<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	 xmlns:media="http://search.yahoo.com/mrss/" >

<channel>
	<title>siddaramaiah &#8211; Cini Shodha</title>
	<atom:link href="https://www.cinishodha.com/tag/siddaramaiah/feed/" rel="self" type="application/rss+xml" />
	<link>https://www.cinishodha.com</link>
	<description>Filmi News Online - Kannada</description>
	<lastBuildDate>Wed, 04 Feb 2026 05:06:23 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://www.cinishodha.com/wp-content/uploads/2025/11/cropped-cinishodha-icon-32x32.png</url>
	<title>siddaramaiah &#8211; Cini Shodha</title>
	<link>https://www.cinishodha.com</link>
	<width>32</width>
	<height>32</height>
</image> 
	<item>
		<title>Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ?</title>
		<link>https://www.cinishodha.com/cult-movie-controvercy-03-02-2026/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 03 Feb 2026 14:58:49 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#malaikavasupal]]></category>
		<category><![CDATA[#rachitharam]]></category>
		<category><![CDATA[cmofkarnataka]]></category>
		<category><![CDATA[congress]]></category>
		<category><![CDATA[cult]]></category>
		<category><![CDATA[cultmovie]]></category>
		<category><![CDATA[cultmoviecontrovercy]]></category>
		<category><![CDATA[siddaramaiah]]></category>
		<category><![CDATA[siddu]]></category>
		<category><![CDATA[zaidkhan]]></category>
		<category><![CDATA[zamirahmadkhan]]></category>
		<guid isPermaLink="false">https://www.cinishodha.com/?p=11662</guid>

					<description><![CDATA[<p>ಸಿನಿಮಾ ರಂಗಕ್ಕೆ ರಾಜಕೀಯ, ಸೈದ್ಧಾಂತಿಕ ಸಂಘರ್ಷಗಳ ನೆರಳು ಬಿದ್ದು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಂಥಾ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದ್ದಂತಿತ್ತು. ನಾನಾ ಭಾಗ್ಯಗಳ ಮೂಲಕ ಹೆಸರಾಗಿರುವ ಸಿಎಂ ಸಿದ್ದರಾಮಯ್ಯ ಇದೀಗ ಸಿನಿಮಾ ರಾಜಕೀಯ ಪ್ರೇರಿತ ಪ್ರಚಾರದ ಭಾಗ್ಯ ಕರುಣಿಸಿದ್ದಾರೆ. ಇದರ ಭಾಗವಾಗಿ ತನ್ನ ಬಲಗೈ ಭಂಟನಂತಿರೋ ಸಚಿವ ಜಮೀರ್ ಅಹ್ಮದ್ ಖಾನ್ ಸುಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾವನ್ನು ಹಾಡಿ ಹೊಗಳುವ ಮೂಲಕ ತನ್ನ [...]</p>
<p>The post <a rel="nofollow" href="https://www.cinishodha.com/cult-movie-controvercy-03-02-2026/">Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 20px;"><span style="color: #00ccff;"><strong><span style="font-size: 24px;">ಸಿ</span></strong></span>ನಿಮಾ ರಂಗಕ್ಕೆ ರಾಜಕೀಯ, ಸೈದ್ಧಾಂತಿಕ ಸಂಘರ್ಷಗಳ ನೆರಳು ಬಿದ್ದು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಂಥಾ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದ್ದಂತಿತ್ತು. ನಾನಾ ಭಾಗ್ಯಗಳ ಮೂಲಕ ಹೆಸರಾಗಿರುವ ಸಿಎಂ ಸಿದ್ದರಾಮಯ್ಯ ಇದೀಗ ಸಿನಿಮಾ ರಾಜಕೀಯ ಪ್ರೇರಿತ ಪ್ರಚಾರದ ಭಾಗ್ಯ ಕರುಣಿಸಿದ್ದಾರೆ. ಇದರ ಭಾಗವಾಗಿ ತನ್ನ ಬಲಗೈ ಭಂಟನಂತಿರೋ ಸಚಿವ ಜಮೀರ್ ಅಹ್ಮದ್ ಖಾನ್ ಸುಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾವನ್ನು ಹಾಡಿ ಹೊಗಳುವ ಮೂಲಕ ತನ್ನ ಘನತೆಗೆ ತಾನೇ ಕುಂದಾಗುವಂತೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಸಿನಿಮಾ ಪ್ರೇಮಿಯೇನಲ್ಲ. ಅವರು ಸಿನಿಮಾಗಳನ್ನು ನೋಡಿ ಸಂಭ್ರಮಿಸೋದು ತೀರಾ ವಿರಳ. ಇತ್ತೀಚೆಗಷ್ಟೇ ಲ್ಯಾಂಡ್ ಲಾಡ್ ಚಿತ್ರ ನೋಡೋದಾಗಿ ಹೇಳಿಕೊಂಡಿದ್ದ ಸಿದ್ದು, ಅದಕ್ಕೂ ಮುನ್ನವೇ ಜಮೀರ್ ಪುತ್ರನ ಕಲ್ಟ್ ಮೂವಿ ನೋಡಿದ್ದಾರೆ. ಇದೊಂದು ಹೊಸ ಮಾದರಿಯ ಚಿತ್ರ ಎಂಬ ಅಭಿಪ್ರಾಯ ಪ್ರಕಟಿಸುವ ಮೂಲಕ ಸಿನಿಮಾ ಪ್ರೇಮಿಗಳನ್ನು ಕಂಗಾಲಾಗಿಸಿದ್ದಾರೆ!</span></p>
<p style="text-align: justify;"><img fetchpriority="high" decoding="async" class="alignnone wp-image-11663" src="https://www.cinishodha.com/wp-content/uploads/2026/02/cultin-1769881995.webp?_t=1770130143" alt="cultin 1769881995" width="1024" height="577" title="Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ? 7 » cinishodha.com" srcset="https://www.cinishodha.com/wp-content/uploads/2026/02/cultin-1769881995.webp 600w, https://www.cinishodha.com/wp-content/uploads/2026/02/cultin-1769881995-512x288.webp 512w, https://www.cinishodha.com/wp-content/uploads/2026/02/cultin-1769881995-150x85.webp 150w, https://www.cinishodha.com/wp-content/uploads/2026/02/cultin-1769881995-450x254.webp 450w" sizes="(max-width: 1024px) 100vw, 1024px" /><strong><span style="font-size: 20px;">ಸೀರಿಯಸ್ ಕಾಮಿಡಿ</span></strong><br />
<span style="font-size: 20px;">ರಾಜಕಾರಣಿಗಳು ಆಗಾಗ ಸಿನಿಮಾ ನೋಡೋದೇನೂ ಹೊಸತಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ, ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿಯೆಂಬ ಕುಖ್ಯಾತಿ ಗಳಿಸಿದ್ದ ಬಸವರಾಜ ಬೊಮ್ಮಾಯಿಯಂತೂ ಸಿನಿಮಾ ನೋಡೋದು, ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳೋದನ್ನೇ ಕಸುಬಾಗಿಸಿಕೊಂಡಿದ್ದನ್ನು ಕರುನಾಡು ಕಂಡಿದೆ. ಹಾಗಿರುವಾಗ ಸಿದ್ದರಾಮಯ್ಯ ಸಿನಿಮಾವೊಂದನ್ನು ನೋಡೋದಾಗಲಿ, ಆ ಬಗ್ಗೆ ವಿಮರ್ಶೆ, ಅಭಿಪ್ರಾಯ ಹಂಚಿಕೊಳ್ಳೋದಾಗಲಿ ತಪ್ಪೇನಲ್ಲ. ಆದರೆ, ಅವರು ನೋಡಿದ್ದು ಎಂಥಾ ಸಿನಿಮಾವನ್ನು? ಅವರ ಕಡೆಯಿಂದ ವ್ಯಕ್ತವಾಗುತ್ತಿರೋದು ಯಾವ ಬಗೆಯ ಅಭಿಪ್ರಾಯ ಎಂಬುದಿಲ್ಲಿ ಮುಖ್ಯವಾಗುತ್ತೆ. ಈ ನಿಟ್ಟಿನಲ್ಲಿ ನೋಡ ಹೋದರೆ, ಕಲ್ಟ್ ವಿಚಾರದಲ್ಲಿ ಸಿದ್ದಣ್ಣನದ್ದು ಪಕ್ಕಾ ರಾಜಕೀಯ ಮರ್ಜಿಗೆ ಬಿದ್ದ ನಡೆಯೆಂಬುದು ಖುಲ್ಲಂಖುಲ್ಲ ಖಾತರಿಯಾಗುತ್ತೆ.</span><br />
<span style="font-size: 20px;">ಝೈದ್ ಖಾನ್ ತನ್ನ ತೋಪು ಸರಕನ್ನು ಗೆಲ್ಲಿಸಲು ಏನೇನು ಬೇಕೋ ಅಂಥಾ ಎಲ್ಲ ಕಸರತ್ತುಗಳನ್ನು ನಡೆಸುತ್ತಿದ್ದಾನೆ. ಹಾಗೆ ನೋಡಿದರೆ, ಬಿಡುಗಡೆಯಾಗಿ ಎರಡನೇ ದಿನ ಹೊರಳಿಕೊಳ್ಳುವಷ್ಟರಲ್ಲಿ, ಜಮೀರ್ ಮಗನ ಕಲ್ಟ್ ಸೋಲಿನ ಕಮರಿಯತ್ತ ಉರುಳಿಕೊಂಡಿತ್ತು. ಪ್ರಚಾರವನ್ನು ಊರಗಲ ನಡೆಸುವ ಮಂದಿ ಕಂಟೆಂಟನ್ನು ನಿರಾಸೆಯಾಗದ ರೀತಿಯಲ್ಲಿ ಕಟ್ಟಿ ಕೊಡಬೇಕಾಗುತ್ತೆ. ಆದರೆ, ಕಲ್ಟ್ ಎಂಬುದು ಎಲ್ಲೆಲ್ಲಿಂದಲೋ ಬಿಡಿಬಿಡಿ ದೃಷ್ಯಗಳನ್ನು ಯಥಾವತ್ತಾಗಿ ಎತ್ತಿಕೊಂಡು ಮಾಡಿರುವ ಹಳಸಲು ಚಿತ್ರಾನ್ನದಂಥಾ ಸಿನಿಮಾ. ಇಂಥಾ ಚಿತ್ರವನ್ನು ನೋಡಿದ ಸಿದ್ದರಾಮಯ್ಯ ಸೀದಾ ಎದ್ದು ಮನೆಗೆ ತೆರಳಿ ದಣಿವಾರಿಸಿಕೊಂಡಿದ್ದರೆ ಟ್ರೋಲಾಗೋದಾದರೂ ತಪ್ಪುತ್ತಿತ್ತು. ಆದರೆ, ಅವರು ಕಲ್ಟ್ ಇತ್ತೀಚಿನ ಸಿನಮಾನದ ಹೊಸಾ ಮಾದರಿಯ ಚಿತ್ರ ಅಂತೆಲ್ಲ ಕೊಂಡಾಡಿದ್ದಾರೆ. ಕುಟುಂಬ ಸಮೇತರಾಗಿ ನೋಡುವ ಚಿತ್ರ ಎಂಬಂತೆ ಪ್ರಮೋಷನ್ನು ನಡೆಸಿದ್ದಾರೆ. ಅದಾಗಲೇ ಕಲ್ಟ್ ಚಿತ್ರ ನೋಡಿ ಕಂಗಾಲೆದ್ದಿದ್ದ ಒಂದಷ್ಟು ಬಡಪಾಯಿ ಪ್ರೇಕ್ಷಕರ ಪಾಲಿಗೆ ಸಿದ್ದಣ್ಣನ ಮಾತುಗಳೆಲ್ಲವೂ ಅಕ್ಷರಶಃ ಕಾಮಿಡಿಯಂತೆ ಕೇಳಿಸಿದ್ದರೆ ಅಚ್ಚರಿಯೇನಿಲ್ಲ!</span></p>
<p><img decoding="async" class="alignnone wp-image-11664 size-full" src="https://www.cinishodha.com/wp-content/uploads/2026/02/BeFunky-collage-2026-02-01T141203.367-1024x576-1.jpg?_t=1770130229" alt="BeFunky collage 2026 02 01T141203.367 1024x576 1" width="1024" height="576" title="Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ? 8 » cinishodha.com" srcset="https://www.cinishodha.com/wp-content/uploads/2026/02/BeFunky-collage-2026-02-01T141203.367-1024x576-1.jpg 1024w, https://www.cinishodha.com/wp-content/uploads/2026/02/BeFunky-collage-2026-02-01T141203.367-1024x576-1-512x288.jpg 512w, https://www.cinishodha.com/wp-content/uploads/2026/02/BeFunky-collage-2026-02-01T141203.367-1024x576-1-768x432.jpg 768w, https://www.cinishodha.com/wp-content/uploads/2026/02/BeFunky-collage-2026-02-01T141203.367-1024x576-1-150x84.jpg 150w, https://www.cinishodha.com/wp-content/uploads/2026/02/BeFunky-collage-2026-02-01T141203.367-1024x576-1-450x253.jpg 450w" sizes="(max-width: 1024px) 100vw, 1024px" /></p>
<p style="text-align: justify;"><strong><span style="font-size: 20px;">ಭಟ್ಟಿಯಿಳಿಸಿದ ಸರಕು</span></strong><br />
<span style="font-size: 20px;">ಇಡೀ ರಾಜ್ಯದಲ್ಲಿ ಸಮಸ್ಯೆಗಳು ನಡಮುರಿದುಕೊಂಡು ಬಿದ್ದಿವೆ. ಇಂಥಾ ದುರಿತ ಕಾಲದಲ್ಲಿ ಪ್ರಯೋಗಾತ್ರಮಕ ಗುಣ ಹೊಂದಿರುವ, ಪ್ರೇಕ್ಷಕರಿಗೆ ಇಷ್ಟವಾಗಿರುವ ಸಿನಿಮಾವೊಂದರ ಬಗ್ಗೆ ಸಿದ್ದರಾಮಯ್ಯ ವಕಾಲತ್ತು ವಹಿಸಿದ್ದರೆ ಆ ಕಥೆ ಬೇರೆಯದು. ಆದರೆ, ಸಿದ್ದಣ್ಣ ನೋಡಿದ್ದು ಮತ್ತು ಮಾತಾಡಿದ್ದು ಅದಾಗಲೇ ಜನ ಮೂಲೆಗೆ ಗದುಮಿದ್ದ ಕಲ್ಟ್ ಚಿತ್ರದ ಬಗ್ಗೆ. ಸಿದ್ದರಾಮಯ್ಯನವರ ಮುಕ್ತಕಂಠದ ಮೆಚ್ಚುಗೆಗೂ, ಈ ಚಿತ್ರ ಮೂಡಿ ಬಂದಿರುವ ರೀತಿಗೂ ಏನ ಆದರೂ ಸೂತ್ರ ಸಂಬಂಧ ಇದೆಯಾ ಎಂಬ ನಿಟ್ಟಿನಿನಲ್ಲಿ ನೋಡ ಹೋದರೆ, ಅಲ್ಲೆದುರಾಗೋದು ಆಘಾತ ಮಾತ್ರ. ಯಾಕೆಂದರೆ, ಕಲ್ಟ್ ಎಂಬುದು ಒಂದು ಸಿನಿಮಾದ ಪಾಲಿಗೆ ಬೆನ್ನಹುರಿಯಂಥಾ ಕಥೆಯೇ ನೆಟ್ಟಗಿಲ್ಲದ ಚಿತ್ರ. ಹೇಗೋ ಆರಂಭವಾಗುತ್ತೆ. ಮತ್ಯಾವ ದಿಕ್ಕಿನಲ್ಲೋ ಕದಲುತ್ತೆ. ಹಿಂದೆ ನೋಡಿದ್ದಕ್ಕೂ, ಕಣ್ಣೆದುರು ಚಲಿಸುವ ದೃಷ್ಯಗಳಿಗೂ ಕನೆಕ್ಷನ್ನೇ ಸಿಗದೆ ಪ್ರೇಕ್ಷಕರು ಕಂಗಾಲಾಗುವಂತಿದೆ.</span><br />
<span style="font-size: 20px;">ಈ ಸಿನಿಮಾದಲ್ಲಿ ನಾನಾ ಸಿನಿಮಾಗಳ ನೇರ ನೆರಳಿದೆ. ಮೊದಲಾರ್ಧದ ತುಂಬೆಲ್ಲ ಕಳೆದ ವರ್ಷ ತೆರೆಗಂಡು ಸೂಪರ್ ಹಿಟ್ ಆಗಿದ್ದ ತೆಲುಗು ಚಿತ್ರ ಬೇಬಿಯ ಇರುವಿಕೆ ಕಾಣುತ್ತೆ. ಒಂದಷ್ಟು ಭಾಗಗಳಲ್ಲಿ ಇದು ಬೇಬಿಯ ರೀಮೇಕ್ ಇರಬಹುದಾ ಅಂತೊಂದು ಗುಮಾನಿಯೂ ಕಾಡುತ್ತೆ. ಆದರೆ, ಈ ವಿಚಾರದಲ್ಲಿ ನಿರ್ದೇಶಕರು ಗಣನೀಯವಾಗಿ ತಮ್ಮ ಕ್ರಿಯೇಟಿವಿಟಿಯನ್ನು ಪ್ರಯೋಗಿಸಿದ್ದಾರೆ. ಅದರ ಫಲವಾಗಿಯೇ ಬೇಬಿಯಲ್ಲಿ ಹುಡುಗಿಯ ಚಹರೆ ಕಲ್ಟ್‌ನಲ್ಲಿ ನಾಯಕನ ಪಾಲಾಗಿದೆ. ಇನ್ನು ದ್ವಿತೀಯಾರ್ಧದಲ್ಲಿ ಬಾಲಿವುಡ್ಡಿನ ವಿವಾದಾತ್ಮಕ ಚಿತ್ರ ಅನಿಮಲ್‌ನ ದೃಷ್ಯಗಳು ಮಕ್ಕಿಕಾಮಕ್ಕಿ ಕಾಣಿಸಿಕೊಂಡು ಪ್ರೇಕ್ಷಕರನ್ನು ದಿಗಿಲುಗೊಳಿಸುತ್ತವೆ. ಈ ಹಿಂದೆ ಝೈದ್ ಖಾನ್ ತನಗೆ ಅನಿಮಲ್ ಚಿತ್ರ ಇಷ್ಟ ಅಂತ ಹೇಳಿಕೊಂಡಿದ್ದ. ಬಹುಶಃ ಎಳವೆಯಿಂದಲೂ ಬೇಕಿನಿಸಿದ್ದನ್ನು ಅಪ್ಪನ ಕಾಸಿನ ಬಲದಿಂದ ಪಡೆದುಕೊಂಡು ಅಭ್ಯಾಸವಿರೋ ಝೈದ್ ಸೂಚನೆಯ ಮೇರೆಗೇ ಹಿಂದಿಯ ಅನಿಮಲ್ಲು ಕಲ್ಟ್‌ಗೆ ಎಗರಿಕೊಂಡಿರಬಹುದು. ವಿಶೇಷವೆಂದರೆ, ಒಂದಷ್ಟು ಸಿನಿಮಾ ಮಂದಿ ಒಂದೊಳ್ಳೆ ಸಿನಿಮಾ ಕಥೆಯಿಂದ ಪ್ರೇರಿತರಾಗುತ್ತಾರೆ. ಆದರೆ, ಕಲ್ಟ್ ನಿರ್ದೇಶಕರು ದೃಷ್ಯಗಳನ್ನೇ ಭಟ್ಟಿ ಇಳಿಸಿದ್ದಾರೆ.</span></p>
<p><img decoding="async" class="alignnone wp-image-11665" src="https://www.cinishodha.com/wp-content/uploads/2026/02/Cult-movie-box-office-collection-512x288.webp" alt="Cult movie box office collection" width="1024" height="576" title="Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ? 9 » cinishodha.com" srcset="https://www.cinishodha.com/wp-content/uploads/2026/02/Cult-movie-box-office-collection-512x288.webp 512w, https://www.cinishodha.com/wp-content/uploads/2026/02/Cult-movie-box-office-collection-1024x576.webp 1024w, https://www.cinishodha.com/wp-content/uploads/2026/02/Cult-movie-box-office-collection-768x432.webp 768w, https://www.cinishodha.com/wp-content/uploads/2026/02/Cult-movie-box-office-collection-150x84.webp 150w, https://www.cinishodha.com/wp-content/uploads/2026/02/Cult-movie-box-office-collection-450x253.webp 450w, https://www.cinishodha.com/wp-content/uploads/2026/02/Cult-movie-box-office-collection.webp 1200w" sizes="(max-width: 1024px) 100vw, 1024px" /></p>
<p style="text-align: justify;"><strong><span style="font-size: 20px;">ಸಿದ್ದಣ್ಣನ ಕಣ್ಣೀರು</span></strong></p>
<p style="text-align: justify;"><span style="font-size: 20px;">ಇನ್ನುಳಿದಂತೆ ಸಿದ್ದರಾಮಯ್ಯನವರು ಈ ಸಿನಿಮಾದ ದೃಷ್ಯಗಳನ್ನು ಕಂಡು ಕಣ್ಣೀರಾದ ಬಗ್ಗೆಯೂ ಸುದ್ದಿಗಳು ಹಬ್ಬಿಕೊಳ್ಳುತ್ತಿವೆ. ಸಿದ್ದರಾಮಯ್ಯನವರು ಹೇಳಿಕೇಳಿ ರಫ್ ಅಂಡ್ ಟಫ್ ವ್ಯಕ್ತಿತ್ವದವರು. ಸಹಜೀವಿಗಳು ಚುನಾವಣಾ ಸಂದರ್ಭದಲ್ಲಿ ಕಣ್ಣಿಗೆ ವಿಕ್ಸ್ ಮೆತ್ತಿಕೊಂಡು ಗಳಗಳನೆ ಅತ್ತರೂ, ಸಿದ್ದಣ್ಣ ಕಣ್ಣೀರನ್ನು ಅಸ್ತ್ರವಾಗಿಸಿಕೊಂಡವರಲ್ಲ. ಇಂಥಾ ಸಿಎಂ ಸಾಹೇಬರು ಕಣ್ಣೀರಾಗುವಂಥಾ, ಭಾವುಕವಾಗುವಂತಾ, ಇಲ್ಲವಾದ ಮಗನನ್ನು ನೆನೆಸಿಕೊಳ್ಳುವಂಥಾ ಯಾವ ದೃಷ್ಯಗಳು ಕಲ್ಟ್ ನಲ್ಲಿವೆ ಅಂತ ನೋಡ ಹೋದರೆ, ನಾಯಕ ಝೈದ್ ಖಾನ್ ಎದೆಯೊಡೆದುಕೊಂಡು ಎಣ್ಣೆ ಹೊಡೆಯುವ, ಡ್ರಗ್ಸ್‌ಗೆ ದಾಸನಾಗಿ ನರಳಿ ಸುಖಿಸುವ ಒಂದಷ್ಟು ದೃಷ್ಯಗಳು ಕಾಣಿಸುತ್ತವೆ. ಇಂಥಾ ದುರಂತಮಯ ಸನ್ನಿವೇಶಗಳೇ ಸಿದ್ದರಾಮಯ್ಯನವರಿಗೆ ಮಗನನ್ನು ನೆನಪಾಗಿಸಿ ಕಣ್ಣೀರು ಹನಿದಿರಬಹುದಾ? ಓರ್ವ ತಂದೆಯಾಗಿ ಅವರೊಳಗಿನ ಭಾವುಕತೆಯನ್ನು ಪ್ರಶ್ನಿಸುವಂತಿಲ್ಲ!</span><br />
<span style="font-size: 20px;">ಆದರೆ, ಪ್ರಶ್ನೆ ಎದ್ದಿರೋದು ಹಾಗೂ ಇಲ್ಲದ, ಎಲ್ಲಿಯೂ ಸಲ್ಲದ ಸಿನಿಮಾವೊಂದನ್ನು ರಾಜಕೀಯ ಪ್ರೇರಿತವಾಗಿ ಸಿದ್ದರಾಮಯ್ಯನವರು ಪ್ರಮೋಟ್ ಮಾಡಿರೋದರ ಬಗ್ಗೆ. ಕಲ್ಟ್ ಅನ್ನೋದೊಂದು ಪಕ್ಕಾ ಕಮರ್ಶಿಯಲ್ ಉದ್ದೇಶದ ಪಡಪೋಶಿ ಚಿತ್ರ. ಇದರ ಹಣೆಬರಹ ಎರಡು ದಿನ ಕಳೆಯೋದರೊಳಗಾಗಿ ಸಮಸ್ತರಿಗೂ ಗೊತ್ತಾಗಿ ಬಿಟ್ಟಿದೆ. ಹಾಗಾದರೆ, ಈ ಕ್ಷಣಕ್ಕೂ ಹೌಸ್ ಫುಲ್ ಪ್ರದರ್ಶನ ಅಂತೆಲ್ಲ ಸುದ್ದಿಯಾಗುತ್ತಿದೆಯಲ್ಲಾ ಅಂತೊಂದು ಪ್ರಶ್ನೆ ಕಾಡೋದು ಸಹಜ. ಇದರ ಹಿಂದೆ ಜಮೀರ್ ಮಗನ ಕಾಸಿನಾಟದ ಕಿಸುರಿದೆ. ಲಕ್ಷಗಟ್ಟಲೆ ಕಾಸು ಸುರಿದು, ಟಿಕೆಟ್ ಖರೀದಿಸಿ ಆ ಮೂಲಕ ಸಿನಿಮಾ ಮಂದಿರಗಳನ್ನು ತುಂಬಿಸಲಾಗುತ್ತಿದೆ ಎಂಬ ಅಸಹನೆಯೊಂದು ಸಿನಿಮಾ ರಂಗದಲ್ಲಿಯೇ ನಿಗಿನಿಗಿಸುತ್ತಿದೆ. ಮೇಲುನೋಟಕ್ಕಿದು ಒಂದು ತೋಪು ಸಿನಿಮಾವನ್ನು ಗೆಲ್ಲಿಸುವ ಹಣವಂತರ ಸಹಜ ಸರ್ಕಸ್ಸಿನಂತೆ ಕಾಣಿಸಬಹುದು. ಆದರೆ, ಅದು ಕನ್ನಡ ಚಿತ್ರರಂಗದ ಮೇಲೆ ಬೀರೋ ಅನಾಹುತಕಾರಿ ಪರಿಣಾಮ ದೀರ್ಘಕಾಲಿಕವೆಂಬುದು ಸತ್ಯ!</span></p>
<p><img loading="lazy" decoding="async" class="alignnone wp-image-11666" src="https://www.cinishodha.com/wp-content/uploads/2026/02/476490324_18215919826290751_3287236288106284754_n.jpg?_t=1770130316" alt="cult movie ppster " width="1024" height="1204" title="Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ? 10 » cinishodha.com" srcset="https://www.cinishodha.com/wp-content/uploads/2026/02/476490324_18215919826290751_3287236288106284754_n.jpg 502w, https://www.cinishodha.com/wp-content/uploads/2026/02/476490324_18215919826290751_3287236288106284754_n-436x512.jpg 436w, https://www.cinishodha.com/wp-content/uploads/2026/02/476490324_18215919826290751_3287236288106284754_n-150x176.jpg 150w, https://www.cinishodha.com/wp-content/uploads/2026/02/476490324_18215919826290751_3287236288106284754_n-450x529.jpg 450w" sizes="(max-width: 1024px) 100vw, 1024px" /></p>
<p style="text-align: justify;"><strong><span style="font-size: 20px;">ನಂಬಿಕೆಯ ಮೇಲೆ ಕತ್ತರಿ </span></strong><br />
<span style="font-size: 20px;">ಕೆಜಿಎಫ್, ಕಾಂತಾರದಂಥಾ ಸಿನಿಮಾಗಳು ಪ್ಯಾನಿಂಡಿಯಾ ಮಟ್ಟದಲ್ಲಿ ಗೆಲುವು ಕಂಡಿವೆ. ಇದರಿಂದಾಗಿ ಕನ್ನಡ ಸಿನಿಮಾ ರಂಗದ ಘನತೆ ರಾಷ್ಟ್ರ ಮಟ್ಟಕ್ಕೇರಿದೆ. ಆದರೆ, ಒಂದಿಡೀ ಚಿತ್ರರಂಗದ ಬೆಳವಣಿಗೆಗೆ ಇಂಥಾ ಸಿನಿಮಾಗಳಿಂದಾಗೋ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಚಂಡಮಾರುತ ಬಂದು ಹೋದ ಮೇಲೆ ಮ್ಲಾನ ವಾತಾವರಣವೊಂದು ನಿರ್ಮಾಣವಾಗುತ್ತದಲ್ಲಾ? ಅಂಥಾದ್ದೇ ಸ್ಥಿತಿ ಪ್ಯಾನಿಂಡಿಯಾ ಸಿನಿಮಾಗಳು ತೆರೆಗಂಡ ನಂತರ ಕನ್ನಡ ಚಿತ್ರರಂಗವನ್ನು ಆಚವರಿಸಿಕೊಳ್ಳುತ್ತೆ. ಇಂತಾ ವಾತಾವರಣದಲ್ಲಿ ಅದೆಷ್ಟೋ ಚೆಂದದ ಸಿನಿಮಾಗಳು ನಾನಾ ಅಡೆತಡೆಗಳನ್ನು ಎದುರಿಸಿ ಸೋತು ಮಾಯವಾಗುತ್ತವೆ. ಇಂಥಾ ಅದೆಷ್ಟೋ ಆಘಾತದ ನಂತರ ಹಂತ ಹಂತವಾಗಿ ಪ್ರೇಕ್ಷಕರಲ್ಲೊಂದು ನಂಬಿಕೆ ಮೂಡಿಸಿ, ಕರ್ನಾಟಕಕ್ಕೆ ಸೀಮಿತವಾದ ಚಿತ್ರವನ್ನೂ ನೋಡುವಂತೆ ಮಾಡುವಷ್ಟರಲ್ಲಿ ಅದೆಷ್ಟೋ ಸೋಲುಗಳೆದುರಾಗಿವೆ. ಅನೇಕರು ಲುಕ್ಸಾನಿನ ಶೂಲಕ್ಕೆ ಸಿಕ್ಕು ಕಂಗಾಲಾಗಿದ್ದಾರೆ. ಹೀಗೆ ಸಾಗಿ ಬಂದು ಕನ್ನಡ ಚಿತ್ರರಂಗದಲ್ಲಿ ಈಗೊಂದು ಲವಲವಿಕೆಯ ವಾತಾವರಣ ನಿರ್ಮಾಣವಾಗಿತ್ತು. ಇಂಥಾ ಹೊತ್ತಿನಲ್ಲಿ ಕಲ್ಟ್ ಮೂಲಕ ಝೈದ್ ಖಾನ್ ಪ್ರೇಕ್ಷಕ ವಲಯದಲ್ಲಿ ಮೂಡಿಕೊಂಡಿದ್ದ ನಂಬಿಕೆಯ ಚಿಗುರಿನ ಮೇಲೆ ಕತ್ತರಿಯಾಡಿಸಿ ಬಿಟ್ಟಿದ್ದಾನೆ! </span></p>
<p style="text-align: justify;"><span style="font-size: 20px;">ಅಷ್ಟಕ್ಕೂ ಈತ ತನ್ನ ತಂದೆ ಜಮೀರ್ ಅಹ್ಮದ್ ಪ್ರಭೆ ಬಳಸಿಕೊಂಡೇ ಕಲ್ಟ್ ಚಿತ್ರದ ಪ್ರಮೋಷನ್ನು ನಡೆಸಿದ್ದ. ಶಿಡ್ಲಘಟ್ಟದಲ್ಲಿ ಅವನ್ಯಾರೋ ಅಯೋಗ್ಯ ರಾಜೀವ್ ಗೌಡ ಎಂಬಾತ ಪೌರಾಯುಕ್ತೆಯನ್ನು ಹೀನಾಯವಾಗಿ ನಿಂದಿಸಿದ ವಿಚಾರ ವಿವಾದವೆಬ್ಬಿಸಿತ್ತು. ಹೀಗೆ ಕಾಂಗ್ರೆಸ್ ಸರ್ಕಾರದ ಅಧಿಕಾರ ಬಲವನ್ನು ಬಳಸಿಕೊಂಡೇ ಊರುತುಂಬಾ ಪ್ರಚಾರ ನಡೆಸಿದ್ದ ಝೈದ್ ಖಾನ್ ತನ್ನ ಮೂರಡಿ ದೇಹದೊಳಗೆ ಆರಡಿಯ ಸಲ್ಮಾನ್ ಖಾನ್‌ನನ್ನೇ ಆವಾಹಿಸಿಕೊಂಡಂತಿದ್ದ. ಅದ್ಯಾರೋ ಅಭಿಮಾನಿಗಳು ಸಭೆಯಿಂದೆದ್ದು ಬಂದು ಝೈದ್‌ನನ್ನು ನೋಡಲು ವೇದಿಕೆಗೆ ನುಗ್ಗೋದಂತೆ, ಝೈದ್ ಖಾನ್ ಸಾಕಿಕೊಂಡ ಅಂಗರಕ್ಷಕರು ತಡೆಯೋದಂತೆ, ಕರುಣಾಳು ಝೈದ್ ಖಾನ್ ತನ್ನ ಅಭಿಮಾನಿಯನ್ನು ಅಂಗರಕ್ಷಕರಿಂದ ಬಿಡಿಸಿ ಅಪ್ಪಿಕೊಳ್ಳೋದಂತೆ&#8230; ಇಂಥಾ ಹಳಸಲು ಸ್ಕ್ರಿಪ್ಟೆಡ್ ನಾಟಕಗಳ ಮೂಲಕ ಪ್ರಚಾರದಲ್ಲಿಯೂ ಈ ಚಿತ್ರತಂಡ ಸ್ವಂತಿಕೆ ಕಳೆದುಕೊಂಡಿತ್ತು.</span></p>
<p><img loading="lazy" decoding="async" class="alignnone wp-image-11667 size-full" src="https://www.cinishodha.com/wp-content/uploads/2026/02/KMK0425-1.jpg?_t=1770130401" alt="zameer ahmad khan cult" width="1200" height="876" title="Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ? 11 » cinishodha.com" srcset="https://www.cinishodha.com/wp-content/uploads/2026/02/KMK0425-1.jpg 1200w, https://www.cinishodha.com/wp-content/uploads/2026/02/KMK0425-1-512x374.jpg 512w, https://www.cinishodha.com/wp-content/uploads/2026/02/KMK0425-1-1024x748.jpg 1024w, https://www.cinishodha.com/wp-content/uploads/2026/02/KMK0425-1-768x561.jpg 768w, https://www.cinishodha.com/wp-content/uploads/2026/02/KMK0425-1-150x110.jpg 150w, https://www.cinishodha.com/wp-content/uploads/2026/02/KMK0425-1-450x329.jpg 450w" sizes="(max-width: 1200px) 100vw, 1200px" /></p>
<p style="text-align: justify;"><span style="font-size: 20px;"><strong>ಅಪ್ಪನ ಕಾಸಲ್ಲಿ ಕಲ್ಟ್ ಕಿತಾಪತಿ</strong></span></p>
<p style="text-align: justify;"><span style="font-size: 20px;">ಯಾರೋ ಬಡಪಾಯಿಗಳು ಕಲ್ಟ್ ಸಿನಿಮಾ ಮಾಡಿದ್ದರೆ ಈ ಸಿನಿಮಾವೀಗ ಹೇಳ ಹೆಸರಿಲ್ಲದಂತೆ ಗಾಯಬ್ ಆಗುತ್ತಿತ್ತು. ಕಲ್ಟ್ ಈಗ ಸಿನಿಮಾ ಮಂದಿರಗಳಲ್ಲಿರೋದೇ ಜಮೀರ್ ಅಹ್ಮದ್ ಕಾಸಿನ ಬಲದಿಂದ. ಹೀಗೆ ಒತ್ತಾಯಪೂರ್ವಕವಾಗಿ ಓಡುತ್ತಿರೋ ಸಿನಿಮಾವೊಂದನ್ನು ಘನತೆವೆತ್ತ ಸಿಎಂ ಸಿದ್ದರಾಮಯ್ಯ ಮೆಚ್ಚಿಕೊಂಡಾಡುತ್ತಾರೆಂದರೆ, ಹೊಸಾ ಮಾದರಿಯ ಚಿತ್ರ, ಕುಟುಂಬ ಸಮೇತ ನೋಡಬೇಕಾದ ಚಿತ್ರ ಅಂತೆಲ್ಲ ಸರ್ಟಿಫಿಕೆಟು ಕೊಡುತ್ತಾರೆಂದರೆ ಏನೆನ್ನಬೇಡ? ಸಿದ್ದು ಮಾತು ಕೇಳಿ ಖುದ್ದು ಅವರನ್ನು ಮೆಚ್ಚಿಕೊಳ್ಳುವವರೇ ಹೋಗಿ ಸಿನಿಮಾ ನೋಡಿದರೆ ಅವರೇನು ಅಂಡುಕೊಳ್ಳಲಿಕ್ಕಿಲ್ಲ? ನಾನಾ ಕೊರತೆಗಳಿಂದ ಕೃಶವಾಗಿ, ಹಣಬಲದಿಂದಲೇ ಜೀವ ಉಳಿಸಿಕೊಂಡಿರುವ ಚಿತ್ರವೊಂದರ ಪರ ವಕಾಕಲತ್ತು ವಹಿಸೋದರಿಂದಾಗುವ ಅನಾಹುತಗಳ ಬಗ್ಗೆ ಸಿದ್ದಣ್ಣನಿಗೆ ಅರಿವಿಲ್ಲವೇ? ಇಂಥಾ ಹತ್ತಾರು ಪ್ರಶ್ನೆಗಳಿವೆ. ಅದಕ್ಕೆ ಸಿದ್ದರಾಮಯ್ಯ ಮಾತ್ರವೇ ಉತ್ತರಿಸಲು ಸಾಧ್ಯ!</span><br />
<span style="font-size: 20px;">ಯಾವಾಗ, ಸಿಎಂ ಸಿದ್ದರಾಮಯ್ಯ ಕಲ್ಟ್ ಚಿತ್ರವನ್ನು ಹೊಗಳಿದರೋ, ಅದಾಗಿ ದಿನದೊಪ್ಪತ್ತಿನಲ್ಲಿಯೇ ಮತ್ತೊಂದು ತಗಡು ಡ್ರಾಮಾವನ್ನು ಝೈದ್ ಖಾನ್ ಸೃಷ್ಟಿಸಿದ್ದಾನೆ. ಸಿಎಂ ಸಾಹೇಬರು ಕುಟುಂಬ ಸಮೇತ ಕಲ್ಟ್ ನೋಡಲು ಹೇಳಿದ್ದಾರೆಂದು ಪರಿವಾರ ಸಮೇತವಾಗಿ ಪಟಾಲಮ್ಮೊಂದು ಗ್ಲೋಬಲ್ ಮಾಲ್‌ಗೆ ದಾಂಗುಡಿಯಿಟ್ಟಿದೆ. ಅಲ್ಲಿ ಮಾಲ್ ಸಿಬ್ಬಂದಿ ಸಿನಿಮಾ ನೋಡಲು ಅವಕಾಶ ಕೊಟ್ಟಿಲ್ಲ ಅಂತ ಆ ಪಟಾಲಮ್ಮು ಪುಕಾರೆಬ್ಬಿಸಿದೆ. ಇಂಥಾ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಮೂಲಕ ಬಿಟ್ಟಿ ಪ್ರಚಾರ ಸಿಗುತ್ತದೆಂಬ ಅಂದಾಜು ಝೈದ್‌ನದ್ದಿರಬಹುದು. ಆದರೆ, ಹಳ್ಳಿ ಮೂಲೆಯಲ್ಲಿ ಕೂತು ನೋಡುವವರಿಗೂ ಕೂಡಾ ಅದೊಂದು ಪ್ರಚಾರದ ಗಿಮಿಕ್ಕೆಂಬುದು ಸ್ಪಷ್ಟವಾಗಿಯೇ ಅರಿವಾಗುತ್ತದೆ. ಪ್ರೇಕ್ಷಕರನ್ನು ದಡ್ಡರೆಂದುಕೊಂಡಿರೋ ಝೈದ್ ಖಾನ್ ಇನ್ನೂ ಅದೆಂತೆಂಥಾ ನಾಟಕ ನಿರ್ದೇಶಿಸಲಿದ್ದಾನೋ ಗೊತ್ತಿಲ್ಲ.</span></p>
<p><img loading="lazy" decoding="async" class="aligncenter wp-image-11668" src="https://www.cinishodha.com/wp-content/uploads/2026/02/115998331-512x288.webp" alt="zameer zaide khan " width="1024" height="576" title="Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ? 12 » cinishodha.com" srcset="https://www.cinishodha.com/wp-content/uploads/2026/02/115998331-512x288.webp 512w, https://www.cinishodha.com/wp-content/uploads/2026/02/115998331-1024x576.webp 1024w, https://www.cinishodha.com/wp-content/uploads/2026/02/115998331-768x432.webp 768w, https://www.cinishodha.com/wp-content/uploads/2026/02/115998331-150x84.webp 150w, https://www.cinishodha.com/wp-content/uploads/2026/02/115998331-450x253.webp 450w, https://www.cinishodha.com/wp-content/uploads/2026/02/115998331-1200x675.webp 1200w, https://www.cinishodha.com/wp-content/uploads/2026/02/115998331.webp 1280w" sizes="(max-width: 1024px) 100vw, 1024px" /></p>
<p style="text-align: justify;"><strong><span style="font-size: 20px;">ಅಹಂಕಾರ ಇಳಿಯದಿದ್ದರೆ&#8230;</span></strong><br />
<span style="font-size: 20px;">ಈ ಹುಡುಗ ಝೈದ್ ಖಾನ್ ಬನಾರಸ್ ಚಿತ್ರದ ಮೂಲಕ ನಾಯಕನಾಗಿ ಬೆಳಕು ಕಂಡಾಗ ಸಿನಿಮಾ ಪ್ರೇಮಿಗಳು ಖುಷಿಗೊಂಡಿದ್ದರು. ಜಯತೀರ್ಥ ಸಾರಥ್ಯದಲ್ಲಿ ಈತ ಒಂದಷ್ಟು ಪಳಗಿದ ಪ್ರದರ್ಶನ ನೀಡಿದ್ದ. ರಾಜಕೀಯ ಭಿನ್ನಾಭಿಪ್ರಾಯದ ನೆಲೆಯಲ್ಲಿ ಒಂದಷ್ಟು ಮಂದಿ ಈತನನ್ನು ಮೂದಲಿಸಿದ್ದರು. ಯಾರೇ ಕಲಾವಿದರಾದರೂ ಜಾತಿ ಧರ್ಮಗಳ ನೆಲೆಯಲ್ಲಿ ವಿರೋಧಿಸೋದು, ಹತ್ತಿಕ್ಕೋದು ತರವಲ್ಲ. ಇಂಥಾ ಮನುಷ್ಯಧರ್ಮದ ನೆಲೆಯಲ್ಲಿ ಬಹಳಷ್ಟು ಮಂದಿ ಈತನನ್ನು ಬೆಂಬಲಿಸಿದ್ದರು. ಅದಾದ ನಂತರ ಈತ ನಟಿಸಿರೋ ಎರಡನೇ ಸಿನಿಮಾಶ ಕಲ್ಟ್. ಈ ಮೂಲಕ ಭ್ರಮೆಯ ಸ್ಟಾರ್‌ಗಿರಿಯನ್ನು ನೆತ್ತಿಗೇರಿಸಿಕೊಂಡ ಝೈದ್ ಪ್ರೇಕ್ಷಕರೆದುರು ಠಳಾಯಿಸುತ್ತಿದ್ದಾನೆ. ಈತನ ಮಾತು ವರ್ತನೆಗಳಲ್ಲಿ ಬನಾರಸ್ ಕಾಲದ ನಯ ವಿನಯ ಮಾಯವಾಗಿಬಿಟ್ಟಿದೆ.</span><br />
<span style="font-size: 20px;">ಸಿನಿಮಾದ ಕಂಟೆಂಟು ಚೆಂದಗಿದ್ದರೆ ಜನ ಖಂಡಿತಾ ಗೆಲ್ಲಿಸುತ್ತಾರೆ. ಇಂಥಾ ಹರತಾಳಗಳ ಅವಶ್ಯಕತೆಯಿಲ್ಲ. ಝೈದ್ ಗೆ ಅಪ್ಪನ ಕಾಸಿನ ಬಲವಿದೆ. ಒಂದು ಸಿನಿಮಾವನ್ನು ಎಲ್ಲ ರೀತಿಯಿಂದಲೂ ಅಚ್ಚುಕಟ್ಟಾಗಿ ರೂಪಿಸೋ ಅವಕಾಶವೂ ಇದೆ. </span></p>
<p style="text-align: justify;"><span style="font-size: 20px;">ಅದನ್ನು ಬಳಸಿಕೊಂಡು ಒಳ್ಳೆ ಸಿನಿಮಾ ಮಾಡೋ ಅವಕಾಶವನ್ನು ಆತ ಕಲ್ಟ್ ಮೂಲಕ ಕಳೆದುಕೊಂಡಿದ್ದಾನೆ. ಬಹುಶಃ ನಿರ್ದೇಶಕರನ್ನೂ ಕೂಡಾ ಕೆಲಸದಾಳುಗಳಂತೆ ಕಾಣುವ ಗುಣದಿಂದಲೇ ಕಲ್ಟ್ ನಲ್ಲಿ ಬೇಬಿ ಕಾಣಿಸುತ್ತಾಳೆ. ಅನಿಮಲ್ ಕುಣಿದಾಡುತ್ತೆ. ಕಳೆದು ಹೋಗಿರೋದು ಸ್ವಂತಿಕೆ ಮಾತ್ರ. ಇಂಥಾ ಸಿನಿಮಾವನ್ನು ಅದ್ಯಾವ ಸೌಭಾಗ್ಯಕ್ಕೆ ಸಿದ್ದರಾಮಯ್ಯ ಹೊಗಳಿದರೋ ಗೊತ್ತಾಗುತ್ತಿಲ್ಲ. ಬಿಜೆಪಿ ಐಟಿ ಸೆಲ್ ಮಂದಿ ಸಿದ್ದರಾಮಯ್ಯನವರ ಒಳ್ಳೆ ಕೆಲಸಗಳನ್ನೂ ಮರೆಮಾಡುವಂತೆ ಟ್ರೋಲುಗಳ ಪ್ರಹಾರ ನಡೆಸುತ್ತಾ ಬರುತ್ತಿದ್ದಾರೆ. ಕಲ್ಟ್‌ನಂತಾ ಕಳಪೆ ಚಿತ್ರವನ್ನು ಪ್ರಮೋಟ್ ಮಾಡೋ ಮೂಲಕ ಸಿದ್ದಣ್ಣ ಸ್ವತಃ ಟ್ರೋಲುಗಳಿಗೆ ಕಂಟೆಂಟು ಒದಗಿಸಿದ್ದಾರೆ. ಇದು ನಿಜಕ್ಕೂ ಚಿತ್ರರಂಗದ ಮಟ್ಟಿಗೆ ಒಳಿತಿನ ಬೆಳವಣಿಗೆಯಲ್ಲ. ಇಂಥಾ ನಾಟಕದ ಪ್ರಚಾರದ ಪಟ್ಟುಗಳ ಮೂಲಕ ಝೈದ್ ಖಾನ್ ಬಿಡಿ; ಯಾವ ನಟನೂ ಬರಖತ್ತಾಗಲು ಸಾಧ್ಯವಿಲ್ಲ!</span></p>
<p>keywords: zaid khan, siddaramaiah, cult movie, sandalwood, cult controvercy, rachitha ram</p>
<p>The post <a rel="nofollow" href="https://www.cinishodha.com/cult-movie-controvercy-03-02-2026/">Cult Movie Controvercy: ಜಮೀರ್ ಮರ್ಜಿಗೆ ಬಿದ್ದು ಇದೆಂಥಾ ಮಾತಾಡಿದರು ಸಿದ್ದರಾಮಯ್ಯ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?</title>
		<link>https://www.cinishodha.com/dhanveer-prisons-video-leak-10-11-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 10 Nov 2025 16:23:30 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#challengingstar]]></category>
		<category><![CDATA[#renukaswamymurdercase]]></category>
		<category><![CDATA[darshan]]></category>
		<category><![CDATA[dhanveer]]></category>
		<category><![CDATA[govtofkarnatak]]></category>
		<category><![CDATA[gparameshwar]]></category>
		<category><![CDATA[parappanaagraharavideoleak]]></category>
		<category><![CDATA[rapistumeshreddy]]></category>
		<category><![CDATA[sandalwood]]></category>
		<category><![CDATA[shakeelmunna]]></category>
		<category><![CDATA[siddaramaiah]]></category>
		<category><![CDATA[terrorism]]></category>
		<category><![CDATA[terrorist]]></category>
		<category><![CDATA[umeshreddy]]></category>
		<guid isPermaLink="false">https://www.cinishodha.com/?p=11177</guid>

					<description><![CDATA[<p>ಪರಪ್ಪನ ಅಗ್ರಹಾರ ಜೈಲಿನ ಅಧ್ವಾನಗಳು ಆಗಾಗ ಹೊರಜಗತ್ತಿಗೆ ಪರಿಚಯವಾಗುತ್ತಿರುತ್ತವೆ. ಆದರೀಗ ವೈರಲ್ ವೀಡಿಯೋವೊಂದರ ಮೂಲಕ ನಮ್ಮ ದುಷ್ಟ ವ್ಯವಸ್ಥೆಯ ಭಯಾನಕ ಹುಳುಕೊಂಡು ಬಟಾಬಯಲಾಗಿದೆ. ಪರಪ್ಪನ ಅಗ್ರಹಾರವೆಂಬುದು ಕೂಳುಬಾಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಉಗ್ರಾಣದಂತಾಗಿ ಬಹುಕಾಲ ಕಳೆದಿದೆ. ಈ ಮೂಲಕ ಜೈಲೆಂಬುದರ ಅಸಲೀ ರೂಪುರೇಷೆಯೇ ತಲೆಕೆಳಗಾಗಿ ಬಿಟ್ಟಿದೆ. ಇದೀಗ ಹಬ್ಬಿಕೊಂಡಿರುವ ವೀಡಿಯೋಗಳ ಮೂಲಕ ಪರಪ್ಪನ ಅಗ್ರಹಾರ ಅದೆಂಥಾ ಅಧೋಗತಿಯ ಸ್ಥಿತಿ ತಲುಪಿದೆ ಎಂಬ ಸ್ಪಷ್ಟ ಚಿತ್ರಣ ರವಾನೆಯಾಗಿದೆ. ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ಕೊಂದ ಪಾಪಿಷ್ಟ ಉಮೇಶ್ ರೆಡ್ಡಿ, ದೇಶದ್ರೋಹಿ ಭಯೋತ್ಪಾದಕರು, [...]</p>
<p>The post <a rel="nofollow" href="https://www.cinishodha.com/dhanveer-prisons-video-leak-10-11-2025/">Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ಪ</span></strong></span>ರಪ್ಪನ ಅಗ್ರಹಾರ ಜೈಲಿನ ಅಧ್ವಾನಗಳು ಆಗಾಗ ಹೊರಜಗತ್ತಿಗೆ ಪರಿಚಯವಾಗುತ್ತಿರುತ್ತವೆ. ಆದರೀಗ ವೈರಲ್ ವೀಡಿಯೋವೊಂದರ ಮೂಲಕ ನಮ್ಮ ದುಷ್ಟ ವ್ಯವಸ್ಥೆಯ ಭಯಾನಕ ಹುಳುಕೊಂಡು ಬಟಾಬಯಲಾಗಿದೆ. ಪರಪ್ಪನ ಅಗ್ರಹಾರವೆಂಬುದು ಕೂಳುಬಾಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಉಗ್ರಾಣದಂತಾಗಿ ಬಹುಕಾಲ ಕಳೆದಿದೆ. ಈ ಮೂಲಕ ಜೈಲೆಂಬುದರ ಅಸಲೀ ರೂಪುರೇಷೆಯೇ ತಲೆಕೆಳಗಾಗಿ ಬಿಟ್ಟಿದೆ. ಇದೀಗ ಹಬ್ಬಿಕೊಂಡಿರುವ ವೀಡಿಯೋಗಳ ಮೂಲಕ ಪರಪ್ಪನ ಅಗ್ರಹಾರ ಅದೆಂಥಾ ಅಧೋಗತಿಯ ಸ್ಥಿತಿ ತಲುಪಿದೆ ಎಂಬ ಸ್ಪಷ್ಟ ಚಿತ್ರಣ ರವಾನೆಯಾಗಿದೆ. ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ಕೊಂದ ಪಾಪಿಷ್ಟ ಉಮೇಶ್ ರೆಡ್ಡಿ, ದೇಶದ್ರೋಹಿ ಭಯೋತ್ಪಾದಕರು, ದಂಧೆಕೋರರೆಲ್ಲ ಪರಪ್ಪನ ಅಗ್ರಹಾರದಲ್ಲಿ ಬಿಂದಾಸಾಗಿರುವ ಈ ವೀಡಿಯೋಗಳ ಮೂಲಕ ಹಾಲಿ ಸರ್ಕಾರದ ಮಾನ ರಾಷ್ಟ್ರಾದ್ಯಂತ ಮೂರಾಬಟ್ಟೆಯಾಗಿದೆ!</span></p>
<p style="text-align: justify;"><img loading="lazy" decoding="async" class="alignnone wp-image-11178 size-full" src="https://www.cinishodha.com/wp-content/uploads/2025/11/716aed8a-c9e4-42ec-804a-00966ca72970.jpg?_t=1762791424" alt="716aed8a c9e4 42ec 804a 00966ca72970" width="1080" height="568" title="Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ? 17 » cinishodha.com" srcset="https://www.cinishodha.com/wp-content/uploads/2025/11/716aed8a-c9e4-42ec-804a-00966ca72970.jpg 1080w, https://www.cinishodha.com/wp-content/uploads/2025/11/716aed8a-c9e4-42ec-804a-00966ca72970-300x158.jpg 300w, https://www.cinishodha.com/wp-content/uploads/2025/11/716aed8a-c9e4-42ec-804a-00966ca72970-768x404.jpg 768w, https://www.cinishodha.com/wp-content/uploads/2025/11/716aed8a-c9e4-42ec-804a-00966ca72970-1024x539.jpg 1024w, https://www.cinishodha.com/wp-content/uploads/2025/11/716aed8a-c9e4-42ec-804a-00966ca72970-150x79.jpg 150w, https://www.cinishodha.com/wp-content/uploads/2025/11/716aed8a-c9e4-42ec-804a-00966ca72970-450x237.jpg 450w" sizes="(max-width: 1080px) 100vw, 1080px" /><br />
<span style="font-size: 14pt;">ಜೈಲೆಂಬುದು ಕ್ರಿಮಿನಲ್ಲುಗಳ ಎದೆಯಲ್ಲೂ ಪಶ್ಚಾತ್ತಾಪದ ಪಸೆ ಮೂಡಿಸಿ ಬದಲಾವಣೆಗೆ ದಾರಿ ಮಾಡಿಕೊಡುವ ಸ್ಥಳ. ಅದು ಈ ನೆಲದ ಜನಸಾಮಾನ್ಯರಲ್ಲಿದ್ದ ನಂಬಿಕೆ. ಆದರೆ, ಈಗ ಸಣ್ಣಪುಟ್ಟ ಕೇಸುಗಳಲ್ಲಿ ಬಂಧಿಯಾದವರನ್ನೂ ಸಹ ಲೋಕಕಂಟಕರನ್ನಾಗಿ ಮಾರ್ಪಡಿಸುವ ಕೇಂದ್ರವಾಗಿ ಪರಪ್ಪನ ಅಗ್ರಹಾರದಂಥಾ ಜೈಲುಗಳು ಮಾರ್ಪಾಟುಗೊಂಡಿವೆ. ಕಾಸು ಕೊಟ್ಟರೆ ಎಂಥಾ ಸೌಕರ್ಯ ಒದಗಿಸಲೂ ಹಿಂದೇಟು ಹಾಕದಷ್ಟು ಲಜ್ಜೆಗೆಟ್ಟು ನಿಂತಿದ್ದಾರೆ. ಇಂಥಾ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ಇರೋದರಿಂದಲೇ ವಿಕೃತ ಕಾಮಿ ಉಮೇಶ್ ರೆಡ್ಡಿ ಆರಾಮಾಗಿ ಆಂಡ್ರಾಯ್ಡ್ ಫೋನಲ್ಲಿ ಮಾತಾಡುತ್ತಾ, ಎಣ್ಣೆ ಹೊಡೆದುಕೊಂಡು ಆರಾಮಾಗಿದ್ದಾನೆ. ಐಸಿಸಿ ಉಗ್ರ ಶಕೀಲ್ ಮುನ್ನಾನಂಥಾ ಕ್ರಿಮಿಗಳನ್ನೂ ಸಖಲ ಸೌಕರ್ಯ ಕಲ್ಪಿಸಿ ಸಾಕಲಾಗುತ್ತಿದೆ. ಬೇರೆ ಬೇರೆ ಕೇಸುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಎಣ್ಣೆ ಪಾರ್ಟಿ ನಡೆಸುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ!</span></p>
<p style="text-align: justify;"><img loading="lazy" decoding="async" class="alignnone wp-image-11179 size-full" src="https://www.cinishodha.com/wp-content/uploads/2025/11/dhanveer-gowda_169537251560.webp?_t=1762791451" alt="dhanveer gowda 169537251560" width="1080" height="1079" title="Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ? 18 » cinishodha.com" srcset="https://www.cinishodha.com/wp-content/uploads/2025/11/dhanveer-gowda_169537251560.webp 1080w, https://www.cinishodha.com/wp-content/uploads/2025/11/dhanveer-gowda_169537251560-150x150.webp 150w, https://www.cinishodha.com/wp-content/uploads/2025/11/dhanveer-gowda_169537251560-300x300.webp 300w, https://www.cinishodha.com/wp-content/uploads/2025/11/dhanveer-gowda_169537251560-768x767.webp 768w, https://www.cinishodha.com/wp-content/uploads/2025/11/dhanveer-gowda_169537251560-1024x1024.webp 1024w, https://www.cinishodha.com/wp-content/uploads/2025/11/dhanveer-gowda_169537251560-450x450.webp 450w" sizes="(max-width: 1080px) 100vw, 1080px" /><br />
<span style="font-size: 14pt;">ಯಾವಾಗ ಇಂಥಾದ್ದೊಂದು ವೀಡಿಯೋ ವೈರಲ್ ಆಯ್ತೋ, ಆ ಕ್ಷಣದಿಂದಲೇ ರಾಜ್ಯ ಸರ್ಕಾರ ಡ್ಯಾಮೇಜ್ ಕಂಟ್ರೋಲಿಗಾಗಿ ನಾನಾ ಸ್ವರೂಪಗಳಲ್ಲಿ ಸರ್ಕಸ್ಸು ನಡೆಸಲಾಗಿದೆ. ಏಕಾಏಕಿ ಸಿಸಿಬಿ ಅಧಿಕಾರಿಗಳು ನಟ ಧನ್ವೀರನನ್ನು ವಿಚಾರಣೆಗೊಳಪಡಿಸಿದ್ದೂ ಕೂಡಾ ಅಂಥಾ ಸರ್ಕಸ್ಸಿನ ಭಾಗ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಧನ್ವೀರ್‌ನನ್ನು ಹೀಗೆ ವಿಚಾರಣೆಗೊಳಪಡಿಸಿದ ಅಧಿಕಾರಿಗಳು ಆಳೋ ಸರ್ಕಾರದ ಆಜ್ಞೆಯಂತೆಯೇ ನಡೆದುಕೊಂಡಿದ್ದಾರೆ. ಪರಪ್ಪನ ಅಗ್ರಹಾರದೊಳಗಿನ ಅಸಹ್ಯ ಬೀದಿಗೆ ಬರುತ್ತಲೇ ಕಂಗಾಲಾದ ಸರ್ಕಾರ, ಈ ವೀಡಿಯೋ ಹೊರ ಬಂದಿದ್ದರ ಮೂಲ ಯಾವುದು ಎಂಬುದುದರ ಬಗ್ಗೆ ಸಹಜವಾಗಿಯೇ ತಲೆ ಕೆಡಿಸಿಕೊಂಡಿದೆ. ಈ ಹಂತದಲ್ಲಿ ಥಟ್ಟನೆ ಗೊತ್ತಿಲ್ಲ ಖ್ಯಾತಿಯ ಗೃಹಸಚಿವರ ತಲೆಗೆ ದರ್ಶನ್ ಹೆಸರು ಹೊಳೆಯಿತಾ? ಲೀಕಾದ ವೀಡಿಯೋ ಕಿಸುರನ್ನು ನಸೀಬುಗೇಡಿ ನಟನ ತಲೆಗೆ ಕಟ್ಟಿ ಆ ಕ್ಷಣಕ್ಕೆ ಜನರ ಗಮನವನ್ನ ಬೇರೆಡೆಗೆ ವರ್ಗಾಯಿಸುವ ಷಡ್ಯಂತ್ರ ನಡೆಯಿತಾ? ಸಿಸಿಬಿ ಪೊಲೀಸರ ನಡೆಯೇಕೋ ಇಂಥಾ ಗುಮಾನಿಯನ್ನು ತೀವ್ರವಾಗಿಸುವಂತಿದೆ.</span></p>
<p style="text-align: justify;"><img loading="lazy" decoding="async" class="alignnone wp-image-11180 size-full" src="https://www.cinishodha.com/wp-content/uploads/2025/11/e6e9116f-cbbb-4d82-b5b3-5ae5d93f00d4.jpg?_t=1762791476" alt="e6e9116f cbbb 4d82 b5b3 5ae5d93f00d4" width="1080" height="1590" title="Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ? 19 » cinishodha.com" srcset="https://www.cinishodha.com/wp-content/uploads/2025/11/e6e9116f-cbbb-4d82-b5b3-5ae5d93f00d4.jpg 1080w, https://www.cinishodha.com/wp-content/uploads/2025/11/e6e9116f-cbbb-4d82-b5b3-5ae5d93f00d4-204x300.jpg 204w, https://www.cinishodha.com/wp-content/uploads/2025/11/e6e9116f-cbbb-4d82-b5b3-5ae5d93f00d4-768x1131.jpg 768w, https://www.cinishodha.com/wp-content/uploads/2025/11/e6e9116f-cbbb-4d82-b5b3-5ae5d93f00d4-696x1024.jpg 696w, https://www.cinishodha.com/wp-content/uploads/2025/11/e6e9116f-cbbb-4d82-b5b3-5ae5d93f00d4-1043x1536.jpg 1043w, https://www.cinishodha.com/wp-content/uploads/2025/11/e6e9116f-cbbb-4d82-b5b3-5ae5d93f00d4-150x221.jpg 150w, https://www.cinishodha.com/wp-content/uploads/2025/11/e6e9116f-cbbb-4d82-b5b3-5ae5d93f00d4-450x663.jpg 450w" sizes="(max-width: 1080px) 100vw, 1080px" /><br />
<span style="font-size: 14pt;">ದರ್ಶನ್ ಎರಡನೇ ಬಾರಿ ಜೈಲುಪಾಲಾದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಆತ ಒಂದು ತಲೆದಿಂಬಿಗಾಗಿ, ಕೊಂಚ ಬಿಸಿಲಿಗೆ ಮೈಯೊಡ್ಡುವದಕ್ಕಾಗಿಯೂ ಕೋರ್ಟ್ ಮೊರೆ ಹೋಗುವಂಥಾ ಸ್ಥಿತಿ ಬಂದೊದಗಿದೆ. ಹೀಗಿರುವಾಗ ಅದೇ ಜೈಲಿನ ಬ್ಯಾರಕ್ಕುಗಳಲ್ಲಿರುವ ವಿಕೃತಕಾಮಿ ಉಮೇಶ್ ರೆಡ್ಡಿ, ಶಕೀಲ್ ಮುನ್ನಾನಂಥಾ ಭಯೋತ್ಪಾದಕರು ಎಲ್ಲ ಸೌಕರ್ಯ ಪಡೆದು ಹಾಯಾಗಿದ್ದರು. ಇದನ್ನು ಹೊರಜಗತ್ತಿಗೆ ಜಾಹೀರು ಮಾಡುವ ಮೂಲಕ ದರ್ಶನ್ ಸೂತ್ರಧಾರಿಕೆ ವಹಿಸಿಕೊಂಡನಾ? ಅಂಥಾ ವೀಡಿಯೋ ಧನ್ವೀರ್ ಕಡೆಯಿಂದ ಮೀಡಿಯಾಗಳಿಗೆ ಸರಬರಾಜಾಯಿತಾ? ಇಂಥಾ ಅನುಮಾನಗಳಿರೋದರಿಂದಲೇ ಧನ್ವೀರ್‌ನನ್ನು ವಿಚಾರಣೆಗೊಳಪಡಿಸಿ, ಆತನ ಮೊಬೈಲ್ ಅನ್ನು ಪರಿಶೀಲಿಸಲಾಗಿದೆ. ಆದರೆ, ಅಲ್ಲಿ ಯಾವ ಸಾಕ್ಷಿಗಳೂ ಸಿಗದೆ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ!</span></p>
<p style="text-align: justify;"><span style="font-size: 14pt;"><img loading="lazy" decoding="async" class="alignnone wp-image-11181 size-full" src="https://www.cinishodha.com/wp-content/uploads/2025/11/Darshan-murder-accused.jpg?_t=1762791501" alt="Darshan murder accused" width="640" height="360" title="Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ? 20 » cinishodha.com" srcset="https://www.cinishodha.com/wp-content/uploads/2025/11/Darshan-murder-accused.jpg 640w, https://www.cinishodha.com/wp-content/uploads/2025/11/Darshan-murder-accused-300x169.jpg 300w, https://www.cinishodha.com/wp-content/uploads/2025/11/Darshan-murder-accused-150x84.jpg 150w, https://www.cinishodha.com/wp-content/uploads/2025/11/Darshan-murder-accused-450x253.jpg 450w" sizes="(max-width: 640px) 100vw, 640px" /> </span><br />
<span style="font-size: 14pt;">ಒಂದು ವೇಳೆ ಧನ್ವೀರ್ ದರ್ಶನ್‌ಗೆ ಸಹಕಾರಿಯಾಗಲೆಂಬ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ, ಈ ವೀಡಿಯೋ ಲೀಕ್ ಸೂತ್ರಧಾರನಾಗಿದ್ದಾನೆ ಅಂತಿಟ್ಟುಕೊಳ್ಳಿ; ಅದರಲ್ಲಿ ಅಪರಾಧವೇನೂ ಇಲ್ಲ. ಯಹಾಕೆಂದರೆ, ಇಲ್ಲಿ ಮುಖ್ಯವಾಗೋದು ವೀಡಿಯೋ ಲೀಕ್ ಮಾಡಿರೋದು ಯಾರೆಂಬುದಲ್ಲ. ಆ ವೀಡಿಯೋದಲ್ಲಿರುವ ಭೀಕರ ವಾಸ್ತವಕ್ಕೆ ಕಾರಣರ್‍ಯಾರೆಂಬುದೇ ಚರ್ಚಿಸಬೇಕಾದ ವಿಚಾರ. ಪರಪ್ಪನ ಅಗ್ರಹಾರದಂಥಾ ಜೈಲುಗಳ ಮೇಲೆ ಗೃಹ ಇಲಾಖೆ ಸದಾ ಕಾಲವೂ ಕಣ್ಣಿಡಬೇಕಾಗುತ್ತೆ. ಇಂಥಾ ಕಣ್ಗಾವಲಿನಲ್ಲೇ ವಿಕೇತ ಕಾಮಿಗಳು, ದೇಶದ್ರೋಹಿ ಭಯೋತ್ಪಾದಕರು ರಾಜವೈಭೋಗ ಅನುಭವಿಸುತ್ತಾರೆಂದರೆ ಅದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ಯಾವುದಿದೆ? ಗೃಹಸಚಿವ ಜಿ ಪರಮೇಶ್ವರ್ ಆ ಖಾತೆಗೆ ಯೋಗ್ಯರಲ್ಲ ಅನ್ನೋದಕ್ಕೆ ಮತ್ಯಾವ ಪುರಾವೆ ಬೇಕಿದೆ? ಕ್ರಿಮಿನಲ್ಲುಗಳನ್ನು ಜೈಲೊಳಗೆ ಕೊಬ್ಬಲು ಬಿಡುವ ಯಾವುದೇ ಪಕ್ಷದ ಸರ್ಕಾರದಿಂದ ಜನ ಏನನ್ನು ನಿರೀಕ್ಷಿಸಲು ಸಾಧ್ಯ? ನಾಗರಿಕರ ನಡುವೆ ಹುಟ್ಟಿಕೊಂಡಿರುವ ಆಕ್ರೋಶಭರಿತ ಪ್ರಶ್ನೆಗಳಿಗೆ ಉತ್ತರಿಸೋ ನೈತಿಕತೆ ಈ ಸರ್ಕಾರಕ್ಕಿದೆಯಾ?</span></p>
<p style="text-align: justify;">
<p>The post <a rel="nofollow" href="https://www.cinishodha.com/dhanveer-prisons-video-leak-10-11-2025/">Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
	</channel>
</rss>
