<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	 xmlns:media="http://search.yahoo.com/mrss/" >

<channel>
	<title>#darshanthoogudeepa &#8211; Cini Shodha</title>
	<atom:link href="https://www.cinishodha.com/tag/darshanthoogudeepa/feed/" rel="self" type="application/rss+xml" />
	<link>https://www.cinishodha.com</link>
	<description>Filmi News Online - Kannada</description>
	<lastBuildDate>Tue, 17 Mar 2026 17:01:15 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.9.4</generator>

<image>
	<url>https://www.cinishodha.com/wp-content/uploads/2025/11/cropped-cinishodha-icon-32x32.png</url>
	<title>#darshanthoogudeepa &#8211; Cini Shodha</title>
	<link>https://www.cinishodha.com</link>
	<width>32</width>
	<height>32</height>
</image> 
	<item>
		<title>Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ!</title>
		<link>https://www.cinishodha.com/big-relief-for-darshan-17-03-2026/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 17 Mar 2026 14:50:31 +0000</pubDate>
				<category><![CDATA[ಸ್ಪಾಟ್ ಲೈಟ್]]></category>
		<category><![CDATA[#darshanthoogudeepa]]></category>
		<category><![CDATA[#renukaswamymurdercase]]></category>
		<category><![CDATA[cinishodha]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[kfi]]></category>
		<category><![CDATA[parappanaagrahara]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=11959</guid>

					<description><![CDATA[<p>ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬೇಲ್ ಸಿಕ್ಕು ಹೊರ ಬರುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ವರ್ಷದ ಬರ್ತ್‌ಡೇ ಸಂದರ್ಭದಲ್ಲಿ ಬಾಸು ಹೊರಬರುತ್ತಾರೆಂಬ ಭರವಸೆಯೊಂದು ಸೆಲೆಬ್ರಿಟಿಗಳಲ್ಲಿತ್ತು. ಆದರೀಗ ಮುಂದಿನ ವರ್ಷದ ಹುಟ್ಟುಹಬ್ಬಕ್ಕಾದರೂ ಬರಬಹುದಾ ಎಂಬಂಥಾ ಪ್ರಶ್ನೆ ಎಲ್ಲರಲ್ಲೂ ಉಳಿದುಕೊಂಡಿದೆ. ಯಾಕೆಂದರೆ, ಕಾನೂನು ಕಣಿಕೆ ಎಂಬುದು ಅಷ್ಟೊಂದು ಬಿಗುವಾಗಿ ಬಿಟ್ಟಿದೆ. ಯಾವ ದಿಕ್ಕಿನತ್ತ ಕಣ ಣು ಹಾಯಿಸಿದರೂ ಸಕಾರಾತ್ಮಕ ವಾತಾವರಣ ಕಾಣದೆ ಅಭಿಮಾನಿ ಬಳಗ ಕಂಗಾಲೆದ್ದಿದೆ. ಇದುವರೆಗೂ ಜೈಲೊಳಗೆ ಅನುಭವಿಸುತ್ತಿರೋ ನರಕದಿಂದ ಪಾರಾಗಲು ದರ್ಶನ್ ಕಡೆಯಿಂದ ಕೋರ್ಟಿಗೆ ಅರ್ಜಿಗಳು [...]</p>
<p>The post <a rel="nofollow" href="https://www.cinishodha.com/big-relief-for-darshan-17-03-2026/">Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 20px;"><span style="color: #00ccff;"><strong><span style="font-size: 24px;">ಚಾ</span></strong></span>ಲೆಂಜಿಂಗ್ ಸ್ಟಾರ್ <a href="https://www.cinishodha.com/darshan-controversy-20-08-2025/">ದರ್ಶನ್‌</a>ಗೆ ಬೇಲ್ ಸಿಕ್ಕು ಹೊರ ಬರುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ವರ್ಷದ ಬರ್ತ್‌ಡೇ ಸಂದರ್ಭದಲ್ಲಿ ಬಾಸು ಹೊರಬರುತ್ತಾರೆಂಬ ಭರವಸೆಯೊಂದು ಸೆಲೆಬ್ರಿಟಿಗಳಲ್ಲಿತ್ತು. ಆದರೀಗ ಮುಂದಿನ ವರ್ಷದ ಹುಟ್ಟುಹಬ್ಬಕ್ಕಾದರೂ ಬರಬಹುದಾ ಎಂಬಂಥಾ ಪ್ರಶ್ನೆ ಎಲ್ಲರಲ್ಲೂ ಉಳಿದುಕೊಂಡಿದೆ. ಯಾಕೆಂದರೆ, ಕಾನೂನು ಕಣಿಕೆ ಎಂಬುದು ಅಷ್ಟೊಂದು ಬಿಗುವಾಗಿ ಬಿಟ್ಟಿದೆ. ಯಾವ ದಿಕ್ಕಿನತ್ತ ಕಣ ಣು ಹಾಯಿಸಿದರೂ ಸಕಾರಾತ್ಮಕ ವಾತಾವರಣ ಕಾಣದೆ ಅಭಿಮಾನಿ ಬಳಗ ಕಂಗಾಲೆದ್ದಿದೆ. ಇದುವರೆಗೂ ಜೈಲೊಳಗೆ ಅನುಭವಿಸುತ್ತಿರೋ ನರಕದಿಂದ ಪಾರಾಗಲು ದರ್ಶನ್ ಕಡೆಯಿಂದ ಕೋರ್ಟಿಗೆ ಅರ್ಜಿಗಳು ರವಾನೆಯಾಗಿವೆ. ಆದರೆ, ತೀರ್ಪಿನ ರೂಪದಲ್ಲಿ ಬಂದೆರಗಿದ್ದು ಆಘಾತ ಮಾತ್ರ!</span></p>
<blockquote class="wp-embedded-content" data-secret="yS8aD3CbaD"><p><a href="https://www.cinishodha.com/darshan-photo-leak-case-17-08-2025/">darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?</a></p></blockquote>
<p><iframe class="wp-embedded-content" sandbox="allow-scripts" security="restricted"  title="&#8220;darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?&#8221; &#8212; Cini Shodha" src="https://www.cinishodha.com/darshan-photo-leak-case-17-08-2025/embed/#?secret=IMfR8mqPlW#?secret=yS8aD3CbaD" data-secret="yS8aD3CbaD" width="600" height="338" frameborder="0" marginwidth="0" marginheight="0" scrolling="no"></iframe></p>
<p style="text-align: justify;"><img fetchpriority="high" decoding="async" class="alignnone wp-image-11960 size-full" src="https://www.cinishodha.com/wp-content/uploads/2026/03/FotoJet-57-3.webp?_t=1773763856" alt="FotoJet 57 3" width="800" height="450" title="Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ! 3 » cinishodha.com" srcset="https://www.cinishodha.com/wp-content/uploads/2026/03/FotoJet-57-3.webp 800w, https://www.cinishodha.com/wp-content/uploads/2026/03/FotoJet-57-3-512x288.webp 512w, https://www.cinishodha.com/wp-content/uploads/2026/03/FotoJet-57-3-768x432.webp 768w, https://www.cinishodha.com/wp-content/uploads/2026/03/FotoJet-57-3-150x84.webp 150w, https://www.cinishodha.com/wp-content/uploads/2026/03/FotoJet-57-3-450x253.webp 450w" sizes="(max-width: 800px) 100vw, 800px" /><span style="font-size: 20px;">ಆದರೆ, ಈ ಬಾರಿ ಮಾತ್ರ ಕೋರ್ಟ್ ಕಡೆಯಿಂದ ದರ್ಶನ್‌ಗೆ ತುಸು ನಿರಾಳವಾಗುವಂಥಾ ತೀರ್ಪು ಸಿಕ್ಕಿದೆ. <a href="https://www.cinishodha.com/darshan-bail-cancelled-14-08-2025/">ರೇಣುಕಾಸ್ವಾಮಿ</a> ಕೊಲೆ ಕೇಸಿನಲ್ಲಿ ಮೊದಲ ಬಾರಿ ಜೈಲು ಪಾಲಾಗಿದ್ದ ದರ್ಶನ್‌ಗೆ ಆ ಅನುಭವ ಚೇತೋಹಾರಿಯಾಗಿತ್ತು. ಪಕ್ಕದ ಸೆಲ್ಲಿನಲ್ಲಿಯೇ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಇದ್ದ. ಮತ್ತೋರ್ವ ರೌಡಿ ಸೈಕಲ್ಲು ತನ್ನ ಶಿಷ್ಯ ಬೇಕರಿ ರಘುವನ್ನು ದಾಸನ ಪರಿಚಾರಿಕೆಗೆಂದೇ ಪರಪ್ಪನ ಅಗ್ರಹಾರಕ್ಕೆ ಅಂದರ್ ಆಗಿಸಿದ್ದ. ಸಿಗರೇಟು, ಎಣ್ಣೆ, ಪವಡಿಸಲು ಹಾಯೆನಿಸೋ ಪಲ್ಲಂಗವೂ ಸೇರಿದಂತೆ ಎಲ್ಲವೂ ಚೆನ್ನಾಗಿತ್ತು. ಆದರೆ, ಎರಡನೇ ಬಾರಿ ಬೇಲ್ ಕ್ಯಾನ್ಸಲ್ ಆಗಿ ಜೈಲು ಪಾಲಾದ ನಂತರ ದರ್ಶನ್‌ಗೆ ಪ್ರತೀ ದಿನವೂ ನರಕ ದರ್ಶನ ಮಾಡಿಸಲಾರಂಭಿಸಿದೆ.</span></p>
<p style="text-align: justify;"><img decoding="async" class="alignnone wp-image-11961 size-full" src="https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg.webp?_t=1773763893" alt="df388620 2f99 11ef 9552 ddad3d31dcba.jpg" width="1024" height="576" title="Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ! 4 » cinishodha.com" srcset="https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg.webp 1024w, https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg-512x288.webp 512w, https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg-768x432.webp 768w, https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg-150x84.webp 150w, https://www.cinishodha.com/wp-content/uploads/2026/03/df388620-2f99-11ef-9552-ddad3d31dcba.jpg-450x253.webp 450w" sizes="(max-width: 1024px) 100vw, 1024px" /><span style="font-size: 20px;">ದರ್ಶನ್ ಸದಾ ತನ್ನ ಬಳಗದೊಂದಿಗೆ ಬೆರೆತು ಬದುಕುತ್ತಿದ್ದಾತ. ಅದೇನೇ ಮೆರೆದಾಟಗಳಿದ್ದರೂ ಕುಟುಂಬ ಮತ್ತು ಸ್ನೇಹ ವಲಯವನ್ನು ಬಿಟ್ಟಿರುತ್ತಿರಲಿಲ್ಲ. ಈ ವಲಯವನ್ನು ಎಣ್ಣೆಯಷ್ಟೇ ಉತ್ಕಟವಾಗಿ ಹಚ್ಚಿಕೊಂಡಿದ್ದ ದಾಸನಿಗೆ ಕುಟುಂಬಸ್ಥರನ್ನು, ಸ್ನೇಹಿತರನ್ನು ಭೇಟಿಯಾಗಬೇಕೆನ್ನಿಸುತ್ತಿದ್ದದ್ದು ಸಹಜ. ಆದರೆ, ಕಟ್ಟುನಿಟ್ಟಾದ ಪಹರೆ ಅದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ಈ ಸಂಬಂಧವಾಗಿ ದರ್ಶನ್ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಕೊಡುವಂತೆ ಕೋರಿ ಅರ್ಜಿ ಸಿಲ್ಲಿಸಿದ್ದರು. ಇದರ ಬಗ್ಗೆ ವಿಚಾರಣೆ ನಡೆಸಿದ ಐವತ್ತೇಳನೇ ಸೆಷನ್ಸ್ ಕೋರ್ಟ್ ದರ್ಶನ್ ಮನವಿಯನ್ನು ಪುರಸ್ಕರಿಸಿ, ಕೆಲ ನಿಯಮಗಳ ಪ್ರಕಾರವಾಗಿ ಕುಟುಂಬಸ್ಥರು ಮತ್ತು ಸ್ನೇಹಿತರ ಭೇಟಿಗೆ ಅವಕಾಶ ಮಾಡಿ ಕೊಟ್ಟಿದೆ. ಇದು ದರ್ಶನ್ ಪಾಲಿಗೆ ನಿಜಕ್ಕೂ ನಿರಾಳವಾಗುವಂಥಾ ತೀರ್ಪೆಂಬುದರಲ್ಲಿ ಯಾವ ಸಂದೇಹವೂ ಇಲ್ಲ!</span></p>
<p>keywords: darshan thoogudeepa, renukaswamy murder case, brutal murder, sandalwood</p>
<p>&nbsp;</p>
<p>The post <a rel="nofollow" href="https://www.cinishodha.com/big-relief-for-darshan-17-03-2026/">Big Relief For Darshan: ಸರಳ ಹಿಂದಿರೋ ದಾಸನಿಗೀಗ ನಿರಾಳ ಭಾವ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?</title>
		<link>https://www.cinishodha.com/darshan-photo-leak-case-17-08-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sun, 17 Aug 2025 05:36:33 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#challengingstar]]></category>
		<category><![CDATA[#darshanthoogudeepa]]></category>
		<category><![CDATA[#renukaswamymurder]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[darshanphoto]]></category>
		<category><![CDATA[govtofkarnataka]]></category>
		<category><![CDATA[gparameshwar]]></category>
		<category><![CDATA[hafthamafia]]></category>
		<category><![CDATA[ipsbdayanand]]></category>
		<category><![CDATA[ipsmalinikrishnamurthy]]></category>
		<category><![CDATA[ksuresh]]></category>
		<category><![CDATA[malinikrishnamurthy]]></category>
		<category><![CDATA[mudrdercase]]></category>
		<category><![CDATA[parappanaagrahara]]></category>
		<category><![CDATA[pavithragowa]]></category>
		<category><![CDATA[photoleak]]></category>
		<category><![CDATA[underworldmafiya]]></category>
		<category><![CDATA[wilsongardennaga]]></category>
		<guid isPermaLink="false">https://www.cinishodha.com/?p=10254</guid>

					<description><![CDATA[<p>ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ `ಶೋಧ ನ್ಯೂಸ್&#8217; ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದ. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದ. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಇದೆಲ್ಲದರ ಮೇಲೆ [...]</p>
<p>The post <a rel="nofollow" href="https://www.cinishodha.com/darshan-photo-leak-case-17-08-2025/">darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<blockquote class="modern-quote full">
<p style="text-align: justify;"><span style="color: #000000;"><cite><strong><span style="font-size: 14pt;">ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ `ಶೋಧ ನ್ಯೂಸ್&#8217; ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದ. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದ. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಇದೆಲ್ಲದರ ಮೇಲೆ ಈ ಹಿಂದೆ ಬಂಧೀಖಾನೆ ಮುಖ್ಯಸ್ಥೆಯಾಗಿದ್ದ ಮಾಲಿನಿ ಕೃಷ್ಣಮೂರ್ತಿಯ ನೆರಳಿದೆ ಎಂಬ ಆರೋಪವೂ ಇದೆ. ಈಗ ಲೀಕಾಗಿರುವ ದರ್ಶನ್ ಫೋಟೋದ ಹಿಂದೆಯೂ ಪರಪ್ಪನ ಅಗ್ರಹಾರದೊಳಗಿನ ಕಡುಭ್ರಷ್ಟ ವಾತಾವರಣದ ಕೈವಾಡ ಇದ್ದೇ ಇದೆ. ಪರಿವರ್ತನೆಯ ತಾಣವಾದ ಜೈಲು ಫಟಿಂಗ ಅಧಿಕಾರಿಗಳ ಕೈಗೆ ಸಿಕ್ಕರೆ ಏನಾಗಬಹುದೋ ಅದೆಲ್ಲವಕ್ಕೂ ಪರಪ್ಪನ ಅಗ್ರಹಾರ ತಾಜಾ ಉದಾಹರಣೆಯಂತಾಗಿದೆ!</span></strong></cite></span></p>
<p style="text-align: justify;"><span style="color: #000000;"><cite><strong><span style="font-size: 14pt;">-ಸಂತೋಷ್ ಬಾಗಿಲಗದ್ದೆ</span></strong></cite></span></p>
</blockquote>
<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ರೇ</span></strong></span>ಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸಿಕ್ಕಿದ್ದ ಬೇಲ್ ರದ್ದಾಗಿದ್ದರಿಂದಾಗಿ ದರ್ಶನ್ ಪಟಾಲಮ್ಮು ಮತ್ತೆ ಜೈಲುಪಾಲಾಗಿದೆ. ಹಾಗೆ ದರ್ಶನ್ ಪರಪ್ಪನ ಅಗ್ರಹಾರ ಸೇರುತ್ತಲೇ ಮೀಡಿಯಾ ಮಂದಿ ಜೈಲಿನ ಹೊರ ಭಾಗದಲ್ಲಿ ಹದ್ದಿನಕಣ್ಣಿಟ್ಟು ಪಹರೆ ಕಾಯಲಾರಂಭಿಸಿದ್ದಾರೆ. ದರ್ಶನ್ ಕೆಮ್ಮಿದ್ದು, ಕ್ಯಾಕರಿಸಿದ್ದು, ಬೆಳಗ್ಗೆ ಉಪ್ಪಿಟ್ಟು ತಿಂದ ಸುದ್ದಿಗಳೆಲ್ಲ ಬಗ್ಗಡದಂತೆ ಜನಸಾಮಾನ್ಯರ ಮುಂದೆ ಗುಡ್ಡೆ ಬೀಳುತ್ತಿವೆ. ಇದೇ ಹೊತ್ತಿನಲ್ಲಿ ಏಕಾಏಕಿ ದರ್ಶನ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿದೆ. ಅದು ಯಾವೊಬ್ಬ ಸ್ಟಾರ್ ನಟನೂ ಕಾಣಿಸಿಕೊಳ್ಳಲು ಇಷ್ಟಪಡದ ರೀತಿಯಲ್ಲಿರೋ ದರ್ಶನ್ ಫೋಟೋ. ಅದನ್ನಿಟ್ಟುಕೊಂಡು ವಿರೋಧಿ ಪಾಳೆಯ ಕುಹಕವಾಡಲಾರಂಭಿಸಿದರೆ, ಅಭಿಮಾನಿ ಪಡೆ ದುಃಖದ ಮಡುವಿಗೆ ಬಿದ್ದಿದೆ. ಕೆಲ ಮಾಧ್ಯಮಗಳಲ್ಲಿ ಅದು ದರ್ಶನ್ ಜೈಲುಪಾಲಾದ ಘಳಿಗೆಯ ಫೋಟೋ ಅಂತೆಲ್ಲ ಸುದ್ದಿ ಬಿತ್ತರಿಸಲಾಗುತ್ತಿದೆ. ಆ ಫೋಟೋದ ಮೂಲ ಹುಡುಕುತ್ತಾ ಹೋದರೆ, ಪರಪ್ಪನ ಅಗ್ರಹಾರ ಜೈಲೊಳಗಿನ ಅರಾಜಕ ಸ್ಥಿತಿಯನ್ನು ಮತ್ತೊಮ್ಮೆ ಬಯಲಾಗುತ್ತದೆ!</span></p>
<p style="text-align: justify;"><span style="font-size: 14pt;"><strong>ಅದು ಗುಪ್ತ ಫೋಟೋ!</strong></span></p>
<p style="text-align: justify;"><img decoding="async" class="alignnone wp-image-10255" src="https://www.cinishodha.com/wp-content/uploads/2025/08/d2eefc62-5a5a-42b0-b889-a59db7359640-243x300.jpg" alt="d2eefc62 5a5a 42b0 b889 a59db7359640" width="1024" height="1265" title="darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್? 9 » cinishodha.com"><span style="font-size: 14pt;">ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ ಶೋಧ ನ್ಯೂಸ್ ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದರು. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದರು. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಈಗ ಲೀಕಾಗಿರುವ ದರ್ಶನ್ ಫೋಟೋದ ಹಿಂದೆಯೂ ಪರಪ್ಪನ ಅಗ್ರಹಾರದೊಳಗಿನ ಕಡುಭ್ರಷ್ಟ ವಾತಾವರಣದ ಕೈವಾಡ ಇದ್ದೇ ಇದೆ.</span><br />
<span style="font-size: 14pt;">ಸಾಮಾನ್ಯವಾಗಿ ಯಾವ ಹೀರೋಗಳೂ ಕೂಡಾ ಕಳೆಗುಂದಿದ ಫೋಟೋಗಳು ಪ್ರೇಕ್ಷಕರೆದುರು ತೆರೆದುಕೊಳ್ಳೋದನ್ನು ಸಹಿಸೋದಿಲ್ಲ. ದರ್ಶನ್ ವಿಗ್ ಬಳಸಿಕೊಂಡು ಮ್ಯಾನೇಜು ಮಾಡಿದ್ದರ ಹಿಂದೆಯೂ ಅದೇ ಫಾರ್ಮುಲಾವಿದೆ. ದರ್ಶನ್ ಇತ್ತೀಚೆಗಷ್ಟೇ ತಿರುಪತಿಯಲ್ಲಿ ಮುಡಿಕೊಟ್ಟು ಬಂದಿದ್ದ. ಅಷ್ಟರಲ್ಲಿಯೇ ಸುಪ್ರೀಂ ಕೋರ್ಟಿನಲ್ಲಿ ಬೇಲ್ ರದ್ದಾಗಿ ಆತ ಜೈಲುಪಾಲಾಗುವ ಸಂದರ್ಭ ಎದುರಾಗಿದೆ. ಹೀಗೆ ಹೊಸತಾಗಿ ಕೈದಿಗಳು ಸೇರ್ಪಡೆಗೊಳ್ಳುವಾಗ ಪರಪ್ಪನ ಅಗ್ರಹಾರದ ವೆಬ್ ಕ್ಯಾಮೆರಾದಲ್ಲಿ ಫೋಟೋ ಹಿಡಿದು, ಕಂಪ್ಯೂಟರಿನಲ್ಲಿ ದಾಖಲೆಯಾಗಿ ಇಡಲಾಗುತ್ತೆ. ಅದು ಗೌಪ್ಯವಾಗಿರಬೇಕೆಂಬ ನಿಯಮಾವಳಿ ಇದೆ. ಈಗ ವೈರಲ್ ಆಗಿರೋ ದರ್ಶನ್ ಫೋಟೋ ಅದೇ ರೀತಿ ಪರಪ್ಪನ ಅಗ್ರಹಾರದೊಳಗಿನ ವೆಬ್ ಕ್ಯಾಮ್‌ನಲ್ಲಿ ತೆಗೆದಿರುವುದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.</span><br />
<span style="font-size: 14pt;">ಹಾಗಾದರೆ, ಜೈಲಿನ ಕಡತದಲ್ಲಿರಬೇಕಾದ, ವೆಬ್ ಕ್ಯಾಮ್ ಸೆರೆ ಹಿಡಿದು ಗುಪ್ತವಾಗಿಡಬೇಕಾದ ಫೋಟೋ ಹೊರಬಂದಿದ್ದು ಹೇಗೆ? ಪರಪ್ಪನ ಅಗ್ರಹಾರದೊಳಗಿಂದ ದರ್ಶನ್ ಫೋಟೋವನ್ನು ಲೀಕ್ ಮಾಡಿದವರ್‍ಯಾರು? ಇಂಥಾ ಹತ್ತಾರು ಪ್ರಶ್ನೆಗಳು ಸಹಜವಾಗಿಯೇ ಮೂಡಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ತಲಾಶು ನಡೆಸಿದರೆ ಗುಮಾನಿಯೆಂಬುದು ಪರಪ್ಪನ ಅಗ್ರಹಾರದ ಮುಖ್ಯ ಜೈಲು ಅಧೀಕ್ಷಕ ಸುರೇಶ್ ಸುತ್ತ ಸುಳಿದಾಡುತ್ತದೆ. ಒಂದಿಡೀ ಜೈಲಿನ ದೇಖಾರೇಖಿಯನ್ನು ನೋಡಿಕೊಂಡು, ಎಲ್ಲ ವಿಧದಲ್ಲಿಯೂ ಗೌಪ್ಯತೆ ಕಾಪಾಡಿಕೊಳ್ಳಬೇಕಾದಾತ ಸುರೇಶ್. ಈತನ ನೆರಳಲ್ಲಿಯೇ ದರ್ಶನ್ ಫೋಟೋ ಲೀಕ್ ಆಗಿದೆಯೆಂದರೆ ನಾನಾ ದಿಕ್ಕಿನಲ್ಲಿ ಅನುಮಾನ ಮೂಡಿಕೊಳ್ಳೋದು ಸಹಜ. </span></p>
<p style="text-align: justify;"><strong><span style="font-size: 14pt;">ಮಾಲಿನಿ ಭಂಟ ಸುರೇಶ</span></strong></p>
<p style="text-align: justify;"><img loading="lazy" decoding="async" class="alignnone wp-image-10256" src="https://www.cinishodha.com/wp-content/uploads/2025/08/e63188ae-74af-4458-a490-25854c8505e9-181x300.jpg" alt="e63188ae 74af 4458 a490 25854c8505e9" width="1024" height="1697" title="darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್? 10 » cinishodha.com"><span style="font-size: 14pt;">ಅಷ್ಟಕ್ಕೂ ಸುರೇಶ್ ಹಿನ್ನೆಲೆ ಗಮನಿಸಿದರೆ ದರ್ಶನ್ ಫೋಟೋ ಲೀಕ್ ಪ್ರಕರಣದ ಸುತ್ತ ಹಬ್ಬಿಕೊಂಡಿರುವ ಅನುಮಾನಗಳು ಬಲಗೊಳ್ಳುತ್ತವೆ. ಈ ಹಿಂದೆ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದಾಗ ಆತನಿಗೆ ರಾಜಾತಿಥ್ಯ ನೀಡಿದ ಬಗ್ಗೆ ವಿವಾದವೆದ್ದಿತ್ತು. ದಾಸ ಜೈಲೊಳಗೆ ವಿಲ್ಸನ್ ಗಾರ್ಡನ್ ನಾಗನಂಥಾ ರೌಡಿ ಎಲಿಮೆಂಟುಗಳ ಜೊತೆ ಆರಾಮಾಗಿ ಧಮ್ಮು ಹೊಡೆಯುತ್ತಿದ್ದ ಫೋಟೋ ಲೀಕ್ ಆಯ್ತಲ್ಲಾ? ಅದು ಸರ್ಕಾರವನ್ನೇ ಮುಜುಗರಕ್ಕೀಡು ಮಾಡಿತ್ತು. ಅದೆಂಥಾ ಗಂಭೀರ ಆರೋಪಗಳಿದ್ದರೂ ಅಂಡಿನ ಕೆಳ ಹಾಕಿ ನಿರಾಳವಾಗಿ ಕೂರಬಲ್ಲ ಗೃಹಸಚಿವ ಪರಮೇಶ್ವರ್ ಕೂಡಾ ಇದರಿಂದಾಗಿ ಪೀಕಲಾಟಕ್ಕಿಟ್ಟುಕೊಂಡಿದ್ದರು. ವಿಶೇಷವೆಂದರೆ, ಆ ಪ್ರಕರಣದಲ್ಲಿ ಆ</span><span style="font-size: 14pt;">ಕಾಲಕ್ಕೆ ಬಂಧಿಖಾನೆಗಳ ಮುಖ್ಯಸ್ಥರಾಗಿದ್ದ ಐಪಿಎಸ್ ಮಾಲಿನಿ ಕೃಷ್ಣಮೂರ್ತಿಯವರ ಮೇಲೇ ನೇರವಾಗಿ ಆರೋಪ ಕೇಳಿ ಬಂದಿತ್ತು. ಸಹಾಯಕ ಅಧೀಕ್ಷಕರಾಗಿದ್ದ ಕರ್ಣ ಕ್ಷತ್ರಿಯ ಹಾಗೂ ಮಾಲಿನಿ ಕೃಷ್ಣಮೂರ್ತಿಯವರ ಸಹಾಯಕರಾಗಿದ್ದ ಕೆ. ಸುರೇಶ್ ಮೂಲಕ ದರ್ಶನ್ ಕಡೆಯಿಂದ ಎರಡು ಕೋಟಿ ಗುಂಜಿಕೊಂಡ ಘನ ಗಂಭೀರ ಆರೋಪ ಮಾಲಿನಿ ಕೃಷ್ಣಮೂರ್ತಿ ಅವರ ಮೇಲಿತ್ತು. ಈಗ ದರ್ಶನ್ ಬೇಲ್ ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ಮಾಲಿನಿ ಪ್ರಕರಣದ ಬಗ್ಗೆಯೂ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ಹಿಂದೆ ದರ್ಶನ್‌ಗೆ ರಾಜಾತಿಥ್ಯ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಐಪಿಎಸ್ ಅಧಿಕಾರಿ ಚಂದ್ರಗುಪ್ತರನ್ನು ತನಿಖೆ ನಡೆಸಲು ನೇಮಿಸಲಾಗಿತ್ತು. ಈ ತನಿಖೆಯಲ್ಲಿ ಒಟ್ಟು ಹದಿನೇಳು ಮಂದಿ ಜೈಲಾಧಿಕಾರಿಗಳ ವಿರುದ್ಧ ಎಲ್ಲ ಆರೋಪಗಳು ಸಾಬೀತಾಗಿದ್ದವು. ಅದರಲ್ಲಿ ಹನ್ನೊಂದು ಮಂದಿಯನ್ನು ಅಮಾನತುಗೊಳಿಸಲಾಗಿತ್ತು.</span><br />
<span style="font-size: 14pt;">ಆದರೆ, ಸಹಾಯ ಅಧೀಕ್ಷಕ ಕರ್ಣ ಕ್ಷತ್ರಿಯ ಹಾಗೂ ಈಗ ಮುಖ್ಯ ಅಧೀಕ್ಷಕರಾಗಿರುವ ಕೆ ಸುರೇಶ್ ಮಾಲಿನಿ ಕೃಷ್ಣಮೂರ್ತಿಯ ಕೃಪೆಯಿಂದ ಬಚಾವಾಗಿದ್ದಾರೆ. ಮತ್ತದೇ ಹಳೇ ದಂಧೆಗಳನ್ನು ಮುಂದುವರೆಸಿದ್ದಾರೆಂಬ ಆರೋಪಗಳಿದ್ದಾವೆ. ಇದೀಗ ದರ್ಶನ್ ಫೋಟೋ ಲೀಕ್ ಆಗುವ ಮೂಲಕ ಮುಖ್ಯ ಅಧೀಕ್ಷಕ ಸುರೇಶ ಅದೆಂಥಾ ಅಧಕ್ಷ ಅಧಿಕಾರಿ ಎಂಬ ವಿಚಾರ ನಿಖರವಾಗಿಯೇ ಸಾಬೀತಾಗಿದೆ. ಜೈಲೊಳಗಿಂದಲೇ ಫೋನ್ ಪೇ ಮೂಲಕ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿರೋ ಸುಳಿವುಗಳೂ ಸಿಕ್ಕಿವೆ. ಸಜಾಶ ಕೈದಿಗಳು ಜೈಲೊಳಗಿದ್ದುಕೊಂಡೇ ಮೊಬೈಲ್ ಮೂಲಕ ಧಮಕಿ ಹಾಕಿ ಹಪ್ತಾ ವಸೂಲಿ ಮಾಡುತ್ತಿರುವ ಕರಾಳ ದಂಧೆಯೂ ಬಯಲಾಗಿದೆ. ಈ ಬಗ್ಗೆ ಸಿಸಿಬಿಯಲ್ಲಿ ಎಫ್‌ಐಆರ್ ಆಗಿ ತನಿಖೆ ನಡೆಯುತ್ತಿದೆ. ಈ ದಂಧೆಗೆ ಅನುವು ಮಾಡಿಕೊಡುವ ಮೂಲಕ ಮುಖ್ಯ ಅಧೀಕ್ಷಕ ಸುರೇಶ ಮತ್ತು ಕರ್ಣ ಕೋಟ್ಯಾಂತರ ರೂಪಾಯಿ ಶೇರು ಪಡೆದಿರೋದು ಬೆಳಕಿಗೆ ಬಂದಿದೆಯಂತೆ! </span></p>
<p style="text-align: justify;"><strong><span style="font-size: 14pt;">2ಕೋಟಿ ಕೊಟ್ಟೆ ಅಂದ!</span></strong></p>
<p style="text-align: justify;"><img loading="lazy" decoding="async" class="alignnone wp-image-10257" src="https://www.cinishodha.com/wp-content/uploads/2025/08/malini-krishnamurthy-ips-300x196.jpg" alt="malini krishnamurthy ips" width="1024" height="669" title="darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್? 11 » cinishodha.com"><span style="font-size: 14pt;">ಸುಮ್ಮನೊಮ್ಮೆ ಆಲೋಚಿಸಿ ನೋಡಿ, ಈ ಹಿಂದೆ ದರ್ಶನ್ ಜೈಲು ಸೇರಿದಾಗಲೂ ಫೋಟೋ ಲೀಕ್ ಆಗಿತ್ತು. ಈಗಲೂ ಅದು ಮತ್ತೊಂದು ಅವತಾರದಲ್ಲಿ ಮುಂದುವರೆದಿದೆ. ಈ ಮೂಲಕವೇ ದರ್ಶನ್ ಕಡೆಯಿಂದ ಮತ್ತೊಂದಷ್ಟು ಕಾಸು ಗುಂಜಿಕೊಳ್ಳಲು ಪರಪ್ಪನ ಅಗ್ರಹಾರದೊಳಗಿನ ಶನಿಸಂತಾನಿಗರು ತಯಾರಾದಂತಿದೆ. ಈ ಹಿಂದೆ ಬಂಧಿಖಾನೆ ಮುಖ್ಯಸ್ಥೆಯಾಗಿದ್ದ, ಈಗ ನಿವೃತ್ತರಾಗಿರುವ ಮಾಲಿನಿ ಕೃಷ್ಣಮೂರ್ತಿ ತಾನು ಬಚಾವಾಗೋದಲ್ಲದೇ ಸುರೇಶ, ಕರ್ಣ ಸೇರಿದಂತೆ ಒಂದಷ್ಟು ಭ್ರಷ್ಟ ಅಧಿಕಾರಿಗಳನ್ನು ಕಾಪಾಡಿಕೊಂಡಿದ್ದಾರೆ. ಕಾನೂನು ಪ್ರಕಾರವೇ ಎಲ್ಲ ನಡೆದಿದ್ದರೆ, ದರ್ಶನ್‌ಗೆ ರಾಜಾತಿಥ್ಯ ಕೊಟ್ಟ ಕೇಸಲ್ಲಿ ಮಾಲಿನಿ ಮೇಲೆ ಕಾನೂನು ಕ್ರಮ ಜರುಗುತ್ತಿತ್ತು. ಆದರೆ ಅವರು ಈಗ ಸಚಿವ ಸ್ಥಾನ ಕಳೆದುಕೊಂಡಿರುವ ರಾಜಣ್ಣನ ಕಡೆಯಿಂದ ಬಚಾವಾಗಿ, ತನ್ನ ಕೂಟವನ್ನೂ ಸೇಫ್ ಆಗಿಸಿದ್ದಾರೆಂಬ ಆರೋಪಗಳಿದ್ದಾವೆ. </span><br />
<span style="font-size: 14pt;">ಚಂದ್ರಗುಪ್ತ ವರದಿಯಲ್ಲಿ ಉಲ್ಲೇಖವಾಗಿದ್ದ ಅಂಶಗಳು ಗಂಭೀರವಾಗಿದ್ದವು. ಅದರನ್ವಯ ಕ್ರಮ ಕೈಗೊಂಡಿದ್ದಿದ್ದರೆ ಆಗ ಬಂಧಿಖಾನೆ ಮುಖ್ಯಸ್ಥೆಯಾಗಿದ್ದ ಮಾಲಿನಿ ಕೃಷ್ಣಮೂರ್ತಿ ತನ್ನ ಭ್ರಷ್ಟ ಪಟಾಲಮ್ಮಿನ ಸಮೇತ ಅಮಾನತುಗೊಳ್ಳುತ್ತಿದ್ದರು. ಆದರೆ, ಆಕೆ ರಾಜಕೀಯ ಪ್ರಭಾವ ಬಳಸಿಕೊಂಡು ಚಂದ್ರಗುಪ್ತ ವರದಿಯನ್ನೇ ಪರಪ್ಪನ ಅಗ್ರಹಾರದಲ್ಲಿ ಬಂಧಿಸಿಟ್ಟಿದ್ದರು. ಆದರೀಗ ಮಾಲಿನಿ, ಕರ್ಣ, ಸುರೇಶ ಸೇರಿದಂತೆ ಪರಪ್ಪನ ಅಗ್ರಹಾರದೊಳಗಿರುವ ಸಮಸ್ತ ಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಯಾಕೆಂದರೆ, ದರ್ಶನ್ ಬೇಲ್ ಕ್ಯಾನ್ಸಲ್ ಮಾಡಿ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್ ಪರಪ್ಪನ ಅಗ್ರಹಾರದ ಲಂಚಬಾಕ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದೆ. ಕಳೆದ ಬಾರಿ ದರ್ಶನ್ ರೌಡಿ ಪಟಾಲಮ್ಮಿನ ಜೊತೆಗಿರೋ ಫೋಟೋ ಲೀಕ್ ಆದಾದ ಗೃಹಸಚಿವ ಪರಮೇಶ್ವರ್ ಜೈಲಿಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ದರ್ಶನ್ ಪರಮ್ ಮುಂದೆಯೇ ಭಯಾನಕ ಸತ್ಯವೊಂದನ್ನು ಒದರಿದ್ದ. ಕರ್ಣ ಕ್ಷತ್ರಿಯ ಮತ್ತು ಈಗ ಮುಖ್ಯ ಜೈಲಾಧಿಕಾರಿಯಾಗಿರೋ ಕೆ ಸುರೇಶ್ ಮೂಲಕ ಮಾಲಿನಿ ಕೃಷ್ಣಮೂರ್ತಿ ತನ್ನಿಂದ ಎರಡು ಕೋಟಿ ಪಡೆದುಕೊಂಡಿದ್ದಾರೆಂಬುದು ದರ್ಶನ್ ಬಿಚ್ಚಿಟ್ಟ ಸತ್ಯದ ಸಾರಾಂಶವಾಗಿತ್ತು! </span></p>
<p style="text-align: justify;"><span style="font-size: 14pt;"><strong>ದಯಾನಂದ್ ಅವರ ಆವಗಾಹನೆಗೆ&#8230;</strong></span></p>
<p style="text-align: justify;"><span style="font-size: 14pt;"><img loading="lazy" decoding="async" class="alignnone wp-image-10258" src="https://www.cinishodha.com/wp-content/uploads/2025/08/b-dayananda-commissioner-bengaluru_1742483461-300x225.webp" alt="b dayananda commissioner bengaluru 1742483461" width="1024" height="768" title="darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್? 12 » cinishodha.com">ಈಗ ಬಂಧಿಖಾನೆ ಮುಖ್ಯಸ್ಥರಾಗಿ ಖಡಕ್ ಅಧಿಕಾರಿಯಾಗಿ ಹೆಸರು ಮಾಡಿರುವ ದಯಾನಂದ್ ಅವರು ಬಂದಿದ್ದಾರೆ. ಕಾರ್ಯನಿರ್ವಹಿಸಿದ ಜಾಗಗಳಲ್ಲೆಲ್ಲ ಅತ್ಯಂತ ಕಟ್ಟುನಿಟ್ಟಾಗಿ, ಯಾರ ಮುಲಾಜಿಗೂ ಬಗ್ಗೆದೆ ನಡೆದುಕೊಳ್ಳುವ ಮೂಲಕ ದಯಾನಂದ್ ಅವರು ಹೆಸರಾಗಿದ್ದಾರೆ. ಇಂಥಾ ಅಧಿಕಾರಿಯ ಸುಪರ್ಧಿಗೀಗ ಪರಪ್ಪನ ಅಗ್ರಹಾರವೂ ಸಿಕ್ಕಿದೆ. ಈ ಕಾರಣದಿಂದಲೇ ಈ ಹಿಂದೆ ಮಾಲಿನಿ ಕೃಷ್ಣಮೂರ್ತಿ ದರ್ಭಾರಿನಲ್ಲಿ ಮಲಿನಗೊಂಡಿದ್ದ ಪರಪ್ಪನ ಅಗ್ರಹಾರವನ್ನು ಕ್ಲೀನ್ ಮಾಡುತ್ತಾರೆಂಬ ನಂಬಿಕೆಯೂ ಮೂಡಿಕೊಂಡಿದೆ. ಈ ಸುರೇಶ ಮತ್ತು ಕರ್ಣ ಮಾಲಿನಿಯ ಮಾಲಿನ್ಯದ ತುಣುಕುಗಳೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮೊದಲು ಸುರೇಶ ಮತ್ತು ಕರ್ಣನ ಅಂದಾದುಂದಿಗಳ ಬಗ್ಗೆ ದಯಾನಂದ್ ಅವರು ಗಮನಹರಿಸಬೇಕಿದೆ.<br />
ಈ ಹಿಂದೆ ಚಂದ್ರಗುಪ್ತ ವರದಿಯಲ್ಲಿ ಈ ಸುರೇಶ ಮತ್ತು ಕರ್ಣ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಅದರಂದ ಬಾಚಾವಾಗಿದ್ದ ಆತನಿಗೆ ಮತ್ತೆ ಕಂಟಕ ಶುರುವಾಗಿದೆ. ಒಂದು ಮೂಲದ ಪ್ರಕಾರ ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶೀಘ್ರದಲ್ಲಿಯೇ ಚಂದ್ರಗುಪ್ತ ವರದಿಯನ್ನು ಸಲ್ಲಿಸಲಿದ್ದಾರೆ. ಹಾಗಾದೇಟಿಗೆ ಸುರೇಶ ತನ್ನ ಪಟಾಲಮ್ಮಿನ ತಮೇತ ಅಮಾನತ್ತಾಗಿ ತೊಲಗೋದು ಗ್ಯಾರೆಂಟಿ. ಅದರ ಬೆನ್ನಲ್ಲಿಯೇ ನಿವೃತ್ತರಾಗಿರುವ ಮಾಲಿನಿಯತ್ತಲೂ ತನಿಖೆಯ ಗಮನ ಹೊರಳಿಕೊಳ್ಳಲಿದೆ. ಮಾಲಿನಿಯ ಬಂಟ ಸುರೇಶ ದರ್ಶನ್ ವಿರೋಧಿ ಪಾಳೆಯದಿಂದ ಕಾಸು ಗುಂಜಿಕೊಂಡೇ ದರ್ಶನ್ ಫೋಟೋ ಲೀಕ್ ಮಾಡಿದ್ದಾರೆಂಬ ಆರೋಪವೂ ಹರಿದಾಡುತ್ತಿದೆ.<br />
ಹಾಗಾದರೆ, ದರ್ಶನ್ ಫೋಟೋ ಲೀಕ್ ಮಾಡೋದರಿಂದ ವಿರೋಧಿ ಪಾಳೆಯಕ್ಕಾಗುವ ಲಾಭವೇನು ಅಂತೊಂದು ಪ್ರಶ್ನೆ ಸಹಜ. ಸಾಮಾನ್ಯವಾಗಿ ಯಾವ ಹೀರೋಗಳೂ ಕೂಡಾ ಹೀಗೆ ಕಳೆಗುಂದಿದ, ತಲೆ ಕೂದಲಿಲ್ಲದ, ದೈಹಿಕವಾಗಿ ಕುಗ್ಗಿದ ಫೋಟೋಗಳು ಅಭಿಮಾನಿಗಳನ್ನು ತಲುಪೋದನ್ನು ಇಷ್ಟಪಡೋದಿಲ್ಲ. ದರ್ಶನ್ ಒಂದು ಕಾಲದಲ್ಲಿ ಕಂಡೋರನ್ನೆಲ್ಲ ದುರಹಂಕಾರದಿಂದ ಎದುರು ಹಾಕಿಕೊಂಡಿದ್ದನಲ್ಲಾ? ಆ ಕುದಿತ ಹೊಂದಿರೋ ಮಂದಿಯೇ ಈ ಫೋಟೋ ಲೀಕ್ ಹಿಂದಿರಬಹುದು. ಈ ಮೂಲಕ ಮೆರೆದಾಡುತ್ತಿದ್ದ ಅಭಿಮಾನಿಗಳನ್ನು ಉರಿಸುವ ಉದ್ದೇಶವೂ ಇದ್ದಿರಬಹುದು. ಅದನ್ನು ಜೈಲಾಧಿಕಾರಿ ಸುರೇಶ ಕಾಸಾಗಿ ಪಳಗಿಸಿಕೊಂಡಿದ್ದಾರೆಂಬ ಸಂಶಯವೇ ದಟ್ಟವಾಗಿದೆ. ಖಡಕ್ ಅಧಿಕಾರಿ ದಯಾನಂದ್ ಅವರು ಮೊದಲು ಪರಪ್ಪನ ಅಗ್ರಹಾರದೊಳಗಿರೋ ಸುರೇಶನಂಥಾ ಮಾಲಿನಿಯ ಚೇಲಾ ಪಡೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆರಂಭಿಕವಾಗಿ ಸುರೇಶನಂಥ ಅಧಿಕಾರಿ ವರ್ಗವನ್ನು ಅಮಾನತುಗೊಳಿಸಿದರೆ ಪರಪ್ಪನ ಅಗ್ರಹಾರ ತಾನಾಗಿಯೇ ಶುಚಿಯಾಗುತ್ತದೆ. ಈಗ ದರ್ಶನ್ ಫೋಟೋ ಲೀಕ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಚೀಫ್ ಸೂಪರಿಟೆಂಡೆಂಟ್ ಸುರೇಶ ಮನೆ ಸೇರಿಕೊಳ್ಳುವ ಕ್ಷಣಗಳೂ ಹತ್ತಿರಾಗುತ್ತಿವೆ!<br />
</span></p>
<p>The post <a rel="nofollow" href="https://www.cinishodha.com/darshan-photo-leak-case-17-08-2025/">darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ!</title>
		<link>https://www.cinishodha.com/pavithra-gowda-14-08-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Thu, 14 Aug 2025 16:02:24 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#actress]]></category>
		<category><![CDATA[#darshanthoogudeepa]]></category>
		<category><![CDATA[#murdercase]]></category>
		<category><![CDATA[#pavithragowda]]></category>
		<category><![CDATA[arrested]]></category>
		<category><![CDATA[crime]]></category>
		<category><![CDATA[darshanpavithra]]></category>
		<category><![CDATA[renukaswamy]]></category>
		<category><![CDATA[sandalwood]]></category>
		<guid isPermaLink="false">https://www.cinishodha.com/?p=10220</guid>

					<description><![CDATA[<p>ದರ್ಶನ್ ಪಟಾಮ್ಮು ಪವಿತ್ರಾ ಗೌಡಾಳ ಸಮೇತ ಜೈಲುಪಾಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವೆಂಬುದು ಈ ಗ್ಯಾಂಗನ್ನು ಬಿಟ್ಟೂ ಬಿಡದಂತೆ ಕಾಡಿಸಿ, ಜೀವಾವಧಿ ಶಿಕ್ಷೆಯಾದೀತೇನೋ ಎಂಬಂಥಾ ಭಯವನ್ನೂ ತುಂಬಿದಂತಿದೆ. ಹೀಗೆ ದರ್ಶನ್ ಮತ್ತೆ ಕಂಬಿ ಹಿಂದೆ ಸರಿಯುತ್ತಲೇ ಆತನ ಅಭಿಮಾನಿಗಳು ಮಾತ್ರವಲ್ಲದೇ, ಓರ್ವ ನಟನಾಗಿ ಆತನನ್ನು ಮೆಚ್ಚಿಕೊಳ್ಳುವವರ ಸಿಟ್ಟೆಲ್ಲವೂ ಪವಿತ್ರಾಳತ್ತ ಹೊರಳಿಕೊಂಡಿದೆ. ಅಭಿಮಾನಿಗಳ ಮಾತು ಒತ್ತಟ್ಟಿಗಿರಲಿ; ಖುದ್ದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಒಟ್ಟಾರೆ ಅನಾಹುತಕ್ಕೆ ಮೂಲ ಕಾರಣ ಪವಿತ್ರಾ ಎಂಬ ಮಾತನ್ನಾಡಿದ್ದರು. ಅತ್ತ ರೇಣುಕಾಸ್ವಾಮಿಯ ಜೀವ ಹೋಗಿದೆ. ಇತ್ತ ಸೂಪರ್ [...]</p>
<p>The post <a rel="nofollow" href="https://www.cinishodha.com/pavithra-gowda-14-08-2025/">pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><strong><span style="color: #00ccff;"><span style="font-size: 18pt;">ದ</span></span></strong>ರ್ಶನ್ ಪಟಾಮ್ಮು ಪವಿತ್ರಾ ಗೌಡಾಳ ಸಮೇತ ಜೈಲುಪಾಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವೆಂಬುದು ಈ ಗ್ಯಾಂಗನ್ನು ಬಿಟ್ಟೂ ಬಿಡದಂತೆ ಕಾಡಿಸಿ, ಜೀವಾವಧಿ ಶಿಕ್ಷೆಯಾದೀತೇನೋ ಎಂಬಂಥಾ ಭಯವನ್ನೂ ತುಂಬಿದಂತಿದೆ. ಹೀಗೆ ದರ್ಶನ್ ಮತ್ತೆ ಕಂಬಿ ಹಿಂದೆ ಸರಿಯುತ್ತಲೇ ಆತನ ಅಭಿಮಾನಿಗಳು ಮಾತ್ರವಲ್ಲದೇ, ಓರ್ವ ನಟನಾಗಿ ಆತನನ್ನು ಮೆಚ್ಚಿಕೊಳ್ಳುವವರ ಸಿಟ್ಟೆಲ್ಲವೂ ಪವಿತ್ರಾಳತ್ತ ಹೊರಳಿಕೊಂಡಿದೆ. ಅಭಿಮಾನಿಗಳ ಮಾತು ಒತ್ತಟ್ಟಿಗಿರಲಿ; ಖುದ್ದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಒಟ್ಟಾರೆ ಅನಾಹುತಕ್ಕೆ ಮೂಲ ಕಾರಣ ಪವಿತ್ರಾ ಎಂಬ ಮಾತನ್ನಾಡಿದ್ದರು. ಅತ್ತ ರೇಣುಕಾಸ್ವಾಮಿಯ ಜೀವ ಹೋಗಿದೆ. ಇತ್ತ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದ ದರ್ಶನ್ ವೃತ್ತಿಬದುಕೇ ಅಡಕತ್ತರಿಗೆ ಸಿಲುಕಿದೆ. ಇನ್ನೊಂದಷ್ಟು ಹುಡುಗರ ಬದುಕೂ ಹಾಳಾಗಿದೆ. ಆದರೆ, ಅದಕ್ಕೆಲ್ಲ ಕಾರಣನಾದೆನಲ್ಲಾ ಎಂಬಂಥಾ ಪಶ್ಚಾತ್ತಾಪದ ಚೂರು ಪಸೆಯೂ ಪವಿತ್ರಾಳ ಮುಖದಲ್ಲಿ ಕಾಣಿಸಿಲ್ಲ!</span></p>
<p style="text-align: justify;"><img loading="lazy" decoding="async" class="alignnone wp-image-10221" src="https://www.cinishodha.com/wp-content/uploads/2025/08/Sarees-are-the-pride-of-every-Indian-woman-Outfit-@redcarpetstudio777-redcarpetstudio777-explo-240x300.jpg" alt="Sarees are the pride of every Indian woman Outfit @redcarpetstudio777 redcarpetstudio777 explo" width="1024" height="1280" title="pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ! 15 » cinishodha.com"><span style="font-size: 14pt;">ಅದೆಂಥಾ ದುಷ್ಟರೇ ಆಗಿದ್ದರೂ ಇಂಥಾ ಅನಾಹುತದ ಪರಿಣಾಮವೊಂದರ ಅಂಚಿನಲ್ಲಿ ನಿಂತಾದ ಪಶ್ಚಾತ್ತಾಪದಿಂದ ಮನಸು ಮುರುಟುತ್ತೆ. ಆದರೆ, ಈ ಪವಿತ್ರಾ ಗೌಡಳ ಮನಸಲ್ಲಿ ಅಂಥಾ ಮನುಷ್ಯತ್ವಕ್ಕೆ ಒಂದಿನಿತೂ ಜಾಗವಿದ್ದಂತಿಲ್ಲ. ಆರಂಭದಲ್ಲಿ ಜೈಲಿಗೆ ಹೋದಲ್ಲಿಂದ ಹಿಡಿದು, ಇದೀಗ ಮತ್ತೆ ಜೈಲುಪಾಲಾಗುವವರೆಗೂ ಈಕೆಯ ದುರಹಂಕಾರ ತುಸುವೂ ತಗ್ಗಿದಂತಿಲ್ಲ. ಅದೇನೋ ಸಾಧಿಸಿದವಳಂತೆ ಮೆರೆಯುತ್ತಾ ಬಂದಿರುವ ಈಕೆಗೆ ಬೇಲ್ ಮೇಲೆ ಹೊರ ಬಂದ ನಂತರದ ಶೋಕಿಗಳೇ ಮುಳುವಾಗಿವೆ. ಅದಕ್ಕೆ ಸರಿಯಾಗಿ ದರ್ಶನ್ ಕೂಡಾ ಒಳಗಿಂದೊಳಗೇ ಅಂಥಾ ಒಂದಷ್ಟು ಯಡವಟ್ಟು ಮಾಡಿಕೊಂಡಿದ್ದನಲ್ಲಾ? ಎಲ್ಲವೂ ಸೇರಿ ಇಡೀ ಪಟಾಲಮ್ಮೇ ಜೈಲುಪಾಲಾಗಿದೆ.</span></p>

<p style="text-align: justify;">
<span style="font-size: 14pt;">ಪವಿತ್ರಾ ಗೌಡ ಅದೆಂಥಾ ಅವಿವೇಕಿ ಎಂದರೆ, ಬೇಲ್ ಮೂಲಕ ಹೊರ ಬಂದವಳೇ ಮಾವನ ಮನೆಯಿಂದ ವಾಪಾಸಾದಷ್ಟೇ ನಿರಾಳವಾಗಿ ಬದುಕಲಾರಂಭಿಸಿದ್ದಳು. ಆಕೆಗೆ ಇನ್ನು ಜೈಲಿಗೆ ಹೋಗೋದಿಲ್ಲ ಎಂಬಂಥಾ ನಂಬಿಕೆಯಿತ್ತಾ? ಅದು ಇಷ್ಟು ವರ್ಷಗಳ ಕಾಲ ಬದುಕಿದ ಭಂಡ ಬಾಳು ಕರುಣಿಸಿದ ಸ್ವಭಾವವಾ ಗೊತ್ತಿಲ್ಲ. ಪವಿತ್ರಾ ಮತ್ತೆ ತನ್ನ ಉದ್ಯಮಕ್ಕೆ ಮರಳಿದಂತೆ ಪೋಸು ಕೊಡಲಾರಂಭಿಸಿದ್ದಳು. ಲಕಲಕಿಸುತ್ತಾ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಅಹಮ್ಮಿಕೆ ಪ್ರದರ್ಶಿಸಿದ್ದಳು. ತಪ್ಪೆಸಗಿದವರಿಗೆ ಇಷ್ಟರ ಮಟ್ಟಿಗೆ ತಿಮಿರಿರೋದನ್ನು ನ್ಯಾಯ ವ್ಯವಸ್ಥೆ ಗಮನಿಸದಿರಲು ಸಾಧ್ಯವೇ? ಈವತ್ತಿಗೆ ದರ್ಶನ್ ಮತ್ತೆ ಜೈಲು ಸೇರಿರೋದರ ಹಿಂದೆ ಇಂಥಾ ಅನೇಕ ಸೂಕ್ಷ್ಮಗಳಿದ್ದಾವೆ. ಸರ್ಕಾರದ ಪರ ವಕೀಲರಿಗೆ ವಾದಿಸಲು ಬೇಕಾದ ಅಷ್ಟೂ ಸರಕುಗಳನ್ನು ಪವಿತ್ರಾಳೇ ಖುದ್ದಾಗಿ ಸೃಷ್ಟಿಸಿ ಕೊಟ್ಟಂತಾಗಿದೆ!</span></p>
<p style="text-align: justify;"><img loading="lazy" decoding="async" class="alignnone wp-image-10223" src="https://www.cinishodha.com/wp-content/uploads/2025/08/GZ3WGC1XoAEOJqL-1-300x169.jpg" alt="GZ3WGC1XoAEOJqL 1" width="1024" height="576" title="pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ! 16 » cinishodha.com"><span style="font-size: 14pt;">ಯಾರು ಏನಾದರೂ ಅಂದುಕೊಳ್ಳಲಿ, ಯಾರ ಬದುಕಾದರೂ ಹಡಾಲೇದ್ದು ಹೋಗಲಿ; ತಾನು ಮಾತ್ರ ಹೈಫೈ ಬದುಕು ನಡೆಸಬೇಕೆಂಬ ಮನಃಸ್ಥಿತಿ ಪವಿತ್ರಾಳದ್ದು. ಆಕೆ ಜೀವದಂತೆ ಹಚ್ಚಿಕೊಂಡು ಪ್ರೀತಿಸಿ ಮದುವೆಯಾಗಿದ್ದ ಪತಿಯೇ ಕೈಯೆತ್ತಿದ್ದರ ಹಿಂದೆಯೂ ಅಂಥಾ ಮನಃಸ್ಥಿತಿಯ ಕಿಸುರಿದೆ. ದರ್ಶನ್ ಥರದ ಆನೆಯನ್ನು ನಾಜೂಕಾಗಿ ಪಳಗಿಸಿಕೊಂಡು, ಆತನ ಮನದನ್ನೆಯಾಗಿದ್ದರ ಹಿಂದೆಯೂ ಹೈಫೈ ಬದುಕಿನ ಆಕಾಂಕ್ಷೆಯೇ ಪ್ರಧಾನವಾಗಿರುವಂತೆ ಕಾಣಿಸುತ್ತದೆ. ದುರಂತವೆಂದರೆ ಮದವೇರಿ ತೊನೆಯುತ್ತಿದ್ದ ದಾಸನಿಗೆ ಇಂಥಾ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವ ಮನಃಸ್ಥಿತಿ ಇರಲಿಲ್ಲ. ಬಹುಶಃ ತನಗೆ ಆಶ್ಲೀಲವಾಗಿ ಮೆಸೇಜು ಬಿಟ್ಟವನ ಹನನ ಮಾಡಿದ ಶಕ್ತಿ ತಾನೆಂಬ ಭ್ರಮೆ ಪವಿತ್ರಾಗಿದ್ದರೂ ಇದ್ದೀತು. ಹಾಗೊಂದು ವೇಳೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮ ಎಸೇಜು ಬಿಡುವವರನ್ನೆಲ್ಲ ಕೊಂದು ಕೆಡವಿದರೆ, ಬೀಳೋ ಹೆಣಗಳ ರಾಶಿಯಲ್ಲಿ ದರ್ಶನ್ ವೀರಾಭಿಮಾನಿಗಳದ್ದೇ ಮೆಜಾರಿಟಿ ಇರುತ್ತೆ. ಒಟ್ಟಾರೆಯಾಗಿ ಪವಿತ್ರಾಳ ಮೋಹದ ಬಲೆಗೆ ಸಿಕ್ಕ ದರ್ಶನ್ ಬಂಧಿಯಾಗಿದ್ದಾನೆ. ಓರ್ವ ಸ್ಟಾರ್ ನಟನಾಗಿ ಆತನ ಘನತೆ, ಗೌರವಗಳು ಅಕ್ಷರಶಃ ಮಣ್ಣುಪಾಲಾಗಿ ಬಿಟ್ಟಿವೆ!</span></p>
<p>The post <a rel="nofollow" href="https://www.cinishodha.com/pavithra-gowda-14-08-2025/">pavithra gowda: ಹೈಫೈ ಬದುಕಿನಾಸೆಗೆ ಆನೆಯನ್ನೇ ಪಳಗಿಸಿದ್ದಳು ಪವಿತ್ರಾ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		<enclosure url="https://www.cinishodha.com/wp-content/uploads/2025/08/We-are-excited-to-announce-that-REDCARPET-Studio777-is-launching-online-shopping-very-soon-The-1-1.mp4" length="1506368" type="video/mp4" />

			</item>
		<item>
		<title>darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</title>
		<link>https://www.cinishodha.com/darshan-bail-cancelled-14-08-2025/</link>
		
		<dc:creator><![CDATA[Santhosh Bagilagadde]]></dc:creator>
		<pubDate>Thu, 14 Aug 2025 09:17:45 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#challengingstar]]></category>
		<category><![CDATA[#darshanthoogudeepa]]></category>
		<category><![CDATA[#dboss]]></category>
		<category><![CDATA[#murdercase]]></category>
		<category><![CDATA[#pavithragowda]]></category>
		<category><![CDATA[#renukaswamymurdercase]]></category>
		<category><![CDATA[bailcancelled]]></category>
		<category><![CDATA[brutalmurders]]></category>
		<category><![CDATA[crime]]></category>
		<category><![CDATA[darshan]]></category>
		<category><![CDATA[sandalwood]]></category>
		<category><![CDATA[supremecourtjudgements]]></category>
		<category><![CDATA[supremecourtorder]]></category>
		<category><![CDATA[vijayalaxmi]]></category>
		<guid isPermaLink="false">https://www.cinishodha.com/?p=10207</guid>

					<description><![CDATA[<p>ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ [...]</p>
<p>The post <a rel="nofollow" href="https://www.cinishodha.com/darshan-bail-cancelled-14-08-2025/">darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 14pt;"><span style="color: #00ccff;"><strong><span style="font-size: 18pt;">ರೇ</span></strong></span>ಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ ನಡೆದುಕೊಂಡ ಜೈಲಾಧಿಕಾರಿಗಳಿಗೂ ಶಾಕ್ ಕೊಟ್ಟಿದೆ.</span></p>
<p style="text-align: justify;"><img loading="lazy" decoding="async" class="alignnone wp-image-10208" src="https://www.cinishodha.com/wp-content/uploads/2025/08/df388620-2f99-11ef-9552-ddad3d31dcba.jpg-300x169.webp" alt="df388620 2f99 11ef 9552 ddad3d31dcba.jpg" width="1024" height="576" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 21 » cinishodha.com"><span style="font-size: 14pt;">ಅವಳ್ಯಾರೋ ಪವಿತ್ರಾ ಗೌಡಳ ಮೋಹಕ್ಕೆ ಬಿದ್ದಿದ್ದ ದರ್ಶನ್ ಕೊಲೆಯ ಮೂಲಕ ರಕ್ತ ಮೆತ್ತಿಸಿಕೊಳ್ಳುವಾಗ ಕಾನೂನ ಎಂಬುದು ಈ ಪರಿಯಾಗಿ ಪ್ರಹಾರ ನಡೆಸುತ್ತೆ ಅಂದುಕೊಂಡಿರಲಿಕ್ಕಿಲ್ಲ. ಮಾಧ್ಯಮಗಳ ಮುಂದೆ ಎದೆಯುಬ್ಬಿಸಿ ಮಾತಾಡಿ ದಕ್ಕಿಸಿಕೊಂಡಷ್ಟೇ ಸಲೀಸಾಗಿ ಈ ಕೊಲೆ ಕೇಸಿಂದ ಹೊರಬರಬಹುದೆಂಬ ಗಾಢ ವಿಶ್ವಾಸ ಆತನಿಗಿದ್ದಂತಿತ್ತು. ಹಾಗಿಲ್ಲದೇ ಹೋಗಿದ್ದರೆ ತನ್ನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳ ಮುಂದೆ ತಿಮಿರು ತೋರಿಸುತ್ತಿರಲಿಲ್ಲ; ಮುಚ್ಕೊಂಡು ಗಾಡಿ ಹತ್ತುತ್ತೀಯಾ ಅಥವಾ ನಾವೇ ಎಳಕೊಂಡು ಹೋಗ್ಬೇಕಾ ಅಂತ ಪೊಲೀಸ್ ಅಧಿಕಾರಿಯಿಂದಲೇ ಅನ್ನಿಒಸಿಕೊಳ್ಳುತ್ತಲೂ ಇರಲಿಲ್ಲ. ಈ ಕ್ಷಣಕ್ಕೆ ದರ್ಶನ್ ತಲುಪಿರೋ ಸ್ಥಿತಿಗೆ ಕಾರಣ ಏನೆಂಬುದನ್ನು ಅವಲೋಕಿಸಿದರೆ ತಿಮಿರು ಮತ್ತು ತಿಮಿರಿನ ಹೊರತಾಗಿ ಮತ್ತೇನೂ ಕಾಣಿಸೋದಿಲ್ಲ!</span></p>
<p style="text-align: justify;"><img loading="lazy" decoding="async" class="alignnone wp-image-10209" src="https://www.cinishodha.com/wp-content/uploads/2025/08/3f830910-2f86-11ef-8f5e-cfd8745d0c76.jpg-300x200.webp" alt="3f830910 2f86 11ef 8f5e cfd8745d0c76.jpg" width="1024" height="682" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 22 » cinishodha.com"><span style="font-size: 14pt;">ತಿಂಗಳುಗಟ್ಟಲೆ ಜೈಲು ಪಾಲಾಗಿ ವಾಪಾಸಾದ ನಂತರವೂ ದರ್ಶನ್‌ಗೆ ಹಳೇ ತಿಮಿರು ಇಳಿದಂತೆ ಕಾಣುತ್ತಿರಲಿಲ್ಲ. ವಕೀಲರು ಒತ್ತಿ ಒತ್ತಿ ಹೇಳಿದ್ದ ವಿಚಾರಗಳನ್ನು ಕೇಳಿ ದಾಸನಿಗೆ ಸಹಜವಾಗಿಯೇ ಭಯ ಶುರುವಾಗಿತ್ತು. ಚೂರೇ ಚೂರು ಮಿಸುಜಕಾಡಿದರೂ ಕೂಡಾ ಮತ್ತೆ ಜೈಲು ಪಾಲಾಗುವ ಕಂಟಕ ಆತನನ್ನು ಕೊಂಚ ಹದ್ದುಬಸ್ತಿನಲ್ಲಿಟ್ಟಿತ್ತು. ಆದರೆ ಆತ ಸೆಲೆಬ್ರಿಟೀಸ್ ಅಂತ ಕರೆಯುತ್ತಾ ಕೊಬ್ಬಿಸಿದ್ದ ಕೆಲ ಹಡಬೇ ಅಭಿಮಾನಿಗಳಿದ್ದಾರಲ್ಲಾ? ಅಂಥಾ ಕುನ್ನಿಗಳನ್ನು ಹದ್ದುಬಸ್ತಿನಲ್ಲಿಡುವ ಸಲುವಾಗಿ ಸಣ್ಣದೊಂದು ಪ್ರಯತ್ನವನ್ನೂ ದರ್ಶನ್ ನಡೆಸಿರಲಿಲ್ಲ. ಒಂದು ವೇಳೆ ಹಾಗೊಂದು ಕ್ರಮ ಕೈಗೊಂಡು ತೆಪ್ಪಗಿದ್ದಿದ್ದರೆ ಅಭಿಮಾನಿಗಳೆನ್ನಿಸಿಕೊಂಡಿರೋ ಕೆಲ ಗೂಂಡಾ ಮನಃಸ್ಥಿತಿಯ ಚಿಲ್ಟುಗಳು ಸೋಶಿಯಲ್ ಮೀಡಿಯಾ ಮೂಲಕ ಮೆರೆಯುತ್ತಿರಲಿಲ್ಲ.</span></p>
<p style="text-align: justify;"><img loading="lazy" decoding="async" class="alignnone wp-image-10210" src="https://www.cinishodha.com/wp-content/uploads/2025/08/Darshan_Pavithra_1718364048404_1719475766503-300x169.webp" alt="Darshan Pavithra 1718364048404 1719475766503" width="1024" height="577" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 23 » cinishodha.com"><span style="font-size: 14pt;">ತಮ್ಮ ಬಾಸ್ ದರ್ಶನನನ್ನು ಯಾವ ಕಾನೂನುಗಳೂ ಏನೂ ಮಾಡಲು ಸಾಧ್ಯವಿಲ್ಲ ಎಂಬಂಥಾ ಭ್ರಮೆ ಅಭಿಮಾನಿ ಪಡೆಯನ್ನು ಆವರಿಸಿಕೊಂಡಿತ್ತು. ಅದೀಗ ಎರಡನೇ ಬಾರಿ ಕಳಚಿಕೊಂಡಿದೆ. ದರ್ಶನ್ ಅದೇನೇ ಪ್ರಯತ್ನ ಪಟ್ಟರೂ ಕೂಡಾ ಇನ್ನಾರು ತಿಂಗಳ ಕಾಲ ಜೈಲು ವಾಸ ಖಾಯಂ. ಈತನಿಗೆ ಈಗ ಬಂದೊದಗಿರೋ ಸ್ಥಿತಿಯ ಹಿಂದೆ ಆತನ ಅಭಿಮಾನಿಗಳೆನ್ನಿಸಿಕೊಂಡವರ ಪಾಲಿರೋದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಬೇಲ್ ಕ್ಯಾನ್ಸಲ್ ಮಾಡಬೇಕೆಂದು ಕೋರಿ ಸುಪ್ರೀಂ ಅಂಗಳದಲ್ಲಿ ದರ್ಶನ್ ಭವ್ಯವಿರುವಾಗಲೇ ಅಭಿಮಾನಿ ಬಳಗ ಗೂಂಡಾಗಿರಿಗಿಳಿದಿತ್ತು. ನಟಿ ರಮ್ಯಾ ವಿರುದ್ಧ ಕೆಟ್ಟಾಕೊಳಕು ಪ್ರಹಾರ ಮಾಡುವ ಮೂಲಕ ಕೇಸು ಜಡಿಸಿಕೊಂಡಿತ್ತು. ದರ್ಶನ್ ಯಾವ ರೀತಿ ಬದುಕುತ್ತಿದ್ದಾನೆ? ಆತನ ಅಭಿಮಾನಿಗಳು ಅದೆಷ್ಟು ಅನಾಹುತಕಾರಿಗಳಾಗಿದ್ದಾರೆ? ಕೊಂಚ ಯಾಮಾರಿದರೆ ದರ್ಶನ್ ಅಭಿಮಾನಿ ಪಡೆ ಕಟ್ಟಿಕೊಂಡು ಎಂಥಾ ಅನಾಹುತ ನಡೆಸಬಲ್ಲ? ಇಂಥಾ ದಿಕ್ಕುಗಳಲ್ಲಿ ನ್ಯಾಯಾಂಗ ಆಕಲೋಚಿಸಿಯೇ ಇಂಥಾದ್ದೊಂದು ಖಡಕ್ ಆದೇಶ ಕೊಟ್ಟಿರುವಂತಿದೆ.</span></p>
<p style="text-align: justify;"><img loading="lazy" decoding="async" class="alignnone wp-image-10211" src="https://www.cinishodha.com/wp-content/uploads/2025/08/GZ3WGC1XoAEOJqL-300x169.jpg" alt="GZ3WGC1XoAEOJqL" width="1024" height="576" title="darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ? 24 » cinishodha.com"><span style="font-size: 14pt;">ದರ್ಶನ್ ಅದೆಂಥಾ ಮುಠ್ಠಾಳನೆಂದರೆ, ತನ್ನ ಅಪಾರ ಅಭಿಮಾನಿ ಬಳಗವನ್ನು ತನ್ನ ಮಾತು ವರ್ತನೆದಗಳೇ ಪ್ರಭಾವಿಸುತ್ತವೆಂಬ ಸಣ್ಣ ಖಬರೂ ಆತನಿಗಿರಲಿಲ್ಲ. ಈ ಅವಿಕೇಕಿ ಎಣ್ಣೆ ಏಟಲ್ಲಿ ಬಡಬಡಿಸಿದ್ದನ್ನೇ ಕೆಲ ಅಭಿಮಾನಿಗಳು ಬದುಕಾಗಿಸಿಕೊಂಡಿದ್ದಾರೆ. ಅಂಥವರ ಮಾತು, ವರ್ತನೆ, ಭಾಷೆಗಳಲ್ಲಿ ಅದೇ ಛಾತಯೆ ಎದ್ದು ಕಾಣುತ್ತಿದೆ. ಈತ ಒಂದು ಹಂತದಲ್ಲಿ ಮಾಧ್ಯಮಗಳನ್ನು ಎದುರು ಹಾಕಿಕೊಂಡ. ಮೀಡಿಯಾ ತನ್ನ ಶಾಟಕ್ಕೆ ಸಮ ಎಂದ. ಈಗ ಅದೇ ದರ್ಶನ್ ಈ ನೆಲದ ಕಾನೂನು ಕಟ್ಟಳೆಗಳ ಮುಂದೆ ಶಾಟಕ್ಕಿಂತಲೂ ಕಡೆಯಾಗಿ ನಿಂತಿದ್ದಾನೆ. ಕೀರ್ತಿಯ ನಶೆ, ನೆತ್ತಿಗೇರಿ ಅಲ್ಲಿಯೇ ಪರ್ಮನೆಂಟಾಗಿ ನೆಲೆ ಕಂಡುಕೊಳ್ಳೋ ದುರಹಂಕಾರ ಎಂಥಾ ಅನಾಹುತ ಸೃಷ್ಟಿಸುತ್ತದೆಂಬುದಕ್ಕೆ ದರ್ಶನ್ ತಾಜಾ ಉದಾಹರಣೆಯಾಗಿ ಕಾಣಿಸುತ್ತಿದ್ದಾನೆ! </span></p>
<p>The post <a rel="nofollow" href="https://www.cinishodha.com/darshan-bail-cancelled-14-08-2025/">darshan bail cancelled: ಗೂಂಡಾ ಸೆಲೆಬ್ರಿಟೀಸ್ ಇನ್ನಾದರೂ ತೆಪ್ಪಗಿರ್‍ತಾರಾ?</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
		<item>
		<title>sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ!</title>
		<link>https://www.cinishodha.com/sumalatha-ambareesh-%e0%b2%a8%e0%b2%9f%e0%b2%a8%e0%b2%be%e0%b2%97%e0%b2%bf-%e0%b2%ae%e0%b2%97%e0%b3%81%e0%b2%9a%e0%b2%bf%e0%b2%95%e0%b3%8a%e0%b2%82%e0%b2%a1-%e0%b2%ae%e0%b2%97%e0%b2%a8%e0%b2%a8/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 18 Mar 2025 17:25:24 +0000</pubDate>
				<category><![CDATA[ಜಾಪಾಳ್ ಜಂಕ್ಷನ್]]></category>
		<category><![CDATA[#darshanthoogudeepa]]></category>
		<category><![CDATA[#mandyapolitics\]]></category>
		<category><![CDATA[#sumalathaambareesh]]></category>
		<category><![CDATA[abhishekambareesh]]></category>
		<category><![CDATA[darshan]]></category>
		<category><![CDATA[kicchasudeep]]></category>
		<guid isPermaLink="false">https://www.cinishodha.com/?p=9487</guid>

					<description><![CDATA[<p>ಕಂಗಾಲು ಮಾತೆಯ ಮಗ್ಗುಲಲ್ಲಿ ಬೊಮ್ಮಣ್ಣನ ಅಳೀಮಯ್ಯ! ರೇಣುಕಾ ಸ್ವಾಮಿ ಕೊಲೆ ಕೇಸಿನ ಸಂಬಂಧವಾಗಿ ಬೇಲ್ ಪಡೆದು ನಿರಾಳವಾಗಿರೋ ದರ್ಶನ್ ಇದೀಗ ಫಾರ್ಮಿಗೆ ಮರಳಿದಂತಿದೆ. ಓರ್ವ ಸ್ಟಾರ್ ನಟನಾಗಿ ವಿವಾದಾತ್ಮಕ ವ್ಯಕ್ತಿತ್ವ ಹೊಂದಿದ್ದಾತ ದರ್ಶನ್. ಒಂದು ಹಂತದಲ್ಲಿ ಸುತ್ತ ಹಲಾಲುಟೋಪಿಗಳನ್ನೇ ತುಂಬಿಕೊಂಡು ತಪ್ಪ್ಯಾವುದು, ಸರಿ ಯಾವುದೆಂಬ ಗಡಿರೇಖೆಯನ್ನೇ ಗುರುತಿಸದಷ್ಟು ಪ್ರಮಾಣದ ಕೊಲೆಸ್ಟ್ರಾಲು ದಾಸನ ಕಣ್ಣಿನವರೆಗೂ ಹಬ್ಬಿಕೊಂಡಿತ್ತು. ಇದೀಗ ತಿಂಗಳುಗಟ್ಟಲೆ ಜೈಲಲ್ಲಿ ಕಳೆದ ದರ್ಶನ್ ಪಾಲಿಗೆ ವಾಸ್ತವದ ಸತ್ಯ ದರ್ಶನವಾಗಿರೋ ಸೂಚನೆ ಸಿಕ್ಕಿದೆ. ಅಷ್ಟಕ್ಕೂ ಖ್ಯಾತಿಯ ಪ್ರಭೆಯಲ್ಲಿ ನಿಂತಾಗಲೂ, ವಿವೇಚನೆಯ [...]</p>
<p>The post <a rel="nofollow" href="https://www.cinishodha.com/sumalatha-ambareesh-%e0%b2%a8%e0%b2%9f%e0%b2%a8%e0%b2%be%e0%b2%97%e0%b2%bf-%e0%b2%ae%e0%b2%97%e0%b3%81%e0%b2%9a%e0%b2%bf%e0%b2%95%e0%b3%8a%e0%b2%82%e0%b2%a1-%e0%b2%ae%e0%b2%97%e0%b2%a8%e0%b2%a8/">sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p><strong><span style="font-size: 18pt;">ಕಂಗಾಲು ಮಾತೆಯ ಮಗ್ಗುಲಲ್ಲಿ ಬೊಮ್ಮಣ್ಣನ ಅಳೀಮಯ್ಯ!</span></strong></p>
<p style="text-align: justify;"><span style="font-size: 14pt;"><span style="font-size: 18pt;"><strong><span style="color: #00ccff;">ರೇ</span></strong></span>ಣುಕಾ ಸ್ವಾಮಿ ಕೊಲೆ ಕೇಸಿನ ಸಂಬಂಧವಾಗಿ ಬೇಲ್ ಪಡೆದು ನಿರಾಳವಾಗಿರೋ ದರ್ಶನ್ ಇದೀಗ ಫಾರ್ಮಿಗೆ ಮರಳಿದಂತಿದೆ. ಓರ್ವ ಸ್ಟಾರ್ ನಟನಾಗಿ ವಿವಾದಾತ್ಮಕ ವ್ಯಕ್ತಿತ್ವ ಹೊಂದಿದ್ದಾತ ದರ್ಶನ್. ಒಂದು ಹಂತದಲ್ಲಿ ಸುತ್ತ ಹಲಾಲುಟೋಪಿಗಳನ್ನೇ ತುಂಬಿಕೊಂಡು ತಪ್ಪ್ಯಾವುದು, ಸರಿ ಯಾವುದೆಂಬ ಗಡಿರೇಖೆಯನ್ನೇ ಗುರುತಿಸದಷ್ಟು ಪ್ರಮಾಣದ ಕೊಲೆಸ್ಟ್ರಾಲು ದಾಸನ ಕಣ್ಣಿನವರೆಗೂ ಹಬ್ಬಿಕೊಂಡಿತ್ತು. ಇದೀಗ ತಿಂಗಳುಗಟ್ಟಲೆ ಜೈಲಲ್ಲಿ ಕಳೆದ ದರ್ಶನ್ ಪಾಲಿಗೆ ವಾಸ್ತವದ ಸತ್ಯ ದರ್ಶನವಾಗಿರೋ ಸೂಚನೆ ಸಿಕ್ಕಿದೆ. ಅಷ್ಟಕ್ಕೂ ಖ್ಯಾತಿಯ ಪ್ರಭೆಯಲ್ಲಿ ನಿಂತಾಗಲೂ, ವಿವೇಚನೆಯ ಒಳಗಣ್ಣ ತೆರೆದಿಟ್ಟುಕೊಳ್ಳೋದು ಒಂದು ಕಲೆ. ಅದನ್ನು ಸಿದ್ಧಿಸಿಕೊಂಡವರು ಮಾತ್ರವೇ ಸುಖಾಸುಮ್ಮನೆ ರಂಕಲು ಮಾಡಿಕೊಳ್ಳದೆ ಚೆಂದಗೆ ಬಾಳಿ ಹೋಗಿದ್ದಾರೆ. ಆದರೆ, ದಾಸ ಮಾತ್ರ ತಾನು ಡೋಂಟ್ ಕೇರ್ ಬ್ರ್ಯಾಂಡೆಂಬ ಭ್ರಮೆಯನ್ನು ಅಪಾದಮಸ್ತಕ ಹೊದ್ದುಕೊಂಡು ತಿರುಗಿದ್ದಿದೆ. ಇಂಥಾ ದರ್ಶನ್‌ಗೆ ತಾನು ಸಾಗಿ ಬಂದ ಹಾದಿಯತ್ತ ತಣ್ಣಗೆ ತಿರುಗಿ ನೋಡುವ ಅವಕಾಶ ಸಿಕ್ಕಿದ್ದು ಕಂಬಿಗಳ ಹಿಂದಷ್ಟೆ!</span></p>
<p style="text-align: justify;"><img loading="lazy" decoding="async" class="alignnone wp-image-9488" src="https://www.cinishodha.com/wp-content/uploads/2025/03/3darshanandsumalatha-1553760490-1554112778-1558700726-1-300x225.webp" alt="3darshanandsumalatha 1553760490 1554112778 1558700726 1" width="1024" height="768" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 35 » cinishodha.com" srcset="https://www.cinishodha.com/wp-content/uploads/2025/03/3darshanandsumalatha-1553760490-1554112778-1558700726-1-300x225.webp 300w, https://www.cinishodha.com/wp-content/uploads/2025/03/3darshanandsumalatha-1553760490-1554112778-1558700726-1-150x113.webp 150w, https://www.cinishodha.com/wp-content/uploads/2025/03/3darshanandsumalatha-1553760490-1554112778-1558700726-1-450x338.webp 450w, https://www.cinishodha.com/wp-content/uploads/2025/03/3darshanandsumalatha-1553760490-1554112778-1558700726-1.webp 600w" sizes="(max-width: 1024px) 100vw, 1024px" /><span style="font-size: 14pt;">ಹಾಗಾದರೆ, ದರ್ಶನ್ ಈ ಸುದೀರ್ಘಾವಧಿಯ ವನವಾಸದ ಕಾಲಘಟ್ಟದಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಮನನ ಮಾಡಿಕೊಂಡರಾ? ತನ್ನ ಸುತ್ತ ಪಿತಗುಡುತ್ತಿದ್ದವರ, ಅದ್ಯಾವುದೋ ಲಾಭದ ಕಿಸುರಿಟ್ಟುಕೊಂಡೇ ತುದಿ ನಾಲಗೆಯ ಪ್ರೀತಿ ತೋರಿಸುತ್ತಿದ್ದವರ ಅಸಲೀಯತ್ತನ್ನು ಅರ್ಥ ಮಾಡಿಕೊಂಡರಾ? ಸದ್ಯ ಡೆವಿಲ್ ಅಖಾಡಕ್ಕೆ ಮರಳಿರುವ ದರ್ಶನ್ ಸೂಕ್ಷ್ಮ ವರ್ತನೆಗಳನ್ನು ಆಧರಿಸಿ ಹೇಳೋದಾದರೆ ಮೇಲ್ಕಂಡ ಪ್ರಶ್ನೆಗಳಿಗೆಲ್ಲ ಹೌದೆಂಬ ಉತ್ತರವೇ ಧ್ವನಿಸುತ್ತೆ. ಅದರಲ್ಲೂ ವಿಶೇಷವಾಗಿ ತಾನು ಪ್ರೀತಿಯಿಂದ ಸೆಲೆಬ್ರಿಟೀಸ್ ಅನ್ನುತ್ತಿದ್ದ ಅಭಿಮಾನಿ ಪಡೆಯ ದುಂಡಾವರ್ತನೆ, ಅತಿರೇಖದ ನಡವಳಿಕೆ, ಕಂಡವರ ಮೇಲೆರಗಿ ಹೋಗೋ ಪಡಪೋಶಿ ನಡವಳಿಕೆಗಳೂ ಕೂಡಾ ಖುದ್ದು ದರ್ಶನ್ ಗೆ ಅಸಹ್ಯ ಹುಟ್ಟಿಸಿದಂತಿದೆ!</span></p>
<p style="text-align: justify;"><img loading="lazy" decoding="async" class="alignnone wp-image-9489" src="https://www.cinishodha.com/wp-content/uploads/2025/03/151259092-300x169.webp" alt="151259092" width="1024" height="576" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 36 » cinishodha.com" srcset="https://www.cinishodha.com/wp-content/uploads/2025/03/151259092-300x169.webp 300w, https://www.cinishodha.com/wp-content/uploads/2025/03/151259092-768x432.webp 768w, https://www.cinishodha.com/wp-content/uploads/2025/03/151259092-1024x576.webp 1024w, https://www.cinishodha.com/wp-content/uploads/2025/03/151259092-150x84.webp 150w, https://www.cinishodha.com/wp-content/uploads/2025/03/151259092-450x253.webp 450w, https://www.cinishodha.com/wp-content/uploads/2025/03/151259092-1200x675.webp 1200w, https://www.cinishodha.com/wp-content/uploads/2025/03/151259092.webp 1280w" sizes="(max-width: 1024px) 100vw, 1024px" /><span style="font-size: 14pt;">ಅದರಲ್ಲಿಯೂ ವಿಶೇಷವಾಗಿ, ಸಾಕ್ಷಾತ್ತು ಅಮ್ಮನಂತೆ ಪೋಸು ಕೊಡುತ್ತಿದ್ದ ಅಂಬಿ ಮಡದಿ ಸುಮಲತಾ ಮತ್ತು ಆಕೆಯ ಮುದ್ದಿನ ಮಗ ಅಭಿಷೇಕನ ಅಸಲೀಯತ್ತಂತೂ ದರ್ಶನ್ ಗೆ ಸರಿಯಾಗಿಯೇ ಅರ್ಥವಾಗಿದೆ. ಈ ಕಾರಣದಿಂದಲೇ ದರ್ಶನ್ ತನ್ನ ಸೋಶಿಯಲ್ ಮೀಡಿಯಾ ಅಕೌಂಟುಗಳಲ್ಲಿ ಅಮ್ಮ, ಮಗ ಮತ್ತು ಸೊಸೆಯನ್ನು ಅನ್ ಫಾಲೋ ಮಾಡಿದ್ದೆಂಬಂಥಾ ವಿಶ್ಲೇಷಣೆಗಳೂ ಪುಂಖಾನುಪುಂಖವಾಗಿ ಕೇಳಿ ಬರುತ್ತಿವೆ. ಹಾಗೆ ನೋಡಿದರೆ, ದರ್ಶನ್ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಕೂಡಾ ಸುಮಲತಾ ವಿರುದ್ಧ ಸಹಜವಾಗಿಯೇ ಸಿಟ್ಟು ಮೂಡಿಕೊಳ್ಳುತ್ತಿತ್ತು. ಸುಮಲತಾ ರಾಜಕೀಯ ಅಖಾಡದಲ್ಲಿ ನಿಂತು ದರ್ಶನ್ ತನ್ನ ದೊಡ್ಡ ಮಗ ಅಂತ ಸಾರಿ ಸಾರಿ ಹೇಳಿಕೊಂಡಿದ್ದಿದೆ. ಆಕೆಯ ಮಗ ಅಭಿ ಕೂಡಾ ದರ್ಶನ್ ತನ್ನಣ್ಣ ಎಂಬರ್ಥದಲ್ಲಿ ಆಗಾಗ ಮೈಲೇಜು ಗಿಟ್ಟಿಸಿಕೊಂಡಿದ್ದಿದೆ. ಆದರೆ ದಾಸ ಅನಾಹುತವೊಂದನ್ನು ಮಾಡಿಕೊಂಡು ಸಂಕಷ್ಟದಲ್ಲಿದ್ದಾಗ ಅಭಿನವ ತಮ್ಮನಾಗಲಿ, ದೇವರು ಕೊಟ್ಟ ಅಮ್ಮನಾಗಲಿ ಅತ್ತ ಸುಳಿಯಲೂ ಇಲ್ಲ.</span></p>
<p style="text-align: justify;"><img loading="lazy" decoding="async" class="alignnone wp-image-9490" src="https://www.cinishodha.com/wp-content/uploads/2025/03/82269099_1360456360782360_5204538182703513600_n-300x200.jpg" alt="82269099 1360456360782360 5204538182703513600 n" width="1024" height="683" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 37 » cinishodha.com" srcset="https://www.cinishodha.com/wp-content/uploads/2025/03/82269099_1360456360782360_5204538182703513600_n-300x200.jpg 300w, https://www.cinishodha.com/wp-content/uploads/2025/03/82269099_1360456360782360_5204538182703513600_n-768x512.jpg 768w, https://www.cinishodha.com/wp-content/uploads/2025/03/82269099_1360456360782360_5204538182703513600_n-150x100.jpg 150w, https://www.cinishodha.com/wp-content/uploads/2025/03/82269099_1360456360782360_5204538182703513600_n-450x300.jpg 450w, https://www.cinishodha.com/wp-content/uploads/2025/03/82269099_1360456360782360_5204538182703513600_n.jpg 960w" sizes="(max-width: 1024px) 100vw, 1024px" /><span style="font-size: 14pt;">ನಿಜ, ಹೆತ್ತವರು ಮಾತ್ರವೇ ಅಮ್ಮನಾಗಬೇಕೆಂದೇನಿಲ್ಲ. ಜಗತ್ತಿನ ಯಾವ ಹೆಣ್ಣು ಮಗಳಾದರೂ ಮತ್ಯಾರಿಗೋ ಅಮ್ಮ ಅಂತನ್ನಿಸಬಹುದು. ಆದರೆ, ಸುಮಲತಾ ಮೇಡಮ್ಮು ಮಾತ್ರ ದರ್ಶನ್ ಪಾಲಿಗೆ ಅಮ್ಮನಂತೆ ನಟಿಸಿದ್ದರೆನ್ನಿಸುತ್ತೆ. ಯಾಕೆಂದರೆ, ಮಗ ಅದೆಂಥಾದ್ದೇ ತಪ್ಪು ಮಾಡಿದ್ದರೂ, ಅದರ ಬಗ್ಗೆ ತಕರಾರುಗಳಿದ್ದರೂ ಜೊತೆ ನಿಲ್ಲುವಾಕೆ ಅಮ್ಮ. ತೀರಾ ಮಗ ತಪ್ಪೆಸಗಿದ್ದನ್ನು ಸಮರ್ಥನೆ ಮಾಡಿಕೊಳ್ಳಬೇಕೆಂದೇನಿಲ್ಲ; ಬಳಿ ಬಂದು ತುಸು ಗದರುವುದೂ ಕೂಡಾ ತಾಯ್ತನವೇ. ಆದರೆ ಸುಮಲತಾ ಮಾತ್ರ ದರ್ಶನ್ ಕಷ್ಟದ ಘಳಿಗೆಗಳಲ್ಲಿ ಅಂತಾ ತಾಯ್ತನ ತೋರಲಿಲ್ಲ. ಎಲ್ಲೋ ಅನಿವಾರ್ಯ ಅನ್ನಿಸಿದಾಗ ಒಂದೆರಡು ಮಾತಾಡಿದ್ದು ಬಿಟ್ಟರೆ, ಅಮ್ಮನಾಗಲಿ, ಪುತ್ರರತ್ನನಾಗಲಿ ತುಟಿ ಬಿಚ್ಚಲಿಲ್ಲ. ಯಾರ್‍ಯಾರೋ ಸರತಿಯಲ್ಲಿ ನಿಂತು, ಹರಸಾಹಸ ಪಟ್ಟು ದರ್ಶನ್ ಭೇಟಿಗೆ ಹಂಬಲಿಸಿದರೂ ಅಮ್ಮ ಮಗ ಅತ್ತ ಸುಳಿದಿರಲೂ ಇಲ್ಲ.</span></p>
<p style="text-align: justify;"><span style="font-size: 14pt;"><img loading="lazy" decoding="async" class="alignnone wp-image-9491" src="https://www.cinishodha.com/wp-content/uploads/2025/03/download-4.jpeg" alt="download 4" width="1024" height="767" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 38 » cinishodha.com" srcset="https://www.cinishodha.com/wp-content/uploads/2025/03/download-4.jpeg 259w, https://www.cinishodha.com/wp-content/uploads/2025/03/download-4-150x112.jpeg 150w" sizes="(max-width: 1024px) 100vw, 1024px" /> </span><span style="font-size: 14pt;">ಹೀಗೆ ನಾಜೂಕಿನ ನಡೆ ಅನುಸರಿಸಿದ್ದ ಸುಮಲತಾ ದರ್ಶನ್ ಕಡೆಯಿಂದ ಸರಿಕಟ್ಟಾಗಿಯೇ ಫಾಯಿದೆ ಗಿಟ್ಟಿಸಿಕೊಂಡಿದ್ದಾರೆ. ಅಂಬರೀಶ್ ಮರೆಯಾದ ನಂತರದಲ್ಲಿ ಆಕೆ ಏಕಾಏಕಿ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ್ದರು. ಕಾಂಗ್ರೆಸ್, ಜೆಡಿಎಸ್ ಪಕ್ಷದ ಟಿಕೇಟು ಸಿಕ್ಕದೇ ಹೋದರೂ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕಿಳಿದಿದ್ದ ಸುಮಲತಾಗಿದ್ದ ಭರವಸೆ ಎರಡೇ ಎರಡು; ಒಂದು ಕಣ್ಣೀರು ಮತ್ತೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್. ರಾಜಕಾರಣಿಯಾಗಬೇಕೆಂಬ ಆಸೆಯಿಂದ ಸುಮಲತಾ ತಾಳಿದ್ದ ಅವತಾರಗಳೇನು ಒಂದೆರಡಲ್ಲ. ಹೇಳಿಕೇಳಿ ಮಂಡ್ಯ ಅನ್ನೋದು ರೆಬೆಲ್ ಸ್ಟಾರ್ ಅಂಬರೀಶ್ ಪಾಲಿನ ಅಭಿಮಾನದ ನೆಲೆ. ಅಂಥಾದ್ದೊಂದು ಸೆಂಟಿಮೆಂಟಿನಿಂದ ಒಂದಷ್ಟು ಮಂದಿ ಸುಲತಾ ಪರ ನಿಂತರೆ, ದರ್ಶನ್ ನೆರಳಿನಲ್ಲಿ ದೊಡ್ಡ ಮಟ್ಟದ ಬೆಂಬಲವೊಂದು ಸುಮಲತಾ ಸುತ್ತ ಚಿಗಿತುಕೊಂಡಿತ್ತು. ಪಳಗಿದ ರಾಜಕಾರಣಿಗಳ ಪಟ್ಟುಗಳಾಚೆಗೂ ಸುಮಲತಾ ಗೆದ್ದು ಬೀಗಿದ್ದರ ಹಿಂದೆ ದರ್ಶನ್ ಪ್ರಭೆಯೇ ದೊಡ್ಡ ಮಟ್ಟದಲ್ಲಿತ್ತು. ಹಾಗೆ ಸಂಸದೆಯಾಗುವಷ್ಟರ ಮಟ್ಟಿಗೆ ದರ್ಶನ್ ಪ್ರಭಾವಳಿಯನ್ನು ಬಳಸಿಕೊಂಡಿದ್ದ ಸುಮಲತಾ, ಆತ ಕಷ್ಟದಲ್ಲಿರುವಾಗ ಬಳಿ ಸುಳಿಯದಿದ್ದದ್ದು ಅಭಿಮಾನಿಗಳಿಗೆ ಮಾತ್ರವಲ್ಲದೆ, ಮಂಡ್ಯ ಸೀಮೆಯ ಸಾಮಾನ್ಯ ಮಂದಿಗೂ ರೇಜಿಗೆ ಮೂಡಿಸಿತ್ತು.</span></p>
<p style="text-align: justify;"><img loading="lazy" decoding="async" class="alignnone wp-image-9492" src="https://www.cinishodha.com/wp-content/uploads/2025/03/4f909ef2-864a-4f5a-8e10-ad7e5edf3d4d-300x183.jpg" alt="4f909ef2 864a 4f5a 8e10 ad7e5edf3d4d" width="1024" height="623" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 39 » cinishodha.com" srcset="https://www.cinishodha.com/wp-content/uploads/2025/03/4f909ef2-864a-4f5a-8e10-ad7e5edf3d4d-300x183.jpg 300w, https://www.cinishodha.com/wp-content/uploads/2025/03/4f909ef2-864a-4f5a-8e10-ad7e5edf3d4d-768x468.jpg 768w, https://www.cinishodha.com/wp-content/uploads/2025/03/4f909ef2-864a-4f5a-8e10-ad7e5edf3d4d-150x91.jpg 150w, https://www.cinishodha.com/wp-content/uploads/2025/03/4f909ef2-864a-4f5a-8e10-ad7e5edf3d4d-450x274.jpg 450w, https://www.cinishodha.com/wp-content/uploads/2025/03/4f909ef2-864a-4f5a-8e10-ad7e5edf3d4d.jpg 869w" sizes="(max-width: 1024px) 100vw, 1024px" /><span style="font-size: 14pt;">ಹೀಗೆ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡ ಕ್ಷಣದಿಂದಲೂ ಸುಮಲತಾ ನಾಜೂಕಿನಿಂದಲೇ ನಡೆದುಕೊಂಡಿದ್ದರು. ಈಗ ದರ್ಶನ್ ರೆಬೆಲ್ ಅವತಾರವೆತ್ತುತ್ತಲೇ ಮತ್ತದೇ ನಾಜೂಕುತನದಿಂದಲೇ ಪ್ರತಿಕ್ರಿಯಿಸಿದ್ದಾರೆ. ಹೀಗೆ ದೂರ ನಿಂತೇ ಹತ್ತಿರ ನಿಂತಂತೆ ತೋರ್ಪಡಿಸುತ್ತಿದ್ದ ಸುಮಲತಾ ಮತ್ತೊಂದು ಸುತ್ತಿಗೆ ದರ್ಶನ್ ಪ್ರಭೆಯನ್ನು ಬಳಸಿಕೊಳ್ಳಲು ಯೋಜಿಸಿದ್ದರಾ? ಒಳಗಿಂದೊಳಗೇ ಅಂಥಾದ್ದೊಂದು ತಯಾರಿ ನಡೆದಿತ್ತಾ? ಮಾಜಿ ಸಂಸದೆಯ ಆಪ್ತ ವಲಯದಿಂದ ಅಂಥಾದ್ದೊಂದು ಸುದ್ದಿ ತಿಂಗಳುಗಳ ಹಿಂದೆಯೇ ಜಾಹೀರಾಗಿತ್ತು. ಅದರನ್ವಯ ಹೇಳೋದಾದರೆ, ರಾಜಕೀಯದಲ್ಲಿ ಚಾಲ್ತಿಯಲ್ಲಿರುವ ಸಲುವಾಗಿ ಪುತ್ರ ಅಭಿಯನ್ನು ರಾಜಕೀಯ ಅಖಾಡಕ್ಕಿಳಿಸಲು ಸುಮಲತಾ ತಯಾರಿ ನಡೆಸಿದ್ದರು. ಸುಮಲತಾ ರಾಜಕೀಯ ಬದುಕು ಒಂದೇ ಅವಧಿಗೆ ಪರ್ಯಾವಸಾನ ಹೊಂದಿದೆ. ಕಣ್ಣೀರಿನ ವ್ಯಾಲಿಡಿಟಿ ಕೂಡಾ ಐದು ವರ್ಷದೊಳಗಾಗಿ ಮುಗಿದು ಹೋಗಿದೆ. ಹಾಗಂತ ಅವರೊಳಗಿರುವ ಅಧಿಕಾರದ ಲಾಲಸೆಗೆ ಮಾತ್ರ ವಯಸ್ಸಾಗಲಿ, ದಣಿವಾಗಲಿ ಖಂಡಿತಾ ಆಗಿಲ್ಲ.</span></p>
<p style="text-align: justify;"><img loading="lazy" decoding="async" class="alignnone wp-image-9493" src="https://www.cinishodha.com/wp-content/uploads/2025/03/abhishek-ambareesh-wiki-biography-age-movies-family-images-more_5e8ba5a74a852-300x172.webp" alt="abhishek ambareesh wiki biography age movies family images more 5e8ba5a74a852" width="1024" height="586" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 40 » cinishodha.com" srcset="https://www.cinishodha.com/wp-content/uploads/2025/03/abhishek-ambareesh-wiki-biography-age-movies-family-images-more_5e8ba5a74a852-300x172.webp 300w, https://www.cinishodha.com/wp-content/uploads/2025/03/abhishek-ambareesh-wiki-biography-age-movies-family-images-more_5e8ba5a74a852-768x440.webp 768w, https://www.cinishodha.com/wp-content/uploads/2025/03/abhishek-ambareesh-wiki-biography-age-movies-family-images-more_5e8ba5a74a852-150x86.webp 150w, https://www.cinishodha.com/wp-content/uploads/2025/03/abhishek-ambareesh-wiki-biography-age-movies-family-images-more_5e8ba5a74a852-450x258.webp 450w, https://www.cinishodha.com/wp-content/uploads/2025/03/abhishek-ambareesh-wiki-biography-age-movies-family-images-more_5e8ba5a74a852.webp 997w" sizes="(max-width: 1024px) 100vw, 1024px" /><span style="font-size: 14pt;">ವರ್ಷಗಟ್ಟಲೆ ಕಟ್ಟುಮಸ್ತಾಗಿ ಬೆಳೆಸಿದ ಕಂಬಳದ ಕೋಣದಂತಿರೋ ಮಗರಾಯ ಹೀರೋ ಆಗಿ ನೆಲೆ ಕಂಡುಕೊಳ್ಳೋದು ಕಷ್ಟವೆಂಬ ವಿಚಾರ ಈಗಾಗಲೇ ಸುಮಲತಾರಿಗೆ ಅರಿವಾಗಿದೆ. ಹಾಗಂತ ತನ್ನದೇ ಕಾಸು ಹಾಕಿ ಮಗನನ್ನು ಹೀರೋ ಆಗಿ ನೆಲೆಗಾಣಿಸೋ ಮನಃಸ್ಥಿತಿಯೂ ಅವರಿಗಿಲ್ಲ. ಆಪ್ತ ವಲಯದಲ್ಲಿರೋ ರಾಕ್ ಲೈನ್ ವೆಂಕಣ್ಣ ಅಪ್ಪಿ ತಪ್ಪಿಯೂ ಅಭಿಯನ್ನು ಹಾಕಿಕೊಂಡೊಂದು ಸಿನಿಮಾ ಮಾಡೋ ರಿಸ್ಕು ತೆಗೆದುಕೊಳ್ಳೋ ಗೋಜಿಗೆ ಹೋಗುವುದಿಲ್ಲ. ಹೀಗಿರುವಾಗ ಮಗನನ್ನು ರಾಜಕೀಯ ಅಖಾಡಕ್ಕಿಳಿಸಿ, ಹೇಗಾದರೂ ಮಾಡಿ ಗೆಲ್ಲಿಸಿ ಅಧಿಕಾರ ಕೇಂದ್ರದಲ್ಲಿರುವ ಪ್ಲಾನೊಂದನ್ನು ಸುಮಲತಾ ಮಾಡಿದಂತಿತ್ತು. ಕಳೆದ ಚುನಾವಣೆಯ ಬಳಿಕ ಮಂಡ್ಯದಿಂದ ಅಕ್ಷರಶಃ ಗಾಯಬ್ ಆಗಿದ್ದ ಸುಮಲತಾ, ಈಗ್ಗೆ ತಿಂಗಳ ಹಿಂದೆ ಮತ್ತೆ ಮಂಡ್ಯ ಕ್ಷೇತ್ರದಲ್ಲಿ ಸುತ್ತಾಡುವ ಹೇಳಿಕೆ ಕೊಟ್ಟಿದ್ದರು. ಅದರ ಹಿಂದಿದ್ದದ್ದು ಮಗನ ಎಂಟ್ರಿಗೆ ಅಖಾಡ ಸಜ್ಜುಗೊಳಿಸುವ ಸಿದ್ಧತೆ ಅಂತೊಂದು ಗುಮಾನಿ ಬಲವಾಗಿಯೇ ಹಬ್ಬಿಕೊಂಡಿತ್ತು.</span></p>
<p style="text-align: justify;"><img loading="lazy" decoding="async" class="alignnone wp-image-9494" src="https://www.cinishodha.com/wp-content/uploads/2025/03/abhishek-darshan-300x200.jpg" alt="abhishek darshan" width="1024" height="682" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 41 » cinishodha.com" srcset="https://www.cinishodha.com/wp-content/uploads/2025/03/abhishek-darshan-300x200.jpg 300w, https://www.cinishodha.com/wp-content/uploads/2025/03/abhishek-darshan-150x100.jpg 150w, https://www.cinishodha.com/wp-content/uploads/2025/03/abhishek-darshan-450x300.jpg 450w, https://www.cinishodha.com/wp-content/uploads/2025/03/abhishek-darshan.jpg 700w" sizes="(max-width: 1024px) 100vw, 1024px" /><span style="font-size: 14pt;">ಹಾಗೊಂದು ವೇಳೆ ಅಭಿ ರಾಜಕೀಯ ಅಖಾಡಕ್ಕಿಳಿದರೂ ಕೂಡಾ ಗೆದ್ದು ದಡ ಸೇರೋ ಯಾವ ಛಾರ್ಮ್ ಕೂಡಾ ಆತನಿಗಿಲ್ಲ. ಅಭಿಗೆ ಮತ್ತೆ ಸರಿಕಟ್ಟಾದ ಜೋಡೆತ್ತುಗಳ ಸಾಥ್ ಬೇಕಾಗುತ್ತೆ ಎಂಬ ವಿಚಾರ ಸುಮಲತಾರಿಗೆ ಗೊತ್ತಿಲ್ಲದ ವಾಸ್ತವವೇನಲ್ಲ. ಈ ಕಾರಣದಿಂದಲೇ ಅಣಿಗೊಳ್ಳಲಾರಂಭಿಸಿದ್ದ ಸುಮಲತಾ ಪಾಲಿಗೆ ದೊಡ್ಡ ಭರವಸೆಯಂತಿದ್ದದ್ದು ದರ್ಶನ್. ಕಳೆದ ಬಾರಿ ತನ್ನನ್ನು ದಡ ಸೇರಿಸಿದಂತೆಯೇ ದಾಸ ಮಗನನ್ನೂ ಗೆಲುವಿನ ಏಣಿ ಹತ್ತಿಸುತ್ತಾನೆ ಎಂಬಂಥಾ ನಂಬಿಕೆ ಆಕೆಯದ್ದಿದ್ದಂತಿದೆ. ಆದರೆ, ದರ್ಶನ್ ಸಂಕಷ್ಟ ಕಾಲದಲ್ಲಿನ ನಾಜೂಕಿನ ನಡೆಯೇ ಆಕೆಯ ಪಾಲಿಗೆ ಮುಳುವಾಗಿದೆ. ಸುಮಲತಾ ಚುನಾವಣಾ ಕಾಲದಲ್ಲಿ ಬಾತುಮೋರೆ ಮಾಡಿಕೊಂದು ದರ್ಶನ್ ತನ್ನ ದೊಡ್ಡಮಗ ಅಂದಿದ್ದರು. ಪದೇ ಪದೆ ಅದನ್ನೇ ಹೇಳಲಾರಂಭಿಸಿದ್ದರು. ಆದರೆ ದೊಡ್ಮಗನ ಬಾಟಮ್ಮಿಗೆ ಕೊಲೆ ಕೇಸು ಹೆಟ್ಟಿಕೊಂಡಾಕ್ಷಣವೇ ತಾಯಿ ಸುಮಲತೆ ಏಕಾಏಕಿ ಬಣ್ಣ ಬದಲಿಸಿ ಬಿಟ್ಟಿತ್ತು.</span></p>
<p style="text-align: justify;"><img loading="lazy" decoding="async" class="alignnone wp-image-9495" src="https://www.cinishodha.com/wp-content/uploads/2025/03/67454535-300x225.webp" alt="67454535" width="1024" height="768" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 42 » cinishodha.com" srcset="https://www.cinishodha.com/wp-content/uploads/2025/03/67454535-300x225.webp 300w, https://www.cinishodha.com/wp-content/uploads/2025/03/67454535-150x113.webp 150w, https://www.cinishodha.com/wp-content/uploads/2025/03/67454535.webp 400w" sizes="(max-width: 1024px) 100vw, 1024px" /><span style="font-size: 14pt;">ನಿಜ, ಯಾರೇ ವ್ಯಕ್ತಿ ದೊಡ್ಡ ಮಟ್ಟದಲ್ಲಿ ತಪ್ಪು ಮಾಡಿದಾಗ ಆತನನ್ನು ಪರ ವಹಿಸಿಕೊಂಡು ಹೋಗಲಾಗೋದಿಲ್ಲ. ದರ್ಶನ್ ಪವಿತ್ರಾ ಗೌಡಳ ಮರ್ಜಿಗೆ ಬಿದ್ದು ಕೊಲೆ ಕೇಸಿನಲ್ಲಿ ಬಂಧಿಯಾದಾಗ ಬಹುತೇಕರು ಆತನನ್ನು ವಿರೋಧಿಸಿದ್ದು ಆ ಸೂಕ್ಷ್ಮವಂತಿಕೆಯಿಂದಲೇ. ಹಾಗಂತ ತೀರಾ ಹತ್ತಿರದ ಬಂಧಗಳು ಹಾಗೆ ನಿಷ್ಠುರವಾಗಿ ವರ್ತಿಸಲಾಗೋದಿಲ್ಲ. ಈ ಕಾರಣದಿಂದಲೇ ದರ್ಶನ್ಗಗ ಮಡದಿ ವಿಜಯಲಕ್ಷ್ಮಿ ಗಂಡನ ಪರವಾಗಿ ಕಾನೂನು ಮೂಲಕವೇ ಬಡಿದಾಡಿದ್ದರು. ಹಳೇಯ ಕಿಸುರೆಲ್ಲವನ್ನೂ ಮರೆತು ದಿನಕರ್ ಕೂಡಾ ಜೊತೆ ನಿಂತಿದ್ದರು. ಮೀನಮ್ಮ ಅಂಥಾ ಅನಾರೋಗ್ಯದ ನಡುವೆಯೂ ಜೈಲಿಗೆ ತೆರಳಿ ಮಗನ ನೆತ್ತಿ ನೇವರಿಸಿ ಭರವಸೆ ತುಂಬಿ ಬಂದಿದ್ದರು. ಆದರೆ, ಮಹಾ ಮಾತೆ ಸುಮಲತಾ ಆಗಲಿ, ಅವರ ಪುತ್ರ ಅಭಿಶೇಕ್ ಆಗಲಿ ಜೈಲಿನತ್ತ ಸುಳಿಯಲೂ ಇಲ್ಲ. ಇಂಥಾ ನೌಟಂಕಿ ಆಟಗಳನ್ನು ಕಂಡ ದರ್ಶನ್ ಅತ್ಯಂತ ನಿಷ್ಠುರವಾಗಿಯೇ ಅಮ್ಮ ಮಗನನ್ನು ದೂರವಿಟ್ಟಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-9496" src="https://www.cinishodha.com/wp-content/uploads/2025/03/5968_4-4-2019_17-57-2_2_04BG_BL02_SUMALATHA_APR2019-244x300.jpg" alt="5968 4 4 2019 17 57 2 2 04BG BL02 SUMALATHA APR2019" width="1024" height="1258" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 43 » cinishodha.com" srcset="https://www.cinishodha.com/wp-content/uploads/2025/03/5968_4-4-2019_17-57-2_2_04BG_BL02_SUMALATHA_APR2019-244x300.jpg 244w, https://www.cinishodha.com/wp-content/uploads/2025/03/5968_4-4-2019_17-57-2_2_04BG_BL02_SUMALATHA_APR2019-768x943.jpg 768w, https://www.cinishodha.com/wp-content/uploads/2025/03/5968_4-4-2019_17-57-2_2_04BG_BL02_SUMALATHA_APR2019-834x1024.jpg 834w, https://www.cinishodha.com/wp-content/uploads/2025/03/5968_4-4-2019_17-57-2_2_04BG_BL02_SUMALATHA_APR2019-150x184.jpg 150w, https://www.cinishodha.com/wp-content/uploads/2025/03/5968_4-4-2019_17-57-2_2_04BG_BL02_SUMALATHA_APR2019-450x553.jpg 450w, https://www.cinishodha.com/wp-content/uploads/2025/03/5968_4-4-2019_17-57-2_2_04BG_BL02_SUMALATHA_APR2019.jpg 1200w" sizes="(max-width: 1024px) 100vw, 1024px" /><span style="font-size: 14pt;">ದರ್ಶನ್ ಜಾಗದಲ್ಲಿ ಬೇರ್‍ಯಾರೇ ಇದ್ದಿದ್ದರೂ ಈ ವಿಚಾರದಲ್ಲಿ ಇಂಥಾದ್ದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಅಷ್ಟಕ್ಕೂ ಈ ಅಭಿ ಕೂಡಾ ದರ್ಶನ್ ನನ್ನಣ್ಣ ಅನ್ನುತ್ತಾ ಓಡಾಡಿದ್ದ. ಮಾಡಿದ್ದು ಒಂದೆರಡು ತಗಡು ಸಿನಿಮಾಗಳನ್ನಾದರೂ ತಾನೇನೋ ಸ್ಟಾರ್ ನಟ ಎಂಬಂತೆ ಬಿಲ್ಡಪ್ಪು ಕೊಟ್ಟುಕೊಂಡು ಅಡ್ಡಾಡಲಾರಂಭಿಸಿದ್ದ. ಥೇಟು ಅಂಬರೀಶ್ ಅವರಂತೆಯೇ ಮಾಧ್ಯಮದವರೊಂದಿಗೂ ವರ್ತಿಸಲು ಶುರುವಿಟ್ಟಿದ್ದ. ಅಂಬರೀಶ್ ಮತ್ತು ಮಾಧ್ಯಮ ಮಂದಿಯ ನಡುವಿದ್ದ ಸಲುಗೆ, ಪ್ರೀತಿಯೇ ಬೇರೆ ತೆರನಾದದ್ದು. ಈ ಅಭಿ ಅದನ್ನೇ ಅನುಕರಿಸಲು ನೋಡುತ್ತಿರೋ ವಿಚಾರ ಎಂಥಾವರಿಗೂ ರೇಜಿಗೆ ಮೂಡಿಸುತ್ತಿತ್ತು. ಇಂಥಾ ಅಭಿ ರಾಜಕಾರಣಿಯಾಗಿ ಈ ನೆಲದ ಜನಸಾಮಾನ್ಯರಿಗೆ ಒಳಿತಾಗುವಂಥಾದ್ದನ್ನು ಮಾಡುತ್ತಾನೆಂಬ ಯಾವ ನಂಬಿಕೆ, ಯಾರಲ್ಲಿಯೂ ಇಲ್ಲ.</span></p>
<p style="text-align: justify;"><img loading="lazy" decoding="async" class="alignnone wp-image-9497" src="https://www.cinishodha.com/wp-content/uploads/2025/03/c2973876-1ecc-4716-9ea6-d5502eb18849-233x300.jpg" alt="c2973876 1ecc 4716 9ea6 d5502eb18849" width="1024" height="1318" title="sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ! 44 » cinishodha.com" srcset="https://www.cinishodha.com/wp-content/uploads/2025/03/c2973876-1ecc-4716-9ea6-d5502eb18849-233x300.jpg 233w, https://www.cinishodha.com/wp-content/uploads/2025/03/c2973876-1ecc-4716-9ea6-d5502eb18849-768x988.jpg 768w, https://www.cinishodha.com/wp-content/uploads/2025/03/c2973876-1ecc-4716-9ea6-d5502eb18849-796x1024.jpg 796w, https://www.cinishodha.com/wp-content/uploads/2025/03/c2973876-1ecc-4716-9ea6-d5502eb18849-150x193.jpg 150w, https://www.cinishodha.com/wp-content/uploads/2025/03/c2973876-1ecc-4716-9ea6-d5502eb18849-450x579.jpg 450w, https://www.cinishodha.com/wp-content/uploads/2025/03/c2973876-1ecc-4716-9ea6-d5502eb18849.jpg 1080w" sizes="(max-width: 1024px) 100vw, 1024px" /><span style="font-size: 14pt;">ಆದರೆ ಮಾತೆ ಸುಮಲತಾಗೆ ನಟನಾಗಿ ಕವುಚಿಕೊಂಡ ತನ್ನ ಪುತ್ರನನ್ನು ರಾಜಕಾರಣಿಯಾಗಿಯಾದರೂ ನೆಲೆಗಾಣಿಸುವ ಇರಾದೆ ಇದೆ ಅಂತ ಆಪ್ತ ಬಳಗದಲ್ಲಿಯೇ ಗುಲ್ಲೆದ್ದಿದೆ. ಈ ಸಂಬಂಧವಾಗಿ ಮಂಡ್ಯ ಸೀಮೆಯ ಕೆಲ ಅಂಬಿ ಅಭಿಮಾನಿಗಳ ಮೂಲಕ ವೇದಿಕೆ ಸಜ್ಜುಗೊಳಿಸುವ ಪ್ರಯತ್ನವನ್ನೂ ನಡೆಸಿದ್ದರೆಂಬ ಮಾತಿದೆ. ಆದರೆ, ಅದು ಅವರ್‍ಯಾರಿಗೂ ಇಷ್ಟವಿಲ್ಲದೇ ಹೋದರೂ ಕೂಡಾ ಅಂಬಿ ಮೇಲೆನ ಅಭಿಮಾನದಿಂದ ಗೋಣಾಡಿಸಿ ಎದ್ದು ಹೋಗಿದ್ದಾರೆಂದೂ ಹೇಳಲಾಗುತ್ತಿದೆ. ಸದ್ಯಕ್ಕೆ ಸುಮಲತಾ ಮೊಮ್ಮಗನ ನಾಮಕರಣಕ್ಕೂ ದರ್ಶನ್ ನೆರಳು ಸೋಕಿಲ್ಲ. ಆದರೆ, ಅಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಕಳೆದ ಬಾರಿ ತನ್ನ ಪ್ರೀತಿಯ ಮಾಮ ಬೊಮ್ಮಣ್ಣನ ಪರವಾಗಿ ವ್ಯಾಪಕ ಪ್ರಚಾರ ನಡೆಸಿದ್ದವರು ಸುದೀಪ. ಲಾಟರಿ ಹೊಡೆದಂತೆ ಸಿಎಂ ಆಗಿ, ಪರಮ ಭ್ರಷ್ಟಾಚಾರ, ಲಂಗು ಲಗಾಮಿಲ್ಲದ ಆಡಳಿತ ವೈಖರಿಯಿಂದ ಅದಾಗಲೆ ಮಾಮ ಬೊಮ್ಮಣ್ಣ ಮಾನಗೆಡಿಸಿಕೊಂಡಾಗಿತ್ತು. ಅದನ್ನೂ ಲೆಕ್ಕಿಸದೆ ಆ ಆಸಾಮಿಯ ಪರವಾಗಿ ಕಿಚ್ಚ ಪ್ರಚಾರ ನಡೆಸಿದ್ದರೂ ಕೂಡಾ ಅವರ ಪ್ರೀತಿಯ ಮಾವ ಬೊಮ್ಮಣ್ಣ ಖಾಲಿ ನೆತ್ತಿಯಲ್ಲಿ ಮೂಡಿದ್ದ ಸೋಲಿನ ಬೆವರು ಒರೆಸಿಕೊಂಡು ಪಟ್ಟದಿಂದ ಇಳಿದು ಹೋಗುವಂತಾಗಿತ್ತು. ಹಾಗೆ ಮಾಮನ ಪರ ನಿಂತಿದ್ದ ಕಿಚ್ಚ ತನ್ನ ಮಗನ ಪರ ನಿಲ್ಲದಿರೋದಿಲ್ಲ ಎಂಬಂಥಾ ಕ್ಷೀಣ ಆಸೆಯೊಂದು ಸುಮಲತಾರಲ್ಲಿದ್ದಂತೆ ಕಾಣಿಸುತ್ತಿದೆ!</span></p>
<p>The post <a rel="nofollow" href="https://www.cinishodha.com/sumalatha-ambareesh-%e0%b2%a8%e0%b2%9f%e0%b2%a8%e0%b2%be%e0%b2%97%e0%b2%bf-%e0%b2%ae%e0%b2%97%e0%b3%81%e0%b2%9a%e0%b2%bf%e0%b2%95%e0%b3%8a%e0%b2%82%e0%b2%a1-%e0%b2%ae%e0%b2%97%e0%b2%a8%e0%b2%a8/">sumalatha ambareesh: ನಟನಾಗಿ ಮಗುಚಿಕೊಂಡ ಮಗನನ್ನು ರಾಜಕಾರಣಿಯಾಗಿಸೋ ಆಸೆ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
	</channel>
</rss>
