ಗುಪ್ತ ಫೋಟೋ!</strong></span></p>
<p style="text-align: justify;"><img loading="lazy" decoding="async" class="alignnone wp-image-10255" src="https://www.cinishodha.com/wp-content/uploads/2025/08/d2eefc62-5a5a-42b0-b889-a59db7359640-243x300.jpg" alt="d2eefc62 5a5a 42b0 b889 a59db7359640" width="1024" height="1265" title="darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್? 39 » cinishodha.com"><span style="font-size: 14pt;">ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ ಶೋಧ ನ್ಯೂಸ್ ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದರು. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದರು. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಈಗ ಲೀಕಾಗಿರುವ ದರ್ಶನ್ ಫೋಟೋದ ಹಿಂದೆಯೂ ಪರಪ್ಪನ ಅಗ್ರಹಾರದೊಳಗಿನ ಕಡುಭ್ರಷ್ಟ ವಾತಾವರಣದ ಕೈವಾಡ ಇದ್ದೇ ಇದೆ.</span><br />
<span style="font-size: 14pt;">ಸಾಮಾನ್ಯವಾಗಿ ಯಾವ ಹೀರೋಗಳೂ ಕೂಡಾ ಕಳೆಗುಂದಿದ ಫೋಟೋಗಳು ಪ್ರೇಕ್ಷಕರೆದುರು ತೆರೆದುಕೊಳ್ಳೋದನ್ನು ಸಹಿಸೋದಿಲ್ಲ. ದರ್ಶನ್ ವಿಗ್ ಬಳಸಿಕೊಂಡು ಮ್ಯಾನೇಜು ಮಾಡಿದ್ದರ ಹಿಂದೆಯೂ ಅದೇ ಫಾರ್ಮುಲಾವಿದೆ. ದರ್ಶನ್ ಇತ್ತೀಚೆಗಷ್ಟೇ ತಿರುಪತಿಯಲ್ಲಿ ಮುಡಿಕೊಟ್ಟು ಬಂದಿದ್ದ. ಅಷ್ಟರಲ್ಲಿಯೇ ಸುಪ್ರೀಂ ಕೋರ್ಟಿನಲ್ಲಿ ಬೇಲ್ ರದ್ದಾಗಿ ಆತ ಜೈಲುಪಾಲಾಗುವ ಸಂದರ್ಭ ಎದುರಾಗಿದೆ. ಹೀಗೆ ಹೊಸತಾಗಿ ಕೈದಿಗಳು ಸೇರ್ಪಡೆಗೊಳ್ಳುವಾಗ ಪರಪ್ಪನ ಅಗ್ರಹಾರದ ವೆಬ್ ಕ್ಯಾಮೆರಾದಲ್ಲಿ ಫೋಟೋ ಹಿಡಿದು, ಕಂಪ್ಯೂಟರಿನಲ್ಲಿ ದಾಖಲೆಯಾಗಿ ಇಡಲಾಗುತ್ತೆ. ಅದು ಗೌಪ್ಯವಾಗಿರಬೇಕೆಂಬ ನಿಯಮಾವಳಿ ಇದೆ. ಈಗ ವೈರಲ್ ಆಗಿರೋ ದರ್ಶನ್ ಫೋಟೋ ಅದೇ ರೀತಿ ಪರಪ್ಪನ ಅಗ್ರಹಾರದೊಳಗಿನ ವೆಬ್ ಕ್ಯಾಮ್‌ನಲ್ಲಿ ತೆಗೆದಿರುವುದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.</span><br />
<span style="font-size: 14pt;">ಹಾಗಾದರೆ, ಜೈಲಿನ ಕಡತದಲ್ಲಿರಬೇಕಾದ, ವೆಬ್ ಕ್ಯಾಮ್ ಸೆರೆ ಹಿಡಿದು ಗುಪ್ತವಾಗಿಡಬೇಕಾದ ಫೋಟೋ ಹೊರಬಂದಿದ್ದು ಹೇಗೆ? ಪರಪ್ಪನ ಅಗ್ರಹಾರದೊಳಗಿಂದ ದರ್ಶನ್ ಫೋಟೋವನ್ನು ಲೀಕ್ ಮಾಡಿದವರ್‍ಯಾರು? ಇಂಥಾ ಹತ್ತಾರು ಪ್ರಶ್ನೆಗಳು ಸಹಜವಾಗಿಯೇ ಮೂಡಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ತಲಾಶು ನಡೆಸಿದರೆ ಗುಮಾನಿಯೆಂಬುದು ಪರಪ್ಪನ ಅಗ್ರಹಾರದ ಮುಖ್ಯ ಜೈಲು ಅಧೀಕ್ಷಕ ಸುರೇಶ್ ಸುತ್ತ ಸುಳಿದಾಡುತ್ತದೆ. ಒಂದಿಡೀ ಜೈಲಿನ ದೇಖಾರೇಖಿಯನ್ನು ನೋಡಿಕೊಂಡು, ಎಲ್ಲ ವಿಧದಲ್ಲಿಯೂ ಗೌಪ್ಯತೆ ಕಾಪಾಡಿಕೊಳ್ಳಬೇಕಾದಾತ ಸುರೇಶ್. ಈತನ ನೆರಳಲ್ಲಿಯೇ ದರ್ಶನ್ ಫೋಟೋ ಲೀಕ್ ಆಗಿದೆಯೆಂದರೆ ನಾನಾ ದಿಕ್ಕಿನಲ್ಲಿ ಅನುಮಾನ ಮೂಡಿಕೊಳ್ಳೋದು ಸಹಜ. </span></p>
<p style="text-align: justify;"><strong><span style="font-size: 14pt;">ಮಾಲಿನಿ ಭಂಟ ಸುರೇಶ</span></strong></p>
<p style="text-align: justify;"><img loading="lazy" decoding="async" class="alignnone wp-image-10256" src="https://www.cinishodha.com/wp-content/uploads/2025/08/e63188ae-74af-4458-a490-25854c8505e9-181x300.jpg" alt="e63188ae 74af 4458 a490 25854c8505e9" width="1024" height="1697" title="darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್? 40 » cinishodha.com"><span style="font-size: 14pt;">ಅಷ್ಟಕ್ಕೂ ಸುರೇಶ್ ಹಿನ್ನೆಲೆ ಗಮನಿಸಿದರೆ ದರ್ಶನ್ ಫೋಟೋ ಲೀಕ್ ಪ್ರಕರಣದ ಸುತ್ತ ಹಬ್ಬಿಕೊಂಡಿರುವ ಅನುಮಾನಗಳು ಬಲಗೊಳ್ಳುತ್ತವೆ. ಈ ಹಿಂದೆ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದಾಗ ಆತನಿಗೆ ರಾಜಾತಿಥ್ಯ ನೀಡಿದ ಬಗ್ಗೆ ವಿವಾದವೆದ್ದಿತ್ತು. ದಾಸ ಜೈಲೊಳಗೆ ವಿಲ್ಸನ್ ಗಾರ್ಡನ್ ನಾಗನಂಥಾ ರೌಡಿ ಎಲಿಮೆಂಟುಗಳ ಜೊತೆ ಆರಾಮಾಗಿ ಧಮ್ಮು ಹೊಡೆಯುತ್ತಿದ್ದ ಫೋಟೋ ಲೀಕ್ ಆಯ್ತಲ್ಲಾ? ಅದು ಸರ್ಕಾರವನ್ನೇ ಮುಜುಗರಕ್ಕೀಡು ಮಾಡಿತ್ತು. ಅದೆಂಥಾ ಗಂಭೀರ ಆರೋಪಗಳಿದ್ದರೂ ಅಂಡಿನ ಕೆಳ ಹಾಕಿ ನಿರಾಳವಾಗಿ ಕೂರಬಲ್ಲ ಗೃಹಸಚಿವ ಪರಮೇಶ್ವರ್ ಕೂಡಾ ಇದರಿಂದಾಗಿ ಪೀಕಲಾಟಕ್ಕಿಟ್ಟುಕೊಂಡಿದ್ದರು. ವಿಶೇಷವೆಂದರೆ, ಆ ಪ್ರಕರಣದಲ್ಲಿ ಆ</span><span style="font-size: 14pt;">ಕಾಲಕ್ಕೆ ಬಂಧಿಖಾನೆಗಳ ಮುಖ್ಯಸ್ಥರಾಗಿದ್ದ ಐಪಿಎಸ್ ಮಾಲಿನಿ ಕೃಷ್ಣಮೂರ್ತಿಯವರ ಮೇಲೇ ನೇರವಾಗಿ ಆರೋಪ ಕೇಳಿ ಬಂದಿತ್ತು. ಸಹಾಯಕ ಅಧೀಕ್ಷಕರಾಗಿದ್ದ ಕರ್ಣ ಕ್ಷತ್ರಿಯ ಹಾಗೂ ಮಾಲಿನಿ ಕೃಷ್ಣಮೂರ್ತಿಯವರ ಸಹಾಯಕರಾಗಿದ್ದ ಕೆ. ಸುರೇಶ್ ಮೂಲಕ ದರ್ಶನ್ ಕಡೆಯಿಂದ ಎರಡು ಕೋಟಿ ಗುಂಜಿಕೊಂಡ ಘನ ಗಂಭೀರ ಆರೋಪ ಮಾಲಿನಿ ಕೃಷ್ಣಮೂರ್ತಿ ಅವರ ಮೇಲಿತ್ತು. ಈಗ ದರ್ಶನ್ ಬೇಲ್ ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ಮಾಲಿನಿ ಪ್ರಕರಣದ ಬಗ್ಗೆಯೂ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ಹಿಂದೆ ದರ್ಶನ್‌ಗೆ ರಾಜಾತಿಥ್ಯ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಐಪಿಎಸ್ ಅಧಿಕಾರಿ ಚಂದ್ರಗುಪ್ತರನ್ನು ತನಿಖೆ ನಡೆಸಲು ನೇಮಿಸಲಾಗಿತ್ತು. ಈ ತನಿಖೆಯಲ್ಲಿ ಒಟ್ಟು ಹದಿನೇಳು ಮಂದಿ ಜೈಲಾಧಿಕಾರಿಗಳ ವಿರುದ್ಧ ಎಲ್ಲ ಆರೋಪಗಳು ಸಾಬೀತಾಗಿದ್ದವು. ಅದರಲ್ಲಿ ಹನ್ನೊಂದು ಮಂದಿಯನ್ನು ಅಮಾನತುಗೊಳಿಸಲಾಗಿತ್ತು.</span><br />
<span style="font-size: 14pt;">ಆದರೆ, ಸಹಾಯ ಅಧೀಕ್ಷಕ ಕರ್ಣ ಕ್ಷತ್ರಿಯ ಹಾಗೂ ಈಗ ಮುಖ್ಯ ಅಧೀಕ್ಷಕರಾಗಿರುವ ಕೆ ಸುರೇಶ್ ಮಾಲಿನಿ ಕೃಷ್ಣಮೂರ್ತಿಯ ಕೃಪೆಯಿಂದ ಬಚಾವಾಗಿದ್ದಾರೆ. ಮತ್ತದೇ ಹಳೇ ದಂಧೆಗಳನ್ನು ಮುಂದುವರೆಸಿದ್ದಾರೆಂಬ ಆರೋಪಗಳಿದ್ದಾವೆ. ಇದೀಗ ದರ್ಶನ್ ಫೋಟೋ ಲೀಕ್ ಆಗುವ ಮೂಲಕ ಮುಖ್ಯ ಅಧೀಕ್ಷಕ ಸುರೇಶ ಅದೆಂಥಾ ಅಧಕ್ಷ ಅಧಿಕಾರಿ ಎಂಬ ವಿಚಾರ ನಿಖರವಾಗಿಯೇ ಸಾಬೀತಾಗಿದೆ. ಜೈಲೊಳಗಿಂದಲೇ ಫೋನ್ ಪೇ ಮೂಲಕ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿರೋ ಸುಳಿವುಗಳೂ ಸಿಕ್ಕಿವೆ. ಸಜಾಶ ಕೈದಿಗಳು ಜೈಲೊಳಗಿದ್ದುಕೊಂಡೇ ಮೊಬೈಲ್ ಮೂಲಕ ಧಮಕಿ ಹಾಕಿ ಹಪ್ತಾ ವಸೂಲಿ ಮಾಡುತ್ತಿರುವ ಕರಾಳ ದಂಧೆಯೂ ಬಯಲಾಗಿದೆ. ಈ ಬಗ್ಗೆ ಸಿಸಿಬಿಯಲ್ಲಿ ಎಫ್‌ಐಆರ್ ಆಗಿ ತನಿಖೆ ನಡೆಯುತ್ತಿದೆ. ಈ ದಂಧೆಗೆ ಅನುವು ಮಾಡಿಕೊಡುವ ಮೂಲಕ ಮುಖ್ಯ ಅಧೀಕ್ಷಕ ಸುರೇಶ ಮತ್ತು ಕರ್ಣ ಕೋಟ್ಯಾಂತರ ರೂಪಾಯಿ ಶೇರು ಪಡೆದಿರೋದು ಬೆಳಕಿಗೆ ಬಂದಿದೆಯಂತೆ! </span></p>
<p style="text-align: justify;"><strong><span style="font-size: 14pt;">2ಕೋಟಿ ಕೊಟ್ಟೆ ಅಂದ!</span></strong></p>
<p style="text-align: justify;"><img loading="lazy" decoding="async" class="alignnone wp-image-10257" src="https://www.cinishodha.com/wp-content/uploads/2025/08/malini-krishnamurthy-ips-300x196.jpg" alt="malini krishnamurthy ips" width="1024" height="669" title="darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್? 41 » cinishodha.com"><span style="font-size: 14pt;">ಸುಮ್ಮನೊಮ್ಮೆ ಆಲೋಚಿಸಿ ನೋಡಿ, ಈ ಹಿಂದೆ ದರ್ಶನ್ ಜೈಲು ಸೇರಿದಾಗಲೂ ಫೋಟೋ ಲೀಕ್ ಆಗಿತ್ತು. ಈಗಲೂ ಅದು ಮತ್ತೊಂದು ಅವತಾರದಲ್ಲಿ ಮುಂದುವರೆದಿದೆ. ಈ ಮೂಲಕವೇ ದರ್ಶನ್ ಕಡೆಯಿಂದ ಮತ್ತೊಂದಷ್ಟು ಕಾಸು ಗುಂಜಿಕೊಳ್ಳಲು ಪರಪ್ಪನ ಅಗ್ರಹಾರದೊಳಗಿನ ಶನಿಸಂತಾನಿಗರು ತಯಾರಾದಂತಿದೆ. ಈ ಹಿಂದೆ ಬಂಧಿಖಾನೆ ಮುಖ್ಯಸ್ಥೆಯಾಗಿದ್ದ, ಈಗ ನಿವೃತ್ತರಾಗಿರುವ ಮಾಲಿನಿ ಕೃಷ್ಣಮೂರ್ತಿ ತಾನು ಬಚಾವಾಗೋದಲ್ಲದೇ ಸುರೇಶ, ಕರ್ಣ ಸೇರಿದಂತೆ ಒಂದಷ್ಟು ಭ್ರಷ್ಟ ಅಧಿಕಾರಿಗಳನ್ನು ಕಾಪಾಡಿಕೊಂಡಿದ್ದಾರೆ. ಕಾನೂನು ಪ್ರಕಾರವೇ ಎಲ್ಲ ನಡೆದಿದ್ದರೆ, ದರ್ಶನ್‌ಗೆ ರಾಜಾತಿಥ್ಯ ಕೊಟ್ಟ ಕೇಸಲ್ಲಿ ಮಾಲಿನಿ ಮೇಲೆ ಕಾನೂನು ಕ್ರಮ ಜರುಗುತ್ತಿತ್ತು. ಆದರೆ ಅವರು ಈಗ ಸಚಿವ ಸ್ಥಾನ ಕಳೆದುಕೊಂಡಿರುವ ರಾಜಣ್ಣನ ಕಡೆಯಿಂದ ಬಚಾವಾಗಿ, ತನ್ನ ಕೂಟವನ್ನೂ ಸೇಫ್ ಆಗಿಸಿದ್ದಾರೆಂಬ ಆರೋಪಗಳಿದ್ದಾವೆ. </span><br />
<span style="font-size: 14pt;">ಚಂದ್ರಗುಪ್ತ ವರದಿಯಲ್ಲಿ ಉಲ್ಲೇಖವಾಗಿದ್ದ ಅಂಶಗಳು ಗಂಭೀರವಾಗಿದ್ದವು. ಅದರನ್ವಯ ಕ್ರಮ ಕೈಗೊಂಡಿದ್ದಿದ್ದರೆ ಆಗ ಬಂಧಿಖಾನೆ ಮುಖ್ಯಸ್ಥೆಯಾಗಿದ್ದ ಮಾಲಿನಿ ಕೃಷ್ಣಮೂರ್ತಿ ತನ್ನ ಭ್ರಷ್ಟ ಪಟಾಲಮ್ಮಿನ ಸಮೇತ ಅಮಾನತುಗೊಳ್ಳುತ್ತಿದ್ದರು. ಆದರೆ, ಆಕೆ ರಾಜಕೀಯ ಪ್ರಭಾವ ಬಳಸಿಕೊಂಡು ಚಂದ್ರಗುಪ್ತ ವರದಿಯನ್ನೇ ಪರಪ್ಪನ ಅಗ್ರಹಾರದಲ್ಲಿ ಬಂಧಿಸಿಟ್ಟಿದ್ದರು. ಆದರೀಗ ಮಾಲಿನಿ, ಕರ್ಣ, ಸುರೇಶ ಸೇರಿದಂತೆ ಪರಪ್ಪನ ಅಗ್ರಹಾರದೊಳಗಿರುವ ಸಮಸ್ತ ಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಯಾಕೆಂದರೆ, ದರ್ಶನ್ ಬೇಲ್ ಕ್ಯಾನ್ಸಲ್ ಮಾಡಿ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್ ಪರಪ್ಪನ ಅಗ್ರಹಾರದ ಲಂಚಬಾಕ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದೆ. ಕಳೆದ ಬಾರಿ ದರ್ಶನ್ ರೌಡಿ ಪಟಾಲಮ್ಮಿನ ಜೊತೆಗಿರೋ ಫೋಟೋ ಲೀಕ್ ಆದಾದ ಗೃಹಸಚಿವ ಪರಮೇಶ್ವರ್ ಜೈಲಿಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ದರ್ಶನ್ ಪರಮ್ ಮುಂದೆಯೇ ಭಯಾನಕ ಸತ್ಯವೊಂದನ್ನು ಒದರಿದ್ದ. ಕರ್ಣ ಕ್ಷತ್ರಿಯ ಮತ್ತು ಈಗ ಮುಖ್ಯ ಜೈಲಾಧಿಕಾರಿಯಾಗಿರೋ ಕೆ ಸುರೇಶ್ ಮೂಲಕ ಮಾಲಿನಿ ಕೃಷ್ಣಮೂರ್ತಿ ತನ್ನಿಂದ ಎರಡು ಕೋಟಿ ಪಡೆದುಕೊಂಡಿದ್ದಾರೆಂಬುದು ದರ್ಶನ್ ಬಿಚ್ಚಿಟ್ಟ ಸತ್ಯದ ಸಾರಾಂಶವಾಗಿತ್ತು! </span></p>
<p style="text-align: justify;"><span style="font-size: 14pt;"><strong>ದಯಾನಂದ್ ಅವರ ಆವಗಾಹನೆಗೆ&#8230;</strong></span></p>
<p style="text-align: justify;"><span style="font-size: 14pt;"><img loading="lazy" decoding="async" class="alignnone wp-image-10258" src="https://www.cinishodha.com/wp-content/uploads/2025/08/b-dayananda-commissioner-bengaluru_1742483461-300x225.webp" alt="b dayananda commissioner bengaluru 1742483461" width="1024" height="768" title="darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್? 42 » cinishodha.com">ಈಗ ಬಂಧಿಖಾನೆ ಮುಖ್ಯಸ್ಥರಾಗಿ ಖಡಕ್ ಅಧಿಕಾರಿಯಾಗಿ ಹೆಸರು ಮಾಡಿರುವ ದಯಾನಂದ್ ಅವರು ಬಂದಿದ್ದಾರೆ. ಕಾರ್ಯನಿರ್ವಹಿಸಿದ ಜಾಗಗಳಲ್ಲೆಲ್ಲ ಅತ್ಯಂತ ಕಟ್ಟುನಿಟ್ಟಾಗಿ, ಯಾರ ಮುಲಾಜಿಗೂ ಬಗ್ಗೆದೆ ನಡೆದುಕೊಳ್ಳುವ ಮೂಲಕ ದಯಾನಂದ್ ಅವರು ಹೆಸರಾಗಿದ್ದಾರೆ. ಇಂಥಾ ಅಧಿಕಾರಿಯ ಸುಪರ್ಧಿಗೀಗ ಪರಪ್ಪನ ಅಗ್ರಹಾರವೂ ಸಿಕ್ಕಿದೆ. ಈ ಕಾರಣದಿಂದಲೇ ಈ ಹಿಂದೆ ಮಾಲಿನಿ ಕೃಷ್ಣಮೂರ್ತಿ ದರ್ಭಾರಿನಲ್ಲಿ ಮಲಿನಗೊಂಡಿದ್ದ ಪರಪ್ಪನ ಅಗ್ರಹಾರವನ್ನು ಕ್ಲೀನ್ ಮಾಡುತ್ತಾರೆಂಬ ನಂಬಿಕೆಯೂ ಮೂಡಿಕೊಂಡಿದೆ. ಈ ಸುರೇಶ ಮತ್ತು ಕರ್ಣ ಮಾಲಿನಿಯ ಮಾಲಿನ್ಯದ ತುಣುಕುಗಳೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮೊದಲು ಸುರೇಶ ಮತ್ತು ಕರ್ಣನ ಅಂದಾದುಂದಿಗಳ ಬಗ್ಗೆ ದಯಾನಂದ್ ಅವರು ಗಮನಹರಿಸಬೇಕಿದೆ.<br />
ಈ ಹಿಂದೆ ಚಂದ್ರಗುಪ್ತ ವರದಿಯಲ್ಲಿ ಈ ಸುರೇಶ ಮತ್ತು ಕರ್ಣ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಅದರಂದ ಬಾಚಾವಾಗಿದ್ದ ಆತನಿಗೆ ಮತ್ತೆ ಕಂಟಕ ಶುರುವಾಗಿದೆ. ಒಂದು ಮೂಲದ ಪ್ರಕಾರ ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶೀಘ್ರದಲ್ಲಿಯೇ ಚಂದ್ರಗುಪ್ತ ವರದಿಯನ್ನು ಸಲ್ಲಿಸಲಿದ್ದಾರೆ. ಹಾಗಾದೇಟಿಗೆ ಸುರೇಶ ತನ್ನ ಪಟಾಲಮ್ಮಿನ ತಮೇತ ಅಮಾನತ್ತಾಗಿ ತೊಲಗೋದು ಗ್ಯಾರೆಂಟಿ. ಅದರ ಬೆನ್ನಲ್ಲಿಯೇ ನಿವೃತ್ತರಾಗಿರುವ ಮಾಲಿನಿಯತ್ತಲೂ ತನಿಖೆಯ ಗಮನ ಹೊರಳಿಕೊಳ್ಳಲಿದೆ. ಮಾಲಿನಿಯ ಬಂಟ ಸುರೇಶ ದರ್ಶನ್ ವಿರೋಧಿ ಪಾಳೆಯದಿಂದ ಕಾಸು ಗುಂಜಿಕೊಂಡೇ ದರ್ಶನ್ ಫೋಟೋ ಲೀಕ್ ಮಾಡಿದ್ದಾರೆಂಬ ಆರೋಪವೂ ಹರಿದಾಡುತ್ತಿದೆ.<br />
ಹಾಗಾದರೆ, ದರ್ಶನ್ ಫೋಟೋ ಲೀಕ್ ಮಾಡೋದರಿಂದ ವಿರೋಧಿ ಪಾಳೆಯಕ್ಕಾಗುವ ಲಾಭವೇನು ಅಂತೊಂದು ಪ್ರಶ್ನೆ ಸಹಜ. ಸಾಮಾನ್ಯವಾಗಿ ಯಾವ ಹೀರೋಗಳೂ ಕೂಡಾ ಹೀಗೆ ಕಳೆಗುಂದಿದ, ತಲೆ ಕೂದಲಿಲ್ಲದ, ದೈಹಿಕವಾಗಿ ಕುಗ್ಗಿದ ಫೋಟೋಗಳು ಅಭಿಮಾನಿಗಳನ್ನು ತಲುಪೋದನ್ನು ಇಷ್ಟಪಡೋದಿಲ್ಲ. ದರ್ಶನ್ ಒಂದು ಕಾಲದಲ್ಲಿ ಕಂಡೋರನ್ನೆಲ್ಲ ದುರಹಂಕಾರದಿಂದ ಎದುರು ಹಾಕಿಕೊಂಡಿದ್ದನಲ್ಲಾ? ಆ ಕುದಿತ ಹೊಂದಿರೋ ಮಂದಿಯೇ ಈ ಫೋಟೋ ಲೀಕ್ ಹಿಂದಿರಬಹುದು. ಈ ಮೂಲಕ ಮೆರೆದಾಡುತ್ತಿದ್ದ ಅಭಿಮಾನಿಗಳನ್ನು ಉರಿಸುವ ಉದ್ದೇಶವೂ ಇದ್ದಿರಬಹುದು. ಅದನ್ನು ಜೈಲಾಧಿಕಾರಿ ಸುರೇಶ ಕಾಸಾಗಿ ಪಳಗಿಸಿಕೊಂಡಿದ್ದಾರೆಂಬ ಸಂಶಯವೇ ದಟ್ಟವಾಗಿದೆ. ಖಡಕ್ ಅಧಿಕಾರಿ ದಯಾನಂದ್ ಅವರು ಮೊದಲು ಪರಪ್ಪನ ಅಗ್ರಹಾರದೊಳಗಿರೋ ಸುರೇಶನಂಥಾ ಮಾಲಿನಿಯ ಚೇಲಾ ಪಡೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆರಂಭಿಕವಾಗಿ ಸುರೇಶನಂಥ ಅಧಿಕಾರಿ ವರ್ಗವನ್ನು ಅಮಾನತುಗೊಳಿಸಿದರೆ ಪರಪ್ಪನ ಅಗ್ರಹಾರ ತಾನಾಗಿಯೇ ಶುಚಿಯಾಗುತ್ತದೆ. ಈಗ ದರ್ಶನ್ ಫೋಟೋ ಲೀಕ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಚೀಫ್ ಸೂಪರಿಟೆಂಡೆಂಟ್ ಸುರೇಶ ಮನೆ ಸೇರಿಕೊಳ್ಳುವ ಕ್ಷಣಗಳೂ ಹತ್ತಿರಾಗುತ್ತಿವೆ!<br />
</span></p>
<p>The post <a rel="nofollow" href="https://www.cinishodha.com/darshan-photo-leak-case-17-08-2025/">darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ!</title>
		<link>https://www.cinishodha.com/pavithra-gowda-14-08-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Thu, 14 Aug 2025 16:02:24 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#actress]]></category>
		<category><![CDATA[#darshanthoogudeepa]]></category>
		<category><![CDATA[#murdercase]]></category>
		<category><![CDATA[#pavithragowda]]></category>
		<category><![CDATA[arrested]]></category>
		<category><![CDATA[crime]]></category>
		<category><![CDATA[darshanpavithra]]></category>
		<category><![CDATA[renukaswamy]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=10220</guid>

					<description><![CDATA[<p>ದರ್ಶನ್ ಪಟಾಮ್ಮು ಪವಿತ್ರಾ ಗೌಡಾಳ ಸಮೇತ ಜೈಲುಪಾಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವೆಂಬುದು ಈ ಗ್ಯಾಂಗನ್ನು ಬಿಟ್ಟೂ ಬಿಡದಂತೆ ಕಾಡಿಸಿ, ಜೀವಾವಧಿ ಶಿಕ್ಷೆಯಾದೀತೇನೋ ಎಂಬಂಥಾ ಭಯವನ್ನೂ ತುಂಬಿದಂತಿದೆ. ಹೀಗೆ ದರ್ಶನ್ ಮತ್ತೆ ಕಂಬಿ ಹಿಂದೆ ಸರಿಯುತ್ತಲೇ ಆತನ ಅಭಿಮಾನಿಗಳು ಮಾತ್ರವಲ್ಲದೇ, ಓರ್ವ ನಟನಾಗಿ ಆತನನ್ನು ಮೆಚ್ಚಿಕೊಳ್ಳುವವರ ಸಿಟ್ಟೆಲ್ಲವೂ ಪವಿತ್ರಾಳತ್ತ ಹೊರಳಿಕೊಂಡಿದೆ. ಅಭಿಮಾನಿಗಳ ಮಾತು ಒತ್ತಟ್ಟಿಗಿರಲಿ; ಖುದ್ದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಒಟ್ಟಾರೆ ಅನಾಹುತಕ್ಕೆ ಮೂಲ ಕಾರಣ ಪವಿತ್ರಾ ಎಂಬ ಮಾತನ್ನಾಡಿದ್ದರು. ಅತ್ತ ರೇಣುಕಾಸ್ವಾಮಿಯ ಜೀವ ಹೋಗಿದೆ. ಇತ್ತ ಸೂಪರ್ [...]</p>
<p>The post <a rel="nofollow" href="https://www.cinishodha.com/pavithra-gowda-14-08-2025/">pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><strong><span style="color: #00ccff;"><span style="font-size: 18pt;">ದ</span></span></strong>ರ್ಶನ್ ಪಟಾಮ್ಮು ಪವಿತ್ರಾ ಗೌಡಾಳ ಸಮೇತ ಜೈಲುಪಾಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವೆಂಬುದು ಈ ಗ್ಯಾಂಗನ್ನು ಬಿಟ್ಟೂ ಬಿಡದಂತೆ ಕಾಡಿಸಿ, ಜೀವಾವಧಿ ಶಿಕ್ಷೆಯಾದೀತೇನೋ ಎಂಬಂಥಾ ಭಯವನ್ನೂ ತುಂಬಿದಂತಿದೆ. ಹೀಗೆ ದರ್ಶನ್ ಮತ್ತೆ ಕಂಬಿ ಹಿಂದೆ ಸರಿಯುತ್ತಲೇ ಆತನ ಅಭಿಮಾನಿಗಳು ಮಾತ್ರವಲ್ಲದೇ, ಓರ್ವ ನಟನಾಗಿ ಆತನನ್ನು ಮೆಚ್ಚಿಕೊಳ್ಳುವವರ ಸಿಟ್ಟೆಲ್ಲವೂ ಪವಿತ್ರಾಳತ್ತ ಹೊರಳಿಕೊಂಡಿದೆ. ಅಭಿಮಾನಿಗಳ ಮಾತು ಒತ್ತಟ್ಟಿಗಿರಲಿ; ಖುದ್ದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಒಟ್ಟಾರೆ ಅನಾಹುತಕ್ಕೆ ಮೂಲ ಕಾರಣ ಪವಿತ್ರಾ ಎಂಬ ಮಾತನ್ನಾಡಿದ್ದರು. ಅತ್ತ ರೇಣುಕಾಸ್ವಾಮಿಯ ಜೀವ ಹೋಗಿದೆ. ಇತ್ತ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದ ದರ್ಶನ್ ವೃತ್ತಿಬದುಕೇ ಅಡಕತ್ತರಿಗೆ ಸಿಲುಕಿದೆ. ಇನ್ನೊಂದಷ್ಟು ಹುಡುಗರ ಬದುಕೂ ಹಾಳಾಗಿದೆ. ಆದರೆ, ಅದಕ್ಕೆಲ್ಲ ಕಾರಣನಾದೆನಲ್ಲಾ ಎಂಬಂಥಾ ಪಶ್ಚಾತ್ತಾಪದ ಚೂರು ಪಸೆಯೂ ಪವಿತ್ರಾಳ ಮುಖದಲ್ಲಿ ಕಾಣಿಸಿಲ್ಲ!</span></p>
<p style="text-align: justify;"><img loading="lazy" decoding="async" class="alignnone wp-image-10221" src="https://www.cinishodha.com/wp-content/uploads/2025/08/Sarees-are-the-pride-of-every-Indian-woman-Outfit-@redcarpetstudio777-redcarpetstudio777-explo-240x300.jpg" alt="Sarees are the pride of every Indian woman Outfit @redcarpetstudio777 redcarpetstudio777 explo" width="1024" height="1280" title="pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ! 45 » cinishodha.com"><span style="font-size: 14pt;">ಅದೆಂಥಾ ದುಷ್ಟರೇ ಆಗಿದ್ದರೂ ಇಂಥಾ ಅನಾಹುತದ ಪರಿಣಾಮವೊಂದರ ಅಂಚಿನಲ್ಲಿ ನಿಂತಾದ ಪಶ್ಚಾತ್ತಾಪದಿಂದ ಮನಸು ಮುರುಟುತ್ತೆ. ಆದರೆ, ಈ ಪವಿತ್ರಾ ಗೌಡಳ ಮನಸಲ್ಲಿ ಅಂಥಾ ಮನುಷ್ಯತ್ವಕ್ಕೆ ಒಂದಿನಿತೂ ಜಾಗವಿದ್ದಂತಿಲ್ಲ. ಆರಂಭದಲ್ಲಿ ಜೈಲಿಗೆ ಹೋದಲ್ಲಿಂದ ಹಿಡಿದು, ಇದೀಗ ಮತ್ತೆ ಜೈಲುಪಾಲಾಗುವವರೆಗೂ ಈಕೆಯ ದುರಹಂಕಾರ ತುಸುವೂ ತಗ್ಗಿದಂತಿಲ್ಲ. ಅದೇನೋ ಸಾಧಿಸಿದವಳಂತೆ ಮೆರೆಯುತ್ತಾ ಬಂದಿರುವ ಈಕೆಗೆ ಬೇಲ್ ಮೇಲೆ ಹೊರ ಬಂದ ನಂತರದ ಶೋಕಿಗಳೇ ಮುಳುವಾಗಿವೆ. ಅದಕ್ಕೆ ಸರಿಯಾಗಿ ದರ್ಶನ್ ಕೂಡಾ ಒಳಗಿಂದೊಳಗೇ ಅಂಥಾ ಒಂದಷ್ಟು ಯಡವಟ್ಟು ಮಾಡಿಕೊಂಡಿದ್ದನಲ್ಲಾ? ಎಲ್ಲವೂ ಸೇರಿ ಇಡೀ ಪಟಾಲಮ್ಮೇ ಜೈಲುಪಾಲಾಗಿದೆ.</span></p>

<p style="text-align: justify;">
<span style="font-size: 14pt;">ಪವಿತ್ರಾ ಗೌಡ ಅದೆಂಥಾ ಅವಿವೇಕಿ ಎಂದರೆ, ಬೇಲ್ ಮೂಲಕ ಹೊರ ಬಂದವಳೇ ಮಾವನ ಮನೆಯಿಂದ ವಾಪಾಸಾದಷ್ಟೇ ನಿರಾಳವಾಗಿ ಬದುಕಲಾರಂಭಿಸಿದ್ದಳು. ಆಕೆಗೆ ಇನ್ನು ಜೈಲಿಗೆ ಹೋಗೋದಿಲ್ಲ ಎಂಬಂಥಾ ನಂಬಿಕೆಯಿತ್ತಾ? ಅದು ಇಷ್ಟು ವರ್ಷಗಳ ಕಾಲ ಬದುಕಿದ ಭಂಡ ಬಾಳು ಕರುಣಿಸಿದ ಸ್ವಭಾವವಾ ಗೊತ್ತಿಲ್ಲ. ಪವಿತ್ರಾ ಮತ್ತೆ ತನ್ನ ಉದ್ಯಮಕ್ಕೆ ಮರಳಿದಂತೆ ಪೋಸು ಕೊಡಲಾರಂಭಿಸಿದ್ದಳು. ಲಕಲಕಿಸುತ್ತಾ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಅಹಮ್ಮಿಕೆ ಪ್ರದರ್ಶಿಸಿದ್ದಳು. ತಪ್ಪೆಸಗಿದವರಿಗೆ ಇಷ್ಟರ ಮಟ್ಟಿಗೆ ತಿಮಿರಿರೋದನ್ನು ನ್ಯಾಯ ವ್ಯವಸ್ಥೆ ಗಮನಿಸದಿರಲು ಸಾಧ್ಯವೇ? ಈವತ್ತಿಗೆ ದರ್ಶನ್ ಮತ್ತೆ ಜೈಲು ಸೇರಿರೋದರ ಹಿಂದೆ ಇಂಥಾ ಅನೇಕ ಸೂಕ್ಷ್ಮಗಳಿದ್ದಾವೆ. ಸರ್ಕಾರದ ಪರ ವಕೀಲರಿಗೆ ವಾದಿಸಲು ಬೇಕಾದ ಅಷ್ಟೂ ಸರಕುಗಳನ್ನು ಪವಿತ್ರಾಳೇ ಖುದ್ದಾಗಿ ಸೃಷ್ಟಿಸಿ ಕೊಟ್ಟಂತಾಗಿದೆ!</span></p>
<p style="text-align: justify;"><img loading="lazy" decoding="async" class="alignnone wp-image-10223" src="https://www.cinishodha.com/wp-content/uploads/2025/08/GZ3WGC1XoAEOJqL-1-300x169.jpg" alt="GZ3WGC1XoAEOJqL 1" width="1024" height="576" title="pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ! 46 » cinishodha.com"><span style="font-size: 14pt;">ಯಾರು ಏನಾದರೂ ಅಂದುಕೊಳ್ಳಲಿ, ಯಾರ ಬದುಕಾದರೂ ಹಡಾಲೇದ್ದು ಹೋಗಲಿ; ತಾನು ಮಾತ್ರ ಹೈಫೈ ಬದುಕು ನಡೆಸಬೇಕೆಂಬ ಮನಃಸ್ಥಿತಿ ಪವಿತ್ರಾಳದ್ದು. ಆಕೆ ಜೀವದಂತೆ ಹಚ್ಚಿಕೊಂಡು ಪ್ರೀತಿಸಿ ಮದುವೆಯಾಗಿದ್ದ ಪತಿಯೇ ಕೈಯೆತ್ತಿದ್ದರ ಹಿಂದೆಯೂ ಅಂಥಾ ಮನಃಸ್ಥಿತಿಯ ಕಿಸುರಿದೆ. ದರ್ಶನ್ ಥರದ ಆನೆಯನ್ನು ನಾಜೂಕಾಗಿ ಪಳಗಿಸಿಕೊಂಡು, ಆತನ ಮನದನ್ನೆಯಾಗಿದ್ದರ ಹಿಂದೆಯೂ ಹೈಫೈ ಬದುಕಿನ ಆಕಾಂಕ್ಷೆಯೇ ಪ್ರಧಾನವಾಗಿರುವಂತೆ ಕಾಣಿಸುತ್ತದೆ. ದುರಂತವೆಂದರೆ ಮದವೇರಿ ತೊನೆಯುತ್ತಿದ್ದ ದಾಸನಿಗೆ ಇಂಥಾ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವ ಮನಃಸ್ಥಿತಿ ಇರಲಿಲ್ಲ. ಬಹುಶಃ ತನಗೆ ಆಶ್ಲೀಲವಾಗಿ ಮೆಸೇಜು ಬಿಟ್ಟವನ ಹನನ ಮಾಡಿದ ಶಕ್ತಿ ತಾನೆಂಬ ಭ್ರಮೆ ಪವಿತ್ರಾಗಿದ್ದರೂ ಇದ್ದೀತು. ಹಾಗೊಂದು ವೇಳೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮ ಎಸೇಜು ಬಿಡುವವರನ್ನೆಲ್ಲ ಕೊಂದು ಕೆಡವಿದರೆ, ಬೀಳೋ ಹೆಣಗಳ ರಾಶಿಯಲ್ಲಿ ದರ್ಶನ್ ವೀರಾಭಿಮಾನಿಗಳದ್ದೇ ಮೆಜಾರಿಟಿ ಇರುತ್ತೆ. ಒಟ್ಟಾರೆಯಾಗಿ ಪವಿತ್ರಾಳ ಮೋಹದ ಬಲೆಗೆ ಸಿಕ್ಕ ದರ್ಶನ್ ಬಂಧಿಯಾಗಿದ್ದಾನೆ. ಓರ್ವ ಸ್ಟಾರ್ ನಟನಾಗಿ ಆತನ ಘನತೆ, ಗೌರವಗಳು ಅಕ್ಷರಶಃ ಮಣ್ಣುಪಾಲಾಗಿ ಬಿಟ್ಟಿವೆ!</span></p>
<p>The post <a rel="nofollow" href="https://www.cinishodha.com/pavithra-gowda-14-08-2025/">pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		<enclosure url="https://www.cinishodha.com/wp-content/uploads/2025/08/We-are-excited-to-announce-that-REDCARPET-Studio777-is-launching-online-shopping-very-soon-The-1-1.mp4" length="1506368" type="video/mp4" />

			</item>
		<item>
		<title>darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</title>
		<link>https://www.cinishodha.com/darshan-bail-cancelled-14-08-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Thu, 14 Aug 2025 09:17:45 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#challengingstar]]></category>
		<category><![CDATA[#darshanthoogudeepa]]></category>
		<category><![CDATA[#dboss]]></category>
		<category><![CDATA[#murdercase]]></category>
		<category><![CDATA[#pavithragowda]]></category>
		<category><![CDATA[#renukaswamymurdercase]]></category>
		<category><![CDATA[bailcancelled]]></category>
		<category><![CDATA[brutalmurders]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[sandalwood]]></category>
		<category><![CDATA[supremecourtjudgements]]></category>
		<category><![CDATA[supremecourtorder]]></category>
		<category><![CDATA[vijayalaxmi]]></category>
		<guid isPermaLink="false">https://www.cinishodha.com/?p=10207</guid>

					<description><![CDATA[<p>ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ [...]</p>
<p>The post <a rel="nofollow" href="https://www.cinishodha.com/darshan-bail-cancelled-14-08-2025/">darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ರೇ</span></strong></span>ಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ ನಡೆದುಕೊಂಡ ಜೈಲಾಧಿಕಾರಿಗಳಿಗೂ ಶಾಕ್ ಕೊಟ್ಟಿದೆ.</span></p>
<p style="text-align: justify;"><img loading="lazy" decoding="async" class="alignnone wp-image-10208" src="https://www.cinishodha.com/wp-content/uploads/2025/08/df388620-2f99-11ef-9552-ddad3d31dcba.jpg-300x169.webp" alt="df388620 2f99 11ef 9552 ddad3d31dcba.jpg" width="1024" height="576" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 51 » cinishodha.com"><span style="font-size: 14pt;">ಅವಳ್ಯಾರೋ ಪವಿತ್ರಾ ಗೌಡಳ ಮೋಹಕ್ಕೆ ಬಿದ್ದಿದ್ದ ದರ್ಶನ್ ಕೊಲೆಯ ಮೂಲಕ ರಕ್ತ ಮೆತ್ತಿಸಿಕೊಳ್ಳುವಾಗ ಕಾನೂನ ಎಂಬುದು ಈ ಪರಿಯಾಗಿ ಪ್ರಹಾರ ನಡೆಸುತ್ತೆ ಅಂದುಕೊಂಡಿರಲಿಕ್ಕಿಲ್ಲ. ಮಾಧ್ಯಮಗಳ ಮುಂದೆ ಎದೆಯುಬ್ಬಿಸಿ ಮಾತಾಡಿ ದಕ್ಕಿಸಿಕೊಂಡಷ್ಟೇ ಸಲೀಸಾಗಿ ಈ ಕೊಲೆ ಕೇಸಿಂದ ಹೊರಬರಬಹುದೆಂಬ ಗಾಢ ವಿಶ್ವಾಸ ಆತನಿಗಿದ್ದಂತಿತ್ತು. ಹಾಗಿಲ್ಲದೇ ಹೋಗಿದ್ದರೆ ತನ್ನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳ ಮುಂದೆ ತಿಮಿರು ತೋರಿಸುತ್ತಿರಲಿಲ್ಲ; ಮುಚ್ಕೊಂಡು ಗಾಡಿ ಹತ್ತುತ್ತೀಯಾ ಅಥವಾ ನಾವೇ ಎಳಕೊಂಡು ಹೋಗ್ಬೇಕಾ ಅಂತ ಪೊಲೀಸ್ ಅಧಿಕಾರಿಯಿಂದಲೇ ಅನ್ನಿಒಸಿಕೊಳ್ಳುತ್ತಲೂ ಇರಲಿಲ್ಲ. ಈ ಕ್ಷಣಕ್ಕೆ ದರ್ಶನ್ ತಲುಪಿರೋ ಸ್ಥಿತಿಗೆ ಕಾರಣ ಏನೆಂಬುದನ್ನು ಅವಲೋಕಿಸಿದರೆ ತಿಮಿರು ಮತ್ತು ತಿಮಿರಿನ ಹೊರತಾಗಿ ಮತ್ತೇನೂ ಕಾಣಿಸೋದಿಲ್ಲ!</span></p>
<p style="text-align: justify;"><img loading="lazy" decoding="async" class="alignnone wp-image-10209" src="https://www.cinishodha.com/wp-content/uploads/2025/08/3f830910-2f86-11ef-8f5e-cfd8745d0c76.jpg-300x200.webp" alt="3f830910 2f86 11ef 8f5e cfd8745d0c76.jpg" width="1024" height="682" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 52 » cinishodha.com"><span style="font-size: 14pt;">ತಿಂಗಳುಗಟ್ಟಲೆ ಜೈಲು ಪಾಲಾಗಿ ವಾಪಾಸಾದ ನಂತರವೂ ದರ್ಶನ್‌ಗೆ ಹಳೇ ತಿಮಿರು ಇಳಿದಂತೆ ಕಾಣುತ್ತಿರಲಿಲ್ಲ. ವಕೀಲರು ಒತ್ತಿ ಒತ್ತಿ ಹೇಳಿದ್ದ ವಿಚಾರಗಳನ್ನು ಕೇಳಿ ದಾಸನಿಗೆ ಸಹಜವಾಗಿಯೇ ಭಯ ಶುರುವಾಗಿತ್ತು. ಚೂರೇ ಚೂರು ಮಿಸುಜಕಾಡಿದರೂ ಕೂಡಾ ಮತ್ತೆ ಜೈಲು ಪಾಲಾಗುವ ಕಂಟಕ ಆತನನ್ನು ಕೊಂಚ ಹದ್ದುಬಸ್ತಿನಲ್ಲಿಟ್ಟಿತ್ತು. ಆದರೆ ಆತ ಸೆಲೆಬ್ರಿಟೀಸ್ ಅಂತ ಕರೆಯುತ್ತಾ ಕೊಬ್ಬಿಸಿದ್ದ ಕೆಲ ಹಡಬೇ ಅಭಿಮಾನಿಗಳಿದ್ದಾರಲ್ಲಾ? ಅಂಥಾ ಕುನ್ನಿಗಳನ್ನು ಹದ್ದುಬಸ್ತಿನಲ್ಲಿಡುವ ಸಲುವಾಗಿ ಸಣ್ಣದೊಂದು ಪ್ರಯತ್ನವನ್ನೂ ದರ್ಶನ್ ನಡೆಸಿರಲಿಲ್ಲ. ಒಂದು ವೇಳೆ ಹಾಗೊಂದು ಕ್ರಮ ಕೈಗೊಂಡು ತೆಪ್ಪಗಿದ್ದಿದ್ದರೆ ಅಭಿಮಾನಿಗಳೆನ್ನಿಸಿಕೊಂಡಿರೋ ಕೆಲ ಗೂಂಡಾ ಮನಃಸ್ಥಿತಿಯ ಚಿಲ್ಟುಗಳು ಸೋಶಿಯಲ್ ಮೀಡಿಯಾ ಮೂಲಕ ಮೆರೆಯುತ್ತಿರಲಿಲ್ಲ.</span></p>
<p style="text-align: justify;"><img loading="lazy" decoding="async" class="alignnone wp-image-10210" src="https://www.cinishodha.com/wp-content/uploads/2025/08/Darshan_Pavithra_1718364048404_1719475766503-300x169.webp" alt="Darshan Pavithra 1718364048404 1719475766503" width="1024" height="577" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 53 » cinishodha.com"><span style="font-size: 14pt;">ತಮ್ಮ ಬಾಸ್ ದರ್ಶನನನ್ನು ಯಾವ ಕಾನೂನುಗಳೂ ಏನೂ ಮಾಡಲು ಸಾಧ್ಯವಿಲ್ಲ ಎಂಬಂಥಾ ಭ್ರಮೆ ಅಭಿಮಾನಿ ಪಡೆಯನ್ನು ಆವರಿಸಿಕೊಂಡಿತ್ತು. ಅದೀಗ ಎರಡನೇ ಬಾರಿ ಕಳಚಿಕೊಂಡಿದೆ. ದರ್ಶನ್ ಅದೇನೇ ಪ್ರಯತ್ನ ಪಟ್ಟರೂ ಕೂಡಾ ಇನ್ನಾರು ತಿಂಗಳ ಕಾಲ ಜೈಲು ವಾಸ ಖಾಯಂ. ಈತನಿಗೆ ಈಗ ಬಂದೊದಗಿರೋ ಸ್ಥಿತಿಯ ಹಿಂದೆ ಆತನ ಅಭಿಮಾನಿಗಳೆನ್ನಿಸಿಕೊಂಡವರ ಪಾಲಿರೋದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಬೇಲ್ ಕ್ಯಾನ್ಸಲ್ ಮಾಡಬೇಕೆಂದು ಕೋರಿ ಸುಪ್ರೀಂ ಅಂಗಳದಲ್ಲಿ ದರ್ಶನ್ ಭವ್ಯವಿರುವಾಗಲೇ ಅಭಿಮಾನಿ ಬಳಗ ಗೂಂಡಾಗಿರಿಗಿಳಿದಿತ್ತು. ನಟಿ ರಮ್ಯಾ ವಿರುದ್ಧ ಕೆಟ್ಟಾಕೊಳಕು ಪ್ರಹಾರ ಮಾಡುವ ಮೂಲಕ ಕೇಸು ಜಡಿಸಿಕೊಂಡಿತ್ತು. ದರ್ಶನ್ ಯಾವ ರೀತಿ ಬದುಕುತ್ತಿದ್ದಾನೆ? ಆತನ ಅಭಿಮಾನಿಗಳು ಅದೆಷ್ಟು ಅನಾಹುತಕಾರಿಗಳಾಗಿದ್ದಾರೆ? ಕೊಂಚ ಯಾಮಾರಿದರೆ ದರ್ಶನ್ ಅಭಿಮಾನಿ ಪಡೆ ಕಟ್ಟಿಕೊಂಡು ಎಂಥಾ ಅನಾಹುತ ನಡೆಸಬಲ್ಲ? ಇಂಥಾ ದಿಕ್ಕುಗಳಲ್ಲಿ ನ್ಯಾಯಾಂಗ ಆಕಲೋಚಿಸಿಯೇ ಇಂಥಾದ್ದೊಂದು ಖಡಕ್ ಆದೇಶ ಕೊಟ್ಟಿರುವಂತಿದೆ.</span></p>
<p style="text-align: justify;"><img loading="lazy" decoding="async" class="alignnone wp-image-10211" src="https://www.cinishodha.com/wp-content/uploads/2025/08/GZ3WGC1XoAEOJqL-300x169.jpg" alt="GZ3WGC1XoAEOJqL" width="1024" height="576" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 54 » cinishodha.com"><span style="font-size: 14pt;">ದರ್ಶನ್ ಅದೆಂಥಾ ಮುಠ್ಠಾಳನೆಂದರೆ, ತನ್ನ ಅಪಾರ ಅಭಿಮಾನಿ ಬಳಗವನ್ನು ತನ್ನ ಮಾತು ವರ್ತನೆದಗಳೇ ಪ್ರಭಾವಿಸುತ್ತವೆಂಬ ಸಣ್ಣ ಖಬರೂ ಆತನಿಗಿರಲಿಲ್ಲ. ಈ ಅವಿಕೇಕಿ ಎಣ್ಣೆ ಏಟಲ್ಲಿ ಬಡಬಡಿಸಿದ್ದನ್ನೇ ಕೆಲ ಅಭಿಮಾನಿಗಳು ಬದುಕಾಗಿಸಿಕೊಂಡಿದ್ದಾರೆ. ಅಂಥವರ ಮಾತು, ವರ್ತನೆ, ಭಾಷೆಗಳಲ್ಲಿ ಅದೇ ಛಾತಯೆ ಎದ್ದು ಕಾಣುತ್ತಿದೆ. ಈತ ಒಂದು ಹಂತದಲ್ಲಿ ಮಾಧ್ಯಮಗಳನ್ನು ಎದುರು ಹಾಕಿಕೊಂಡ. ಮೀಡಿಯಾ ತನ್ನ ಶಾಟಕ್ಕೆ ಸಮ ಎಂದ. ಈಗ ಅದೇ ದರ್ಶನ್ ಈ ನೆಲದ ಕಾನೂನು ಕಟ್ಟಳೆಗಳ ಮುಂದೆ ಶಾಟಕ್ಕಿಂತಲೂ ಕಡೆಯಾಗಿ ನಿಂತಿದ್ದಾನೆ. ಕೀರ್ತಿಯ ನಶೆ, ನೆತ್ತಿಗೇರಿ ಅಲ್ಲಿಯೇ ಪರ್ಮನೆಂಟಾಗಿ ನೆಲೆ ಕಂಡುಕೊಳ್ಳೋ ದುರಹಂಕಾರ ಎಂಥಾ ಅನಾಹುತ ಸೃಷ್ಟಿಸುತ್ತದೆಂಬುದಕ್ಕೆ ದರ್ಶನ್ ತಾಜಾ ಉದಾಹರಣೆಯಾಗಿ ಕಾಣಿಸುತ್ತಿದ್ದಾನೆ! </span></p>
<p>The post <a rel="nofollow" href="https://www.cinishodha.com/darshan-bail-cancelled-14-08-2025/">darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</title>
		<link>https://www.cinishodha.com/pratham-darshan-controvercy-bangalure-underworld-31-07-25/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 28 Jul 2025 11:51:36 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA['santhoshbagilagadde]]></category>
		<category><![CDATA[#bangaloreunderworld]]></category>
		<category><![CDATA[#bekaryraghu]]></category>
		<category><![CDATA[#challengingstar]]></category>
		<category><![CDATA[#crimenews]]></category>
		<category><![CDATA[#cycleravi]]></category>
		<category><![CDATA[#darshanfans]]></category>
		<category><![CDATA[#darshanupdates]]></category>
		<category><![CDATA[#dboss]]></category>
		<category><![CDATA[#lawyerjagdhish]]></category>
		<category><![CDATA[#ollehudugapratham]]></category>
		<category><![CDATA[#pavithragowda]]></category>
		<category><![CDATA[#pratham]]></category>
		<category><![CDATA[#prathamcontrovercy]]></category>
		<category><![CDATA[#protest]]></category>
		<category><![CDATA[#renukaswamymurdercase]]></category>
		<category><![CDATA[#slumbharatha]]></category>
		<category><![CDATA[#underwolrld]]></category>
		<category><![CDATA[#wilsongardannaga]]></category>
		<category><![CDATA[cinishodha]]></category>
		<category><![CDATA[crime]]></category>
		<category><![CDATA[kfi]]></category>
		<category><![CDATA[ramya]]></category>
		<category><![CDATA[ramyadivyaspandana]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=9974</guid>

					<description><![CDATA[<p>ಕನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ [...]</p>
<p>The post <a rel="nofollow" href="https://www.cinishodha.com/pratham-darshan-controvercy-bangalure-underworld-31-07-25/">pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><strong><span style="font-size: 18pt; color: #00ccff;">ಕ</span></strong>ನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ ಪ್ರಥಮನ ವಿರುದ್ಧ ಕೆಂಡ ಕಾರುತ್ತಾ ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಥಮನೆಡೆಗಿನ ದರ್ಶನ್ ಅಭಿಮಾನಿಗಳ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಅವಿವೇಕಿ ಪ್ರಥಮ್ ಅದರ ಮೇಲೆ ಅಂಡು ಊರಿ ಕುಂಯ್ಯೋ ಅನ್ನಲಾರಂಭಿಸಿದ್ದಾನೆ!</span></p>
<p style="text-align: justify;"><img loading="lazy" decoding="async" class="alignnone wp-image-9975" src="https://www.cinishodha.com/wp-content/uploads/2025/07/display-25-1485341837-1491454372-300x225.jpg" alt="display 25 1485341837 1491454372" width="1024" height="768" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 58 » cinishodha.com"><span style="font-size: 14pt;">ಅಷ್ಟಕ್ಕೂ ಈ ಪ್ರಥಮ್ ಅದೆಂಥಾ ಗಂಭೀರ ವಿಚಾರದ ಬಗ್‌ಗೆ ಮಾತಾಡಿದರೂ ಅದನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಾರದಂಥಾ ವಾತಾವರಣವಿದೆ. ಕನಿಷ್ಟ ಓರ್ವ ಮನುಷ್ಯ ಕಾಪಿಟ್ಟುಕೊಳ್ಳಬೇಕಾದ ವ್ಯಕ್ತಿಗತ ಘನತೆ ಗೌರವಗಳನ್ನು ಈತ ಅದ್ಯಾವತ್ತೋ ಮಣ್ಣುಪಾಲು ಮಾಡಿಕೊಂಡಿದ್ದಾನೆ. ಇಂಥವನು ಅದ್ಯಾವುದೋ ಸಿನಿಮಾ ಅಂತೆಲ್ಲ ಹಂತ ಹಂತಗವಾಗಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾನೆ. ಹೇಗಾದರೂ ಸರಿ; ಸದಾ ಚಾಲ್ತಿಯಲ್ಲಿರಬೇಕೆಂಬ ಸೋಶಿಯಲ್ ಮೀಡಿಯಾ ಜಮಾನದ ಫಾರ್ಮುಲಾವನ್ನೀತ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬಂದಿದ್ದಾನೆ. ಇಂಥಾ ಪ್ರಥಮನನ್ನು ಅದ್ಯಾವುದೋ ರೌಡಿ ಪಡೆ ಎತ್ತಾಕಿಕೊಂಡು ಹೋಗಿ ಅವಾಜು ಬಿಟ್ಟ ಹೊಸಾ ಕಥೆಯೊಂದನ್ನು ಲಾಯರ್ ಜಗದೀಶ್ ಜಾಹೀರು ಮಾಡುತ್ತಲೇ ಜನ ಸಹಜವಾಗಿಯೇ ಅವಾಕ್ಕಾಗಿ ಬಿಟ್ಟಿದ್ದರು.</span><br />
<span style="font-size: 14pt;">ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ತಗುಲಿಕೊಂಡಾಗ ಆತನ ಅಭಿಮಾನಿಗಳ ಆವುಟ ಮೇರೆ ಮೀರಿತ್ತಲ್ಲಾ? ಆ ಘಳಿಗೆಯಲ್ಲಿ ಪ್ರಥಮ್ ಆಡಿದ್ದ ಕೆಲ ಮಾತುಗಳು ಸರಿ ಅನ್ನಿಸಿದ್ದಿದೆ. ಆ ಹೊತ್ತಿನಲ್ಲಿಯೇ ಪುಂಡಾಭಿಮಾನಿಗಳ ಕಡೆಯಿಂದ ಪ್ರಥಮ್‌ಗೆ ಒಂದಷ್ಟು ಪ್ರತಿರೋಧಗಳು ವ್ಯಕ್ತವಾಗಿದ್ದವು. ಇದಕ್ಕೆ ಸರಿಯಾಗಿ ಲಾಯರ್ ಜಗದೀಶ್ ಜಾಹೀರು ಮಾಡಿದ ಆಡಿಯೋದಲ್ಲಿ ದರ್ಶನ್ ಬಗ್ಗೆ ಮಾತಾಡಿದ್ದರ ವಿರುದ್ಧವೇ ಪ್ರಥಮ್ ಎದೆಗೆ ರೌಡಿ ಪಟಾಲಮ್ಮು ಡ್ರ್ಯಾಗರ್ ಇಟ್ಟಿತ್ತೆಂಬ ವಿಚಾರ ಬಯಲಾಗಿತ್ತು. ಪುಣ್ಯಾತ್ಮ ಪ್ರಥಮ ಅಂಥಾ ಅರ್ಥ ಬರುವಂತೆ ಒಟ್ಟಾರೆ ಘಟನೆಯನ್ನು ಪಳಗಿಸಿಕೊಂಡಿದ್ದ. ದರ್ಶನ್ ಪಾಳೆಯ ಈ ಮಟ್ಟಕ್ಕೂ ಇಳಿದು ಬಿಟ್ಟಿತಾ? ಓರ್ವ ನಟನನ್ನು ವಿಮರ್ಶೆಗೊಳಪಡಿಸಿದರೆ ರೌಡಿಗಳ ಮೂಲಕ ಧಮಕಿ ಹಾಕಿಸುವ ವಾತಾವರಣ ಸೃಷ್ಟಿಯಾಗಿ ಬಿಟ್ಟಿತಾ? ಇಂಥಾದ್ದೊಂದು ಕಾಳಜಿಯಿಂದಲೇ ಲಾಯರ್ ಜಗದೀಶ್ ಆಡಿಯೋ ಬಿಡುಗಡೆ ಮಾಡಿದೇಟಿಗೆ, ಒಂದಷ್ಟು ಸಂಘಟನೆಗಳ ಮಂದಿಯೂ ಬೆಂಬಲಕ್ಕೆ ನಿಂತಿದ್ದರು.</span><br />
<span style="font-size: 14pt;">ಒಂದು ಹಂತದಲ್ಲಿ ಖುದ್ದು ಜಗದೀಶ್ ಈ ಬಗ್ಗೆ ಪೊಲೀಸರಿಗೆ ದೂರು ಕೊಡುವ ಸಲಹೆ ನೀಡಿದ್ದರೂ ಒಳ್ಳೆ ಹುಡುಗ ಅದೇನೇನೋ ಕಥೆ ಹೊಡೆದಿದ್ದ. ಕಡೆಗೂ ಪ್ರಥಮ್ ಈ ಘಟನೆಯ ಸಂಬಂಧವಾಗಿ ದೂರು ದಾಖಲಿಸಿದ್ದಾನೆ. ಹಾಗೆ ದೂರು ಕೊಟ್ಟಾದ ನಂತರ ಈ ಬಗೆಗಿನ ತನಿಖೆಗೆ ಅನುವು ಮಾಡಿಕೊಟ್ಟು ಬಾಯಿ ಮುಚ್ಚಿಕೊಂಡಿದ್ದರೆ ಪ್ರಥಮನ ಮಾನ ಅಷ್ಟರ ಮಟ್ಟಿಗಾದರೂ ಉಳಿಯುತ್ತಿತ್ತು. ದೂರಿನ ನಂತರದಲ್ಲಿ ಈ ಫಟಿಂಗ ಆಸಾಮಿ ನಡೆಸುತ್ತಿರುವ ಹರತಾಳಗಳು, ಆತನ ಓತಾಪ್ರೋತ ಮಾತುಗಳನ್ನು ಕಂಡು ಆಸುಪಾಸಿನವರೇ ಹೌಹಾರಿದ್ದಾರೆ. ಇತ್ತ ಲಾಯರ್ ಜಗದೀಶ್ ಕೂಡಾ ಪ್ರಥಮನಿಗೆ ಮಹಾಮಂಗಳಾರತಿ ಮಾಡಿ ತನ್ನ ಬೆಂಬಲವಿಲ್ಲ ಅಂದರೆ, ಕೆಲ ಸಂಘಟನೆಗಳವರೂ ಕೂಡಾ ಒಳ್ಳೆ ಹುಡುಗನಿಗೆ ತಮ್ಮದೇ ರೀತಿಯಲ್ಲಿ ಕ್ಯಾಕರಿಸಿ ಉಗಿದದ್ದೂ ಆಗಿದೆ. ಇದೀಗ ತಾನೇ ಸೃಷ್ಟಿಸಿದ ಚಕ್ರವ್ಯೂಹದಲ್ಲಿ ಏಕಾಂಗಿಯಾಗುಳಿದಿರೋ ಪ್ರಥಮ ಅಕ್ಷರಶಃ ಕಂಗಾಲಾಗಿ ಬಿಟ್ಟಿದ್ದಾನೆ!</span></p>
<p style="text-align: justify;"><img loading="lazy" decoding="async" class="alignnone wp-image-9976" src="https://www.cinishodha.com/wp-content/uploads/2025/07/kannada-actor-darshan-1-300x225.webp" alt="kannada actor darshan 1" width="1024" height="767" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 59 » cinishodha.com"><span style="font-size: 14pt;">ನಿಜ, ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನ ಭೂಮಿಕೆಯಲ್ಲಿ ನಡೆದುಕೊಂಡ ರೀತಿಯನ್ನು, ಆತನ ಕಡೆಯಿಂದಾಗಿರೋ ಕೃತ್ಯವನ್ನು ಆತನ ಕೆಲ ತಲೆಮಾಸಿದ ಅಭಿಮಾನಿಗಳನ್ನು ಹೊರತಾಗಿ ಬೇರ್‍ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಭೂಮಿಕೆಯಲ್ಲಿ ಬಹುತೇಕರು ದರ್ಶನ್‌ನನ್ನು ವಿರೋಧಿಸಿದ್ದಾರೆ. ಈ ಕ್ಷಣಕ್ಕೂ ದರ್ಶನ್ ತನ್ನ ಅಭಿಮಾನಿ ಪಡೆಯನ್ನು ಗೂಂಡಾಗಳಂತೆ ರೂಪಿಸಿರುವ, ಅಂಥಾ ಭಂಡ ಅಭಿಮಾನಿಗಳು ಅದೆಂಥಾ ವಿಕೃತಿ ಮೆರೆದರೂ ತೆಪ್ಪಗಿರುವ ಗುಣಗಳ ಬಗ್ಗೆ ಪ್ರಜ್ಞಾವಂತರೊಳಗೊಂದು ಆಕ್ರೋಶವಿದೆ. ಹಾಗಂತ, ಈ ನೆಲೆಯಲ್ಲಿ ದರ್ಶನ್‌ನನ್ನು ವಿರೋಧಿಸುವ ಭರದಲ್ಲಿ ತೀರಾ ಕೀಳು ಮಟ್ಟಕ್ಕಿಳಿಯೋದೂ ಕೂಡಾ ಅಸಹ್ಯವೇ. ಒಳ್ಳೆ ಹುಡುಗ ಪ್ರಥಮ್ ಥೇಟು ಅಂಥಾ ಅಸಹ್ಯದ ಕೊಚ್ಚೆಗಿಳಿದಿದ್ದಾನೆ. ಇದೇ ಭೂಮಿಕೆಯಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುವ ನೌಟಂಕಿ ನಾಟಕಗಳನ್ನೂ ಯಥೇಚ್ಛವಾಗಿ ಪ್ರದರ್ಶಿಸುತ್ತಿದ್ದಾನೆ.</span><br />
<span style="font-size: 14pt;">ಹಾಗಾದರೆ, ಪ್ರಥಮ್ ಎದೆಗೆ ಡ್ರ್ಯಾಗರ್ ಇಟ್ಟ ಪ್ರಕರಣ ಕೂಡಾ ಆತ ಹೇಳುತ್ತಿರುವಂತೆ ನಡೆದಿರಲಿಕ್ಕಿಲ್ಲ ಅಂತೊಂದು ಅನುಮಾನ ಸಹಜವಾಗಿಯೇ ಕಾಡುತ್ತದೆ. ಈ ದಿಕ್ಕಿನಲ್ಲಿ ತಲಾಶಿಗಿಳಿದರೆ ಮತ್ತೊಂದು ಮಜವಾದ ವಾಸ್ತವ ಎದುರಾಗುತ್ತೆ. ಆವತ್ತು ದೊಡ್ಡಬಳ್ಳಾಪುರದ ದೇವಸ್ಥಾನಕ್ಕೆ ತೆರಳಿದ್ದ ಪ್ರಥಮ್ ಲೇಡಿ ಡಾನ್ ಅಂತ ಕರೆಸಿಕೊಳ್ಳುವ ಯಶಸ್ವಿನಿ ಅಂಡ್ ಟೀಮನ್ನು ಮುಖಾಮುಖಿಯಾಗಿದ್ದಾನೆ. ಅಷ್ಟಕ್ಕೂ ಈ ಯಶಸ್ವಿನಿ ಪ್ರಥಮನಿಗೆ ಹೊಸಾ ಪರಿಚಯವೇನಲ್ಲ. ಆಕೆಯ ಪಟಾಲಮ್ಮಿನಲ್ಲಿರುವ ದಾಸ ಎಂಬಾತನೂ ಸೇರಿದಂತೆ ಒಂದಷ್ಟು ಮಂದಿ ಪ್ರಥಮ್‌ಗೆ ಪರಿಚಿತರೇ. ಹಾಗೆ ನೋಡಿದರೆ, ರಾಜಕಾರಣಿಗಳಿಂದ ಮೊದಲ್ಗೊಂಡು, ರೌಡಿಗಳ ವರೆಗೆ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸೆಲ್ಫಿ ತೆಗೆದುಕೊಳ್ಳೋದರಲ್ಲಿ ಪ್ರಥಮ್ ನಿಸ್ಸೀಮ. ಇಂತಿಪ್ಪ ಪ್ರಥಮ್ ಆವತ್ತು ಯಶಸ್ವಿನಿಯೊಂದಿಗೆ ಲೋಕಾಭಿರಾಮವಾಗಿ ಹರಟುತ್ತಿದ್ದ. ಈ ಹಂತದಲ್ಲಿ ಯಶಸ್ವಿನಿ ತನ್ನೆದುರು ನಿಂತ ಎಲಿಮೆಂಟೊಂದನ್ನು ಪ್ರಥಮ್‌ಗೆ ಪರಿಚಯಿಸಿದ್ದಾಳೆ.</span><br />
<span style="font-size: 14pt;">ಆತನನ್ನು ಬೇಕರಿ ರಘು ಅಂತ ಯಶಸ್ವಿನಿ ಪರಿಚಯಿಸುತ್ತಲೇ, ಸುಮ್ಮನೆ ಕೈ ಕುಲುಕಿ ಎದ್ದು ಬಂದಿದ್ದರೆ ಇಷ್ಟೆಲ್ಲ ಡ್ರಾಮಾ ನಡೆಯುತ್ತಲೇ ಇರಲಿಲ್ಲ. ಹೇಳಿಕೇಳಿ ಪ್ರಥಮನದ್ದು ಹರುಕುಬಾಯಿ. ಬೇಕರಿ ರಘು ಓರ್ವ ಕುಖ್ಯಾತ ರೌಡಿ ಶೀಟರ್ ಅಂತ ಅರಿವಿರದಷ್ಟು ಮುಗ್ಧನಂತೂ ಖಂಡಿತಾ ಅಲ್ಲ. ಆದರೂ ಯಶಸ್ವಿನಿ ಆತನನ್ನು ಪರಿಚಯಿಸುತ್ತಲೇ, `ಬೇಕರಿ ರಘು ಅಂತೀರಿ, ಬನ್ನು ಪಪ್ಸು, ಚಿಪ್ಸು ಏನೂ ತಂದಿಲ್ವಾ&#8217; ಅಂತ ನಾಲಗೆ ಹರಿಯಬಿಟ್ಟಿದ್ದಾನೆ. ಇದರಿಂದ ಸುತ್ತಲಿದ್ದ ಹುಡುಗರೆದುರು ಪಾತಕಿ ಬೇಕರಿ ರಘುಗೆ ಸಹಜವಾಗಿಯೇ ಅವಮಾನವಾದಂತಾಗಿದೆ. ಆತ ಸಿಟ್ಟಿನಿಂದ ಕುದ್ದು ಹೋದವನೇ ಪ್ರಥಮನ ಕಾಲರು ಹಿಡಿದು `ಬೇಕರಿ ಐಟಮ್ಸ್ ಬೇಕಾ ನಿಂಗೆ ತರಿಸ್ತೀನಿರು ಮಗನೇ&#8217; ಅಂದವನೇ ಹುಡುಗರಿಗೆ ಸನ್ನೆ ಮಾಡಿದ್ದಾನೆ. ಕಣ್ಣು ಮಿಟುಕಿಸೋದರೊಳಗೆ ತನ್ನೆದೆಗೆ ರಘು ಹಿರಿದಿದ್ದ ಡ್ರ್ಯಾಗರ್ ಕಂಡು ಫಟಿಂಗ ಪ್ರಥಮ ಸುಸ್ಸೂ ಮಾಡಿಕೊಳ್ಳುವ ಹಂತ ತಲುಪಿಬಿಟ್ಟಿದ್ದಾನೆ.  ಅಂದಹಾಗೆ, ಇಷ್ಟೆಲ್ಲ ಆಗುವಾಗ ಯಶಸ್ವಿನಿ ಪಾಳೆಯದ ಹುಡುಗ ದಾಸ ಕೂಡಾ ಸ್ಥಳದಲ್ಲಿದ್ದ!<br />
</span></p>
<figure id="attachment_9983" aria-describedby="caption-attachment-9983" style="width: 1024px" class="wp-caption alignnone"><img loading="lazy" decoding="async" class="wp-image-9983" src="https://www.cinishodha.com/wp-content/uploads/2025/07/a0993d3f-fa76-4a83-bf02-7c549d9ec0f6-1-300x202.jpg" alt="a0993d3f fa76 4a83 bf02 7c549d9ec0f6 1" width="1024" height="690" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 60 » cinishodha.com"><figcaption id="caption-attachment-9983" class="wp-caption-text">ದಾಸನೊಂದಿಗೆ ಒಳ್ಳೆ ಹುಡುಗ ಪ್ರಥಮ್!</figcaption></figure>
<p style="text-align: justify;"><span style="font-size: 14pt;">ಹೀಗೆ ತನ್ನ ಹುಡುಗರೆದುರು ಕಿಂಡಲ್ಲು ಮಾಡಿದ ಪ್ರಥಮನ ಮೇಲೆ ರಘು ಅದ್ಯಾವ ಪರಿ ಕೋಪಗೊಂಡಿದ್ದನೆಂದರೆ, ಡ್ರ್ಯಾಗರ್ ಎದೆಗೆ ಹಿಡಿದು ಬೈದಾಡಿದ್ದಾನೆ. ಅದೇ ಭರದಲ್ಲಿ ತನ್ನ ಬಾಸ್ ದರ್ಶನ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತೀಯಾ ಅಂತೆಲ್ಲ ಆವಾಜು ಬಿಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ತನ್ನ ಮೊಬೈಲು ಹೊರತೆಗೆದ ಬೇಕರಿ ರಘು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆಗಿದ್ದ ತನ್ನ ಫೋಟೋಗಳನ್ನೂ ಪ್ರಥಮ್‌ಗೆ ತೋರಿಸಿದ್ದಾನೆ. ಇಲ್ಲಿ ಗಮನಿಸಲೇ ಬೇಕಾದ ಸಂಗತಿಯೆಂದರೆ, ಪ್ರಥಮ್ ಹೀಗೊಂದು ಯಡವಟ್ಟು ಮಾಡಿಕೊಳ್ಳದೇ ಇದ್ದಿದ್ದರೆ, ಈ ಹಕ್ಯಾಟವೇ ನಡೆಯುತ್ತಿರಲಿಲ್ಲ. ದರ್ಶನ್ ಹೆಸರಿನ ಪ್ರಸ್ತಾಪವೂ ಬರುತ್ತಿರಲಿಲ್ಲ. ಒಂದು ಹಂತದಲ್ಲಿ ಖುದ್ದು ದರ್ಶನ್ ತನ್ನ ವಿರುದ್ಧ ಮಾತಾಡಿದ ಕಾರಣಕ್ಕೆ ರೌಡಿ ಪಡೆ ಬಿಟ್ಟು ಆವಾಜು ಹಾಕಿಸಿದ್ದಾನೆಂದು ಬಿಂಬಿಸುವ ಪ್ರಯತ್ನವನ್ನು ಪ್ರಥಮ್ ನಡೆಸಿದ್ದ. ಆದರಿದು ಅವನ ಹರುಕುಬಾಯಿಯ ಪ್ರವರದಿಂದಾದ ಸ್ವಯಂಕೃತಾಪರಾಧವಾಗಿಯಷ್ಟೇ ಕಾಣಿಸುತ್ತದೆ.</span><br />
<span style="font-size: 14pt;">ಹೀಗೆ ಪ್ರಥಮ್ ಹುಚ್ಚುತನದಿಂದ ಜುಟ್ಟು ಕೆದರಿಕೊಂಡ ಬೇಕರಿ ರಘು ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿರುವ ನಟೋರಿಯಸ್ ರೌಡಿ. ಆರಂಭದಲ್ಲಿ ಸ್ಲಂ ಭರತನ ಬೆಟಾಲಿಯನ್ನಿನೊಂದಿಗೆ ರಘು ಗುರುತಿಸಿಕೊಂಡಿದ್ದ. ಉತ್ತರ ಭಾರತ ಮೂಲದ ಲೈವ್ ಬ್ಯಾಂಡ್ ಹುಡುಗಿಯರ ಮೋಹಕ್ಕೆ ಬಿದ್ದಿದ್ದ ಈತ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಆ ಹಂತದಲ್ಲಿ ಅನಾಥ ಶಿಶುವಿನಂತಾಗಿದ್ದ ರಘು, ಒಂದಷ್ಟು ಸಮಯ ಅಂಡಲೆದವನು ಸೀದಾ ಹೋಗಿ ಲ್ಯಾಂಡ್ ಆಗಿದ್ದು ಮತ್ತೋರ್ವ ನಟೋರಿಯಸ್ ರೌಡಿ ಸೈಕಲ್ ರವಿಯ ಸಮ್ಮುಖದಲ್ಲಿ. ಈ ಸೈಕಲ್ಲು ಆರಂಭ ಕಾಲದಿಂದಲೂ ದರ್ಶನ್ ಪಾಳೆಯದಲ್ಲಿ ರೌಂಡು ಹೊಡೆಯುತ್ತಿದೆ. ಕೆಲ ಪಾರ್ಟಿಗಳಲ್ಲಿ ದಾಸನ ಜೊತೆಗಿರುತ್ತಿದ್ದ ಗುಳಿಗೆನ್ನೆಗೆ ಲೊಚಕ್ಕನೆ ಮುತ್ತಿಟ್ಟು ಸವಾಲಿ ನಡೆಸೋ ಖಯಾಲಿಯೂ ಸೈಕಲ್ಲಿಗಿದೆ ಅನ್ನುವವರಿದ್ದಾರೆ. ದರ್ಶನ್ ಅಭಿಮಾನಿ ಸಂಘಗಳ ಬೆನ್ನಿಗೆ ನಿಂತಿರೋದು ಇದೇ ಸೈಕಲ್ಲು!</span></p>
<figure id="attachment_9978" aria-describedby="caption-attachment-9978" style="width: 1024px" class="wp-caption alignnone"><img loading="lazy" decoding="async" class="wp-image-9978" src="https://www.cinishodha.com/wp-content/uploads/2025/07/f4e6788a-78d9-49b5-a8bc-8a0bab838ce5-300x175.jpg" alt="f4e6788a 78d9 49b5 a8bc 8a0bab838ce5" width="1024" height="596" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 61 » cinishodha.com"><figcaption id="caption-attachment-9978" class="wp-caption-text">ಸೈಕಲ್ಲಿನೊಂದಿಗೆ ಬೇಕರಿ</figcaption></figure>
<p style="text-align: justify;"><span style="font-size: 14pt;">ಇಂಥಾ ಸೈಕಲ್ ರವಿ ಪಾಳೆಯದಲ್ಲಿದ್ದ ಬೇಕರಿ ರಘುವಿಗೂ ಕೂಡಾ ದರ್ಶನ್ ಕ್ರೇಜ್ ಇದ್ದೇ ಇತ್ತು. ಈ ನಡುವೆ ದರ್ಶನ್ ಏಕಾಏಕಿ ಎಡವಟ್ಟು ಮಾಡಿಕೊಂಡು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದ. ಆ ಹೊತ್ತಿಗೆಲ್ಲ ಸಿದ್ದಾಪುರ ಮಹೇಶನ ಹತ್ಯೆ ಕೇಸಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದ. ನೋಡ ನೋಡುತ್ತಲೇ ದರ್ಶನ್ ಮತ್ತು ನಾಗನ ನಡುವೆ ಮೊಳೆತುಕೊಂಡಿದ್ದ ಸ್ನೇಹ, ಹೊರಗಿದ್ದ ಸೈಕಲ್ ರವಿಗೆ ಕರುಬು ಮೂಡಿಸಿತ್ತು. ಈ ಕಾರಣದಿಂದಲೇ ಸೈಕಲ್ ರವಿ ತನ್ನ ಶಿಷ್ಯ ಬೇಕರಿ ರಘುವನ್ನು ದಾಸನಿಗೆ ಜೈಲೊಳಗೆ ಉಪಚಾರ ಮಾಡುವುದಕ್ಕೆಂದೇ ಅಂದರ್ ಮಾಡಿಸಿದ್ದ. ಹೀಗೆ ದಾಸನ ದೇಖಾರೇಖಿ ನೋಡಿಕೊಳ್ಳುತ್ತಿದ್ದ ರಘು ಆ ಸಂದರ್ಭದಲ್ಲಿಯೇ ದರ್ಶನ್ ಜೊತೆ ಒಂದಷ್ಟು ಫೋಟೋಗಳನ್ನೂ ತೆಗೆಸಿಕೊಂಡಿದ್ದ. ಇಂಥಾ ರಘು ಮೊನ್ನೆ ದಿನ ಪ್ರಥಮ್ ಗೆ ಆವಾಜು ಬಿಟ್ಟಿರೋದರ ಹಿಂದೆ ದರ್ಶನ್ ಪಾತ್ರವಿಲ್ಲ ಅನ್ನೋದು ಮೇಲುನೋಟಕ್ಕೇ ಅರ್ಥವಾಗುತ್ತೆ.</span><br />
<span style="font-size: 14pt;">ಮಾಜೀ ರೌಡಿ ಶೀಟರ್ ಯಶಸ್ವಿನಿ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಬದಲಾದಂತೆ ಕಾಣಿಸಿಕೊಂಡಿದ್ದಳು. ನಟಿಯಾಗಿಯೂ ರೂಪಾಂತರಗೊಂಡಿದ್ದ ಆಕೆ ಸೂರಿ ಅಣ್ಣ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾಳೆ. ತಮಿಳಿನಲ್ಲೂ ಒಂದು ಸಿನಿಮಾದಲ್ಲಿ ನಟಿಸಿದ್ದಾಳೆ. ಇಂಥಾ ಯಶಸ್ವಿನಿಯ ಪಾಳೆಯದಲ್ಲಿ ಪ್ರಥಮನಂಥಾದ್ದೇ ಪ್ರಚಾರದ ಹುಚ್ಚು ಹೊಂದಿರುವ ಬುಲೆಟ್ ರಕ್ಷಕ್ ಕೂಡಾ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಆದರೆ, ಬೇಕರಿ ರಘು ಪ್ರಕರಣದಲ್ಲಿ ಆತ ಮೂಕ ಪ್ರೇಕ್ಷಕನಾಗಿದ್ದ. ಈ ಮರಿ ಬುಲೆಟ್ ಇದೆಯಲ್ಲಾ? ಇದೂ ಕೂಡಾ ತಲೆತಿರುಕ ಆಸಾಮಿಯೇ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ನಟಿಸಿದ ನಟರಿಗೂ ಇಲ್ಲದ ತಿಮಿರು, ಆಟಿಟ್ಯೂಡ್ ಈ ಎಳಸು ಕುನ್ನಿಗಿದೆ. ಅದ್ಯಾವುದೋ ಭರ್ಜರಿ ಬ್ಯಾಚುಲರ್ ಎಂಬ ಹಡಬೆ ಶೋ ಮೂಲಕ ಈತನ ಹುಚ್ಚು ಮತ್ತಷ್ಟು ಕೆದರಿಕೊಂಡಿದೆ. ಖುದ್ದು ರವಿಚಂದ್ರನ್ ಜಡ್ಜ್ ಆಗಿದ್ದ, ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದ್ದ ಈ ಶೋ ಹೈ ಫೈ ಹಾದರದ ಅಡ್ಡೆಯಂತಿದ್ದ ಬಗ್ಗೆ ಈ ಕ್ಷಣಕ್ಕೂ ಚರ್ಚೆಗಳಾಗುತ್ತಿವೆ.</span></p>
<p style="text-align: justify;"><img loading="lazy" decoding="async" class="alignnone wp-image-9979" src="https://www.cinishodha.com/wp-content/uploads/2025/07/rakshak-bullet--300x169.webp" alt="rakshak bullet" width="1024" height="576" title="pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ! 62 » cinishodha.com"><span style="font-size: 14pt;">ಈ ಪ್ರಥಮ್ ಮತ್ತು ರಕ್ಷಕ್ ಥರದ ಎಳಸು ಕುನ್ನಿಗಳು ಯಾವ ಕ್ಷಣದಲ್ಲಿಯಾದರೂ, ಯಾವ ರೂಪದಲ್ಲಾದರೂ ಸಮಾಜ ಕಂಟಕರಾಗಿ ಬಿಡುವ ಸಾಧ್ಯತೆಗಳಿದ್ದಾವೆ. ದುರಂತವೆಂದರೆ, ದರ್ಶನ್ ಅಭಿಮಾನಿಗಳಲ್ಲಿ ಕೆಲ ಮಂದಿಯೂ ಅದೇ ಸಾಲಿಗೆ ಸೇರಿಕೊಳ್ಳುತ್ತಾರೆ. ಪ್ರಥಮ್‌ಗೆ ಮೂದಲಿಸಿದಷ್ಟೇ ಸಲೀಸಾಗಿ ರಮ್ಯಾಳಂಥಾ ನಟಿಯರಿಗೂ ಪ್ರಹಾರ ನಡೆಸುತ್ತಾರೆ. ಸದ್ಯ ನಟಿ ರಮ್ಯಾ ತನ್ನ ವಿರುದ್ಧ ಕೆಟ್ಟಾಕೊಳಕು ಕಮೆಂಟು ಮಾಡಿದ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ. ಗಮನೀಯ ಅಂಶವೆಂದರೆ, ಪ್ರಳಯಾಂತಕ ಪ್ರಥಮ್ ತಕ್ಷಣ ರಮ್ಯಾ ಸುತ್ತ ಹಬ್ಬಿಕೊಂಡಿದ್ದ ಬೆಂಬಲವನ್ನು ತನ್ನ ದಿಕ್ಕಿಗೆ ವರ್ಗಾಯಿಸಿಕೊಳ್ಳುವ ಆಟ ಕಟ್ಟಿದ್ದ. ಆದರೀಗ ಆತನ ಸುತ್ತಾ ಯಾರೆಂದರೆ ಯಾರೂ ಉಳಿದಿಲ್ಲ.</span><br />
<span style="font-size: 14pt;">ಯಾರಾದರೂ ಹೇಗಿದ್ದೀಯಪ್ಪಾ ಪ್ರಥಮ್ ಅಂದರೆ, ಬೆಳಗೆದ್ದು ಹಲ್ಲುಜ್ಜಿ ಹೇತಿದ್ದರಿಂದ ಹಿಡಿದು, ಬೇಡದ ಪುರಾಣವನ್ನೆಲ್ಲ ಒದರೋ ಜಾಯಮಾನ ಪ್ರಥಮನದ್ದು. ಈ ಥರದ ಹುಚ್ಚು ಸಂತಾನಿಗರನ್ನು ಸೆಲೆಬ್ರಿಟಿಗಳಂತೆ ಬಿಂಬಿಸುವ ಟಿಆರ್‌ಪಿ ತೆವಲನ್ನು ಮಾಧ್ಯಮಗಳು ಬಿಡಬೇಕಿದೆ. ಅದೇ ಹೊತ್ತಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಪಿತಗುಡುತ್ತಿರುವ ವಿಕೃತರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹೇಗೆ ಬೇಕೋ ಹಾಗೆ ವರ್ತಿಸಿದರೆ ಯಾರೂ ಕೇಳೋರಿಲ್ಲ ಎಂಬ ಸದರ ಇವರೆಲ್ಲರಿಗಿದ್ದಂತಿದೆ. ಬಹುಶಃ ಪ್ರಥಮ್ ತಲೆ ನೆಟ್ಟಗಿರುವವನಂತಗೆ ವರ್ತಿಸಿದ್ದರೆ, ಆ ದಿಸೆಯಲ್ಲಿ ಅವನದ್ದೂ ಒಂದು ಪ್ರಾಮಾಣಿಕ ಪ್ರಯತ್ನವಾಗಿ ದಾಖಲಾಗುತ್ತಿತ್ತು. ಆದರೀಗ ಆ ಸಾಲಿನಲ್ಲಿ ರಮ್ಯಾ ಮುಂಚೂಣಿಯಲ್ಲಿದ್ದಾರೆ. ಗೃಹ ಸಚಿವ ಪರಮೇಶ್ವರ್‌ಗೆ ಸಾಮಾನ್ಯವಾಗಿ ಇಂಥಾ ವಿದ್ಯಮಾನಗಳೆಲ್ಲ ಗಮನಕ್ಕೆ ಬರೋದಿಲ್ಲ. ಆದರೂ ತುಸು ಪುರಸೊತ್ತು ಮಾಡಿಕೊಂಡು, ಸಾಮಾಜಿಕ ಜಾಲತಾಣದ ಭಯಾನಕ ಪಲ್ಲಟದ ಬಗ್ಗೆ ಗಮನ ಹರಿಸಬೇಕಿದೆ. ಹಾಗಂತ ಈ ನೆಲದ ಜನಸಾಮಾನ್ಯರು ಆಶಿಸುತ್ತಿದ್ದಾರೆ!</span></p>
<p>The post <a rel="nofollow" href="https://www.cinishodha.com/pratham-darshan-controvercy-bangalure-underworld-31-07-25/">pratham-darshan controvercy: ಬೂದಿ ಮುಚ್ಚಿದ ಕೆಂಡದ ಮೇಲೆ ಅಂಡೂರಿದ ಅವಿವೇಕಿ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
	</channel>
</rss>
