<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	 xmlns:media="http://search.yahoo.com/mrss/" >

<channel>
	<title>gowrishankar_lifestory &#8211; Cini Shodha</title>
	<atom:link href="https://www.cinishodha.com/tag/gowrishankar_lifestory/feed/" rel="self" type="application/rss+xml" />
	<link>https://www.cinishodha.com</link>
	<description>Filmi News Online - Kannada</description>
	<lastBuildDate>Wed, 13 Mar 2024 13:40:24 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://www.cinishodha.com/wp-content/uploads/2025/11/cropped-cinishodha-icon-32x32.png</url>
	<title>gowrishankar_lifestory &#8211; Cini Shodha</title>
	<link>https://www.cinishodha.com</link>
	<width>32</width>
	<height>32</height>
</image> 
	<item>
		<title>kerebete gowrishankar life story: ಒಜ್ಜೆ ಹೆಜ್ಜೆಗಳಿಗೆ ಕಸುವು ತುಂಬಿದ್ದು ಸಿನಿಮಾ ವ್ಯಾಮೋಹ!</title>
		<link>https://www.cinishodha.com/kerebete-gowrishankar-lifestory%e0%b2%92%e0%b2%9c%e0%b3%8d%e0%b2%9c%e0%b3%86-%e0%b2%b9%e0%b3%86%e0%b2%9c%e0%b3%8d%e0%b2%9c%e0%b3%86%e0%b2%97%e0%b2%b3%e0%b2%bf%e0%b2%97%e0%b3%86-%e0%b2%95%e0%b2%b8/</link>
		
		<dc:creator><![CDATA[Santhosh Bagilagadde]]></dc:creator>
		<pubDate>Wed, 13 Mar 2024 13:40:04 +0000</pubDate>
				<category><![CDATA[ಬಣ್ಣದ ಹೆಜ್ಜೆ]]></category>
		<category><![CDATA[gowrishankar_lifestory]]></category>
		<category><![CDATA[kerebete_gowrishankar_titlesong_kfi_byvijayendra_shivamogga_sandalwood_kfi_cinishodha]]></category>
		<guid isPermaLink="false">https://www.cinishodha.com/?p=8915</guid>

					<description><![CDATA[<p>ಒಂದು ಸಿನಿಮಾ ರೂಪುಗೊಂಡು ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿತೆಂದರೆ, ಅದದ ಕಥೆ, ರೂಪುಗೊಂಡ ಬಗೆಗಳ ಸುತ್ತಲೇ ಪ್ರೇಕ್ಷಕರೆಲ್ಲರ ಚಿತ್ರ ನೆಟ್ಟಿರುತ್ತೆ. ತುಸು ಆಚೀಚೆ ಕಣ್ಣು ಹಾಯಿಸಿದರೂ ಸಾಕು; ಅಂಥಾ ಸಿನಿಮಾಗಳ ಭಾಗವಾಗಿರುವವರ ಬದುಕಿನ ಕಥೆಗಳು ಗರಿಬಿಚ್ಚಿಕೊಳ್ಳುತ್ತವೆ. ಸಿಹಿ ಕಹಿಗಳ ಹಾದಿಯೊಂದು ತಂತಾನೇ ತೆರೆದುಕೊಳ್ಳುತ್ತೆ. ಸಿನಿಮಾ ರಂಗ ಮಾತ್ರವಲ್ಲ, ಯಾವ ಕ್ಷೇತ್ರವೇ ಆದರೂ ಪ್ರತಿಭೆಯ ಜೊತೆಗೆ ಎಲ್ಲವನ್ನೂ ಅವುಡುಗಚ್ಚಿ ದಾಟಿಕೊಳ್ಳುವ ಛಲ, ಸೋತರೂ ಮತ್ತೆ ಮತ್ತೆ ಪುಟಿದೆದ್ದು ಪ್ರಯತ್ನಿಸುವ ಛಾತಿ ಇಲ್ಲದೇ ಹೋದರೆ ಗೆಲುವೆಂಬುದು ದಕ್ಕುವುದು ಕನಸಾಗಿ ಬಿಡುತ್ತದೆ. [...]</p>
<p>The post <a rel="nofollow" href="https://www.cinishodha.com/kerebete-gowrishankar-lifestory%e0%b2%92%e0%b2%9c%e0%b3%8d%e0%b2%9c%e0%b3%86-%e0%b2%b9%e0%b3%86%e0%b2%9c%e0%b3%8d%e0%b2%9c%e0%b3%86%e0%b2%97%e0%b2%b3%e0%b2%bf%e0%b2%97%e0%b3%86-%e0%b2%95%e0%b2%b8/">kerebete gowrishankar life story: ಒಜ್ಜೆ ಹೆಜ್ಜೆಗಳಿಗೆ ಕಸುವು ತುಂಬಿದ್ದು ಸಿನಿಮಾ ವ್ಯಾಮೋಹ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></description>
										<content:encoded><![CDATA[<p style="text-align: justify;"><span style="font-size: 12pt;"><span style="color: #00ccff;"><strong><span style="font-size: 18pt;">ಒಂ</span></strong></span>ದು ಸಿನಿಮಾ ರೂಪುಗೊಂಡು ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿತೆಂದರೆ, ಅದದ ಕಥೆ, ರೂಪುಗೊಂಡ ಬಗೆಗಳ ಸುತ್ತಲೇ ಪ್ರೇಕ್ಷಕರೆಲ್ಲರ ಚಿತ್ರ ನೆಟ್ಟಿರುತ್ತೆ. ತುಸು ಆಚೀಚೆ ಕಣ್ಣು ಹಾಯಿಸಿದರೂ ಸಾಕು; ಅಂಥಾ ಸಿನಿಮಾಗಳ ಭಾಗವಾಗಿರುವವರ ಬದುಕಿನ ಕಥೆಗಳು ಗರಿಬಿಚ್ಚಿಕೊಳ್ಳುತ್ತವೆ. ಸಿಹಿ ಕಹಿಗಳ ಹಾದಿಯೊಂದು ತಂತಾನೇ ತೆರೆದುಕೊಳ್ಳುತ್ತೆ. ಸಿನಿಮಾ ರಂಗ ಮಾತ್ರವಲ್ಲ, ಯಾವ ಕ್ಷೇತ್ರವೇ ಆದರೂ ಪ್ರತಿಭೆಯ ಜೊತೆಗೆ ಎಲ್ಲವನ್ನೂ ಅವುಡುಗಚ್ಚಿ ದಾಟಿಕೊಳ್ಳುವ ಛಲ, ಸೋತರೂ ಮತ್ತೆ ಮತ್ತೆ ಪುಟಿದೆದ್ದು ಪ್ರಯತ್ನಿಸುವ ಛಾತಿ ಇಲ್ಲದೇ ಹೋದರೆ ಗೆಲುವೆಂಬುದು ದಕ್ಕುವುದು ಕನಸಾಗಿ ಬಿಡುತ್ತದೆ. ಬಹುಶಃ ಒಂದು ಬಿಂದುವಿನಲ್ಲಿ ಸೋತು ಕೂತಿದ್ದರೆ (gowrishankar srgಗೌರಿಶಂಕರ್ ಕೆರೆಬೇಟೆ ನಾಯಕನಾಗಿ ಅವತರಿಸಲು ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ!</span></p>
<p style="text-align: justify;"><img fetchpriority="high" decoding="async" class="alignnone wp-image-8916" src="https://www.cinishodha.com/wp-content/uploads/2024/03/831ba112-aa28-4def-9fe8-d0beca02a065-199x300.jpg" alt="831ba112 aa28 4def 9fe8 d0beca02a065" width="1024" height="1540" title="kerebete gowrishankar life story: ಒಜ್ಜೆ ಹೆಜ್ಜೆಗಳಿಗೆ ಕಸುವು ತುಂಬಿದ್ದು ಸಿನಿಮಾ ವ್ಯಾಮೋಹ! 5 » cinishodha.com" srcset="https://www.cinishodha.com/wp-content/uploads/2024/03/831ba112-aa28-4def-9fe8-d0beca02a065-199x300.jpg 199w, https://www.cinishodha.com/wp-content/uploads/2024/03/831ba112-aa28-4def-9fe8-d0beca02a065-768x1155.jpg 768w, https://www.cinishodha.com/wp-content/uploads/2024/03/831ba112-aa28-4def-9fe8-d0beca02a065-681x1024.jpg 681w, https://www.cinishodha.com/wp-content/uploads/2024/03/831ba112-aa28-4def-9fe8-d0beca02a065-150x226.jpg 150w, https://www.cinishodha.com/wp-content/uploads/2024/03/831ba112-aa28-4def-9fe8-d0beca02a065-450x677.jpg 450w, https://www.cinishodha.com/wp-content/uploads/2024/03/831ba112-aa28-4def-9fe8-d0beca02a065.jpg 851w" sizes="(max-width: 1024px) 100vw, 1024px" /><span style="font-size: 12pt;">ಈವತ್ತಿಗೆ ಗೌರಿಶಂಕರ್ ಕೆರೆಬೇಟೆಯ ಮಲೆನಾಡು ಶೈಲಿಯ ಪಾತ್ರವಾಗಿ ಭರವಸೆ ಮೂಡಿಸಿದ್ದಾರೆ. ಈ ಪಾತ್ರದ ಮೂಲಕವೇ ತಮ್ಮ ಇಷ್ಟೂ ವರ್ಷಗಳ ಪರಿಶ್ರಮಕ್ಕೊಂದು ಬೆಲೆ ಸಿಕ್ಕೀತೆಂಬ ನಿರೀಕ್ಷೆ ಅವರಲ್ಲಿದೆ. ಈಗಿರುವ ವಾತಾವರಣವನ್ನು ಆಧರಿಸಿ ಹೇಳುವುದಾದರೆ, ಅದು ಕೈಗೂಡುವ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ. ಗೌರಿಶಂಕರ್ ಮಲೆನಾಡಿನ ಗರ್ಭದಲ್ಲಿರುವ ತೀರ್ಥಹಳ್ಳಿಯವರು. ಪಿಯುಸಿ ಮುಗಿಯೋ ಹೊತ್ತಿಗೆಲ್ಲ ಸಿನಿಮಾ ಕನಸನ್ನು ಅಪಾದಮಸ್ತಕ ತುಂಬಿಕೊಂಡಿದ್ದ ಅವರ ಪಾಲಿಗೆ ಗಾಂಧಿನಗರದ ಸೆಳೆತ ವಿಪರೀತವಾಗಿತ್ತು. ಆ ಕ್ಷಣದಲ್ಲಿ ಅವರೊಳಗಿದ್ದದ್ದು ನಟನಾಗಬೇಕೆಂಬ ಗಾಢ ಹಂಬಲ.</span></p>
<p style="text-align: justify;"><img decoding="async" class="alignnone wp-image-8917" src="https://www.cinishodha.com/wp-content/uploads/2024/03/25c1815a-9ac9-4157-b00e-4fe710ea6ac2-188x300.jpg" alt="25c1815a 9ac9 4157 b00e 4fe710ea6ac2" width="1024" height="1638" title="kerebete gowrishankar life story: ಒಜ್ಜೆ ಹೆಜ್ಜೆಗಳಿಗೆ ಕಸುವು ತುಂಬಿದ್ದು ಸಿನಿಮಾ ವ್ಯಾಮೋಹ! 6 » cinishodha.com" srcset="https://www.cinishodha.com/wp-content/uploads/2024/03/25c1815a-9ac9-4157-b00e-4fe710ea6ac2-188x300.jpg 188w, https://www.cinishodha.com/wp-content/uploads/2024/03/25c1815a-9ac9-4157-b00e-4fe710ea6ac2-768x1229.jpg 768w, https://www.cinishodha.com/wp-content/uploads/2024/03/25c1815a-9ac9-4157-b00e-4fe710ea6ac2-640x1024.jpg 640w, https://www.cinishodha.com/wp-content/uploads/2024/03/25c1815a-9ac9-4157-b00e-4fe710ea6ac2-960x1536.jpg 960w, https://www.cinishodha.com/wp-content/uploads/2024/03/25c1815a-9ac9-4157-b00e-4fe710ea6ac2-150x240.jpg 150w, https://www.cinishodha.com/wp-content/uploads/2024/03/25c1815a-9ac9-4157-b00e-4fe710ea6ac2-450x720.jpg 450w, https://www.cinishodha.com/wp-content/uploads/2024/03/25c1815a-9ac9-4157-b00e-4fe710ea6ac2.jpg 1000w" sizes="(max-width: 1024px) 100vw, 1024px" /><span style="font-size: 12pt;">ಪುಟ್ಟ ವಯಸ್ಸಿನಲ್ಲಿಯೇ ಅಂಥಾ ದೊಡ್ಡ ಕನಸು ಸಾಕಿಕೊಂಡು ಗಾಂಧಿನಗರಕ್ಕೆ ಬಂದಿಳಿದಿದ್ದ ಗೌರಿಶಂಕರ್, ಒಂದಷ್ಟು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಹಾಗೆ ಒಂದಷ್ಟು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ನಂತರ ಕನಸಿನಾಚೆಯ ವಾಸ್ತವಕ್ಕೆ ತೆರೆದುಕೊಳ್ಳಲೇ ಬೇಕಾದ ಸಂದರ್ಭ ಎದುರಾಗಿತ್ತು. ತನ್ನ ಗುರಿಯನ್ನು ಮನಸಲ್ಲಿ ಹೊಳಪಾಗಿಟ್ಟುಕೊಂಡೇ ಸಿನಿಮಾ ರಂಗದಿಂದ ಹೊರಬಂದಿದ್ದ ಗೌರಿಶಂಕರ್, ಆ ನಂತರದಲ್ಲಿ ಖಾಸಗಿ ವಲಯದಲ್ಲಿ ಉದ್ಯೋಗ ಮಾಡಲಾರಂಭಿಸಿದ್ದರು. ಹಾಗೆ ಕೆಲ ವರ್ಷಗಳ ಕಾಲ ಬೇರೆ ವಲಯದಲ್ಲಿ ಸಕ್ರಿಯರಾಗಿದ್ದ ಗೌರಿಶಂಕರ್, ಅದರ ನಡುವಲ್ಲಿಯೂ ನಟನಾಗುವ ಕನಸನ್ನು ಚಾಲ್ತಿಯಲ್ಲಿಟ್ಟುಕೊಂಡಿದ್ದರು. ಅದರ ಫಲವಾಗಿಯೇ ಅಣಜಿ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ `ಜೋಕಾಲಿ’ ಚಿತ್ರದ ನಾಯಕನಾಗೋ ಅವಕಾಶ ಕೂಡಿ ಬಂದಿತ್ತು. ಆ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು.</span></p>
<p style="text-align: justify;"><img decoding="async" class="alignnone wp-image-8918" src="https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120-300x169.jpg" alt="76b259fa 5cd0 439a a7ec 73ee027e3120" width="1024" height="575" title="kerebete gowrishankar life story: ಒಜ್ಜೆ ಹೆಜ್ಜೆಗಳಿಗೆ ಕಸುವು ತುಂಬಿದ್ದು ಸಿನಿಮಾ ವ್ಯಾಮೋಹ! 7 » cinishodha.com" srcset="https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120-300x169.jpg 300w, https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120-768x432.jpg 768w, https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120-1024x575.jpg 1024w, https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120-1536x863.jpg 1536w, https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120-150x84.jpg 150w, https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120-450x253.jpg 450w, https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120-1200x674.jpg 1200w, https://www.cinishodha.com/wp-content/uploads/2024/03/76b259fa-5cd0-439a-a7ec-73ee027e3120.jpg 1600w" sizes="(max-width: 1024px) 100vw, 1024px" /><span style="font-size: 12pt;">ಆ ಬಳಿಕ ಒಂದಷ್ಟು ಗ್ಯಾಪಿನ ನಂತರ ಮತ್ತೆ ಗೌರಿಶಂಕರ್ ರಾಜಹಂಸ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಆ ಸಿನಿಮಾ ಕೂಡಾ ಚೆನ್ನಾಗಿದೆ ಎಂಬ ಅಭಿಪ್ರಾಯ ಹೊಮ್ಮಿಕೊಂಡಿತ್ತು. ಇಷ್ಟೆಲ್ಲ ಆದರೂ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ದಕ್ಕಲಿಲ್ಲ ಅಂತೊಂದು ಕೊರಗು ಗೌರಿಶಂಕರ್ ಅವರಲ್ಲಿ ಇದ್ದೇ ಇತ್ತು. ಮುಂದಿನ ಸಿನಿಮಾವನ್ನು ತಮ್ಮ ಸಹೋದರನ ಜನಮನ ಸಿನಿಮಾಸ್‍ನಲ್ಲಿ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡ ಗೌರಿಶಂಕರ್ ಒಂದೊಳ್ಳೆ ಕಥೆಗಾಗಿ ಅರಸುತ್ತಿದ್ದರು. ಆಗ ಎದುರಾದವರು ಮಲೆನಾಡು ಭಾಗದವರೇ ಆದ ರಾಜ್ ಗುರು. 2021ರಲ್ಲಿ ಎದುರಾದ ರಾಜ್ ಗುರು ಆರಂಭಿಕವಾಗಿ ಹೇಳಿದ್ದದ್ದು ಒಂದೇ ಒಂದು ಸಾಲಿನ ಕಥೆಯ ಎಳೆಯನ್ನು ಮಾತ್ರ. ಅದನ್ನು ಕೇಳಿ ಥ್ರಿಲ್ ಆಗಿದ್‍ದ ಗೌರಿಶಂಕರ್ ತಾವೇ ಖುದ್ದಾಗಿ ಎಲ್ಲದರಲ್ಲಿಯೂ ಭಾಗಿಯಾಗಿ, ಅತ್ಯಂತ ಆಸ್ಥೆಯಿಂದ ರೂಪಿಸಿರುವ ಚಿತ್ರ ಕೆರೆಬೇಟೆ.</span></p>
<p style="text-align: justify;"><img loading="lazy" decoding="async" class="alignnone wp-image-8919" src="https://www.cinishodha.com/wp-content/uploads/2024/03/99502a4e-30de-4fef-a4f1-9889d46085a6-200x300.jpg" alt="99502a4e 30de 4fef a4f1 9889d46085a6" width="1024" height="1537" title="kerebete gowrishankar life story: ಒಜ್ಜೆ ಹೆಜ್ಜೆಗಳಿಗೆ ಕಸುವು ತುಂಬಿದ್ದು ಸಿನಿಮಾ ವ್ಯಾಮೋಹ! 8 » cinishodha.com" srcset="https://www.cinishodha.com/wp-content/uploads/2024/03/99502a4e-30de-4fef-a4f1-9889d46085a6-200x300.jpg 200w, https://www.cinishodha.com/wp-content/uploads/2024/03/99502a4e-30de-4fef-a4f1-9889d46085a6-768x1153.jpg 768w, https://www.cinishodha.com/wp-content/uploads/2024/03/99502a4e-30de-4fef-a4f1-9889d46085a6-682x1024.jpg 682w, https://www.cinishodha.com/wp-content/uploads/2024/03/99502a4e-30de-4fef-a4f1-9889d46085a6-1023x1536.jpg 1023w, https://www.cinishodha.com/wp-content/uploads/2024/03/99502a4e-30de-4fef-a4f1-9889d46085a6-150x225.jpg 150w, https://www.cinishodha.com/wp-content/uploads/2024/03/99502a4e-30de-4fef-a4f1-9889d46085a6-450x675.jpg 450w, https://www.cinishodha.com/wp-content/uploads/2024/03/99502a4e-30de-4fef-a4f1-9889d46085a6.jpg 1066w" sizes="(max-width: 1024px) 100vw, 1024px" /><span style="font-size: 12pt;">ಕೆರೆಬೇಟೆ ಎಂಬುದು ಗೌರಿಶಂಕರ್ ಪಾಲಿಗೆ ನಿರ್ಣಾಯಕ ಚಿತ್ರ. ಇಷ್ಟು ವರ್ಷಗಳ ಪರಿಶ್ರಮದ ಫಲವೆಂಬಂತೆ ಅದ್ಭುತ ತಾಂತ್ರಿಕ ವರ್ಗ, ನಿರ್ದೇಶನ ವಿಭಾಗ, ಕಲಾವಿದರ ಸಾಥ್ ಸಿಕ್ಕಿದೆ. ಪ್ರತಿಭಾನ್ವಿತ ನಿರ್ದೇಶಕರೂ ಜೊತೆಯಾಗಿದ್ದಾರೆ. ಈಗಾಗಲೇ ಪ್ರೀಮಿಯರ್ ಶೋನಲ್ಲಿ ಕೆರೆಬೇಟೆ ನೋಡಿದವರೆಲ್ಲ ಥ್ರಿಲ್ ಆಗಿದ್ದಾರೆ. ಗೌರಿಶಂಕರ್ ನಟನೆಯೂ ಸೇರಿದಂತೆ ಒಂದಿಡೀ ಸಿನಿಮಾವನ್ನು ಕೊಂಡಾಡಿದ್ದಾರೆ. ಇದೀಗ ಇದೇ 15ರಂದು ಕೆರೆಬೇಟೆ ಬಿಡುಗಡೆಗೊಳ್ಳುತ್ತಿದೆ. ಆ ಸಂದರ್ಭದಲ್ಲಿ ಪ್ರೀಮಿಯರ್ ಶೋನಲ್ಲಿ ಕಾಣಿಸಿದ ಪ್ರತಿಕ್ರಿಯೆಗಳೇ ಪ್ರತಿಫಲಿಸೋ ಲಕ್ಷಣಗಳಿದ್ದಾವೆ. ಹಾಗಾದಲ್ಲಿ, ಗೌರಿಶಂಕರ್ ಅವರ ಇಷ್ಟೂ ವರ್ಷಗಳ ಶ್ರಮ, ಶ್ರದ್ಧೆಗಳಿಗೆಲ್ಲ ಫಲ ಸಿಕ್ಕಂತಾಗಲಿದೆ!</span></p>
<p style="text-align: justify;">
<p>The post <a rel="nofollow" href="https://www.cinishodha.com/kerebete-gowrishankar-lifestory%e0%b2%92%e0%b2%9c%e0%b3%8d%e0%b2%9c%e0%b3%86-%e0%b2%b9%e0%b3%86%e0%b2%9c%e0%b3%8d%e0%b2%9c%e0%b3%86%e0%b2%97%e0%b2%b3%e0%b2%bf%e0%b2%97%e0%b3%86-%e0%b2%95%e0%b2%b8/">kerebete gowrishankar life story: ಒಜ್ಜೆ ಹೆಜ್ಜೆಗಳಿಗೆ ಕಸುವು ತುಂಬಿದ್ದು ಸಿನಿಮಾ ವ್ಯಾಮೋಹ!</a> appeared first on <a rel="nofollow" href="https://www.cinishodha.com">Cini Shodha</a>.</p>
]]></content:encoded>
					
		
		
			</item>
	</channel>
</rss>
